ಸಿನಿಮಾ

‘ಕಾಂತಾರ’ ನೋಡಿ ಬಂದವರು ಈ ಕೆಲಸ ಮಾಡ್ಬೇಡಿ| ರಿಷಬ್ ಶೆಟ್ಟಿ ಮನವಿ

ಸಮಗ್ರ ನ್ಯೂಸ್: ದೈವ ಆಕರ್ಷಣೆ ಆದಾಗ ಮಾಡುವ ಕೂಗನ್ನು ಯಾರೂ ಅನುಕರಣೆ ಮಾಡಬೇಡಿ ಎಂದು ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಮಂಗಳೂರಿನಲ್ಲಿ ಹೇಳಿದ್ದಾರೆ. ಕಾಂತಾರ ಚಿತ್ರ ತಂಡ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಸಿನಿಮಾದಲ್ಲಿ ನನ್ನ ಪಾತ್ರ ದೈವಾ ವೇಶದಲ್ಲಿ ಬೊಬ್ಬೆಯಿಡುವ ಒಂದು ದೃಶ್ಯವಿದೆ‌. ಸೋಶಿಯಲ್ ಮೀಡಿಯಾಗಳಲ್ಲಿ ಅದರ ಅನುಕರಣೆ ಮಾಡಲಾಗುತ್ತಿದೆ. ದೈವಾರಾಧನೆ ಒಂದು ಆಚಾರಣೆಯ ಭಾಗವಾಗಿದ್ದು, ಅದು ನಂಬಿಕೆಯ ಸಂಗತಿ ಆಗಿದೆ. ದೈವಾರಾಧನೆಯ ಆಳ, ಅಗಲ […]

‘ಕಾಂತಾರ’ ನೋಡಿ ಬಂದವರು ಈ ಕೆಲಸ ಮಾಡ್ಬೇಡಿ| ರಿಷಬ್ ಶೆಟ್ಟಿ ಮನವಿ Read More »

‘ಕಾಂತಾರ’ ಸಿನಿಮಾ ವೀಕ್ಷಣೆ ವೇಳೆ ಪ್ರೇಕ್ಷಕನ ಮೈಮೇಲೆ ದೈವ| ಮಂಗಳೂರಿನಲ್ಲಿ ನಡೆಯಿತು ವಿಸ್ಮಯ

ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ‘ಕಾಂತಾರ’ ಸಪ್ಟೆಂಬರ್‌ 30 ರಂದು ತೆರೆ ಕಂಡಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಹುತೇಕ ಸಿನಿಪ್ರಿಯರು ಪ್ರೀಮಿಯರ್‌ ಶೋ ಹಾಗೂ ಫಸ್ಟ್‌ ಡೇ ಶೋಗಳನ್ನೇ ನೋಡಿದ್ದು, ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ತೆರೆ ಕಂಡಿರುವ ‘ಕಾಂತಾರಾ’ ಚಿತ್ರಕ್ಕೆ ಮನಸೋಲದವರೆ ಇಲ್ಲ. ಕರಾವಳಿಯ ಭಾಗಗಳಿಗೆ ಮೀಸಲಾಗಿದ್ದ ಕಂಬಳ ಮತ್ತು ಭೂತ ಕೋಲದ ಸಾಂಪ್ರದಾಯಿಕ ಸಂಸ್ಕೃತಿ ‘ಕಾಂತಾರ’ ಮೂಲಕ ದೇಶದ ಮೂಲೆ ಮೂಲೆಯಲ್ಲೂ ಮಾರ್ಧನಿಸುತ್ತಿದ್ದು, ಕೇವಲ ಸ್ಯಾಂಡಲ್‌ವುಡ್‌ ಮಾತ್ರವಲ್ಲ

‘ಕಾಂತಾರ’ ಸಿನಿಮಾ ವೀಕ್ಷಣೆ ವೇಳೆ ಪ್ರೇಕ್ಷಕನ ಮೈಮೇಲೆ ದೈವ| ಮಂಗಳೂರಿನಲ್ಲಿ ನಡೆಯಿತು ವಿಸ್ಮಯ Read More »

ಬಿಗ್ ಬಾಸ್ ರಿಯಾಲಿಟಿ ಶೋ‌ ನಿಷೇಧಿಸಲು ಹೈಕೋರ್ಟ್ ‌ಗೆ ಅರ್ಜಿ

ಸಮಗ್ರ ನ್ಯೂಸ್: ಅಶ್ಲೀಲತೆ ಪ್ರದರ್ಶಿಸುವ ‘ಬಿಗ್ ಬಾಸ್’ ರಿಯಾಲಿಟಿ ಶೋ ನಿಷೇಧಿಸುವಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆಂಧ್ರಪ್ರದೇಶ ಹೈಕೋರ್ಟ್ ಶುಕ್ರವಾರ ನಡೆಸಿದೆ. ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಶಿವಪ್ರಸಾದ್ ರೆಡ್ಡಿ ವಾದ ಮಂಡಿಸಿ, ‘ಬಿಗ್‌ ಬಾಸ್‌’ನಲ್ಲಿ ಸಾಕಷ್ಟು ಅಶ್ಲೀಲತೆ ಇದೆ. ಟಿವಿ ಶೋಗಳು ಇಂಡಿಯನ್ ಬ್ರಾಡ್‌ ಕಾಸ್ಟಿಂಗ್ ಫೌಂಡೇಶನ್(ಐಬಿಎಫ್) ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಲು ಕೇಂದ್ರದ ಪರ ವಕೀಲರು ಕಾಲಾವಕಾಶ ಕೋರಿದ್ದಾರೆ. ‘ಬಿಗ್ ಬಾಸ್’ನಲ್ಲಿ ಅಶ್ಲೀಲತೆಯ ಬಗ್ಗೆ ಎಪಿ ಹೈಕೋರ್ಟ್ ತೀವ್ರವಾಗಿ ಪ್ರತಿಕ್ರಿಯಿಸಿದೆ.

ಬಿಗ್ ಬಾಸ್ ರಿಯಾಲಿಟಿ ಶೋ‌ ನಿಷೇಧಿಸಲು ಹೈಕೋರ್ಟ್ ‌ಗೆ ಅರ್ಜಿ Read More »

“ಅಯ್ಯೋ ಅದೆಲ್ಲಾ ಸುಳ್ಳು’, ವಿಜಯ್ ಮತ್ತು ನನ್ನ ನಡುವೆ ನಡೆದದ್ದು ಇಷ್ಟು‌ ಮಾತ್ರ”| ಸತ್ಯ‌ಬಿಚ್ಚಿಟ್ಟ‌ ರಶ್ಮಿಕಾ ಮಂದಣ್ಣ

ಸಮಗ್ರ ನ್ಯೂಸ್: 2018 ರಿಂದಲೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವಿನ ಗಾಸಿಪ್‌ಗಳು ಹರಿದಾಡುತ್ತಲೇ ಇವೆ. ಅದಕ್ಕೆ ತಕ್ಕಂತೆ ಆಗಾಗ್ಗೆ ಅವರು ಹೈದರಾಬಾದ್, ಮುಂಬೈ ನಗರಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಪರಸ್ಪರರ ಮನೆಗಳಿಗೆ ಭೇಟಿ ಸಹ ನೀಡುತ್ತಿರುತ್ತಾರೆ. ಆದರೆ ಇದೀಗ ಮೊದಲ ಬಾರಿಗೆ ತಮ್ಮ ಹಾಗೂ ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ, ತಮ್ಮಿಬ್ಬರ ಬಗ್ಗೆ ಹಬ್ಬಿರುವ ಸುದ್ದಿಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ವಿಜಯ್ ಜೊತೆಗಿನ ಡೇಟಿಂಗ್ ಸುದ್ದಿಗಳ ಬಗ್ಗೆ ಕೇಳಿದಾಗ ಮಾತನಾಡಿರುವ ರಶ್ಮಿಕಾ,

“ಅಯ್ಯೋ ಅದೆಲ್ಲಾ ಸುಳ್ಳು’, ವಿಜಯ್ ಮತ್ತು ನನ್ನ ನಡುವೆ ನಡೆದದ್ದು ಇಷ್ಟು‌ ಮಾತ್ರ”| ಸತ್ಯ‌ಬಿಚ್ಚಿಟ್ಟ‌ ರಶ್ಮಿಕಾ ಮಂದಣ್ಣ Read More »

ನಟಿ ದೀಪಿಕಾ ಪಡುಕೋಣೆ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಬಾಲಿವುಡ್‌ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದ್ದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ರಾತ್ರಿಯೇ ಅವರಿಗೆ ಉಸಿರಾಟದ ಸಮಸ್ಯೆ ಕಂಡು ಬಂದಿತ್ತು. ಕೂಡಲೇ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯದ ಕಾರಣ ತಿಳಿದು ಬಂದಿಲ್ಲ. ಆದರೆ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಹೈದರಾಬಾದ್‌ ನಲ್ಲಿ ಪ್ರಾಜೆಕ್ಟ್‌ ಕೆ ಚಿತ್ರದ ಶೂಟಿಂಗ್‌ ವೇಳೆ ಹೃದಯಬಡಿತ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮತ್ತೆ ಅನಾರೋಗ್ಯ ಕಂಡು

ನಟಿ ದೀಪಿಕಾ ಪಡುಕೋಣೆ ಅಸ್ವಸ್ಥ; ಆಸ್ಪತ್ರೆಗೆ ದಾಖಲು Read More »

ಸಿನಿಮಾ ಪ್ರಮೋಷನ್ ವೇಳೆ‌ ಜಾರಿದ ಬ್ಲೌಸ್| ಮುಜುಗರಕ್ಕೀಡಾದ ನಟಿ ರಶ್ಮಿಕಾ!!

ಸಮಗ್ರ ನ್ಯೂಸ್: ಅಮಿತಾಭ್ ಬಚ್ಚನ್ ಜೊತೆ ಗುಡ್ ಬೈ ಎನ್ನುವ ಬಾಲಿವುಡ್ ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಈಗ ಚಿತ್ರದ ಪ್ರಮೋಷನ್ ವೇಳೆ ಡ್ರೆಸ್ ನಿಂದಾಗಿ ಮುಜುಗರಕ್ಕೀಡಾದ ಘಟನೆ ನಡೆದಿದೆ. ಗುಡ್ ಬೈ ಸಿನಿಮಾ ಪ್ರಚಾರಕ್ಕಾಗಿ ಗ್ಲಾಮರಸ್ ಡ್ರೆಸ್ ನಲ್ಲಿ ಬಂದಿದ್ದ ರಶ್ಮಿಕಾ ನಡೆದು ಬರುತ್ತಿದ್ದಾಗ ಅವರ ಬ್ಲೌಸ್ ಕೊಂಚ ಜಾರಿದ್ದು, ಅತ್ತ ವೇಲ್ ಕೂಡಾ ಹಾರಿದೆ. ಇದರಿಂದ ಮುಜುಗರಕ್ಕೀಡಾದ ರಶ್ಮಿಕಾ ಬ್ಲೌಸ್ ಸರಿ ಮಾಡುವಷ್ಟರಲ್ಲಿ ಪಕ್ಕದಲ್ಲಿದ್ದ ಅವರ ಸಹಾಯಕಿ ಶಾಲು ಸರಿ ಮಾಡಿ ಸಹಾಯ ಮಾಡಿದರು.

ಸಿನಿಮಾ ಪ್ರಮೋಷನ್ ವೇಳೆ‌ ಜಾರಿದ ಬ್ಲೌಸ್| ಮುಜುಗರಕ್ಕೀಡಾದ ನಟಿ ರಶ್ಮಿಕಾ!! Read More »

ಮೈಸೂರು ದಸರಾ ಮಹೋತ್ಸವ ನೇರಪ್ರಸಾರ

ಸಮಗ್ರ ನ್ಯೂಸ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಗಲಿದ್ದು, ಉದ್ಘಾಟನೆಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರಿಗೆ ಆಗಮಿಸಲಿದ್ದಾರೆ. ಇಂದು ಬೆಳಿಗ್ಗೆ 6.15ಕ್ಕೆ ರಾಷ್ಟ್ರಪತಿ ಮುರ್ಮು ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದು, 9 ಗಂಟೆಗೆ ಮೈಸೂರಿನ ಮಂಡಕಳ್ಳಿ ಏರ್​ಪೋರ್ಟ್​ಗೆ ಆಗಮಿಸಲಿದ್ದಾರೆ. https://fb.watch/fMTYAA5s_O/ ನಂತರ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 10 ಗಂಟೆಗೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾ

ಮೈಸೂರು ದಸರಾ ಮಹೋತ್ಸವ ನೇರಪ್ರಸಾರ Read More »

ನಟ ರಮೇಶ್ ಅರವಿಂದ್ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಗೆ ಆಯ್ಕೆ

ಸಮಗ್ರ ನ್ಯೂಸ್: ಖ್ಯಾತ ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ಅವರು ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ 2022ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಳೆದ ಹದಿನೇಳು ವರುಷಗಳಿಂದ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡಲಾಗುತ್ತಿದೆ. ಈಗಾಗಲೇ ಮಾಜಿ ಸಿಎಂ ವೀರಪ್ಪ ಮೊಯ್ಲಿ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಶ್ರೀಮತಿ ಜಯಶ್ರೀ, ಮೋಹನ ಆಳ್ವ, ಸಾಲು ಮರದ ತಿಮ್ಮಕ್ಕ, ಪ್ರಕಾಶ್ ರೈ ಹಾಗೂ ಇತರರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಹಾಗೆಯೇ, ಈ

ನಟ ರಮೇಶ್ ಅರವಿಂದ್ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಗೆ ಆಯ್ಕೆ Read More »

ದಯವಿಟ್ಟು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ; ಖಡಕ್ ಸೂಚನೆ ಕೊಟ್ಟ ನಟ ಅನಿರುದ್ಧ್

ಸಮಗ್ರ ನ್ಯೂಸ್: ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಂದ ನಟ ಅನಿರುದ್ಧ್ ಜತ್ಕಾರ್ ಈಗ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಅನಿರುದ್ಧ್ ನಾನು ಬಿಗ್ ಬಾಸ್ ಗೆ ಹೋಗ್ತಾಯಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. ಆದರೂ ಸೋಷಿಯಲ್ ಮೀಡಿಯಾಗಳಲ್ಲಿ ಅವರು ಬಿಗ್ ಬಾಸ್ ಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ಸ್ವತಃ ಅನಿರುದ್ಧ್ ಖಡಕ್ ಸೂಚನೆ ಕೊಟ್ಟಿದ್ದಾರೆ. ದಯವಿಟ್ಟು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಾನು ಬಿಗ್ ಬಾಸ್

ದಯವಿಟ್ಟು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ; ಖಡಕ್ ಸೂಚನೆ ಕೊಟ್ಟ ನಟ ಅನಿರುದ್ಧ್ Read More »

ಕಲಾವಿದ ಶರವಣ ಧನಪಾಲ್ ನಿಧನ

ಸಮಗ್ರ ನ್ಯೂಸ್: ಹಲವು ದಿನಗಳಿಂದ ಶರವಣ ಧನಪಾಲ್​ ಅವರು ಅನಾರೋಗ್ಯ ಸಮಸ್ಯೆ ಯಿಂಸ ಬಳಲುತ್ತಿದ್ದರು. ಕಿಡ್ನಿ ವೈಫಲ್ಯ ಮತ್ತು ಇನ್​ಫೆಕ್ಷನ್​ ಕಾರಣದಿಂದ ಅವರ ಆರೋಗ್ಯ ಸಾಕಷ್ಟು ಹದಗೆಟ್ಟಿತ್ತು. ವಿಭಿನ್ನ ಪ್ರತಿಭೆ ಮೂಲಕ ಗುರುತಿಸಿಕೊಂಡಿದ್ದ ಕಲಾವಿದ ಹಾಲೋಮ್ಯಾನ್​ ಶರವಣ ಧನಪಾಲ್ ನಿಧನರಾಗಿದ್ದಾರೆ. ಹಲವು ಕಡೆಗಳಲ್ಲಿ ವೇದಿಕೆ ಕಾರ್ಯಕ್ರಮ ನೀಡುವ ಮೂಲಕ ಅವರು ಫೇಮಸ್​ ಆಗಿದ್ದರು. ಅವರು ಮಾಡುವ ಬಲೂನ್​ ಆಕ್ಟ್​ ತುಂಬಾ ಜನಪ್ರಿಯವಾಗಿತ್ತು.

ಕಲಾವಿದ ಶರವಣ ಧನಪಾಲ್ ನಿಧನ Read More »