ಕರಾವಳಿ

ಕರಾವಳಿಯಲ್ಲಿ ಬಿರುಸುಗೊಂಡ ಮುಂಗಾರು| 3 ದಿನ ಆರೆಂಜ್ ಅಲರ್ಟ್

ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಬಿರುಸು ಪಡೆದಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಉತ್ತಮ ಮಳೆಯಾಗಿದೆ. ದ.ಕ, ಉಡುಪಿ ಜಿಲ್ಲೆಯ ಅಲ್ಲಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲವೊಂದು ಸಣ್ಣಪುಟ್ಟ ಘಟನೆ ಹೊರತು ಪಡಿಸಿದರೆ ಉಳಿದಂತೆ ಉಭಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ರಾಜ್ಯ ಕರಾವಳಿ ಭಾಗದಲ್ಲಿ ಮುಂಗಾರು ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆ ಇದ್ದು, ಮುಂದಿನ ಮೂರು ದಿನಗಳವರೆಗೆ ಭಾರತೀಯ ಹವಾಮಾನ ಇಲಾಖೆಯು “ಆರೆಂಜ್‌ ಅಲರ್ಟ್‌’ ಘೊಷಿಸಿದೆ. ಜೂ. 22ರಿಂದ 24ರ ವರೆಗೆ

ಕರಾವಳಿಯಲ್ಲಿ ಬಿರುಸುಗೊಂಡ ಮುಂಗಾರು| 3 ದಿನ ಆರೆಂಜ್ ಅಲರ್ಟ್ Read More »

ಸುಳ್ಯ: ಪೊಲೀಸ್ ಠಾಣೆಯಲ್ಲಿ ಯೋಗ ದಿನಾಚರಣೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸುಳ್ಯ ಪೊಲೀಸ್ ಠಾಣೆಯಲ್ಲಿ ಯೋಗ ದಿನಾಚರಣೆಯನ್ನು ಇಂದು ಆಚರಿಸಲಾಯಿತು. ಈ ವೇಳೆ ಸುಳ್ಯ ಪೊಲೀಸ್ ಠಾಣೆ ನಿರೀಕ್ಷಕರು ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.

ಸುಳ್ಯ: ಪೊಲೀಸ್ ಠಾಣೆಯಲ್ಲಿ ಯೋಗ ದಿನಾಚರಣೆ Read More »

ಮಂಗಳೂರು: ಶ್ರೀರಾಮಸೇನೆ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ; ಮೂವರು ಅಂದರ್

ಸಮಗ್ರ ನ್ಯೂಸ್: ಬೀಟ್ ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ಪೊಲೀಸರ ಮೇಲೆ ತಂಡವೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಮಂಗಳೂರು ನಗರದ ಚಿಲಿಂಬಿಗುಡ್ಡೆಯ ಉರ್ವದಲ್ಲಿ ರವಿವಾರ ತಡರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಚಿಲಿಂಬಿಗುಡ್ಡೆ ನಿವಾಸಿಗಳಾದ ದುರ್ಗೇಶ್, ಪ್ರಜ್ವಿತ್, ರಕ್ಷಿತ್ ಬಂಧಿತರು. ಆರೋಪಿಗಳು ಶ್ರೀರಾಮ ಸೇನೆಯ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ವೆಂಕಟೇಶ್ ಮತ್ತು ಧನಂಜಯ್ ಘಟನೆಯಲ್ಲಿ ಗಾಯಗೊಂಡವರು. ಉರ್ವ ಪೊಲೀಸ್ ಠಾಣೆಯ ಸಿಬ್ವಂದಿ ತಡರಾತ್ರಿ 1.30ರ ವೇಳೆಗೆ ಚಿಲಿಂಬಿಗುಡ್ಡೆ

ಮಂಗಳೂರು: ಶ್ರೀರಾಮಸೇನೆ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ; ಮೂವರು ಅಂದರ್ Read More »

ಮಂಗಳೂರು: ಪತಿಯನ್ನು ಬಸ್ ಸ್ಟಾಂಡ್ ನಲ್ಲಿ ಬಿಟ್ಟು ಪತ್ನಿ ಪರಾರಿ

ಸಮಗ್ರ ನ್ಯೂಸ್: ಪತಿಯನ್ನು ಬಸ್‌ ನಿಲ್ದಾಣದಲ್ಲೇ ಬಿಟ್ಟು ಪತ್ನಿ ಪರಾರಿಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಲ್ಪಾ (30) ಪರಾರಿಯಾದವರು. ಅವರು ತನ್ನ ಪತಿಯೊಂದಿಗೆ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಹೋಗುವುದಕ್ಕಾಗಿ ಮಂಗಳೂರಿನ ಸರ್ವೀಸ್‌ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಬಸ್‌ ನಿಲ್ದಾಣದಲ್ಲಿ ಪಿಲಿಕುಳದ ಬಸ್‌ ಹತ್ತುವ ಮೊದಲು ಶೌಚಾಲಯಕ್ಕೆ ಹೋಗಿ ಬರುವೆನೆಂದು ಹೇಳಿ ಹೋಗಿದ್ದ ಶಿಲ್ಪಾ, ಅಲ್ಲಿಂದ ತಪ್ಪಿಸಿಕೊಂಡು ಉಡುಪಿ ಬಸ್‌ ಹತ್ತಿ ಪರಾರಿಯಾಗಿದ್ದಾರೆ. ಪತಿ ಕೂಡಲೇ ಶಿಲ್ಪಾ ಅವರ

ಮಂಗಳೂರು: ಪತಿಯನ್ನು ಬಸ್ ಸ್ಟಾಂಡ್ ನಲ್ಲಿ ಬಿಟ್ಟು ಪತ್ನಿ ಪರಾರಿ Read More »

ವಿಟ್ಲ:ಅನ್ಯಕೋಮಿನ ಜೋಡಿ‌ ಪತ್ತೆ| ಹಿಂದೂ ಹೆಸರಲ್ಲಿ ವಂಚಿಸಿದ ಮುಸ್ಲಿಂ ಯುವಕ| ವಾರದಿಂದ ವಿಜಯ್ ಹೆಸರಲ್ಲಿ ಮೆರೆದಾಡಿದ ಹುಸೈನ್|

ಸಮಗ್ರ ನ್ಯೂಸ್: ಕಳೆದ ಒಂದು ವಾರದಿಂದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಶಿರಸಿ ಮೂಲದ ಅನ್ಯಕೋಮಿನ ಜೋಡಿಗಳು ವಿಟ್ಲದ ಪಳಿಕೆಯಲ್ಲಿ ಪತ್ತೆಯಾಗಿದ್ದಾರೆ. ವಿಟ್ಲ ಬೊಬ್ಬೆಕೇರಿ ಪೆಟ್ರೋಲ್ ಬಂಕ್ ನಲ್ಲಿ ಟ್ಯಾಂಕರ್ ಲಾರಿ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡ ಈ ಅನ್ಯಕೋಮಿನ ಯುವಕ ತಾನು ಹಿಂದೂ ನನ್ನ ಹೆಸರು ವಿಜಯ್ ಎಂಬುವುದಾಗಿ ಎಲ್ಲರನ್ನು ನಂಬಿಸಿ ವಂಚಿಸಿದ್ದಾನೆ. ಇದೀಗ ಕೆಲ ದಿನಗಳಿಂದ ವಿಟ್ಲ ಪಳಿಕೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಹಿಂದೂ ಹುಡುಗಿಯ ಜೊತೆ ವಾಸವಿದ್ದು, ಆತ ತನ್ನ ಕೈಗೆ ಹಿಂದೂ ಧರ್ಮದ

ವಿಟ್ಲ:ಅನ್ಯಕೋಮಿನ ಜೋಡಿ‌ ಪತ್ತೆ| ಹಿಂದೂ ಹೆಸರಲ್ಲಿ ವಂಚಿಸಿದ ಮುಸ್ಲಿಂ ಯುವಕ| ವಾರದಿಂದ ವಿಜಯ್ ಹೆಸರಲ್ಲಿ ಮೆರೆದಾಡಿದ ಹುಸೈನ್| Read More »

ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಎಂಟ್ರಿಫೀಸ್ ನೆಪದಲ್ಲಿ ಲಂಚ!!

ಸಮಗ್ರ ನ್ಯೂಸ್: ಪಿಕಪ್ ಚಾಲಕನ ಜೊತೆ ಎಂಟರ್ಪ್ರೀಸ್ ನೆಪದಲ್ಲಿ ಲಂಚ ಕೇಳುತ್ತಿರುವ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಕಪ್ ಚಾಲಕನೋರ್ವ ಮಡಿಕೇರಿಯಿಂದ ಭತ್ತದ ಹೊಟ್ಟನ್ನು ಸುಳ್ಯದ ಮರ್ಕಂಜದಲ್ಲಿರುವ ಕೋಳಿ ಫಾರ್ಮಿಗೆ ತರುತ್ತಿರುವಾಗ ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ತಡೆದು ನಿಲ್ಲಿಸಿ ಗಾಡಿಯನ್ನು ಪರಿಶೀಲನೆ ಮಾಡಿದ್ದಾರೆ. ಬಳಿಕ ಅಲ್ಲಿರುವ ಅಧಿಕಾರಿಯೊಬ್ಬ ಗಾಡಿಯ ಮಾಹಿತಿಯನ್ನು ಪಡೆದು ನಂತರ ಆತನ ಜೊತೆ ಎಂಟ್ರಿಫೀಸ್ ನೀಡಬೇಕು ಎನ್ನುವ ರೀತಿಯಲ್ಲಿ ಲಂಚ ಕೇಳುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಇದೇ ಪಿಕಪ್ ಚಾಲಕನ

ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಎಂಟ್ರಿಫೀಸ್ ನೆಪದಲ್ಲಿ ಲಂಚ!! Read More »

ಸಾಧನೆಗೆ ಅಡ್ಡಿಯಾಗದ ವೈಕಲ್ಯ| ಕಾಲಿನಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಪಡೆದ ಕೌಶಿಕ್

ಸಮಗ್ರ ನ್ಯೂಸ್: ಸಾಧನೆಯ ಹಾದಿಯಲ್ಲಿ ಕೌಶಿಕ್ ಮತ್ತೊಮ್ಮೆ ಮಿನುಗಿದ್ದಾರೆ. ಅಂಗವೈಕಲ್ಯ ಮೀರಿನಿಂತ ಅವರು ಎಸ್ಸೆಸ್ಸೆಲ್ಸಿಯಂತೆ ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 524 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. ಬಂಟ್ವಾಳದ ಕಂಚಿಕಾರ ಪೇಟೆ ನಿವಾಸಿ ಕೌಶಿಕ್ ಕಾಲಿನಲ್ಲಿ ಪರೀಕ್ಷೆ ಬರೆದು ಎಸ್ಸೆಸ್ಸೆಲ್ಸಿಯಲ್ಲಿ 424 ಅಂಕ ಗಳಿಸಿದ್ದರು. ಅಂದು ಊರಜನರು ಮತ್ತು ಜನಪ್ರತಿನಿಧಿಗಳು ತೋರಿದ ಪ್ರೀತಿಗೆ ಮನಸೋತಿದ್ದ ಅವರಿಗೆ ಜೀವನ ಪರೀಕ್ಷೆಯನ್ನು ದಿಟ್ಟವಾಗಿ ಎದುರಿಸಲು ಮತ್ತಷ್ಟು ಹುಮ್ಮಸ್ಸು ಬಂದಿತ್ತು. ಅದಕ್ಕೆ ಬೆಂಬಲವಾಗಿ ನಿಂತದ್ದು ಮೂಡುಬಿದಿರೆಯ

ಸಾಧನೆಗೆ ಅಡ್ಡಿಯಾಗದ ವೈಕಲ್ಯ| ಕಾಲಿನಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಪಡೆದ ಕೌಶಿಕ್ Read More »

ಕಾಸರಗೋಡು: ಮನೆ ಅಂಗಳಕ್ಕೆ ಉರುಳಿದ ಆಟೋರಿಕ್ಷಾ

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ರಸ್ತೆ ಬದಿಯ ಮನೆಯೊಂದರ ಅಂಗಳಕ್ಕೆ ಉರುಳಿದ ಘಟನೆ ಜೂ 19ರ ಭಾನುವಾರ ಸಂಜೆ ಉಪ್ಪಳ ಸಮೀಪದ ಪತ್ವಾಡಿಯಲ್ಲಿ ನಡೆದಿದ್ದು, ಐವರು ಗಾಯಗೊಂಡಿದ್ದಾರೆ. ಲತೀಫ್ , ಪತ್ನಿ ಝುಹ ರಾ, ಮಕ್ಕಳಾದ ಲುಬ್ನಾ, ಬಶೀರ್ ಆಟೋ ಚಾಲಕ ರಹೀಂ ಗಾಯ ಗೊಂಡವರು. ಗಾಯಾಳುಗಳನ್ನು ಉಪ್ಪಳ ಹಾಗೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಸರಗೋಡು: ಮನೆ ಅಂಗಳಕ್ಕೆ ಉರುಳಿದ ಆಟೋರಿಕ್ಷಾ Read More »

ಸುಳ್ಯ: ಸರಕಾರದಿಂದ ಬರುವ ಯಾವುದೇ ಸವಲತ್ತು ಸಿಗೋದಿಲ್ಲ|ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರು ನೀಡಿದ ಕುಟುಂಬ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿ‌ನ ಅಮರಮುಡ್ನೂರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಗುರುವ ಸುಂದರಿ ದಂಪತಿ ಸರಕಾರದಿಂದ ಬರುವ ಯಾವುದೇ ಸವಲತ್ತು ಸಿಗೋದಿಲ್ಲ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರು ನೀಡಿದಾಗ ತಕ್ಷಣ ಮನೆ ನಿವೇಶನದ ಹಕ್ಕುಪತ್ರ ನೀಡಿದ ಘಟಣೆ ನಡೆದಿದೆ. ಇವರು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ನನಗೆ ಹಲವು ವರ್ಷಗಳಿಂದ ಮನೆ ಇಲ್ಲದೆ ಕರೆಂಟು ಇಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬ ತೊಂದರೆಯಾಗುತ್ತದೆ ಸರಕಾರದಿಂದ ಬರುವಂತ ಯಾವುದೇ ಸವಲತ್ತು ಸಿಗುತ್ತಿಲ್ಲ ನಾವೀಗ ಸಣ್ಣದೊಂದು ಜೋಪಡಿಯಲ್ಲಿ ವಾಸವಾಗಿದ್ದೇವೆ. ನಿಮ್ಮ

ಸುಳ್ಯ: ಸರಕಾರದಿಂದ ಬರುವ ಯಾವುದೇ ಸವಲತ್ತು ಸಿಗೋದಿಲ್ಲ|ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರು ನೀಡಿದ ಕುಟುಂಬ Read More »

ಪತ್ರಕರ್ತ ಗುರುವಪ್ಪ ಬಾಳೆಪುಣಿಗೆ ‘ವಿ.ಎಸ್.ಕೆ’ ಮಾಧ್ಯಮ ಪ್ರಶಸ್ತಿ

ಸಮಗ್ರ ನ್ಯೂಸ್: ಮಾಧ್ಯಮ ಸಂವಹನ ಸಂಸ್ಥೆಯಾದ ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ವತಿಯಿಂದ ನೀಡಲಾಗುವ ವಿ.ಎಸ್.ಕೆ ಮಾಧ್ಯಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, `ಹೊಸ ದಿಗಂತ’ ಕನ್ನಡ ದೈನಿಕದ ಮಂಗಳೂರು ಆವೃತ್ತಿಯ ವಿಶೇಷ ವರದಿಗಾರ ಗುರುವಪ್ಪ ಎನ್.ಟಿ.ಬಾಳೇಪುಣಿ ಅವರು ಬೆ.ಸು.ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿ.ಎಸ್.ಕೆ.ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಜೂ.26ರಂದು ಪೂರ್ವಾಹ್ನ 10:30ಕ್ಕೆ ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.ಬಾಳೇಪುಣಿಯವರಿಗೆ ಇತ್ತೀಚೆಗಷ್ಟೇ ರಾಜ್ಯ ಸರಕಾರ ರಾಜ್ಯ ಮಟ್ಟದ ಪ್ರತಿಷ್ಠಿತ `ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ಪತ್ರಕರ್ತ ಗುರುವಪ್ಪ ಬಾಳೆಪುಣಿಗೆ ‘ವಿ.ಎಸ್.ಕೆ’ ಮಾಧ್ಯಮ ಪ್ರಶಸ್ತಿ Read More »