Editor

ನರ್ಸ್ ವೇಷದಲ್ಲಿ ಹಸುಗೂಸು ಅಪಹರಣ – ಒಂದೇ ದಿನದಲ್ಲಿ ಆರೋಪಿಗಳು ಬಲೆಗೆ.!

ಸಮಗ್ರ ನ್ಯೂಸ್:ಗುಲ್ಬರ್ಗಾ ವೈದ್ಯಕೀಯ ಆಸ್ಪತ್ರೆಯಿಂದ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಒಂದು ದಿನದ ಗಂಡು ಮಗುವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಗುವನ್ನು 36 ಗಂಟೆಗಳಲ್ಲಿ ಮತ್ತೆ ಮಗುವನ್ನು ತಾಯಿಯ ಮಡಿಲು ಸೇರುವಂತೆ ಬ್ರಹ್ಮಪುರ ಪೊಲೀಸರು ಮಾಡಿದ್ದಾರೆ. ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ನವಜಾತ ಶಿಶುವನ್ನು ಬಾನುವಾರ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ನರ್ಸ್‌ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಅಪಹರಿಸಲಾಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಬ್ರಹ್ಮಪುರ […]

ನರ್ಸ್ ವೇಷದಲ್ಲಿ ಹಸುಗೂಸು ಅಪಹರಣ – ಒಂದೇ ದಿನದಲ್ಲಿ ಆರೋಪಿಗಳು ಬಲೆಗೆ.! Read More »

ಫೆಂಗಲ್ ಚಂಡಮಾರುತ| ಮತ್ತೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ನ.27 ರ ಇಂದು ತಮಿಳುನಾಡಿಗೆ ಸೈಕ್ಲೋನ್ ಅಪ್ಪಳಿಸಲಿದ್ದು, ಇದರ ಪರಿಣಾಮ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದಿನಿಂದ 2-3 ದಿನ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಸೈಕ್ಲೋನ್ ಪರಿಣಾಮದಿಂದ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ಎಚ್ಚರಿಸಿದ್ದಾರೆ. ಪಶ್ಟಿಮ ಬಂಗಾಳದಲ್ಲಿನ ವಾಯುಭಾರ ಕುಸಿತ ತೀವ್ರಗೊಂಡಿದೆ. ಹೀಗಾಗಿ ದಕ್ಷಿಣ

ಫೆಂಗಲ್ ಚಂಡಮಾರುತ| ಮತ್ತೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ Read More »

ಬೆಳ್ತಂಗಡಿ: ವಿಷ ಸೇವಿಸಿ ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: ಪಿಯುಸಿ ವಿದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಎಂಬಲ್ಲಿ ಸಂಭವಿಸಿದೆ. ಇಲ್ಲಿನ ಕೋಡಿ ನಿವಾಸಿ 17 ವರ್ಷದ ಪಿಯುಸಿ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ಮೃತಪಟ್ಟ ವಿದ್ಯಾರ್ಥಿನಿ ಸ್ಥಳೀಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಯಾವುದೋ ಕಾರಣಕ್ಕೆ ವಿಷ ಸೇವಿಸಿದ್ದು ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೋಲೀಸ್

ಬೆಳ್ತಂಗಡಿ: ವಿಷ ಸೇವಿಸಿ ವಿದ್ಯಾರ್ಥಿನಿ ಸಾವು Read More »

ಸಹೋದರನಿಗೆ ಮದುವೆ Gift ಆಗಿ 35 ಅಡಿ ಉದ್ದದ ನೋಟಿನ ಹಾರ ನೀಡಿದ ಅಣ್ಣ; ಇದರ ತಯಾರಿಕೆಗೆ ಬಳಕೆ ಮಾಡಿದ ನೋಟುಗಳ ಸಂಖ್ಯೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಸಮಗ್ರ ನ್ಯೂಸ್:ಪಾಕಿಸ್ತಾನದ ಭಕ್ಕರ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಹೋದರನ ಮದುವೆಯನ್ನು ಅದ್ದೂರಿಯಾಗಿ ಆಚರಿಸಿದ್ದು, ನೋಟುಗಳಿಂದ ಮಾಡಿದ 35 ಅಡಿ ಉದ್ದದ ಹಾರವನ್ನು ಮಾಡಿಸಿ ವರನಿಗೆ ಉಡುಗೊರೆಯಾಗಿ (Gift) ನೀಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವರನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪಾಕಿಸ್ತಾನದ ಪಂಜಾಬ್‌ನ ಕೋಟ್ಲಾ ಜಾಮ್ ಪ್ರದೇಶದ ನಿವಾಸಿಯೊಬ್ಬರು ತಮ್ಮ ಸಹೋದರನ ಮದುವೆಯ ದಿನ 75 ರೂ.ಗಳ 200 ನೋಟುಗಳು ಮತ್ತು 50 ರೂ.ಗಳ 1700 ನೋಟುಗಳನ್ನು ಬಳಸಿ 35 ಅಡಿ ಉದ್ದದ

ಸಹೋದರನಿಗೆ ಮದುವೆ Gift ಆಗಿ 35 ಅಡಿ ಉದ್ದದ ನೋಟಿನ ಹಾರ ನೀಡಿದ ಅಣ್ಣ; ಇದರ ತಯಾರಿಕೆಗೆ ಬಳಕೆ ಮಾಡಿದ ನೋಟುಗಳ ಸಂಖ್ಯೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ Read More »

ಬೆಳಗಾವಿಯಲ್ಲಿ ಮದುವೆ ಮಂಟಪದಿಂದ ‘ಫೋಟೋಗ್ರಾಫರ್’ ಕಿಡ್ನಾಪ್ ಮಾಡಿ ಭೀಕರ ಹಲ್ಲೆ : 8 ಜನರ ಬಂಧನ!

ಸಮಗ್ರ ನ್ಯೂಸ್: ಬೆಳಗಾವಿಯಲ್ಲಿ ಬೆಚ್ಚಿ ಬೆಳಿಸುವ ಘಟನೆ ನಡೆದಿದ್ದು, ಮದುವೆ ಮಂಟಪದಿಂದಲೇ ಫೋಟೋಗ್ರಾಫರ್ ಒಬ್ಬರನ್ನು ಕಿಟ್ರ್ಯಾಪ್ ಮಾಡಿ ಹಲ್ಲೆ ನಡೆಸಿರುವ ಘಟನೇ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ಈ ಒಂದು ಘಟನೆ ನಡೆದಿದೆ.ಅಪಹರಣಕ್ಕೆ ಒಳಗಾಗಿ ಹಲ್ಲೆಗೆ ಒಳಗಾದಂತಹ ಫೋಟೋಗ್ರಾಫರ್ ನನ್ನು ಉಮೇಶ್ ಹೊಸೂರು ಎಂದು ಗುರುತಿಸಲಾಗಿದೆ. ಕಿಡ್ನಾಪ್ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಫೋಟೋಗ್ರಾಫ‌ರ್ ಉಮೇಶ ಹೊಸೂರು ಅವರನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಲಾಗಿದೆ. ಉಮೇಶ್ ಬೈಲಹೊಂಗಲ ಪಟ್ಟಣದಲ್ಲಿ ವಾಸವಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಮದುವೆ ಆರ್ಡರ್

ಬೆಳಗಾವಿಯಲ್ಲಿ ಮದುವೆ ಮಂಟಪದಿಂದ ‘ಫೋಟೋಗ್ರಾಫರ್’ ಕಿಡ್ನಾಪ್ ಮಾಡಿ ಭೀಕರ ಹಲ್ಲೆ : 8 ಜನರ ಬಂಧನ! Read More »

ಮುಂಬೈ ಉಗ್ರರ ದಾಳಿಗೆ ಹತ್ತುವರ್ಷ -ಲಾಠಿ ಹಿಡಿದು ಕಸಬ್ ನನ್ನು ಎದುರಿಸಿದ್ದ ಪೊಲೀಸ್‌!

ಸಮಗ್ರ ನ್ಯೂಸ್: ಪ್ರತಿಷ್ಠಿತ ತಾಜ್ ಹೋಟೆಲ್ ಮೇಲೆ ಉಗ್ರ ಅಲ್ಮಲ್ ಕಸಬ್ ನಡೆಸಿದ ದಾಳಿಯ ಕಹಿ ನೆನೆಪಿಗೆ ಇಂದು ಹತ್ತು ವರ್ಷ. ನವೆಂಬರ್ 26 ರಂದು ನಡೆದಿದ್ದ ಈ ದಾಳಿಯಲ್ಲಿ ಜನಸಾಮಾನ್ಯರಲ್ಲದೇ 18 ಮಂದಿ ಪೊಲೀಸ್ ಮಿಲಿಟರಿ ಸಿಬ್ಬಂದಿಗಳೂ ಸಹ ಹುತಾತ್ಮರಾಗಿದ್ದರು. ಉಗ್ರರ ದಮನ ಕಾರ್ಯಾಚರಣೆಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಇಂದು ದೇಶಾದ್ಯಮತ ಶೃಂದ್ಧಾಂಜಲಿ ಸಲ್ಲಿಸಲಾಗುತ್ತಿದೆ.ಕನ್ನಡಿಗರ ಮೇಜರ್ ಸಂದೀಪ್ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ ಮತ್ತು ಅಶೋಕ್ ಕಮತೆ ಸೇರಿದಂತೆ ಹಲವು ಅಂದು ಉಗ್ರರ

ಮುಂಬೈ ಉಗ್ರರ ದಾಳಿಗೆ ಹತ್ತುವರ್ಷ -ಲಾಠಿ ಹಿಡಿದು ಕಸಬ್ ನನ್ನು ಎದುರಿಸಿದ್ದ ಪೊಲೀಸ್‌! Read More »

ಸ್ನಾನಕ್ಕೆ ಹೋಗಿದ್ದ ಮಹಿಳೆ ನಿಗೂಢ ಸಾವು- ಮುಖದಲ್ಲಿ ಪರಚಿದ ಗಾಯ!

ಸಮಗ್ರ ನ್ಯೂಸ್: ಸಂಬಂಧಿಕರ ಮನೆಗೆ ಆಗಮಿಸಿದ್ದ ಮಹಿಳೆಯೊಬ್ಬರು ಸ್ನಾನಕ್ಕೆ ಹೋಗಿದ್ದಾಗ ಬಾತ್‌ರೂಮ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ನಡೆದಿದೆ. ಮಹಿಳೆಯ ಮುಖದಲ್ಲಿ ಪರಚಿದ ಗಾಯಗಳಾಗಿದ್ದು, ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.ಮೃತ ಮಹಿಳೆಯನ್ನು ಲಕ್ಷ್ಮಿ (25) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ತಿರುಪತಿ ಮೂಲದ ಮಹಿಳೆ ತನ್ನ ಪತಿಯೊಂದಿಗೆ ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಬಳಿಕ ಅಡೇಪೇಟೆಯಲ್ಲಿರುವ ಸಂಬಂಧಿ ಸುಹಾಸಿನಿ ಎಂಬುವವರ ಮನೆಗೆ ತೆರಳಿದ್ದರು.ಅಲ್ಲಿ ಸ್ನಾನಕ್ಕೆಂದು ಹೋಗಿದ್ದ ಲಕ್ಷ್ಮಿ ಬಾತ್‌ರೂಮ್‌ನಲ್ಲಿ

ಸ್ನಾನಕ್ಕೆ ಹೋಗಿದ್ದ ಮಹಿಳೆ ನಿಗೂಢ ಸಾವು- ಮುಖದಲ್ಲಿ ಪರಚಿದ ಗಾಯ! Read More »

ಕರ್ನಾಟಕ ಕಿಂಗ್ `ಬೆಳ್ಳೂಡಿ ಕಾಳಿ’ ಖ್ಯಾತಿಯ ಟಗರು ಇನ್ನಿಲ್ಲ

ಸಮಗ್ರ ನ್ಯೂಸ್:ಪ್ರಶಸ್ತಿಗಳ ರಾಜ, ಬೆಳ್ಳೂಡಿ ಕಾಳಿ ಎಂದೇ ಹೆಸರುವಾಸಿಯಾದ ಟಗರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯ ಈ ಟಗರು ಅನಾರೋಗ್ಯದಿಂದ ಸಾವನ್ನಪ್ಪಿದೆ. ಬೆಳ್ಳೂಡಿ ಕಾಳಿ ಕರ್ನಾಟಕದ ಪ್ರಸಿದ್ದ ಕೊಣ್ಣೂರು ಕಣ, ದಾವಣಗೆರೆ ದುಗ್ಗವ್ವ ಕಣ, ಹರಿಹರ ಕಣ, ಹೊನ್ನಾಳಿ ಕಣದಲ್ಲಿ ಸತತವಾಗಿ ಎರಡು ಸಲ ಗೆದ್ದು ಬೀಗಿತ್ತು.ಕೊಣ್ಣೂರು ಕಣದಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿ ದಾಖಲೆ ಬರೆದಿತ್ತು.ಪ್ರಸಿದ್ದ ಕಾಳಿ ಟಗರು ಮೃತಪಟ್ಟ ಹಿನ್ನೆಲೆಯಲ್ಲಿ ಟಗರಿನ ಅಭಿಮಾನಿಗಳು ಟಗರು ಅಂತಿಮ ದರ್ಶನ ಪಡೆದಿದ್ದಾರೆ.

ಕರ್ನಾಟಕ ಕಿಂಗ್ `ಬೆಳ್ಳೂಡಿ ಕಾಳಿ’ ಖ್ಯಾತಿಯ ಟಗರು ಇನ್ನಿಲ್ಲ Read More »

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲೇ SDA ಆತ್ಮಹತ್ಯೆ: ಮುರ್ಮು, ಮೋದಿಗೆ ಪತ್ರ

ಸಮಗ್ರ ನ್ಯೂಸ್: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಅನಾಮಿಕರು ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರಕರಣ ಮುಚ್ಚಿಹಾಕಲು ಏನೆಲ್ಲ ಪ್ರಯತ್ನ ನಡೆದಿದೆ ಎಂದೂ ಪತ್ರದಲ್ಲಿದೆ.ನ.18ರಂದು ಖಡೇಬಜಾರ್ ಪೊಲೀಸ್ ಠಾಣೆಗೆ ಮೊದಲ ಪತ್ರ ಬಂದಿತ್ತು. ರುದ್ರಣ್ಣನದು ಆತ್ಮಹತ್ಯೆಯಲ್ಲ ಕೊಲೆ ಎಂಬ ಮಾಹಿತಿ ಅದರಲ್ಲಿ ನೀಡಲಾಗಿತ್ತು. ನ.5ರಂದು ರುದ್ರಣ್ಣ ಆತ್ಮಹತ್ಯೆಗೆ ಶರಣಾದರು. ತಹಶೀಲ್ದಾರ್ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಿಗೇರ ಮತ್ತು ಸೋಮು ದೊಡವಾಡಿ ಅವರ

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲೇ SDA ಆತ್ಮಹತ್ಯೆ: ಮುರ್ಮು, ಮೋದಿಗೆ ಪತ್ರ Read More »

ನಿಮಗೆ ಇದು ಬೇಕಿತ್ತಾ ?! ಸಚಿವ ಜಾರ್ಜ್ ಗೆ ನಿರ್ಮಲಾನಂದ ಶ್ರೀಗಳ ಸಮ್ಮುಖದಲ್ಲಿ ಭಾರಿ ಮುಖಭಂಗ

ಸಮಗ್ರ ನ್ಯೂಸ್:ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಕೆ.ಜೆ.ಜಾರ್ಜ್ ಗೆ ತೀವ್ರ ಮುಖಭಂಗ ಎದುರಾಗಿದೆ. ಸಂಘದ ಕಾರ್ಯಕ್ರಮದ ವೇದಿಕೆಯಲ್ಲಿ ಗ್ಯಾರಂಟಿಗಳ ಬಗ್ಗೆ ಭಾಷಣ ಮಾಡಲು ಮುಂದಾದ ಸಚಿವ ಕೆ.ಜೆ.ಜಾರ್ಜ್ ಭಾಷಣವನ್ನು ಸಭಿಕರು ಅರ್ಧಕ್ಕೆ ತಡೆದಿದ್ದಾರೆ. ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿ ಉದ್ಘಾಟನೆಗೊಂಡ ಒಕ್ಕಲಿಗರ ಬೆಳ್ಳಿ ಭವನ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಶ್ರೀಗಳ ಎದುರು ಸಚಿವ ಜಾರ್ಜ್ ಈ ರೀತಿ ಮುಜುಗರಕ್ಕೀಡಾಗಿದ್ದಾರೆ. ಒಕ್ಕಲಿಗ ಸಮಾಜದ ಯುವಕರು ಭಾಷಣದ ಮಧ್ಯಪ್ರವೇಶಿಸಿ, ಇದು ರಾಜಕೀಯ ವೇದಿಕೆಯಲ್ಲ, ರಾಜಕೀಯ ಮಾತನಾಡೋದಾದ್ರೆ ಕೆಳಗೆ ಇಳಿಯಿರಿ ಎಂದು ಕೂಗಾಡಿದ್ರು.

ನಿಮಗೆ ಇದು ಬೇಕಿತ್ತಾ ?! ಸಚಿವ ಜಾರ್ಜ್ ಗೆ ನಿರ್ಮಲಾನಂದ ಶ್ರೀಗಳ ಸಮ್ಮುಖದಲ್ಲಿ ಭಾರಿ ಮುಖಭಂಗ Read More »