ಕರಾವಳಿ

ಸುಳ್ಯ: ಎರಡು ದಿನವಾದರೂ ಪತ್ತೆಯಾಗದ ಕರೆಂಟ್| ಸಚಿವರೇ ಈ ಕೆಲಸ ಯಾವತ್ತಾಗುತ್ತೆ?

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಕರೆಂಟ್ ನಾಪತ್ತೆಯಾಗಿದ್ದು, ಜನರು ಪರದಾಡುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಜನರ ಮುಂದಿಟ್ಟರೆ ಇದಕ್ಕಿಂತ ಮೊದಲು ಮಾಡಿದ ಕೆಲಸಗಳನ್ನು ಹೇಳಿ ಎಂದು ಮೀನುಗಾರಿಕಾ ಸಚಿವರು 6 ಬಾರಿ ಶಾಸಕರೂ ಆಗಿರುವ ಎಸ್ ಅಂಗಾರರು ಗರಂ ಆಗ್ತಾರೆ. ಕ್ಷೇತ್ರದಲ್ಲಿ ನಿರಂತರ ಎರಡನೇ ದಿನವೂ ದಿನಪೂರ್ತಿ ಕರೆಂಟ್‌ ನಾಪತ್ತೆಯಾಗಿದ್ದು ಜನರು ಬಸವಳಿದು ಹೋಗಿದ್ದಾರೆ. ಸುಳ್ಯದ ಜನತೆ ವಿದ್ಯುತ್ ಸಮಸ್ಯೆ ಮುಗಿಯದ ಕರೆಯಾಗಿದೆ. ಜು 16ರಂದು ದಿನಪೂರ್ತಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವ […]

ಸುಳ್ಯ: ಎರಡು ದಿನವಾದರೂ ಪತ್ತೆಯಾಗದ ಕರೆಂಟ್| ಸಚಿವರೇ ಈ ಕೆಲಸ ಯಾವತ್ತಾಗುತ್ತೆ? Read More »

ದಲಿತರ ಕಾಲೋನಿಗೆ‌ ಬಂದ ಅನುದಾನ ಬೇರೆಡೆಗೆ ವರ್ಗಾವಣೆ| ಶಾಸಕರೇ ಈ ಕೆಲಸ ‌ಮಾಡಿದ್ದಾರೆ ಎಂದು ಆರೋಪಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆ

ಸಮಗ್ರ ನ್ಯೂಸ್: ದಲಿತರ ಕಾಲೋನಿಗೆ ಬಂದ ಶೌಚಾಲಯ ಮತ್ತು ಸ್ನಾನ ಗೃಹ ಕಟ್ಟಡ ಸ್ಥಳ ಬದಲಾವಣೆಗೆ ಶಾಸಕ ಅಂಗಾರರೇ ಕಾರಣ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಆರೋಪಿಸಿದೆ. ಕಾಲೋನಿಯಲ್ಲಿ ನೂತನ ಕಟ್ಟಡ ಮಾಡಿಕೊಡದಿದ್ದಲ್ಲಿ ಬಿಜೆಪಿ ಕಚೇರಿ ಮುಂದೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲು ದಲಿತ ಕಾಲೋನಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡ ನಿರ್ಮಿಸಲು 30 ಲಕ್ಷ ಅನುದಾನ ಬಂದಿದ್ದು, ಬಂದಿರುವ

ದಲಿತರ ಕಾಲೋನಿಗೆ‌ ಬಂದ ಅನುದಾನ ಬೇರೆಡೆಗೆ ವರ್ಗಾವಣೆ| ಶಾಸಕರೇ ಈ ಕೆಲಸ ‌ಮಾಡಿದ್ದಾರೆ ಎಂದು ಆರೋಪಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆ Read More »

ಮದ್ಯ ಮಾರಾಟದಲ್ಲಿ ದ.ಕ ಟಾಪರ್ ಅಲ್ಲ| ಸ್ಪಷ್ಟನೆ ನೀಡಿದ ಅಬಕಾರಿ ಡಿಸಿ

ಸಮಗ್ರ ನ್ಯೂಸ್: ಮದ್ಯ ಮಾರಾಟದಲ್ಲಿ ದ.ಕ ಜಿಲ್ಲೆ ಇಡೀ ರಾಜ್ಯಕ್ಕೆ ಟಾಪರ್ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದ್ದು, ಸಾಮಾಜಿಕ ತಾಣಗಳಲ್ಲೂ ಭಾರೀ ವೈರಲ್ ಆಗಿತ್ತು. ಆದರೆ ಈ ಸುದ್ದಿಗೆ ಸಂಬಂಧಿಸಿದಂತೆ ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ ಸ್ಪಷ್ಟನೆ ನೀಡಿದ್ದು, ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ. ಈ ಕುರಿತು ಸ್ಪಷ್ಟನೆ ‌ನೀಡಿದ ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ, ಈ ವರದಿಯನ್ನು ನಾವು ಯಾರಿಗೂ ಕೊಟ್ಟಿಲ್ಲ. ‌ರಾಜ್ಯದಲ್ಲಿ ದ‌.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಮದ್ಯ ಮಾರಾಟ ಎನ್ನುವುದು ಸರಿಯಲ್ಲ.

ಮದ್ಯ ಮಾರಾಟದಲ್ಲಿ ದ.ಕ ಟಾಪರ್ ಅಲ್ಲ| ಸ್ಪಷ್ಟನೆ ನೀಡಿದ ಅಬಕಾರಿ ಡಿಸಿ Read More »

ನಟ ಪೃಥ್ವಿ ಅಂಬರ್ ಗೆ ಮಾತೃವಿಯೋಗ

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ನ ಉದಯೋನ್ಮುಖ ನಟ, ದಿಯಾ ಖ್ಯಾತಿಯ ಪೃಥ್ವಿ ಅಂಬರ್​ ತಾಯಿ ಸುಜಾತ ವೀರಪ್ಪ ಅಂಬರ್ ಹೃದಯ ಸಂಬಂಧಿ ಕಾಯಿಲೆಯಿಂದ ಇಂದು (ಜುಲೈ 15) ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಸುಜಾತ ಅವರು ವೀರಪ್ಪ ಅಂಬರ್ ಅವರ ಧರ್ಮಪತ್ನಿಯಾಗಿದ್ದು, ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರು. ಇವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ದುರ್ಗಾಪರಮೇಶ್ವರಿ ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದ ಸುಜಾತ ಅವರು ಹಲವು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇನ್ನೂ ಇವರ ಪುತ್ರ ನಟ ಪೃಥ್ವಿ ಅಂಬರ್‌ ಸಿನಿಮಾ

ನಟ ಪೃಥ್ವಿ ಅಂಬರ್ ಗೆ ಮಾತೃವಿಯೋಗ Read More »

ಶಿರಾಡಿ ಘಾಟ್ ಸಂಚಾರ ಸ್ಥಗಿತ| ಕಿ.ಮೀ ಗಟ್ಟಲೆ ಟ್ರಾಫಿಕ್ ಜ್ಯಾಂ

ಸಮಗ್ರ ನ್ಯೂಸ್: ಸಕಲೇಶಪುರದ ದೋಣಿಗಲ್ ಬಳಿ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜ್ಯಾಂ ಉಂಟಾಗಿದೆ. ಭಾರೀ ಗಾತ್ರದ ಟ್ರಕ್ಕ್ ಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ. ಇದರಿಂದ ಗುಂಡ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ- ಧರ್ಮಸ್ಥಳ ಪ್ರಯಾಣಿಸುವ ವಾಹನಗಳಿಗೆ ತೊಂದರೆಯುಂಟಾಗಿದ್ದು, ಗಂಟೆಗಟ್ಟಲೆ ಟ್ರಾಫಿಕ್ ಜ್ಯಾಂ ಉಂಟಾಗಿದೆ. ಅಡ್ಡಹೊಳೆಯಿಂದ ಗುಂಡ್ಯ ಸಕಲೇಶಪುರ ರಸ್ತೆಯ ತುಂಬಾ ಟ್ರಕ್ಕುಗಳು ಸಾಲುಗಟ್ಟಿವೆ

ಶಿರಾಡಿ ಘಾಟ್ ಸಂಚಾರ ಸ್ಥಗಿತ| ಕಿ.ಮೀ ಗಟ್ಟಲೆ ಟ್ರಾಫಿಕ್ ಜ್ಯಾಂ Read More »

ಮಂಗಳೂರು: ಮಳಲಿ ಮಸೀದಿ ವಿವಾದ| ಹಿಂದೂ ಸಂಘಟನೆಗಳ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ರಚನೆ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಮುಖಂಡರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜ್ಞಾನವಾಪಿ ಮಾದರಿಯಂತೆ ಹೈಕೋರ್ಟ್ ಕೂಡ ಕಮಿಷನರ್ ನೇಮಕ ಮಾಡಬೇಕೆಂದು ಹಿಂದು ಮುಖಂಡರು ಅರ್ಜಿ ಸಲ್ಲಿಸಿದ್ದರು. ಹಾಗೇ ಅರ್ಜಿ ಸಿಂಧುತ್ವ ತೀರ್ಮಾನಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಲು ಅರ್ಜಿಯಲ್ಲಿ ಕೋರಿದ್ದರು. ಅರ್ಜಿಗೆ ಜುಮ್ಮಾ ಮಸೀದಿ ಪರ ವಕೀಲ ಸಿರಿಲ್ ಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದು, ವಿಚಾರಣಾ ನ್ಯಾಯಾಲಯ ಅರ್ಜಿ ಸಿಂಧುತ್ವದ ಬಗ್ಗೆ ನಿರ್ಧರಿಸಬೇಕು. ಅರ್ಜಿ ಊರ್ಜಿತವಾಗದೇ ಕೋರ್ಟ್

ಮಂಗಳೂರು: ಮಳಲಿ ಮಸೀದಿ ವಿವಾದ| ಹಿಂದೂ ಸಂಘಟನೆಗಳ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್ Read More »

ಮತ್ತೆ ನಡುಗಿದ ಕೊಡಗು ಗಡಿಭಾಗ; ಆತಂಕಗೊಂಡ ಜನತೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಭೂಕಂಪದ ಅನುಭವವಾಗಿದೆ. ಜಿಲ್ಲೆಯ ಚೆಂಬು ಕೂಡಡ್ಕ ಪರಿಸರದಲ್ಲಿ ಇಂದು ಬೆಳಿಗ್ಗೆ 10:10ರ ಸುಮಾರಿಗೆ ಭೂಮಿ ನಡುಗಿದ್ದು ಜನತೆ ಆತಂಕಗೊಂಡಿದ್ದಾರೆ. ಕಳೆದೊಂದು ತಿಂಗಳಿನಿಂದ ಹಲವು ಬಾರಿ ಚೆಂಬು, ಸಂಪಾಜೆ,‌ ಪೆರಾಜೆ, ತೊಡಿಕಾನ, ಅರಂತೋಡು ಭಾಗಗಳಲ್ಲಿ ‌ಭೂಮಿ ಕಂಪಿಸುತ್ತಿದ್ದು, ಜನರು ಜೀವಭಯದಿಂದಲೇ ಬದುಕುವಂತಾಗಿದೆ.

ಮತ್ತೆ ನಡುಗಿದ ಕೊಡಗು ಗಡಿಭಾಗ; ಆತಂಕಗೊಂಡ ಜನತೆ Read More »

ಸುಳ್ಯ: ಮಳೆಯಿಂದ ಕೊಚ್ಚಿಹೋದ ಉಪ್ಪುಕಳಕ್ಕೆ ಸಚಿವ ಅಂಗಾರ ಭೇಟಿ; ಸೇತುವೆಯ ಭರವಸೆ

ಸಮಗ್ರ ನ್ಯೂಸ್: ಮಳೆಯಿಂದ ಹಾನಿಗೊಳಗಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಉಪ್ಪುಕಳ ಗ್ರಾಮಕ್ಕೆ ಬಂದರು ಹಾಗೂ ಮೀನುಗಾರಿಕೆ ಸಚಿವ ಅಂಗಾರ ಇಂದು(ಜು.14) ಭೇಟಿ ನೀಡಿದ್ದು, ಶೀಘ್ರದಲ್ಲೇ ಸೇತುವೆ ನಿರ್ಮಾಣದ ಭರವಸೆ ನೀಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 124 ಸೇತುವೆಗಳು ನಿರ್ಮಾಣವಾಗಿವೆ. ವಿಶೇಷ ಪ್ರಾಶಸ್ತ್ಯ ನೀಡಿ ಗ್ರಾಮಗಳನ್ನು ಬೆಸೆಯುವ ಸಂಪರ್ಕ ಸೇತುವೆ ನಿರ್ಮಿಸಲಾಗುತ್ತದೆ. ಉಪ್ಪುಕಳದಲ್ಲೂ ಅತೀ ಶೀಘ್ರದಲ್ಲೇ ಸೇತುವೆ ರಚನೆಯಾಗಲಿದ್ದು, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು. ಮಾಧ್ಯಮಗಳ ಮೇಲೆ ವಾಗ್ದಾಳಿ:ಇದೇ ವೇಳೆ ಸಚಿವ ಅಂಗಾರ

ಸುಳ್ಯ: ಮಳೆಯಿಂದ ಕೊಚ್ಚಿಹೋದ ಉಪ್ಪುಕಳಕ್ಕೆ ಸಚಿವ ಅಂಗಾರ ಭೇಟಿ; ಸೇತುವೆಯ ಭರವಸೆ Read More »

ಸುಳ್ಯ: ನಗರದ ಹೃದಯ ಭಾಗದಲ್ಲಿವೆ ಮೃತ್ಯುಕೂಪಗಳು|
ಜನಸಾಮಾನ್ಯರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದರೂ ನಿರ್ಲಕ್ಷ್ಯ

ಸಮಗ್ರ ನ್ಯೂಸ್: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿರುವ ಸುಳ್ಯ ನಗರ ಸೇರಿದಂತೆ ನ.ಪಂ ವ್ಯಾಪ್ತಿಯಲ್ಲಿ ಹಲವು ಗುಂಡಿಗಳು ಬಿದ್ದಿದ್ದು ಜನಸಾಮಾನ್ಯರ ಪ್ರಾಣದ ಮೇಲೆ ಚೆಲ್ಲಾಟವಾಡುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇದನ್ನು ನೋಡಿಯೂ ನೋಡದಂತೆ ತೆರಳುತ್ತಿದ್ದು, ಸಾರ್ವಜನಿಕರ ಪ್ರಾಣದ ಮೇಲೆ ಯಾಕಿಷ್ಟು ನಿರ್ಲಕ್ಷ್ಯ ಎಂಬ ಆಕ್ರೋಶ ಕೇಳಿಬರುತ್ತಿದೆ. ಸುಳ್ಯ ನ. ಪಂಚಾಯತ್ ನವರು ಗುಂಡಿ ಅಗೆದು ಕಾಮಗಾರಿ ನಡೆಸಿ ಅದನ್ನು ಸರಿಯಾಗಿ ಮುಚ್ಚದೆ ಇರುವುದು ನಗರದ ಹೃದಯ ಭಾಗವಾದ ಪೊಲೀಸ್ ಠಾಣೆಯ ಮುಂಭಾಗ ಮತ್ತು ಆಲೆಟ್ಟಿ ತಿರುವಿನಲ್ಲಿ

ಸುಳ್ಯ: ನಗರದ ಹೃದಯ ಭಾಗದಲ್ಲಿವೆ ಮೃತ್ಯುಕೂಪಗಳು|
ಜನಸಾಮಾನ್ಯರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದರೂ ನಿರ್ಲಕ್ಷ್ಯ
Read More »

ಸುಳ್ಯ: ಮತದಾನ ಬಹಿಷ್ಕಾರ ಅಳವಡಿಸಿದ ಬ್ಯಾನರ್‌ ಕಳವು ಪ್ರಕರಣ| ದೈವ ದೇವರಿಗೆ ಹರಕೆ‌ ಹೇಳಲು ಮುಂದಾದ ಗ್ರಾಮಸ್ಥರು| ಬ್ಯಾನರ್ ಹೊಳೆಗೆಸೆದರೇ ಕಿಡಿಗೇಡಿಗಳು?

ಸಮಗ್ರ ನ್ಯೂಸ್::ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಊರವರು ಮನವಿ ಸಲ್ಲಿಸಿದ್ದರೂ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ‌ ನಾಗರಿಕ ಹಿತರಕ್ಷಣಾ ಸಮಿತಿಯನ್ನು‌ ರಚಿಸಿಕೊಂಡು ಹೋರಾಟಕ್ಕೆ‌ ನಡೆಸುತ್ತಿದ್ದು, ಅರಂತೋಡಿನಿಂದ ಮರ್ಕಂಜ ಮಾರ್ಗವಾಗಿ ಎಲಿಮಲೆ‌ಯವರೆಗೆ 26 ಕಡೆಗಳಲ್ಲಿ ಅಲ್ಲಿಯ ನೊಂದ‌ ಫಲಾನುಭವಿಗಳ ಹೆಸರಲ್ಲಿ ಮತದಾನದ ಬ್ಯಾನರ್‌ಗಳನ್ನು‌ ಅಳವಡಿಸಲಾಗಿತ್ತು. ಆದರೆ ಈ ಬ್ಯಾನರ್ ಅನ್ನು ಕೆಲದಿನಗಳ ಹಿಂದೆ ಕಿಡಿಗೇಡಿಗಳು ತೆಗೆದಿದ್ದಾರೆ. ಘಟನೆ ಕುರಿತಂತೆ ಇಲ್ಲಿಯ ಫಲನುಭವಿಗಳು ಬ್ಯಾನರ್ ಕಳವು ಮಾಡಿದ ವಿರುದ್ದ ದೈವ ದೇವರಿಗೆ ಹರಕೆ ಹೇಳಲು ಮುಂದಾಗಿದ್ದು, ಇದರ ಬೆನ್ನಲ್ಲೇ

ಸುಳ್ಯ: ಮತದಾನ ಬಹಿಷ್ಕಾರ ಅಳವಡಿಸಿದ ಬ್ಯಾನರ್‌ ಕಳವು ಪ್ರಕರಣ| ದೈವ ದೇವರಿಗೆ ಹರಕೆ‌ ಹೇಳಲು ಮುಂದಾದ ಗ್ರಾಮಸ್ಥರು| ಬ್ಯಾನರ್ ಹೊಳೆಗೆಸೆದರೇ ಕಿಡಿಗೇಡಿಗಳು? Read More »