ರಾಷ್ಟ್ರೀಯ

ಮಥುರಾದಲ್ಲಿ ಸಂತ ಮೀರಾ ಬಾಯಿ ಜನ್ಮೋತ್ಸವ/ ನವೆಂಬರ್ 23ಕ್ಕೆ ಕೃಷ್ಣ ಜನ್ಮಭೂಮಿಗೆ ಮೋದಿ ಭೇಟಿ

ಸಮಗ್ರ ನ್ಯೂಸ್: ಶ್ರೀಕೃಷ್ಣನ ಪರಮ ಭಕ್ತೆ ಮೀರಾಬಾಯಿ ಅವರ 525ನೇ ಜನ್ಮ ದಿನಾಚರಣೆ ಪ್ರಯುಕ್ತ, ಸಂತ ಮೀರಾಬಾಯಿ ಜನ್ಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನವೆಂಬರ್ 23ರಂದು ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಜನ್ಮಭೂಮಿಗೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈ ಮೂಲಕ ಶ್ರೀ ಕೃಷ್ಣ ಜನ್ಮಭೂಮಿಗೆ ಭೇಟಿ ನೀಡಿದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ. ಪ್ರಧಾನಿ‌ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಕೃಷ್ಣ ಜನ್ಮಭೂಮಿಯನ್ನು ಹೂವು […]

ಮಥುರಾದಲ್ಲಿ ಸಂತ ಮೀರಾ ಬಾಯಿ ಜನ್ಮೋತ್ಸವ/ ನವೆಂಬರ್ 23ಕ್ಕೆ ಕೃಷ್ಣ ಜನ್ಮಭೂಮಿಗೆ ಮೋದಿ ಭೇಟಿ Read More »

ಸುಳ್ಳು ಜಾಹೀರಾತು ವಿಚಾರ| ಸುಪ್ರೀಂ ಕೋರ್ಟಿನಿಂದ ಪತಂಜಲಿ ಉತ್ಪನ್ನಕ್ಕೆ 1 ಕೋಟಿ ದಂಡದ ಎಚ್ಚರಿಕೆ

ಸಮಗ್ರ ನ್ಯೂಸ್: ಪತಂಜಲಿ ಆಯುರ್ವೇದ ಉತ್ಪನ್ನಗಳ ಬಗ್ಗೆ ಸುಳ್ಳು ಮತ್ತು ಜನರ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸದಿದ್ದರೆ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿದೆ. ಯೋಗ ಗುರು ರಾಮ್‌ದೇವ್ ಸ್ಥಾಪಿಸಿರುವ ಪತಂಜಲಿ ಆಯುರ್ವೇದ್ ಕಂಪನಿಯು ಗಿಡಮೂಲಿಕೆ ಉತ್ಪನ್ನಗಳ ವಿಚಾರದಲ್ಲಿ ವ್ಯವಹರಿಸುತ್ತಿದೆ. ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುವ ಔಷಧಿಗಳ ಕುರಿತು ಜಾಹೀರಾತುಗಳಲ್ಲಿ ಸುಳ್ಳು ಮತ್ತು ದಾರಿ ತಪ್ಪಿಸುವ ಅಂಶಗಳೇ ಇವೆ ಎಂದು ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಸುಳ್ಳು ಜಾಹೀರಾತು ವಿಚಾರ| ಸುಪ್ರೀಂ ಕೋರ್ಟಿನಿಂದ ಪತಂಜಲಿ ಉತ್ಪನ್ನಕ್ಕೆ 1 ಕೋಟಿ ದಂಡದ ಎಚ್ಚರಿಕೆ Read More »

ಇಂದು ಜಿ-20 ವರ್ಚುವಲ್ ಸಭೆ/ ಮೋದಿ ಅಧ್ಯಕ್ಷತೆ

ಸಮಗ್ರ ನ್ಯೂಸ್: ಇಂದು ಜಿ-20 ನಾಯಕರ ವರ್ಚುವಲ್ ಶೃಂಗಸಭೆಯು ನಡೆಯಲಿದ್ದು, ಪ್ರಧಾನಿ ಮೋದಿ ಇದರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಭಾಗವಹಿಸುತ್ತಿದ್ದು, ಸಂಜೆ 5.3ಒ ರಿಂದ ಸಭೆ ನಡೆಯಲಿದೆ. ಈ ಸಭೆಯು ಕಳೆದ ಸೆಪ್ಟಂಬರ್‍ನಲ್ಲಿ ನಡೆದ ಶೃಂಗಸಭೆಯ ಫಲಿತಾಂಶಗಳು ಹಾಗೂ ನಂತರದ ಬೆಳವಣಿಗೆಗಳ ಕುರಿತು ಅವಲೋಕನ ನಡೆಸಲಿದೆ. ಇದರ ಜೊತೆಗೆ ಜಾಗತಿಕ ಆರ್ಥಿಕತೆ, ಹಣಕಾಸು, ಹವಾಮಾನ ಕಾರ್ಯಸೂಚಿ ಮತ್ತು ಡಿಜಿಟಲೀಕರಣದ ಕುರಿತು ಚರ್ಚೆ ನಡೆಸಲಿದ್ದಾರೆ. ಈ ವರ್ಚುವಲ್ ಶೃಂಗಸಭೆಯ ಅಧ್ಯಕ್ಷತೆಯನ್ನು

ಇಂದು ಜಿ-20 ವರ್ಚುವಲ್ ಸಭೆ/ ಮೋದಿ ಅಧ್ಯಕ್ಷತೆ Read More »

ಐಸಿಸಿಯಿಂದ ನೂತನ ನಿಯಮ ಜಾರಿ/ ಮಂಗಳಮುಖಿಯರಿಗೆ ಮಹಿಳಾ ಕ್ರಿಕೆಟ್‍ನಿಂದ ನಿಷೇಧ

ಸಮಗ್ರ ನ್ಯೂಸ್: ಮಹಿಳಾ ಕ್ರಿಕೆಟ್‍ನ ಸುರಕ್ಷತೆ, ನ್ಯಾಯಸಮ್ಮತೆ ಹಾಗೂ ಸಮಗ್ರತೆ ರಕ್ಷಣೆಯ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಮಹಿಳಾ ಕ್ರಿಕೆಟ್‍ನಿಂದ ಮಂಗಳಮುಖಿಯರಿಗೆ ಸಂಪೂರ್ಣ ನಿಷೇಧ ಹೇರಿದೆ. ಏಕದಿನ ವಿಶ್ವಕಪ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಈ ನಿಯಮ ಜಾರಿಗೊಳಿಸಿದೆ. ಕಳೆದ ಸೆಪ್ಟಂಬರ್‍ನಲ್ಲಿ ಕೆನಡಾದ ಮಂಗಳಮುಖಿ ಕ್ರಿಕೆಟರ್ ಡೇನಿಯಲ್ ಮೆಕ್‍ಗಹೆ ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದರು. ಇದು ವಿವಾದಕ್ಕೆ ಕಾರಣವಾಗಿ, ಕೊನೆಗೆ ಡೇನಿಯಲ್ ಮೆಕ್‍ಗೆಹೆಗೆ ಆಡುವ ಅವಕಾಶ ದೊರೆತಿರಲಿಲ್ಲ. ಈ ಹಿನ್ನಲೆಯಲ್ಲಿ ಐಸಿಸಿ

ಐಸಿಸಿಯಿಂದ ನೂತನ ನಿಯಮ ಜಾರಿ/ ಮಂಗಳಮುಖಿಯರಿಗೆ ಮಹಿಳಾ ಕ್ರಿಕೆಟ್‍ನಿಂದ ನಿಷೇಧ Read More »

ಜಾತಿ ಗಣತಿ ವಿಚಾರ|ಕಾಂಗ್ರೆಸ್‌ನಲ್ಲಿಯೇ ಪರ-ವಿರೋಧ

ಜಾತಿ ಗಣತಿ ತಿರಸ್ಕರಿಸುವ ಒಕ್ಕಲಿಗರ ಸಂಘದ ಮನವಿ ಪತ್ರಕ್ಕೆ ಸಹಿ ಹಾಕುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿದ್ದು, ಈ ಮೂಲಕ ಕಾಂಗ್ರೆಸ್‌ನಲ್ಲಿಯೇ ಜಾತಿ ಗಣತಿ ಕುರಿತು ಪರ ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿದೆ. ಒಕ್ಕಲಿಗರ ಮನವಿ ಪತ್ರಕ್ಕೆ ಸಹಿ ಮಾಡುವ ಮೂಲಕ ಕಾಂತರಾಜ ಆಯೋಗ ವರದಿಗೆ ಡಿಸಿಎಂ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ವರದಿ ಜಾರಿಗೆ ಸಚಿವರಾದ ಪರಮೇಶ್ವ‌ರ್, ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ ಆಗ್ರಹಿಸಿದ್ದರೆ, ಒಕ್ಕಲಿಗ ಮತ್ತು ಲಿಂಗಾಯಿತ ಸಮಾಜದ ಸಚಿವರು ವಿರೋಧ

ಜಾತಿ ಗಣತಿ ವಿಚಾರ|ಕಾಂಗ್ರೆಸ್‌ನಲ್ಲಿಯೇ ಪರ-ವಿರೋಧ Read More »

2024ರ ಲೋಕಸಭಾ ಚುನಾವಣೆ/ ಮತ್ತೆ ಅಮೇಥಿಯತ್ತ ರಾಹುಲ್

ಸಮಗ್ರ ನ್ಯೂಸ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಉತ್ತರಪ್ರದೇಶದ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ರೈ ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಉತ್ತರಪ್ರದೇಶದ ಅಮೇಥಿಯ ಜೊತೆಗೆ ಕೇರಳದ ವಯನಾಡಿನಿಂದಲು ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋತು, ಕೇರಳದ ವಯನಾಡಿನಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿದ್ದರು. ಇದೀಗ ಮತ್ತೊಮ್ಮೆ ರಾಹುಲ್ ಗಾಂಧಿ ಅಮೇಥಿಯತ್ತ ಕಣ್ಣು ನೆಟ್ಟಿದ್ದಾರೆ. ಗಾಂಧಿ ಕುಟುಂಬವು ಅಮೇಥಿಯ ಜನರಿಗಾಗಿ ತಲೆತಲಾಂತರದಿಂದ ಶ್ರಮಿಸುತ್ತಿದ್ದು, ರಾಹುಲ್ ಮುಂದಿನ ಚುನಾವಣೆಯಲ್ಲಿ

2024ರ ಲೋಕಸಭಾ ಚುನಾವಣೆ/ ಮತ್ತೆ ಅಮೇಥಿಯತ್ತ ರಾಹುಲ್ Read More »

ಶ್ರೀಲಂಕಾ ಜೈಲಿನಿಂದ ಬಿಡುಗಡೆಯಾದ ಮೀನುಗಾರರು/ ಚೆನ್ನೈಗೆ ಆಗಮನ

ಸಮಗ್ರ ನ್ಯೂಸ್: ಶ್ರೀಲಂಕಾ ಜಲಪ್ರದೇಶಕ್ಕೆ ಅಕ್ರಮ ಪ್ರವೇಶದ ಹಿನ್ನಲೆಯಲ್ಲಿ ಬಂಧಿತರಾಗಿದ್ದ ಮೀನುಗಾರರನ್ನು ಲಂಕಾ ಸರ್ಕಾರ ಬಿಡುಗಡೆ ಮಾಡಿದ್ದು, ಅವರು ಇಂದು ಚೆನ್ನೈಗೆ ಆಗಮಿಸಿದರು. ಅಕ್ಟೋಬರ್ 28 ಹಾಗೂ ನವೆಂಬರ್ 14ರಂದು ಮೀನುಗಾರಿಕೆಗೆ ತೆರಳಿದ್ದ ಒಟ್ಟು 37 ಮಂದಿಯನ್ನು ಶ್ರೀಲಂಕಾದ ಅಧಿಕಾರಿಗಳು ಬಂಧಿಸಿದ್ದರು. ಇವರ ಬಿಡುಗಡೆಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಮೀನುಗಾರಿಕೆ ಇಲಾಖೆ ಮಧ್ಯಸ್ಥಿಕೆ ವಹಿಸಿ, ಬಿಡುಗಡೆಗೆ ಶ್ರಮವಹಿಸಿತ್ತು. ಇಂದು ಚೆನ್ನೈಗೆ ಬಂದಿಳಿದ ಮೀನುಗಾರರನ್ನು ತಮಿಳುನಾಡು ಬಿಜೆಪಿಯ ನಾಯಕರು ಬರಮಾಡಿಕೊಂಡರು. ನಂತರ ಅವರು ರಾಮೇಶ್ವರಂಗೆ ತೆರಳಿದರು.

ಶ್ರೀಲಂಕಾ ಜೈಲಿನಿಂದ ಬಿಡುಗಡೆಯಾದ ಮೀನುಗಾರರು/ ಚೆನ್ನೈಗೆ ಆಗಮನ Read More »

‘ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ!!’ | ಖರ್ಗೆ ಅಚಾತುರ್ಯದ ಮಾತುಗಳು ಫುಲ್ ವೈರಲ್

ಸಮಗ್ರ ನ್ಯೂಸ್: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ರಾಜೀವ್ ಗಾಂಧಿಯನ್ನು ಉಲ್ಲೇಖಿಸುವ ಬದಲು ರಾಹುಲ್ ಗಾಂಧಿ ಅವರನ್ನು ತಪ್ಪಾಗಿ ಹೆಸರಿಸಿದ್ದಾರೆ ಎಂದು ಬಿಜೆಪಿ ಸೋಮವಾರ ಲೇವಡಿ ಮಾಡಿದೆ. ರಾಜಸ್ಥಾನದ ಅನುಪ್ಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯಂತಹ ನಾಯಕರು ದೇಶದ ಏಕತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ. ವೇದಿಕೆಯಲ್ಲಿದ್ದ ಜನರು ಖರ್ಗೆ ಅವರ ತಪ್ಪಿನ ಬಗ್ಗೆ ಎಚ್ಚರಿಸಿದಾಗ, ಅವರು ತಮ್ಮನ್ನು ಸರಿಪಡಿಸಿಕೊಂಡರು ಮತ್ತು ಅವರು

‘ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ!!’ | ಖರ್ಗೆ ಅಚಾತುರ್ಯದ ಮಾತುಗಳು ಫುಲ್ ವೈರಲ್ Read More »

ರಸಗುಲ್ಲಾ ಶಾರ್ಟೆಜ್/ ಮದುವೆ ಮನೆಯಲ್ಲಿ ಹೊಡೆದಾಟ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ನಡೆದ ಮದುವೆ ಕಾರ್ಯಕ್ರಮದಲ್ಲಿ ರಸಗುಲ್ಲಾ ಕಡಿಮೆಯಾಯಿತೆಂದು ಬಡಿದಾಡಿಕೊಂಡ ಘಟನೆ ನಡೆದಿದೆ. ಇದರಿಂದಾಗಿ ಮಹಿಳೆಯರು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಶಂಸಾಬಾದ್‍ನ ಬ್ರಿಜ್ಛಾನ್ ಕುಶ್ವಾಹಾ ಅವರ ನಿವಾಸದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದು, ಮದುವೆಗೆ ರಸಗುಲ್ಲಾ ಮಾಡಿಸಲಾಗಿತ್ತು. ಆದರೆ ರಸಗುಲ್ಲಾ ಶಾರ್ಟೆಜ್ ಆಗಿತ್ತು. ಈ ಕುರಿತು ಸಂಬಂಧಿಕರೊಬ್ಬರು ರಸಗುಲ್ಲಾ ಕಡಿಮೆಯಾಗಿದೆ ಎಂದು ಜೋರಾಗಿ ಕೂಗಿ ಹೇಳಿದ್ದು ಜಗಕ್ಕೆ ಕಾರಣವಾಗಿತ್ತು. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಶಂಸಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸಗುಲ್ಲಾ ಶಾರ್ಟೆಜ್/ ಮದುವೆ ಮನೆಯಲ್ಲಿ ಹೊಡೆದಾಟ Read More »

ಅಯೋಧ್ಯಾ ರಾಮಮಂದಿರಕ್ಕೆ ಅರ್ಚಕರ ನೇಮಕಾತಿ/ ಸಲ್ಲಿಕೆಯಾದ ಅರ್ಜಿಗಳು 3000

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ, ಈ ಹಿನ್ನಲೆಯಲ್ಲಿ ರಾಮಮಂದಿರಕ್ಕೆ ಅರ್ಚಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇಲ್ಲಿಯವರೆಗೆ ಮೂರು ಸಾವಿರ ಅರ್ಜಿಗಳ ಸಲ್ಲಿಕೆಯಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅರ್ಚಕ ಹುದ್ದೆಯ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಸಲ್ಲಿಕೆಯಾದ ಮೂರು ಸಾವಿರ ಅರ್ಜಿಗಳ ಪೈಕಿ, ಆರ್ಹತೆಯ ಆಧಾರದ ಮೇಲೆ 200 ಮಂದಿಯನ್ನು ಸಂದರ್ಶನಕ್ಕೆ ಶಾರ್ಟ್‍ಲಿಸ್ಟ್ ಮಾಡಲಾಗಿದೆ. ಅಂತಿಮವಾಗಿ 20 ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

ಅಯೋಧ್ಯಾ ರಾಮಮಂದಿರಕ್ಕೆ ಅರ್ಚಕರ ನೇಮಕಾತಿ/ ಸಲ್ಲಿಕೆಯಾದ ಅರ್ಜಿಗಳು 3000 Read More »