ಕರಾವಳಿ

ಕಸಾಪ: ಸಂಘಟನಾ ಕಾರ್ಯದರ್ಶಿಗಳ ನೇಮಕ

ಸಮಗ್ರ ನ್ಯೂಸ್ :ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಸಂಘಟಕರುಗಳಾದ ಕಾ.ವೀ. ಕೃಷ್ಣದಾಸ್ ಮತ್ತು ಗುರು ಪ್ರಸಾದ್ ಕಡಂಬಾರ್ ಅವರನ್ನು ನೇಮಕ ಮಾಡಿ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್ ರೇವಣ್ಕರ್ ಅವರು ಆದೇಶ ಹೊರಡಿಸಿದ್ದಾರೆ. ತಾಲೂಕಿನಲ್ಲಿ ಸಂಘಟನಾತ್ಮಕವಾಗಿ ಕಾರ್ಯ ಚಟುವಟಿಕೆಗಳನ್ನು ರೂಪಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕ್ರಿಯಾಶೀಲವಾಗಿರಿಸಲು ಜಿಲ್ಲಾಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಅವರ ಸೂಚನೆಯಂತೆ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ […]

ಕಸಾಪ: ಸಂಘಟನಾ ಕಾರ್ಯದರ್ಶಿಗಳ ನೇಮಕ Read More »

ಉಡುಪಿಯಲ್ಲಿ ರಸ್ತೆ ಅಪಘಾತ: ಗರ್ಭಿಣಿ ಮಂಗ ಮೃತ್ಯು

ಸಮಗ್ರ ನ್ಯೂಸ್: ಗರ್ಭಿಣಿ ಮಂಗವೊಂದು ರಸ್ತೆ ದಾಟುತ್ತಿದ್ದಾಗ ವಾಹನ ಢಿಕ್ಕಿಯಾಗಿ ಗಂಭೀರ ಗಾಯಗೊಂಡ ಪರಿಣಾಮ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಂಗವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ದೊಡ್ಡರಂಗಡಿಯ ಪ್ರವೀಣ್ ಶೆಟ್ಟಿಯವರ ಸಹಕಾರದೊಂದಿಗೆ ಬೈಲೂರಿನ ಪಶು ಚಿಕಿತ್ಸಾ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪಶುವೈದ್ಯ ಡಾ. ವಾಗೇಶ್ ಚಿಕಿತ್ಸೆ ನೀಡಿದರೂ ಮಂಗಕ್ಕೆ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದೆ. ಬಳಿಕ ಮಂಗದ ಕಳೇಬರವನ್ನು ನಿತ್ಯಾನಂದ ಒಳಕಾಡು ಅವರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇನ್ನು ಮಂಗದ

ಉಡುಪಿಯಲ್ಲಿ ರಸ್ತೆ ಅಪಘಾತ: ಗರ್ಭಿಣಿ ಮಂಗ ಮೃತ್ಯು Read More »

ಪುತ್ತೂರು ನಗರದಲ್ಲಿ ಹದಗೆಟ್ಟ ರಸ್ತೆ: ಪ್ರತಿಭಟನೆ ಎಚ್ಚರಿಕೆ ನೀಡಿದ ಪುತ್ತಿಲ ಪರಿವಾರ

ಸಮಗ್ರ ನ್ಯೂಸ್ :ಪುತ್ತೂರು ನಗರದ ಪ್ರಮುಖ ರಸ್ತೆಗಳು ವಾಹನ ಸಂಚಾರಕ್ಕೆ ಅಸಾಧ್ಯವಾಗಿರುವ ರೀತಿಯಲ್ಲಿ ಇದ್ದು ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದೆ. ಪುತ್ತೂರು ಗಾಂಧಿಕಟ್ಟೆ ಬಳಿ ರಸ್ತೆ ಗುಜರಿಯಂತಾಗಿದೆ, ವಿಶ್ವಕರ್ಮ ಸಭಾಭವನದ ಬಳಿಯಲ್ಲಿ ಹದೆಗೆಟ್ಟಿರುವ ಈ ರಸ್ತೆಯನ್ನು ತಕ್ಷಣ ಸರಿಪಡಿಸಿ ವಾಹನ ಸಂಚಾರಕ್ಕೆ ಯೋಗ್ಯವಾಗಿ ದುರಸ್ಥಿಗೊಳಿಸಬೇಕೆಂದು ಪುತ್ತಿಲ ಪರಿವಾರ ನಗರಸಭೆ ಪೌರಾಯುಕ್ತ ಮಧುಕುಮಾರ್ ರವರಿಗೆ ಮನವಿ ಸಲ್ಲಿಸಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ. ಮುಂದಿನ ದಿವಸಗಳಲ್ಲಿ ರಸ್ತೆ ತಡೆಮಾಡಿ ಪ್ರತಿಭಟನೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ

ಪುತ್ತೂರು ನಗರದಲ್ಲಿ ಹದಗೆಟ್ಟ ರಸ್ತೆ: ಪ್ರತಿಭಟನೆ ಎಚ್ಚರಿಕೆ ನೀಡಿದ ಪುತ್ತಿಲ ಪರಿವಾರ Read More »

ಬಸ್ ನಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ವಾರಸುದಾರರಿಗೆ ಮರಳಿಸಿದ ಬಸ್ ಕಂಡಕ್ಟರ್

ಸಮಗ್ರ ನ್ಯೂಸ್ :ಮಂಗಳೂರಿನ ಖಾಸಗಿ ಬಸ್ ಒಂದರಲ್ಲಿ ಪ್ರಯಾಣಿಕರೊಬ್ಬರು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಮರೆತು ಬಿಟ್ಟು ಹೋಗಿದ್ದರು. ಅದನ್ನು ಮರಳಿ ವಾರಸುದಾರರಿಗೆ ಬಸ್ ನ ಕಂಡಕ್ಟರ್ ತಲುಪಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ನವದುರ್ಗ ಬಸ್ಸಿನ ನಿರ್ವಾಹಕರಾದ ಸಂತೋಷ ಶೆಟ್ಟಿ ಅವರಿಗೆ ಬಸ್ ನಿರ್ವಹಣಾ ಸಮಯದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋದ ಚಿನ್ನಾಭರಣ ಸಿಕ್ಕಿದ್ದು, ಬಳಿಕ ಚಿನ್ನ ಕಳೆದುಕೊಂಡವರ ಮಾಹಿತಿ ಪಡೆದ ಅವರು ಕಟೀಲ್ ಕಿನ್ನಿಗೋಳಿ ನಿವಾಸಿಗಳನ್ನು ಹುಡುಕಿ 6 ಪವನ್ ಹೆಚ್ಚಿನ ಚಿನ್ನಭಾರಣ ಗಳನ್ನು ಹಿಂತಿರುಗಿಸಿ ಮಾನವೀಯತೆ

ಬಸ್ ನಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ವಾರಸುದಾರರಿಗೆ ಮರಳಿಸಿದ ಬಸ್ ಕಂಡಕ್ಟರ್ Read More »

ಸಮುದಾಯದ ಮುಖಂಡ ಎನ್ನುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಂಗಳೂರು ಕ್ರೈಸ್ತ ಧರ್ಮಪ್ರಾಂತಕ್ಕೆ ರಾಬರ್ಟ್ ರೊಸಾರಿಯೊ ಉತ್ತರ

ಸಮಗ್ರ ನ್ಯೂಸ್ :ರಾಬರ್ಟ್ ರೊಸಾರಿಯೋ ಸಮುದಾಯದ ಮುಖಂಡ ಎನ್ನುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಂಗಳೂರು ಕ್ರೈಸ್ತ ಧರ್ಮಪ್ರಾಂತಕ್ಕೆ ಉತ್ತರ ರೂಪದಲ್ಲಿ ಪತ್ರ ಬರೆದಿದ್ದು ಇದನ್ನು ಮಾದ್ಯಮಗಳಿಗೂ ಬಿಡುಗಡೆ ಮಾಡಿದ್ದಾರೆ. ರಾಬರ್ಟ್ ರೊಸಾರಿಯೊ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತಕ್ಕೆ ಬರೆದ ಪತ್ರದ ಸಾರಾಂಶ ಇದಾಗಿದ್ದು, ‘ನಿಮ್ಮಲ್ಲಿ ಇಬ್ಬರು ಜಂಟಿಯಾಗಿ ಸಹಿ ಮಾಡಿದ ಪತ್ರವನ್ನು ನಾನು ಕಂಡುಕೊಂಡಿದ್ದೇನೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದೆ. ನೀವು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವ ‘ಅಧಿಕಾರ’ದ ಕಾರ್ಯ ಮಾದರಿಯನ್ನು ಅರ್ಥಮಾಡಿಕೊಂಡಿರುವುದು ನನಗೆ ಆಶ್ಚರ್ಯ ತಂದಿಲ್ಲ. ನೀವು

ಸಮುದಾಯದ ಮುಖಂಡ ಎನ್ನುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಂಗಳೂರು ಕ್ರೈಸ್ತ ಧರ್ಮಪ್ರಾಂತಕ್ಕೆ ರಾಬರ್ಟ್ ರೊಸಾರಿಯೊ ಉತ್ತರ Read More »

ಉಡುಪಿ: ಲಕ್ಷಾಂತರ ಮೌಲ್ಯದ ಚಿನ್ನ ವಂಚನೆ, ಆರೋಪಿಗಳ ಸೆರೆ

ಸಮಗ್ರ ನ್ಯೂಸ್ : ಕೇರಳ ಮೂಲದ ರಾಜೀವ್ ಎಂಬಾತ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್‍ಐ ಪ್ರಸನ್ನ ಮತ್ತು ತಂಡ ಕಂಡು ಹಿಡಿದಿದೆ. ಆರೋಪಿಗಳು ಸಾಲ ಪಡೆಯಲು ಸ್ಥಳೀಯ ಸೊಸೈಟಿಗಳು ಮತ್ತು ಬ್ಯಾಂಕ್‍ಗಳಲ್ಲಿ 30 ಗ್ರಾಂ ಚಿನ್ನಾಭರಣಗಳನ್ನು ಗಿರವಿ ಇಟ್ಟಿದ್ದರು, ಬ್ಯಾಂಕ್‍ಗಳು ಮತ್ತು ಸೊಸೈಟಿಗಳನ್ನು ವಂಚಿಸಲು ಚಲನಚಿತ್ರದ ಕಥಾವಸ್ತುವನ್ನು ಪ್ರೇರೇಪಿಸಿದರು. ಹೆಚ್ಚುವರಿಯಾಗಿ, ಕುಮಟಾ ಮೂಲದ ನಿತಿಲ್ ಭಾಸ್ಕರ ಶೇಟ್ (35), ಸಂಜಯ ಶೇಟ್ (42), ಮತ್ತು ಬೆಳಗಾವಿಯ ಕೈಲಾಸ್ ಗೊರಡಾ (26) ಪ್ರಮುಖ

ಉಡುಪಿ: ಲಕ್ಷಾಂತರ ಮೌಲ್ಯದ ಚಿನ್ನ ವಂಚನೆ, ಆರೋಪಿಗಳ ಸೆರೆ Read More »

ಮಂಗಳೂರಿನಿಂದ ಅಯೋಧ್ಯೆಗೆ 1400 ಯಾತ್ರಿಕರ ಪ್ರಯಾಣ ಆರಂಭ

ಸಮಗ್ರ ನ್ಯೂಸ್ : ರಾಮಮಂದಿರ ದರ್ಶನ ಅಭಿಯಾನದ ಮೊದಲ ಹಂತದ ಅಂತಿಮ ರೈಲು ಬುಧವಾರ ಅಯೋಧ್ಯೆಗೆ 1400 ಯಾತ್ರಾರ್ಥಿಗಳನ್ನು ಹೊತ್ತು ನಗರದಿಂದ ಹೊರಟಿದೆ. ಇದು ಯಾತ್ರೆ ಅಭಿಯಾನದ ಆರಂಭಿಕ ಹಂತದ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಫೆಬ್ರವರಿಯಲ್ಲಿ, ಭಗವಾನ್ ರಾಮನ 20,000 ಭಕ್ತರು ಕರ್ನಾಟಕದಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದರು, ಸಾರಿಗೆಗಾಗಿ 12 ರೈಲುಗಳನ್ನು ಬಳಸಿಕೊಂಡರು. ಈ ಮಾಹಿತಿಯನ್ನು ಅಭಿಯಾನದ ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿಯು ಅಯೋಧ್ಯೆಗೆ ಭೇಟಿ ನೀಡಲು ಆಸಕ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೆ 3000

ಮಂಗಳೂರಿನಿಂದ ಅಯೋಧ್ಯೆಗೆ 1400 ಯಾತ್ರಿಕರ ಪ್ರಯಾಣ ಆರಂಭ Read More »

ಪುತ್ತೂರು:ಬೈಕ್ ಸ್ಕಿಡ್ -ಗಂಭೀರ ಗಾಯಗೊಂಡಿದ್ದ ಯುವಕ ಸಾವು

ಸಮಗ್ರ ನ್ಯೂಸ್ :ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ನಗರದ ಬೈಪಾಸ್‍ನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಾಳು ಯುವಕ ಮೃತಪಟ್ಟಿದ್ದಾನೆ. ಪುತ್ತೂರು ಶಾಂತಿ ಗೋಡು ಗ್ರಾಮದ ಬೀರ್ಮಕಜೆ ನಿವಾಸಿ ಪ್ರಸಾದ್ (27) ಮೃತ ಯುವಕ. ಒಂದು ವಾರದ ಹಿಂದೆ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗಿದೆ ಯುವಕ ಇಹಲೋಕ ತ್ಯಜಿಸಿದ್ದಾರೆ. ನಗರದ ಬೈಪಾಸ್ ನ ಗ್ಯಾರೇಜ್‍ನಲ್ಲಿ ಮೆಕ್ಯಾನಿಕ್ ಆಗಿದ್ದ ಪ್ರಸಾದ್ ಫೆ.29 ರಂದು ಬೈಕ್

ಪುತ್ತೂರು:ಬೈಕ್ ಸ್ಕಿಡ್ -ಗಂಭೀರ ಗಾಯಗೊಂಡಿದ್ದ ಯುವಕ ಸಾವು Read More »

ಉಡುಪಿ: ಹೆಗಡೆ ಭಾವಚಿತ್ರವಿಟ್ಟು ಬೀಡ ಉಗಿದ ಬಿಜೆಪಿ ಕಾರ್ಯಕರ್ತರು

ಸಮಗ್ರ ನ್ಯೂಸ್ :ಭಯೋತ್ಪಾದನಾ ವಿರೋಧಿ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡನ ಭಾವಚಿತ್ರಕ್ಕೆ ಉಗಿದು ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ಉಡುಪಿಯ ಅಜ್ಜರಕಾಡಿನಲ್ಲಿ ನಡೆದಿದೆ. ಮಂಗಳೂರಿನ ಕಾಂಗ್ರೆಸ್ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿರುವ ಎಂ.ಜಿ.ಹೆಗಡೆ ಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಉಗಿದು ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಶಕ್ತಿ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಉಡುಪಿಯ ಅಜ್ಜರಕಾಡಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಎಂ.ಜಿ. ಹೆಗಡೆಯವರ ವಿರುದ್ಧ ಕಾರ್ಯಕರ್ತರು ಈ ರೀತಿಯಾಗಿ ಆಕ್ರೋಶ

ಉಡುಪಿ: ಹೆಗಡೆ ಭಾವಚಿತ್ರವಿಟ್ಟು ಬೀಡ ಉಗಿದ ಬಿಜೆಪಿ ಕಾರ್ಯಕರ್ತರು Read More »

ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಸಮಗ್ರ ನ್ಯೂಸ್ :ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯದ ವಿಚಾರಣೆ ತಪ್ಪಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಣಂಬೂರು ಠಾಣಾ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತ ಆರೋಪಿಯನ್ನು ಹ್ಯಾರಿಸ್ ಅಲಿಯಾಸ್ ಚಂದು ಹ್ಯಾರಿಸ್ ಎಂದು ಗುರುತಿಸಲಾಗಿದೆ. ಪಣಂಬೂರು ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮಂಜುನಾಥ ಗೌಡ ನೇತೃತ್ವದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಚಿದಾನಂದ, ಹೆಡ್ ಕಾನ್‍ಸ್ಟೆಬಲ್ ಲಕ್ಷ್ಮೀಶ ಮತ್ತು ಕಾನ್‍ಸ್ಟೆಬಲ್‍ಗಳಾದ ಶಶಿಕುಮಾರ್, ಪ್ರವೀಣ್, ಮಹೇಶ್ ಮತ್ತು ಶ್ರೀದೇವಿ ಬಂಧನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ Read More »