ಸಮಗ್ರ ಸಮಾಚಾರ

ನಾಳೆ ಸುರತ್ಕಲ್ ಬಂಟರ ಭವನದಲ್ಲಿ “ರಂಗ ಚಾವಡಿ” ಸಂಭ್ರಮ! “ಬಲೇ ತೆಲಿಪುಲೆ” ಹಾಸ್ಯ ರಸಾಯಣ!!

ಸುರತ್ಕಲ್: ನಾಳೆ (ನ.20) ಸಂಜೆ 4:30ಕ್ಕೆ ಸರಿಯಾಗಿ “ರಂಗ ಚಾವಡಿ” ಸಂಘಟನೆಯ ವರ್ಷದ ಸಂಭ್ರಮ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ಜರುಗಲಿದೆ. ಈ ಬಾರಿಯ ಪ್ರತಿಷ್ಠಿತ ರಂಗ ಚಾವಡಿ 2022 ಪ್ರಶಸ್ತಿಗೆ ಸಾಹಿತಿ ಜಾನಪದ ವಿದ್ವಾಂಸರಾದ ಮುದ್ದು ಮೂಡುಬೆಳ್ಳೆ ಅವನ್ನು ಆಯ್ಕೆ ಮಾಡಲಾಗಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು ಅದೇ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ಗಾಯಕರಾದ ವಿಶ್ವಾಸ್ ಗುರುಪುರ, ಮಲ್ಲಿಕಾ ವಿಶ್ವಾಸ್ ಹಾಗೂ ಜ್ಯುನಿಯರ್ ರಾಜ್ ಕುಮಾರ್ ಅವರಿಂದ ಸಂಗೀತ […]

ನಾಳೆ ಸುರತ್ಕಲ್ ಬಂಟರ ಭವನದಲ್ಲಿ “ರಂಗ ಚಾವಡಿ” ಸಂಭ್ರಮ! “ಬಲೇ ತೆಲಿಪುಲೆ” ಹಾಸ್ಯ ರಸಾಯಣ!! Read More »

ಸುಬ್ರಹಣ್ಯದಲ್ಲಿ ನ.28 ರಿಂದ ನ.29 ತನಕ
ಮದ್ಯದ ಅಂಗಡಿ ಬಂದ್

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಮಹೋತ್ಸವದ ಪ್ರಯುಕ್ತ ಶಾಂತಿ ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಮದ್ಯದ ಅಂಗಡಿಗಳನ್ನು ಮುಚ್ಚಲು ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1)ರಡಿ ಪ್ರದತ್ತ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಆದೇಶ ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾ ಪ್ತಿಯ ಇಂಚಾಡಿ ಬಳಿಯ ಪ್ರಶಾಂತ್ ಬಾರ್ ಮತ್ತು ರೆಸ್ಟೋ ರೆಂಟ್ ಹಾಗೂ ಬೆಳ್ಳಿ ಬಾರ್

ಸುಬ್ರಹಣ್ಯದಲ್ಲಿ ನ.28 ರಿಂದ ನ.29 ತನಕ
ಮದ್ಯದ ಅಂಗಡಿ ಬಂದ್
Read More »

50ದಿನ ಪೂರೈಸಿದ ‘ಕಾಂತಾರ’| ಈ ಸಕ್ಸಸ್ ಗುಳಿಗ, ಪಂಜುರ್ಲಿಗೆ ಸಮರ್ಪಣೆ ಎಂದ ರಿಷಬ್

ಸಮಗ್ರ ನ್ಯೂಸ್: ಇಂಡಿಯನ್ ಬಾಕ್ಸಾಫೀಸ್‌ಗೆ ಕಿಚ್ಚು ಹಚ್ಚಿದ ‘ಕಾಂತಾರ’ ಏಳು ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ. ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದ ‘ಕಾಂತಾರ’ ಇಂದು (ನವೆಂಬರ್ 18) ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನುಗುತ್ತಿದೆ. ಈ ಖುಷಿಯನ್ನು ರಿಷಬ್ ಶೆಟ್ಟಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 50 ದಿನಗಳನ್ನು ಪೂರೈಸಿದ ಸಂದರ್ಭದಲ್ಲೂ ‘ಕಾಂತಾರ’ ಸಿನಿಮಾದ ಕಲೆಕ್ಷನ್ ಕೋಟಿ ಲೆಕ್ಕದಲ್ಲಿಯೇ ಇದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ‘ಕಾಂತಾರ’ ಕಲೆಕ್ಷನ್ ಅದ್ಭುತವಾಗಿದ್ದು, ಪ್ರತಿವಾರ ಬಾಕ್ಸಾಫೀಸ್‌ನಲ್ಲಿ ದಾಖಲೆ ನಿರ್ಮಿಸುತ್ತಿದೆ. ಏಳನೇ ವಾರವೂ (50

50ದಿನ ಪೂರೈಸಿದ ‘ಕಾಂತಾರ’| ಈ ಸಕ್ಸಸ್ ಗುಳಿಗ, ಪಂಜುರ್ಲಿಗೆ ಸಮರ್ಪಣೆ ಎಂದ ರಿಷಬ್ Read More »

ಬಪ್ಪನಾಡು ದುರ್ಗಾಪರಮೇಶ್ವರಿ ಕೃಪೆಯಿಂದ ಬೆಳೆದೆ – ಸುನಿಲ್ ಶೆಟ್ಟಿ

ಸಮಗ್ರ ನ್ಯೂಸ್: ಮಂಗಳೂರಿನ ಮುಲ್ಕಿಯಲ್ಲಿ ಹುಟ್ಟಿದ್ದೆ, ಬಪ್ಪನಾಡಿನ‌ ದುರ್ಗಾ ದೇವಿಯ ಕೃಪೆಯಲ್ಲಿ ಬೆಳೆದೆ ಎಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ಬಾಲ್ಯವನ್ನು ಸ್ಮರಿಸಿಕೊಂಡರು. ಬೆಂಗಳೂರು ತಂತ್ರಜ್ಞಾನ ಸಮ್ಮೇಳನದಲ್ಲಿನ‌ ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತ, ತಂದೆಯೇ ನನ್ನ ಹೀರೋ ಆಗಿದ್ದಾರೆ. ಅವರು ತಮ್ಮ 9ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿ ಅನೇಕ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಟೇಬಲ್ ಕ್ಲೀನ್‌ ಮಾಡುತ್ತಿದ್ದರು. ಐಸ್ ಬ್ಯಾಗ್ ಮೇಲೆ‌ ಮಲಗುತ್ತಿದ್ದರು. ಅವರು ಯಾವ ರೆಸ್ಟೋರೆಂಟ್​ನಲ್ಲಿ ಕೆಲಸ‌ ಮಾಡುತ್ತಿದ್ದರೋ ಬಳಿಕ ಅದೇ ರೆಸ್ಟೋರೆಂಟ್​​ನ‌

ಬಪ್ಪನಾಡು ದುರ್ಗಾಪರಮೇಶ್ವರಿ ಕೃಪೆಯಿಂದ ಬೆಳೆದೆ – ಸುನಿಲ್ ಶೆಟ್ಟಿ Read More »

ಮಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ| ಗಾಂಜಾ ದಂಗೆಕೋರರ ಬಂಧನ;132 ಕೆಜಿ ಮಾಲು ವಶ

ಸಮಗ್ರ ನ್ಯೂಸ್: ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರಾವಳಿಯಲ್ಲಿ ಕಿಕ್ ಏರಿಸುತ್ತಿದ್ದ ಗಾಂಜಾ ದಂಧೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ 32 ಲಕ್ಷ ರೂ. ಮೌಲ್ಯದ 132 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. 17 ರಂದು ಮಂಗಳೂರು ನಗರಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಹೇಂದ್ರ XUV 500 ಕಾರ್ ನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಟ್ವಾಳ ತಾಲೂಕು ನರಿಂಗಾನ ಗ್ರಾಮ ತೌಡುಗೋಳಿ ಕ್ರಾಸ್ ನಿವಾಸಿ ರಮೀಝ್ ರಾಝ್(30), ಕೇರಳದ ಕಾಸರಗೋಡು ಜಿಲ್ಲೆ

ಮಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ| ಗಾಂಜಾ ದಂಗೆಕೋರರ ಬಂಧನ;132 ಕೆಜಿ ಮಾಲು ವಶ Read More »

ಅರಣ್ಯದೊಳಗೆ ಯುವಜೋಡಿಯ ನಗ್ನ ಶವ ಪತ್ತೆ!!

ಸಮಗ್ರ ನ್ಯೂಸ್: ಅರಣ್ಯದಲ್ಲಿ ನಗ್ನ ಸ್ಥಿತಿಯಲ್ಲಿ ಯುವಕ ಮತ್ತು ಯುವತಿಯ ಮೃತದೇಹ ಪತ್ತೆಯಾದ ಘಟನೆ ರಾಜಸ್ಥಾನದ ಉದಯ್​ಪುರ ಜಿಲ್ಲೆಯಲ್ಲಿ ನಡೆದಿದೆ. ಯುವಕನ ಗುಪ್ತಾಂಗವನ್ನೂ ಕತ್ತರಿಸಿದ ಸ್ಥಿತಿಯಲ್ಲಿ ವಶ ಪತ್ತೆಯಾಗಿದ್ದು, ಈ ಜೋಡಿಯನ್ನು ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿನ ಗೋಗುಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಉಬೇಶ್ವರ್​ಜಿ ಕಾಡಿನಲ್ಲಿ ಶುಕ್ರವಾರ ಯುವಕ ಮತ್ತು ಯುವತಿ ಶವಗಳು ಪತ್ತೆಯಾಗಿವೆ. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಅರಣ್ಯದೊಳಗೆ ಯುವಜೋಡಿಯ ನಗ್ನ ಶವ ಪತ್ತೆ!! Read More »

ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು

ಸಮಗ್ರ ನ್ಯೂಸ್: ಬೆಂಗಳೂರಿನ ಮಾರತ್ತಹಳ್ಳಿಯ ಕಾಲೇಜೊಂದರಲ್ಲಿ ಯುವಕ-ಯುವತಿಯರು ಪಾಕಿಸ್ತಾನ್​ ಜಿಂದಾಬಾದ್​ ಎಂದು ಘೋಷಣೆ ಕೂಗಿದ್ದಾರೆ! ಮಾರತ್ತಹಳ್ಳಿ ನಗರದ ಠಾಣಾ ವ್ಯಾಪ್ತಿಯಲ್ಲಿ ಬರುವ ನ್ಯೂ ಹಾರಿಜನ್ ಕಾಲೇಜಿನಲ್ಲಿ ಈ ಹುಚ್ಚಾಟ ನಡೆದಿದೆ. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪಾಕಿಸ್ತಾನ್ ಜಿಂದಬಾದ್ ಎಂದು ಯುವಕ-ಯುವತಿಯರು ಕೂಗಾಡಿದ್ದಾರೆ. ಘಟನೆಯ ಬಗ್ಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ವಿಡಿಯೋದಲ್ಲಿರುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘೋಷಣೆ ಕೂಗಿರುವ ಇಬ್ಬರನ್ನೂ ಮಾರತ್ತಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಕಾಲೇಜಿನಲ್ಲಿ ಕಲ್ಚರಲ್ ಕಾರ್ಯಕ್ರಮ

ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು Read More »

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್ ಗೆ ಬಂಧನ ಭೀತಿ| ವಿಚಾರಣೆಗೆ ಹಾಜರಾದರಷ್ಟೇ ಬಚಾವ್

ಸಮಗ್ರ ನ್ಯೂಸ್: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಶಾಸಕರನ್ನು ಬಿಜೆಪಿಗೆ ಸೆಳೆಯಲು ಹಣದ ಆಮಿಷ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಬಿ.ಎಲ್. ಸಂತೋಷ್ ಅವರಿಗೆ ನವೆಂಬರ್ 21 ರಂದು ಹಾಜರಾಗುವಂತೆ ಸಮನ್ಸ್ ನೀಡಿದ್ದು, ವಿಫಲವಾದರೆ ಅವರನ್ನು ಬಂಧಿಸಲಾಗುವುದು. ತೆಲಂಗಾಣ ಹೈಕೋರ್ಟ್ ಮಂಗಳವಾರ ಶಾಸಕರ ಖರೀದಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಬಿಜೆಪಿಯ ಮನವಿಯನ್ನು ತಿರಸ್ಕರಿಸಿದ ನಂತರ ಮತ್ತು ಪ್ರಕರಣದ ತನಿಖೆಯನ್ನು ಎಸ್‌ಐಟಿ ಸ್ವತಂತ್ರವಾಗಿ ಕೈಗೊಂಡ ನಂತರ ಈ ಬೆಳವಣಿಗೆ ನಡೆದಿದೆ. ಪ್ರಕರಣದ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್ ಗೆ ಬಂಧನ ಭೀತಿ| ವಿಚಾರಣೆಗೆ ಹಾಜರಾದರಷ್ಟೇ ಬಚಾವ್ Read More »

69 ಸಹಕಾರ ಸಪ್ತಾಹದಲ್ಲಿ‌ ಉಡುಪಿ‌ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊಕ್| ಸಚಿವ ಎಸ್.ಅಂಗಾರರಿಗೆ ಆಮಂತ್ರಣವೇ ಇಲ್ಲ…!

ಸಮಗ್ರ ನ್ಯೂಸ್: 69ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರನ್ನು ಕೈ ಬಿಟ್ಟಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಈ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಿದ್ದರು. ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ಸಹಕಾರ ಇಲಾಖೆ

69 ಸಹಕಾರ ಸಪ್ತಾಹದಲ್ಲಿ‌ ಉಡುಪಿ‌ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊಕ್| ಸಚಿವ ಎಸ್.ಅಂಗಾರರಿಗೆ ಆಮಂತ್ರಣವೇ ಇಲ್ಲ…! Read More »

ನನ್ ಮಗ ಕಾರು,‌ಬೈಕ್ ರೈಡ್ ಮಾಡ್ತಾನೆ ಅಂತ ಜಂಬ ಪಡ್ತೀರಾ? ಅಪ್ರಾಪ್ತನಿಗೆ ಕಾರು ಚಲಾಯಿಸಲು ಕೊಟ್ಟು ಏನಾಗಿದೆ ಗೊತ್ತಾ?

ಸಮಗ್ರ ನ್ಯೂಸ್: ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಕೊಡುವ ಮೊದಲು ಅಂತಹ ಪಾಲಕರು ಈ ಸ್ಟೋರಿ ಓದ್ಲೇಬೇಕು. ಮಕ್ಕಳು ಕಾರು, ಬೈಕ್ ಓಡಿಸ್ತಾರೆ ಅಂತ ಅವರಿಗೆ ಗಾಡಿ ಕೊಡುವ ಮುನ್ನ ಈ ವಿಷಯ ಸರಿಯಾಗಿ‌ ತಿಳ್ಕೊಳ್ಳಿ. ತಮ್ಮ ಅಪ್ರಾಪ್ತ ‌ಪುತ್ರನಿಗೆ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ವಾಹನ ಮಾಲಿಕನಿಗೆ ನ್ಯಾಯಾಲಯ ಬರೊಬ್ಬರಿ 20 ಸಾವಿರ ದಂಡ ವಿಧಿಸಿದ ಘಟನೆ ಕಡಬ ತಾಲ್ಲೂಕಿನಲ್ಲಿ ನಡೆದಿದೆ. ಕೊಯಿಲ ಗ್ರಾಮದ ಕೆ.ಸಿ.ಫಾರ್ಮ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ದಂಡ ಪಾವತಿಸಿದ

ನನ್ ಮಗ ಕಾರು,‌ಬೈಕ್ ರೈಡ್ ಮಾಡ್ತಾನೆ ಅಂತ ಜಂಬ ಪಡ್ತೀರಾ? ಅಪ್ರಾಪ್ತನಿಗೆ ಕಾರು ಚಲಾಯಿಸಲು ಕೊಟ್ಟು ಏನಾಗಿದೆ ಗೊತ್ತಾ? Read More »