ಸಮಗ್ರ ಸಮಾಚಾರ

ಮಂಡ್ಯದ ಚುಂಚನಗಿರಿಯಲ್ಲಿ ವಧೂವರ‌ರ ಸಮಾವೇಶ| ಹುಡುಗರ ಅರ್ಜಿ ಸಂಖ್ಯೆ ನೋಡಿ ಆಯೋಜಕರೇ ಸುಸ್ತು!!

ಸಮಗ್ರ ನ್ಯೂಸ್: ಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಧು ವರ ಸಮಾವೇಶದಲ್ಲಿ ಒಕ್ಕಲಿಗ ಹುಡುಗರ ಅರ್ಜಿ ಸಂಖ್ಯೆ ನೋಡಿ ಆಯೋಜಕರು ಸುಸ್ತಾದ ಘಟನೆ ನಡೆದಿದೆ. ಒಕ್ಕಲಿಗರಿಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲವೆಂದು ಒಕ್ಕಲಿಗ ವಧುಗಳಿಗಾಗಿ ಸಾವಿರಾರು ಒಕ್ಕಲಿಗ ಹುಡುಗರು ಮುಗಿಬಿದ್ದಿದ್ದರು. ಸಮಾವೇಶದಲ್ಲಿ 200 ಜನ ಒಕ್ಕಲಿಗ ಹುಡುಗಿಯರಿಗೆ 10 ಸಾವಿರಕ್ಕೂ ಹೆಚ್ಚಿನ ಹುಡುಗರ ಅರ್ಜಿ ಬಂದಿದ್ದವು. ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶದ ಆಯೋಜಕರು ಸುಸ್ತಾದರು. ಹುಡುಗಿಯರಿಗಾಗಿ ಸಮಾವೇಶದಲ್ಲಿ ಸಾವಿರಾರು ಹುಡುಗರು ಮತ್ತ ಅವರ ಪೋಷಕರು ಕ್ಯೂ ನಿಂತಿದ್ದರು. […]

ಮಂಡ್ಯದ ಚುಂಚನಗಿರಿಯಲ್ಲಿ ವಧೂವರ‌ರ ಸಮಾವೇಶ| ಹುಡುಗರ ಅರ್ಜಿ ಸಂಖ್ಯೆ ನೋಡಿ ಆಯೋಜಕರೇ ಸುಸ್ತು!! Read More »

ಹುಣಸೂರು: ನಿಂತಿದ್ದ ಗೂಡ್ಸ್ ಗೆ ಡಿಕ್ಕಿ ಹೊಡೆದ ಬಸ್

ಸಮಗ್ರ ನ್ಯೂಸ್: ಹೆದ್ದಾರಿಯಲ್ಲಿ ಪಂಚರ್ ಆಗಿ ನಿಂತಿದ್ದ ಬೆಲ್ಲದ ಟಕ್ಕರ್ ಗಾಡಿಗೆ ಹಿಂದೆಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಟಕ್ಕರ್ ಉರುಳಿ ಬಿದ್ದ ಘಟನೆ ಹುಣಸೂರು ಹೆದ್ದಾರಿಯಲ್ಲಿ ನಡೆದಿದೆ. ಬಸ್ ನಲ್ಲಿ ಸುಮಾರು 20 ಜನ ಪ್ರಯಾಣಿಕರು ಇದ್ದರು. ಈ ಖಾಸಗಿ ಬಸ್ಸೊಂದು ನಿಂತಿದ್ದ ಬೆಲ್ಲದ ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತವು ಕುಪ್ಪೆ ಕೊಳಘಟ್ಟ ಗ್ರಾಮದಲ್ಲಿ ನಡೆದಿದ್ದು, ಯಾವುದೇ ವ್ಯಕ್ತಿಗೂ ಅನಾಹುತ ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ.

ಹುಣಸೂರು: ನಿಂತಿದ್ದ ಗೂಡ್ಸ್ ಗೆ ಡಿಕ್ಕಿ ಹೊಡೆದ ಬಸ್ Read More »

ಕೆಎಸ್ಆರ್ ಟಿಸಿ‌ ನಿರ್ವಾಹಕನ ಜಾಣ್ಮೆಗೆ ಬಸ್ ದರೋಡೆಕೋರರು ಅಂದರ್| ಕಂಡಕ್ಟರ್ ಗೆ ಭಲೇ..ಭೇಷ್ ಎಂದ ಸಾರಿಗೆ ಅಧಿಕಾರಿಗಳು

ಸಮಗ್ರ ನ್ಯೂಸ್: ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸಿ ಪ್ರಯಾಣಿಕರೊಬ್ಬರ ಲಕ್ಷಾಂತರ ರೂ. ಮೌಲ್ಯದ ಒಡವೆ, ಹಣ ದೋಚಿ ಪರಾರಿಯಾಗಿದ್ದ ಕಳ್ಳರು ನಾಲ್ಕು ತಿಂಗಳ ಬಳಿಕ ಅದೇ ಬಸ್‌ನಲ್ಲಿ ಸಂಚರಿಸಿದ ವೇಳೆ ಬಸ್ ನಿರ್ವಾಹಕರು ಮುಖಚಹರೆ ಮೂಲಕವೇ ಗುರುತು ಹಿಡಿದು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿರ್ವಾಹಕನ ಕಾರ್ಯಕ್ಷಮತೆಗೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತವಾಗಿದೆ. ನಿರ್ವಾಹಕ ಅಶೋಕ್ ಜಾದವ್ ಅವರೇ ಕಳ್ಳರನ್ನು ಪೊಲೀಸರಿಗೊಪ್ಪಿಸಿ ವೃತ್ತಿಪರತೆ ಮೆರೆದವರು. ತಾನು ನಿರ್ವಾಹಕನಾಗಿದ್ದ ಬಸ್‌ನಲ್ಲಿ ಈ ಹಿಂದೆ ಕಳ್ಳತನ ಮಾಡಿ ಮಾರ್ಗ ಮಧ್ಯೆ ಇಳಿದು ಹೋದ

ಕೆಎಸ್ಆರ್ ಟಿಸಿ‌ ನಿರ್ವಾಹಕನ ಜಾಣ್ಮೆಗೆ ಬಸ್ ದರೋಡೆಕೋರರು ಅಂದರ್| ಕಂಡಕ್ಟರ್ ಗೆ ಭಲೇ..ಭೇಷ್ ಎಂದ ಸಾರಿಗೆ ಅಧಿಕಾರಿಗಳು Read More »

ಲಿವಿಂಗ್ ಟುಗೆದರ್ ನಲ್ಲಿದ್ದ ಪ್ರಿಯತಮೆಯ ಭೀಕರ ಕೊಲೆ| ‘ದೇಹ 35 ತುಂಡು’, 18 ದಿನ ಫ್ರಿಡ್ಜ್‌ನಲ್ಲಿ!

ದೆಹಲಿ: ಲಿವಿಂಗ್ ಟುಗೆದರ್ ನಲ್ಲಿ ಜೊತೆಯಾಗಿದ್ದ ಯುವತಿಯನ್ನು ಆಕೆಯ ಪ್ರಿಯತಮನೇ ಹತ್ಯೆ ಮಾಡಿ , ಶವವನ್ನು 35 ಭಾಗಗಳಾಗಿ ತುಂಡರಿಸಿ ದೆಹಲಿಯಾದ್ಯಂತ ಎಸೆದ ಭೀಕರ ಪ್ರಕರಣವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದು ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ. 26 ವರ್ಷದ ಯುವತಿ ಶ್ರದ್ಧಾ, ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು ಈ ವೇಳೆ ಅಫ್ತಾಬ್ ಅಮೀನ್ ಪೂನಾವಾಲಾ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳು. ಆದರೆ ಯುವತಿಯ ಕುಟುಂಬವು ಈ ಸಂಬಂಧವನ್ನು ಒಪ್ಪದ ಹಿನ್ನಲೆ, ಈ ಜೋಡಿ ಮುಂಬೈ ತೊರೆದು

ಲಿವಿಂಗ್ ಟುಗೆದರ್ ನಲ್ಲಿದ್ದ ಪ್ರಿಯತಮೆಯ ಭೀಕರ ಕೊಲೆ| ‘ದೇಹ 35 ತುಂಡು’, 18 ದಿನ ಫ್ರಿಡ್ಜ್‌ನಲ್ಲಿ! Read More »

ಬೆಂಗಳೂರು ಏರ್ ಪೋರ್ಟ್ ಮೇಲೆ ಅದಾನಿ ಕಣ್ಣು| ಷೇರು ಮಾರಾಟ ಖರೀದಿಗೆ ಚಿಂತನೆ

ಸಮಗ್ರ ನ್ಯೂಸ್: ಮಂಗಳೂರು, ಅಹಮದಾಬಾದ್, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗ ನಂತರ ಈಗ ಅದಾನಿ ಗ್ರೂಪ್ ಕಣ್ಣು ಬೆಂಗಳೂರು ವಿಮಾನ ನಿಲ್ದಾಣದ ಮೇಲೂ ಬಿದ್ದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉಸ್ತುವಾರಿ, ಕಾರ್ಯ ನಿರ್ವಹಣೆ ಮಾಡುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಲ್ಲಿ (ಬಿಐಎಎಲ್) ಪಾಲನ್ನು ತೆಗೆದುಕೊಳ್ಳುವ ಬಗ್ಗೆ ಅದಾನಿ ಗ್ರೂಪ್ ಚಿಂತಿಸುತ್ತಿದೆ ಎಂದು ಈ ಬಗ್ಗೆ ತಿಳಿದಿರುವ ಉನ್ನತ ಮೂಲಗಳು ಮಾಹಿತಿ ನೀಡಿವೆ. “ಅದಾನಿ ಗ್ರೂಪ್ ಕೆಲವು ಸಮಯದಿಂದ ವಿಮಾನ ನಿಲ್ದಾಣದಲ್ಲಿ ಪಾಲನ್ನು ಖರೀದಿಸಲು

ಬೆಂಗಳೂರು ಏರ್ ಪೋರ್ಟ್ ಮೇಲೆ ಅದಾನಿ ಕಣ್ಣು| ಷೇರು ಮಾರಾಟ ಖರೀದಿಗೆ ಚಿಂತನೆ Read More »

“ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ”

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ಬೃಹತ್ ಸಾರ್ವಜನಿಕ ಆಗ್ರಹ ಸಭೆಯು ಕೂಳೂರು ಕುದ್ರೆಮುಖ ಕಂಪೆನಿ ಮುಂಭಾಗ ನಡೆಯಿತು. ಸಭೆಯನ್ನುದ್ದೇಶಿಸಿ ಮಾತಾಡಿದ ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷ ಮಧು ಬಂಗಾರಪ್ಪ ಅವರು, “ದುಡ್ಡು ಸಿಗೋದಾದ್ರೆ ಬಿಜೆಪಿ ನಾಯಕರು ಏನ್ ಬೇಕಾದ್ರು ಮಾಡ್ತಾರೆ. ಅವ್ರಿಗೆ ಮಾನ ಮರ್ಯಾದೆಯಿಲ್ಲ. ದೇಶದಲ್ಲಿ ಬಿಜೆಪಿ ಆಡಳಿತದಿಂದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇವರದ್ದು ಒಂತರಾ ಪರ್ಸಂಟೇಜ್ ಗ್ಯಾಂಗ್ ಇದ್ದಂತೆ. ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ ಆಗೋಗಿದೆ” ಎಂದು

“ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ” Read More »

ಬಣಕಲ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಆಯ್ಕೆ

ಸಮಗ್ರ ನ್ಯೂಸ್: ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಆಯ್ಕೆಯಾಗಿದ್ದಾರೆ. ಇವರು ಮೂರು ಬಾರಿ ಈ ಹಿಂದೆ ಅಧ್ಯಕ್ಷರಾಗಿದ್ದ, ಬಣಕಲ್ ಸುಸಜ್ಜಿತ ಕಟ್ಟಡಕ್ಕೆ ಇವರು ಶ್ರಮಿಸಿದ್ದರು.ಅಧ್ಯಕ್ಷ ಎ.ಆರ್.ಅಭಿಲಾಷ್ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು. ಚುನಾವಣಾ ಅಧಿಕಾರಿಯಾಗಿ ಗುರುಮೂರ್ತಿ ಭಾಗವಹಿಸಿದ್ದರು. ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಟಿ.ಎಂ.ಗಜೇಂದ್ರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎ.ಆರ್.ಅಭಿಲಾಷ್,ಉಪಾಧ್ಯಕ್ಷರಾದ ಮಮತ ಬಿನ್ನಡಿ,ನಿರ್ದೇಶಕರುಗಳಾದ ಬಿ.ಎಂ.ಭರತ್,ರಂಗನಾಥ್,ಬಿ.ಎಸ್.ಕಲ್ಲೇಶ್,ಬಿ.ಎಸ್.ವಿಕ್ರಂ,ಶಾಮಣ್ಣ ಬಣಕಲ್, ದಿಲ್ ದಾರ್ ಬೇಗಂ,ಬಿ.ಎಸ್.ನಾರಾಯಣ್ ಗೌಡ,ಚಂದ್ರಶೇಖರ್,ಜಿ.ಬಿ.ಲಕ್ಷ್ಮಿ, ಸಿಇಒ ಜಿ.ಪಿ.ನಿಶಾಂತ್ ಇದ್ದರು.

ಬಣಕಲ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಆಯ್ಕೆ Read More »

ಕಾಪಿರೈಟ್ ವಿವಾದದ ಹಿನ್ನಲೆ |ಯುಟ್ಯೂಬ್ ನಿಂದ ಕಾಂತಾರದ ವರಾಹ ರೂಪಂ ಸಾಂಗ್ ಡಿಲಿಟ್

ಮಂಗಳೂರು: ವರಾಹ ರೂಪಂ ಹಾಡಿಮ ಕಾಪಿರೈಟ್ ವಿವಾದದ ಹಿನ್ನಲೆ ಇದೀಗ ಯೂಟ್ಯೂಬ್ ವರಾಹ ರೂಪಂ ಹಾಡನ್ನು ಹೊಂಬಾಳೆ ಫಿಲ್ಸ್ ಚಾನೆಲ್ ನಿಂದ ತೆಗೆದು ಹಾಕಿದೆ. ಭರ್ಜರಿ ಯಶಸ್ಸು ಗಳಿಸಿರುವ ಕಾಂತಾರ ಸಿನೆಮಾಗೆ ಇದೀಗ ವಿವಾದಗಳು ಅಂಟಿಕೊಳ್ಳಲಾರಂಭಿಸಿದ್ದು, ಮಾತ್ರಭೂಮಿ ಪ್ರಿಟಿಂಗ್ ಮತ್ತು ಪಬ್ಲಿಶಿಂಗ್ ಕಂಪೆನಿ ವರಾಹ ರೂಪಂ ಹಾಡಿಗೆ ಕಾಪಿರೈಟ್ ನ್ನು ಕ್ಲೈಮ್ ಮಾಡಿದ ಹಿನ್ನಲೆ ಇದೀಗ ಯೂಟ್ಯೂಬ್ ಹೊಂಬಾಳೆ ಪಿಲ್ಮ್ಸಂ ನ ಯೂಟ್ಯೂಬ್ ಚಾನೆಲ್ ನಿಂದ ಈ ಹಾಡನ್ನು ತೆಗೆದು ಹಾಕಿದೆ. ಈ ನಡುವೆ ಥೈಕುಡಂ ಬ್ರಿಡ್ಜ್

ಕಾಪಿರೈಟ್ ವಿವಾದದ ಹಿನ್ನಲೆ |ಯುಟ್ಯೂಬ್ ನಿಂದ ಕಾಂತಾರದ ವರಾಹ ರೂಪಂ ಸಾಂಗ್ ಡಿಲಿಟ್ Read More »

ಕರಾವಳಿಯಾದ್ಯಂತ ಕೆಂಗಣ್ಣು ಕಾಯಿಲೆ

ಸಮಗ್ರ ನ್ಯೂಸ್ : ಕರಾವಳಿಯಾದ್ಯಂತ ಕೆಂಗಣ್ಣು ಕಾಯಿಲೆ ಹರಡುತ್ತಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳಲ್ಲಿ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಬಜಪೆ ಪರಿಸರದಲ್ಲಿ ವ್ಯಾಪಕವಾಗಿದ್ದು, ಜಿಲ್ಲೆಯ ಇತರ ಭಾಗಗಳಲ್ಲಿಯೂ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆ ಇದಾಗಿದ್ದು, ಮನೆ, ಶಾಲೆ, ಆಸ್ಪತ್ರೆ, ಮಾರ್ಕೆಟ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ತೆರಳುವ ಕಾಯಿಲೆ ಇದ್ದವರಿಂದ ಇತರರಿಗೂ ಹಬ್ಬುತ್ತಿದೆ. ಇನ್ನು ಮಿದುಳು ಜ್ವರ ಲಸಿಕೆಯ ಸರ್ವೇಗೆಂದು ಮನೆ ಮನೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರಲ್ಲಿಯೂ ಜ್ವರ ಕಾಣಿಸಿಕೊಳ್ಳುತ್ತಿದೆ. ತಿಂಗಳ ಚುಚ್ಚುಮದ್ದಿಗಾಗಿ ಪ್ರಾಥಮಿಕ ಆರೋಗ್ಯ

ಕರಾವಳಿಯಾದ್ಯಂತ ಕೆಂಗಣ್ಣು ಕಾಯಿಲೆ Read More »

ಕುಂದಾಪುರ: ಸಿಎಂ ಸಮಾವೇಶದಲ್ಲಿ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸುವಂತೆ ಆದೇಶಿಸಿದ್ದ ಬಿ.ಇ.ಒ. ಅಮಾನತು

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಭಾಗವಹಿಸಿದ ಸಮಾವೇಶದಲ್ಲಿ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸುವಂತೆ ಆದೇಶಿಸಿದ್ದ ಬಿ.ಇ.ಒ. ಅವರನ್ನು ಅಮಾನತುಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ನವೆಂಬರ್ 7ರಂದು ಬೈಂದೂರು ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ನಡೆದ ಮುಖ್ಯಮಂತ್ರಿಗಳ ಸಮಾವೇಶಕ್ಕೆ ಬೈಂದೂರು ವಲಯದ ಎಲ್ಲಾ ಶಿಕ್ಷಕರು ಭಾಗವಹಿಸುವಂತೆ ಮತ್ತು ಶಾಲಾ ಪೋಷಕರನ್ನು ಕರೆತರುವಂತೆ ಆದೇಶಿಸಿದ ಬೈಂದೂರು ಬಿ.ಇ.ಓ. ಮಂಜುನಾಥ್ ತಿಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ

ಕುಂದಾಪುರ: ಸಿಎಂ ಸಮಾವೇಶದಲ್ಲಿ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸುವಂತೆ ಆದೇಶಿಸಿದ್ದ ಬಿ.ಇ.ಒ. ಅಮಾನತು Read More »