ಕರಾವಳಿ

ಅಬ್ಬರಿಸಿದ ಪೂರ್ವ ಮುಂಗಾರು| ಕರಾವಳಿಯಲ್ಲಿ ಎರಡು ಜೀವಗಳು ಬಲಿ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆಗೆ ಎರಡು ಬಲಿಯಾಗಿದೆ. ಉಡುಪಿ ಜಿಲ್ಲೆಯ ಕಾಪು ಸಮೀಪದ ಮಜೂರು ಎಂಬಲ್ಲಿ ಚಲಿಸುತ್ತಿದ್ದ ಎರಡು ಆಟೋರಿಕ್ಷಾದ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಕಾಪು ಕಡೆಯಿಂದ ಶಿರ್ವಾ ಕಡೆಗೆ ಮತ್ತು ಶಿರ್ವಾದಿಂದ ಕಾಪು ಕಡೆಗೆ ಪಯಣಿಸುತ್ತಿದ್ದ ಎರಡು ರಿಕ್ಷಾದ ಮೇಲೆ ಮರ ಬಿದ್ದ ಪರಿಣಾಮ ಕಾಪುವಿನಿಂದ ಶಿರ್ವ ಕಡೆಗೆ ತೆರಳುತ್ತಿದ್ದ ಪುಷ್ಪಾ(45) ಹಾಗೂ ಅವರ ಮೈದುನ ಸಾವನ್ನಪ್ಪಿದ್ದಾರೆ. ಶರೀಫ್ ಹಾಗೂ ದಿನೇಶ್ ಎಂಬವರ ರಿಕ್ಷಾದ

ಅಬ್ಬರಿಸಿದ ಪೂರ್ವ ಮುಂಗಾರು| ಕರಾವಳಿಯಲ್ಲಿ ಎರಡು ಜೀವಗಳು ಬಲಿ Read More »

ಮತದಾನ ದಿನದಂದು ಒಂಟಿಯಾದ ಸಚಿವ ಎಸ್.ಅಂಗಾರ

ಸಮಗ್ರ ನ್ಯೂಸ್: ಎಸ್.ಅಂಗಾರ ಸುಳ್ಯದ ಶಾಸಕ ಹಾಗೂ ಬಂದರು, ಮೀನುಗಾರಿಕಾ ಸಚಿವ. ಆದರೆ ಕೆಲ ದಿನಗಳ ಹಿಂದಿನ ಬೆಳವಣಿಗೆಗಳು ಸಚಿವ ಎಸ್‌.ಅಂಗಾರರನ್ನು ಒಬ್ಬಂಟಿಯಾಗಿಸಿದೆ. ಹೊರಗೆ ಹೊರಟಾಗ ಜೊತೆಗಿರುತ್ತಿದ್ದ ಕಾರ್ಯಕರ್ತರು ಇದೀಗ ಅಂಗಾರರನ್ನು ಒಂಟಿಯಾಗಿರಿಸಿದ್ದಾರೆ. ಹೌದು. ನಿನ್ನೆ(ಮೇ.10) ಸಾರ್ವತ್ರಿಕ ಮತದಾನದ ದಿನದಂದು ಸಚಿವ ಎಸ್.ಅಂಗಾರ ತಮ್ಮ ಹಕ್ಕು ಚಲಾವಣೆಗಾಗಿ ಸುಳ್ಯ ತಾಲೂಕಿನ ದೊಡ್ಡತೋಟದ ಮತಗಟ್ಟೆಗೆ ಬಂದಿದ್ರು. ಸಚಿವರು ತಮ್ಮ ಕುಟುಂಬ ಸಮೇತರಾಗಿ ಬಂದಿದ್ದರೂ ಅವರನ್ನು ಮಾತನಾಡಿಸಲು ಬಿಜೆಪಿ ಪಕ್ಷದ ಕಾರ್ಯಕರ್ತರೇ ಇರಲಿಲ್ಲ. ಕೊನೆಗೆ ಕಾಂಗ್ರೆಸ್ ನ ಕಾರ್ಯಕರ್ತರೋರ್ವರು ಅಂಗಾರರನ್ನು

ಮತದಾನ ದಿನದಂದು ಒಂಟಿಯಾದ ಸಚಿವ ಎಸ್.ಅಂಗಾರ Read More »

ಮೇ.13 ದ.ಕ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ

ಸಮಗ್ರ ನ್ಯೂಸ್: ಮೇ 10 ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 13 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ದ.ಕ ಜಲ್ಲೆಯಲ್ಲಿ 144 ಸೆಕ್ಷನ್‌ ಜಾರಿಗೊಳಿಸಿ ದ.ಕ ಜಿಲ್ಲಾಧಿಕಾರಿ ಎಮ್‌ ಆರ್‌ ರವಿ ಕುಮಾರ್‌ ಆದೇಶ ಹೊರಡಿಸಿದ್ದಾರೆ. ಮೇ 13 ಬೆಳಗ್ಗೆ 5 ರಿಂದ ರಾತ್ರಿ 12 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಶವ ಸಂಸ್ಕಾರ, ಮದುವೆ ಅಥವಾ ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್‌ 19 ಕಾರ್ಯಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ

ಮೇ.13 ದ.ಕ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ Read More »

ಮೊದಲ ಬ್ಯಾಟ್ ನಲ್ಲೆ ಸಿಕ್ಸರ್ ಬಾರಿಸುತ್ತಾರ “ಪುತ್ತಿಲ”

ಊರು ಕೇರಿಯಲ್ಲೂ ಅಬ್ಬರದ ಪ್ರಚಾರ, ಗಲ್ಲಿ ಓಣಿಗಳಲ್ಲೂ ಕೇಳಿ ಬಂತು ಡಂಗೂರ, ಆರೋಪ ಪ್ರತ್ಯಾರೋಪಗಳನ್ನೆಲ್ಲ ನೋಡಿದ ಮತದಾರ ಕೊನೆಗೂ ಅದಕ್ಕೊಂದು ಅಂತಿಮ‌ ಮುದ್ರೆ ಒತ್ತಿದ್ದಾನೆ. ಇನ್ನೇದ್ದರು ಸೋಲು – ಗೆಲುವಿನ ಲೆಕ್ಕಚಾರ. ದೇಶದ ಹಿತದೃಷ್ಟಿಯಿಂದ ಮತ ಚಲಾಯಿಸುವ ಮತದಾರ ಬಂಧುಗಳು ಒಂದು ಕಡೆಯಾದರೆ ಬೆಲೆ ಏರಿಕೆ ಮತ್ತು ತಮ್ಮ ಲಾಭವನ್ನು ಲೆಕ್ಕಚಾರ ಹಾಕುವ ಮತದಾರರು ಮತ್ತೊಂದು ಕಡೆ. ಇನ್ನು ಕೆಲವರು ಎಣ್ಣೆ, ನೋಟುಗಳ ಹಿಂದೆ ಹೋಗಿ ಹಕ್ಕನ್ನು ಮಾರಿಕೊಳ್ಳುವ ಮೂರ್ಖರು ಸಹ ಇದೀಗ ಗದ್ದುಗೆ ಯಾರಿಗೆ ಎಂಬ

ಮೊದಲ ಬ್ಯಾಟ್ ನಲ್ಲೆ ಸಿಕ್ಸರ್ ಬಾರಿಸುತ್ತಾರ “ಪುತ್ತಿಲ” Read More »

ಮಿಥುನ್ ರೈ ಕಾರಿಗೆ,ಪೊಲೀಸ್ ಸಿಬ್ಬಂದಿಗೆ ಕಲ್ಲೇಟು| ಕಾವೂರು ಠಾಣೆ ವ್ಯಾಪ್ತಿಗೆ 144 ಸೆಕ್ಷನ್

ಸಮಗ್ರ ನ್ಯೂಸ್: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿಗೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದೀಗ ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಕಾವೂರು ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಹೇರಿದ್ದಾರೆ. ಮೂಡುಬಿದ್ರೆ ಮತಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆಯ ಮತಗಟ್ಟೆ ಒಂದಕ್ಕೆ ಸಂಜೆ ವೇಳೆಗೆ ಮಿಥುನ್ ರೈ ತೆರಳಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಾಗ ಸಂಜೆ ಏಳು ಗಂಟೆ ವೇಳೆಗೆ ಅಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಈ ವೇಳೆ, ಮಿಥುನ್ ರೈ ಕಾರು ನಿಲ್ಲಿಸಿದ್ದು ಜೊತೆಗಿದ್ದ

ಮಿಥುನ್ ರೈ ಕಾರಿಗೆ,ಪೊಲೀಸ್ ಸಿಬ್ಬಂದಿಗೆ ಕಲ್ಲೇಟು| ಕಾವೂರು ಠಾಣೆ ವ್ಯಾಪ್ತಿಗೆ 144 ಸೆಕ್ಷನ್ Read More »

ಸುಬ್ರಹ್ಮಣ್ಯ, ಗುತ್ತಿಗಾರು ಪೇಟೆಯಲ್ಲಿ ಬೆತ್ತಲೆ ಓಡಾಡುತ್ತಿದ್ದ ವ್ಯಕ್ತಿ ಮರಳಿ ಊರಿಗೆ

ಸಮಗ್ರ ನ್ಯೂಸ್: ಎರಡ್ಮೂರು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ, ಗುತ್ತಿಗಾರು, ಪೇಟೆಯಲ್ಲಿ ಬೆತ್ತಲೆ ಓಡಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಯನ್ನು ಅಮರ ಚಾರಿಟೇಬಲ್ ಟ್ರಸ್ಟ್ ವತಿಯ ಊರಿಗೆ ಕಳುಹಿಸಿದ ಘಟನೆ ವರದಿಯಾಗಿದೆ. ಆ ವ್ಯಕ್ತಿಯನ್ನುಕೊಪ್ಪಳ ಮೂಲದ ಮಹೇಶ್ ಎಂದು ಗುರುತಿಸಲಾಗಿದೆ. ಈತ ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯ ಪೇಟೆಯಲ್ಲಿ ಬೆತ್ತಲೆ ಓಡಾಡುತಿದ್ದ ವ್ಯಕ್ತಿ ನಂತರ ಗುತ್ತಿಗಾರು ಪೇಟೆಗೆ ಆಗಮಿಸಿ ಬೆತ್ತಲೆ ಓಡಾಡುತಿದ್ದರು. ಈ ಸಂದರ್ಭದಲ್ಲಿ ಅವರನ್ನು ಜೀಪ್ ಚಾಲಕರದ, ವಿನಯ್ ಮಾಡಬಾಕಿಲು, ಕುಶಾಲಪ್ಪ ಕುಳ್ಳಾಜೆ,

ಸುಬ್ರಹ್ಮಣ್ಯ, ಗುತ್ತಿಗಾರು ಪೇಟೆಯಲ್ಲಿ ಬೆತ್ತಲೆ ಓಡಾಡುತ್ತಿದ್ದ ವ್ಯಕ್ತಿ ಮರಳಿ ಊರಿಗೆ Read More »

weather report| ಹವಾಮಾನ ವರದಿ| ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಒಳನಾಡಿನ ಹಲವೆಡೆ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕಳೆದೆರಡು ದಿನಗಳಿಂದ ರಾಜ್ಯದ ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ವರ್ಷ ಗುಡುಗು ಸಿಡಿಲಿನ ಪ್ರಮಾಣವೂ ಹೆಚ್ಚಿದೆ. ಭಾರಿ ಮಳೆ ಹಾಗೂ ಗುಡುಗು ಸಿಡಿಲಿನ ಪ್ರಭಾವದಿಂದ ಅನಾಹುತಗಳು ನಡೆದಿವೆ. ಮುಂದಿನ 48 ಗಂಟೆಗಳ ಮುನ್ಸೂಚನೆಯಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ವಿವಿಧೆಡೆ ಮೇ14ರವರೆಗೆ ಅಲ್ಲಲ್ಲಿ ಅನಿರೀಕ್ಷಿತ ಮಳೆಯಾಗುವ ಎಚ್ಚರಿಕೆಯನ್ನೂ ನೀಡಿದೆ. ಇದೇ ರೀತಿ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ಹವಾಮಾನ ಇಲಾಖೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ

weather report| ಹವಾಮಾನ ವರದಿ| ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಒಳನಾಡಿನ ಹಲವೆಡೆ ಭಾರೀ ಮಳೆ ಸಾಧ್ಯತೆ Read More »

ಸುಬ್ರಹ್ಮಣ್ಯ: ಈಡೇರದ ಸೇತುವೆ ಭರವಸೆ – ಮತದಾನ ಬಹಿಷ್ಕಾರ|ಶ್ರಮಸೇವೆ ಮಾಡಿ ಪಾಲ ದುರಸ್ತಿ ಮಾಡಿದ ಮತದಾರರು

ಸಮಗ್ರ ನ್ಯೂಸ್: ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಕುಜುಂಬಾರು‌ ಎಂಬಲ್ಲಿ ಸೇತುವೆ ನಿರ್ಮಿಸುವಂತೆ ಬೇಡಿಕೆ ಈಡೇರಿಸಿದ್ದರೂ, ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ಆ ಭಾಗದ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೇ, ಹೊಳೆಗೆ ಮರದ ಸಂಕ ನಿರ್ಮಿಸಲು ಶ್ರಮಸೇವೆ ನಡೆಸಿದ ಘಟನೆ ನಡೆದಿದೆ. ಕಡಬ ತಾಲೂಕಿನ ಕುಜುಂಬಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಹಲವಾರು ವರ್ಷಗಳಿಂದ ಬೇಡಿಕೆ, ಮನವಿ ಸಲ್ಲಿಸಿದ್ದರೂ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಇಲ್ಲಿನ ಜನ ಸೇತುವೆ ನಿರ್ಮಿಸದ ಹಿನ್ನಲೆಯಲ್ಲಿ

ಸುಬ್ರಹ್ಮಣ್ಯ: ಈಡೇರದ ಸೇತುವೆ ಭರವಸೆ – ಮತದಾನ ಬಹಿಷ್ಕಾರ|ಶ್ರಮಸೇವೆ ಮಾಡಿ ಪಾಲ ದುರಸ್ತಿ ಮಾಡಿದ ಮತದಾರರು Read More »

ಮಂಗಳೂರು: ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಚಕಮಕಿ| ಮಿಥುನ್ ರೈ ಕಾರಿಗೆ ಕಲ್ಲೆಸೆತ

ಸಮಗ್ರ ನ್ಯೂಸ್: ದ.ಕ.ಜಿಲ್ಲೆಯಲ್ಲಿ ಬುಧವಾರ ಶಾಂತಿಯುತ ಮತದಾನ ಪ್ರಕ್ರಿಯೆ ನಡೆದರೂ ಆ ಬಳಿಕ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆಯ ಸರಕಾರಿ ಹಿ.ಪ್ರಾ.ಶಾಲೆಯ ಮತಗಟ್ಟೆಯ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿರುವುದಾಗಿ ವರದಿಯಾಗಿದೆ. ಈ ಘಟನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯ ಕಾರಿಗೆ ಕಲ್ಲೆಸೆದು ಹಾನಿ ಎಸಗಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಸಿಪಿ ಅಂಶುಕುಮಾರ್‌ರ ವಾಹನಕ್ಕೂ ಕಲ್ಲೆಸೆದ ಪರಿಣಾಮ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅದಲ್ಲದೆ ಇಬ್ಬರು ಮಹಿಳೆಯರಿಗೆ ಗಾಯವಾಗಿದೆ

ಮಂಗಳೂರು: ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಚಕಮಕಿ| ಮಿಥುನ್ ರೈ ಕಾರಿಗೆ ಕಲ್ಲೆಸೆತ Read More »

ಚುನಾವಣೋತ್ತರ ಸಮೀಕ್ಷೆ| ಅತಂತ್ರ ವಿಧಾನಸಭೆ; ಅತೀದೊಡ್ಡ ಪಕ್ಷವಾಗಿ ಕಾಂಗ್ರೆಸ್

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆಗೆ ಇಂದು ನಡೆದ ಮತದಾನದ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲಿದೆ ಎಂದು ಹೇಳುತ್ತಿವೆ. ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣೋತ್ತರ ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ. ಸಮೀಕ್ಷೆಗಳ ಪ್ರಕಾರ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ. ಸಮೀಕ್ಷೆಗಳ ಆಧಾರದ ಮೇಲೆ ಹೇಳೋದಾದರೆ ಯಾರೇ ಅಧಿಕಾರ ಹಿಡಿಯಬೇಕಾದರೆ ಜೆಡಿಎಸ್‌ ಬೆಂಬಲ ಬೇಕೇಬೇಕಾಗುತ್ತದೆ. ಚುನಾವಣೋತ್ತರ ಸಮೀಕ್ಷೆ:ಸಿ ವೋಟರ್‌ಕಾಂಗ್ರೆಸ್‌ – 100-112ಬಿಜೆಪಿ – 83-95ಜೆಡಿಎಸ್‌ – 21-29ಇತರೆ – 02-06 ಪೋಲ್‌

ಚುನಾವಣೋತ್ತರ ಸಮೀಕ್ಷೆ| ಅತಂತ್ರ ವಿಧಾನಸಭೆ; ಅತೀದೊಡ್ಡ ಪಕ್ಷವಾಗಿ ಕಾಂಗ್ರೆಸ್ Read More »