ದೇಶ-ವಿದೇಶ

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಅಧ್ಯಯನ ಮತ್ತು ಸಮೀಕ್ಷೆ/ ಡಿಸೆಂಬರ್ 18 ರಂದು ವರದಿ ಸಲ್ಲಿಸಲು ಸೂಚನೆ

ಸಮಗ್ರ ನ್ಯೂಸ್: ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಅಧ್ಯಯನ ಮತ್ತು ಸಮೀಕ್ಷೆಯ ವರದಿಯನ್ನು ಡಿಸೆಂಬರ್ 18 ರಂದು ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವಾರಣಾಸಿ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಸೂಚಿಸಿದ್ದಾರೆ ಸ್ಥಾಯಿ ಸರ್ಕಾರಿ ವಕೀಲ ಅಮಿತ್ ಶ್ರೀವಾಸ್ತವ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ವರದಿಯನ್ನು ಸಲ್ಲಿಸಬೇಕಿದ್ದ ಎಎಸ್‍ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಅವಿನಾಶ್ ಮೊಹಾಂತಿ ಅವರು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಈ ಅರ್ಜಿಯ ಮೂಲಕ ಎಎಸ್‍ಐ ವರದಿ […]

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಅಧ್ಯಯನ ಮತ್ತು ಸಮೀಕ್ಷೆ/ ಡಿಸೆಂಬರ್ 18 ರಂದು ವರದಿ ಸಲ್ಲಿಸಲು ಸೂಚನೆ Read More »

ರಾಮಮಂದಿರಕ್ಕೆ ಥೈಲ್ಯಾಂಡ್ ಮಣ್ಣು/ ಪ್ರಭು ಶ್ರೀರಾಮಚಂದ್ರನಿಗೆ ಪುಟ್ಟ ರಾಷ್ಟದ ಅಳಿಲ ಸೇವೆ

ಸಮಗ್ರ ನ್ಯೂಸ್: ಭಾರತ ಹಾಗೂ ಥೈಲ್ಯಾಂಡ್ ನಡುವೆ ಬಲವಾದ ಸಾಂಸ್ಕøತಿಕ, ಐತಿಹಾಸಿಕ ಬಾಂಧವ್ಯವಿದ್ದು, ಇದೀಗ ಭಾರತದ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಥೈಲ್ಯಾಂಡ್ ಇನ್ನಷ್ಟು ಬಲಗೊಳಿಸುತ್ತಿದೆ ಅಯೋಧ್ಯೆಯಲ್ಲಿ ನನಸಾಗುತ್ತಿರುವ ಕೋಟ್ಯಾಂತರ ಮನಸ್ಸುಗಳ ಕನಸ್ಸಾದ ಶ್ರೀರಾಮಚಂದ್ರನ ಮಂದಿರಕ್ಕೆ ಈ ಪುಟ್ಟ ರಾಷ್ಟ್ರ ಬರೋಬ್ಬರಿ ಮೂರೂವರೆ ಸಾವಿರ ಕಿಲೋ ಮೀಟರ್ ದೂರದಿಂದ ತನ್ನ ನೆಲದ ಮಣ್ಣು ಕಳುಹಿಸಿಕೊಡುತ್ತಿದೆ. ಈ ಹಿಂದೆ ರಾಮ ಮಂದಿರಕ್ಕಾಗಿ ಥೈಲ್ಯಾಂಡ್ ತನ್ನ ಊರಿನಿಂದ ವಿಶೇಷ ನೀರನ್ನು ಕಳುಹಿಸಿಕೊಟ್ಟಿದ್ದು, ಇದೀಗ ತನ್ನ ನೆಲದ ಮಣ್ಣನ್ನು ಕಳುಹಿಸಿಕೊಡುತ್ತಿದೆ. ಇನ್ನೂ ವಿಶೇಷವೆಂದರೆ

ರಾಮಮಂದಿರಕ್ಕೆ ಥೈಲ್ಯಾಂಡ್ ಮಣ್ಣು/ ಪ್ರಭು ಶ್ರೀರಾಮಚಂದ್ರನಿಗೆ ಪುಟ್ಟ ರಾಷ್ಟದ ಅಳಿಲ ಸೇವೆ Read More »

ಮಗ ಪ್ರೀತಿಸಿದ್ದಕ್ಕೆ ಹೆತ್ತವ್ವನಿಗೆ ಶಿಕ್ಷೆ |ತಾಯಿಯನ್ನು ಬೆತ್ತಲೆಗೊಳಿಸಿ, ಮನೆ ಧ್ವಂಸ

ಸಮಗ್ರ ನ್ಯೂಸ್: ಮಣಿಪುರದಲ್ಲಿ ಮಹಿಳೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ.. ಅತ್ಯಾಚಾರ ನಡೆಸಿ ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ನಡೆಸಿದ ಕೇಸ್ ಭಾರಿ ಆಕ್ರೋಶ ಕ್ಕೆ ಕಾರಣವಾಗಿತ್ತು. ಆದರೆ ಈ ಕೇಸ್ ಮಾಸುವ ಮುನ್ನವೇ ಕರುನಾಡಿನಲ್ಲು ಇಂತಹದೆ ಘಟನೆ ಬೆಳಕಿಗೆ ಬಂದಿದೆ. ಹೌದು ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದ ಬಸವೇಶ್ವರ ಗಲ್ಲಿಯಲ್ಲಿ ಹೀನ ಕೃತ್ಯ ನಡೆದಿದೆ. ಪ್ರೀತಿಸಿದ ಜೋಡಿ ಮನೆ ಬಿಟ್ಟು

ಮಗ ಪ್ರೀತಿಸಿದ್ದಕ್ಕೆ ಹೆತ್ತವ್ವನಿಗೆ ಶಿಕ್ಷೆ |ತಾಯಿಯನ್ನು ಬೆತ್ತಲೆಗೊಳಿಸಿ, ಮನೆ ಧ್ವಂಸ Read More »

ಆರ್ಟಿಕಲ್ 370 ರದ್ದತಿ ಆಧ್ಯಾದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್| ಸೆ.30ರೊಳಗೆ ಜಮ್ಮು – ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಆದೇಶ

ಸಮಗ್ರ ನ್ಯೂಸ್: ಜಮ್ಮು ಕಾಶ್ಮೀರದಲ್ಲಿ ವಿಧಿ 370 ಅನ್ನು ರದ್ದುಗೊಳಿಸಿ ಹೊರಡಿಸಲಾದ ರಾಷ್ಟ್ರಪತಿಗಳ ಅಧ್ಯಾದೇಶ ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಭಾರತದ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಜಮ್ಮು ಕಾಶ್ಮೀರಕ್ಕೆ ವಿಧಿ 370(1)(ಡಿ) ಬಳಸಿ ಅನ್ವಯಿಸಬಹುದು ಎಂದು ಸುಪ್ರೀಂ ಕೋರ್ಟ್‌ ಇಂದು ತೀರ್ಪು ಪ್ರಕಟಿಸಿದೆ. ರಾಷ್ಟ್ರಪತಿಗಳ ಅಧಿಕಾರ ಚಲಾಯಿಸುವಾಗ ಚರ್ಚೆ ಮತ್ತು ಸಹಭಾಗಿತ್ವದ ತತ್ವದ ಅಗತ್ಯವಿಲ್ಲ. ಸಂವಿಧಾನದ ವಿಧಿ 370(1)(ಡಿ) ಬಳಸಿ ಅನ್ವಯಿಸುವ ಎಲ್ಲಾ ನಿಬಂಧನೆಗಳಿಗೆ ರಾಜ್ಯದ ಒಪ್ಪಿಗೆ ಬೇಕಿಲ್ಲ ಎಂದು ಸಿಜೆಐ

ಆರ್ಟಿಕಲ್ 370 ರದ್ದತಿ ಆಧ್ಯಾದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್| ಸೆ.30ರೊಳಗೆ ಜಮ್ಮು – ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಆದೇಶ Read More »

ಮತ್ತೆ ಮುಂದೂಡಿದ ಮೈತ್ರಿಕೂಟ ಸಭೆ/ ಡಿಸೆಂಬರ್ 19ಕ್ಕೆ ನಿಗದಿ

ಸಮಗ್ರ ನ್ಯೂಸ್: ಡಿಸೆಂಬರ್ 17ರಂದು ನಿಗದಿಯಾಗಿದ್ದ ಐಎನ್‍ಡಿಐಎ ಮೈತ್ರಿಕೂಟದ ನಾಲ್ಕನೇ ಸಭೆಯನ್ನು ಮತ್ತೆ ಮುಂದೂಡಲಾಗಿದ್ದು, ಡಿಸೆಂಬರ್ 19ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. ಡಿ. 6ರಂದು ನಡೆಯಬೇಕಿದ್ದ ಈ ಸಭೆಯನ್ನು ಈ ಮೊದಲು ಡಿ. 17ಕ್ಕೆ ಮುಂದೂಡಲಾಗಿತ್ತು. ಡಿಸೆಂಬರ್ 6 ರಂದು ಮೊದಲು ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸದಿರಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಜಾಖರ್ಂಡ್ ಮುಖ್ಯಮಂತ್ರಿ ಹೇಮಂತ್

ಮತ್ತೆ ಮುಂದೂಡಿದ ಮೈತ್ರಿಕೂಟ ಸಭೆ/ ಡಿಸೆಂಬರ್ 19ಕ್ಕೆ ನಿಗದಿ Read More »

ಮಧ್ಯಪ್ರದೇಶ ರಾಜ್ಯದ ನೂತನ ಮುಖ್ಯಮಂತ್ರಿ/ ನಾಳೆ ಘೋಷಣೆಯಾಗುವ ಸಾಧ್ಯತೆ

ಸಮಗ್ರ ನ್ಯೂಸ್: ಮಧ್ಯಪ್ರದೇಶ ರಾಜ್ಯದ ನೂತನ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂಬ ಕುತೂಹಲಕ್ಕೆ ನಾಳೆ (ಸೋಮವಾರ) ತೆರೆಬೀಳುವ ಸಾಧ್ಯತೆಯಿದೆ. ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಭೆ ನಡೆಯಲಿದ್ದು, ಇದರೊಂದಿಗೆ ನೂತನ ಮುಖ್ಯಮಂತ್ರಿಯ ಘೋಷಣೆಯಾಗುವ ಸಾಧ್ಯತೆ ಇದೆ. ಬಿಜೆಪಿ ಕೇಂದ್ರ ವೀಕ್ಷಕರಾದ, ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಸೋಮವಾರ ಮಧ್ಯಾಹ್ನ ಭೋಜನಕೂಟದ ಬಳಿಕ ಸಂಜೆ 4ರ ವೇಳೆಗೆ ಸಭೆ

ಮಧ್ಯಪ್ರದೇಶ ರಾಜ್ಯದ ನೂತನ ಮುಖ್ಯಮಂತ್ರಿ/ ನಾಳೆ ಘೋಷಣೆಯಾಗುವ ಸಾಧ್ಯತೆ Read More »

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು/ ನಾಳೆ ಸುಪ್ರೀಂ ತೀರ್ಪು

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುವ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆದಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಸೋಮವಾರ(ಡಿ.11) ತನ್ನ ತೀರ್ಪನ್ನು ಪ್ರಕಟಿಸಲಿದೆ. ಕೇಂದ್ರ ಸರ್ಕಾರವು 2019ರ ಆಗಸ್ಟ್ 5ರಂದು ಸಂವಿಧಾನ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆಗಸ್ಟ್ 2ರಿಂದ ಅರ್ಜಿಗಳ ವಿಚಾರಣೆ ಪ್ರಾರಂಭಿಸಿದ್ದ ನ್ಯಾಯಾಲಯ, 16 ದಿನಗಳ ವಿಚಾರಣೆಯ ನಂತರ ಸೆಪ್ಟೆಂಬರ್ 5 ರಂದು ತನ್ನ

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು/ ನಾಳೆ ಸುಪ್ರೀಂ ತೀರ್ಪು Read More »

“ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್”/ ನಾಳೆ ಮೋದಿ ಚಾಲನೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು “ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್”ಗೆ ನಾಳೆ (ಸೋಮವಾರ) ವಿಡಿಯೊ ಕಾನ್ಸರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪಕುಲಪತಿಗಳು, ಸಂಸ್ಥೆಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ. “ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್” ಉಪಕ್ರಮವು ದೇಶದ ಯುವಕರಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ. ಅಲ್ಲದೆ, ಕಾರ್ಯಾಗಾರಗಳು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ

“ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್”/ ನಾಳೆ ಮೋದಿ ಚಾಲನೆ Read More »

ಶಬರಿಮಲೆ: ಅಯ್ಯಪ್ಪನ ದರ್ಶನಕ್ಕೆ ಬಂದ ಬಾಲಕಿ ಕುಸಿದು ಬಿದ್ದು ಸಾವು

ಸಮಗ್ರ ನ್ಯೂಸ್: ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ 12 ವರ್ಷದ ಬಾಲಕಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮೃತ ಬಾಲಕಿಯನ್ನು ತಮಿಳುನಾಡಿನ ಪದ್ಮಶ್ರೀ ಎಂದು ಗುರುತಿಸಲಾಗಿದ್ದು,ಶಬರಿಮಲೆಯ ದೇವಸ್ಥಾನದ ಅಪ್ಪಾಚಿಮೇಡು ಪ್ರದೇಶದಲ್ಲಿ ಕುಸಿದು ಬಿದ್ದಿದ್ದಾರೆ. ಪದ್ಮಶ್ರೀ ಅವರಿದ್ದ ಗುಂಪು ಮಧ್ಯಾಹ್ನದ ಹೊತ್ತಿಗೆ ಬೆಟ್ಟವನ್ನು ಏರಲು ಪ್ರಾರಂಭಿಸಿತು. ಅಪ್ಪಾಚಿಮೇಡು ತಲುಪಿದಾಗ ಆಕೆ ಅಸ್ವಸ್ಥಳಾಗಿ ಕುಸಿದು ಬಿದ್ದಳು. ಪದ್ಮಶ್ರೀ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆಯನ್ನು ಉಳಿಸಲಾಗಲಿಲ್ಲ. ದೇಹವನ್ನು ಪಂಪಾ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಶಬರಿಮಲೆ: ಅಯ್ಯಪ್ಪನ ದರ್ಶನಕ್ಕೆ ಬಂದ ಬಾಲಕಿ ಕುಸಿದು ಬಿದ್ದು ಸಾವು Read More »

ಶ್ರೀರಾಮ ಲಲ್ಲಾನ ಗರ್ಭಗುಡಿ ಬಹುತೇಕ ಸಿದ್ಧ/ ಡಿ.15 ರಂದು ಮೂರ್ತಿ ಆಯ್ಕೆ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶ್ರೀರಾಮ ಲಲ್ಲಾನ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ದೀಪಾಲಂಕಾರದ ಕೆಲಸವೂ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಮೂರು ರಾಮಲಲ್ಲಾ ವಿಗ್ರಹಗಳಲ್ಲಿ ಯಾವುದನ್ನು ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವುದು ಎಂಬುದರ ಕುರಿತು ರಾಮಮಂದಿರ ಟ್ರಸ್ಟ್ ಡಿಸೆಂಬರ್ 15 ರಂದು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಕರ್ನಾಟಕ ಮತ್ತು ರಾಜಸ್ಥಾನದಿಂದ ತರಿಸಲಾದ ಎರಡು ಬಂಡೆಗಳಿಂದ ಮೂರು ವಿಗ್ರಹಗಳನ್ನು ಕೆತ್ತಲಾಗುತ್ತಿದೆ. ಶೇಕಡಾ 90 ರಷ್ಟು ವಿಗ್ರಹಗಳು ಸಿದ್ಧವಾಗಿದ್ದು, ಗಣೇಶ್ ಭಟ್, ಅರುಣ್ ಯೋಗಿರಾಜ್ ಮತ್ತು

ಶ್ರೀರಾಮ ಲಲ್ಲಾನ ಗರ್ಭಗುಡಿ ಬಹುತೇಕ ಸಿದ್ಧ/ ಡಿ.15 ರಂದು ಮೂರ್ತಿ ಆಯ್ಕೆ Read More »