Editor

ಅ. 7 ರಿಂದ ಅ.16ವರೆಗೆ ಮಂಗಳೂರು ದಸರಾ| ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೋವಿಡ್ ಲಸಿಕೆ ವ್ಯವಸ್ಥೆ

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಪ್ರತಿ ವರ್ಷ ನಡೆಯುವ ‘ಮಂಗಳೂರು ದಸರಾ’ವನ್ನು ಈ ಬಾರಿಯೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆಯೊಂದಿಗೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಕೊರೊನಾದಿಂದಾಗಿ ಈ ಬಾರಿಯೂ ಮಂಗಳೂರು ದಸರಾ ಮರೆವಣಿಗೆ ಇಲ್ಲದೆ ಶಾರದಾ ಮೂರ್ತಿಯ ವಿಸರ್ಜನೆಯನ್ನು ಕಳೆದ ವರ್ಷದಂತೆ ಈ ವರ್ಷವೂ, ಕ್ಷೇತ್ರದ ಆವರಣದಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ತಿಳಿಸಿದ್ದಾರೆ. ಅದೇ ರೀತಿ ನಮ್ಮ ದಸರಾ ನಮ್ಮ ಸುರಕ್ಷೆ’ ಎಂಬ ಘೋಷ ವಾಕ್ಯದಡಿ ದಸರಾ ಕಾರ್ಯಕ್ರಮ ನಡೆಯಲಿದೆ.

ಅ. 7 ರಿಂದ ಅ.16ವರೆಗೆ ಮಂಗಳೂರು ದಸರಾ| ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೋವಿಡ್ ಲಸಿಕೆ ವ್ಯವಸ್ಥೆ Read More »

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ| ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಸೇರಿ ಹಲವರ ಬಂಧನ|

ಮುಂಬೈ: ಪಾರ್ಟಿಯೊಂದರಲ್ಲಿ ಡ್ರಗ್ಸ್‌ ಬಳಕೆ ಮಾಡುತ್ತಿರುವ ಮಾಹಿತಿಯನ್ನು ಆಧರಿಸಿ ಶನಿವಾರ ರಾತ್ರಿ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಪ್ರಯಾಣಿಕರ ಕ್ರೂಸ್‌ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ನೂರಾರು ಮಂದಿ ಪ್ರಯಾಣಿಕರಿದ್ದ ಹಡಗು ಗೋವಾ ಕಡೆಗೆ ಸಾಗುವುದಿತ್ತು. ಹಡಗಿನಲ್ಲಿ ಪಾರ್ಟಿ ನಡೆಯುತ್ತಿರುವ ಮಾಹಿತಿಯನ್ನು ಆಧರಿಸಿ ಸಮೀರ್‌ ವಾಂಖೆಡೆ ನೇತೃತ್ವದ ಎನ್‌ಸಿಬಿಯ ತಂಡವು ಹಡಗಿನಲ್ಲಿ ಶೋಧ ಕಾರ್ಯ ನಡೆಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಿವುಡ್‌ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ‌ ಹಲವರನ್ನು

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ| ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಸೇರಿ ಹಲವರ ಬಂಧನ| Read More »

ಕಲುಷಿತ ನೀರು ಸೇವನೆ| ನಾಲ್ವರು ಸಾವು

ವಿಜಯಪುರ : ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಬೋರ್ ವೆಲ್ ಪೈಪ್ ಗೆ ಚರಂಡಿ ನೀರು ಮಿಶ್ರಣಗೊಂಡಿದ್ದರಿಂದಾಗಿ, ಕಲುಷಿತ ನೀರು ಸೇವಿಸಿದಂತ ಗ್ರಾಮದ ಅನೇಕರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಂತ ಗ್ರಾಮಸ್ಥರಲ್ಲಿ 10 ದಿನಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಜಯಪುರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿನ ಕುಡಿಯುವ ನೀರಿನ ಪೈಪ್ ಗೆ ಚರಂಡಿ ನೀರು ಮಿಶ್ರಣಗೊಂಡಿದೆ. ಇದೇ ನೀರನ್ನು ಗ್ರಾಮದ ಜನರಿಗೆ ಕುಡಿಯಲು ಬಿಟ್ಟ ಕಾರಣ, ಗ್ರಾಮದಲ್ಲಿನ ಅನೇಕರಿಗೆ ಹೊಟ್ಟೆನೋವು, ವಾಂತಿ, ಬೇಧಿ ಕಾಣಿಸಿಕೊಂಡಿದೆ.

ಕಲುಷಿತ ನೀರು ಸೇವನೆ| ನಾಲ್ವರು ಸಾವು Read More »

ಈಕೆ ಅದೊಂದು ಕಾರಣಕ್ಕೆ ಕನ್ಯತ್ವವನ್ನೇ ಮಾರಾಟ ಮಾಡಲು ತಯಾರಾದಳು..! ಅಷ್ಟಕ್ಕೂ ಆ ಬಾಲಕಿಗೆ ಇದ್ದ ಆ ಸಮಸ್ಯೆ ಏನು ಗೊತ್ತೆ..?

ಮುಂಬೈ:ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, 11 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ಗಳಿಸಲು ತನ್ನ ಕನ್ಯತ್ವವನ್ನು ಮಾರಾಟ ಮಾಡಲು ತಯಾರಾಗಿದ್ದಾಳೆ. ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಪ್ರಕರಣದಲ್ಲಿಮೂವರು ಮಹಿಳೆಯರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮೂವರು ಆರೋಪಿ ಮಹಿಳೆಯರು ರೂ. 40,000 ಕ್ಕೆ ‘ಗ್ರಾಹಕ’ ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ ಆಕೆಯ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿರುವುದರಿಂದ ಆಕೆಯ ತಾಯಿಗೆ

ಈಕೆ ಅದೊಂದು ಕಾರಣಕ್ಕೆ ಕನ್ಯತ್ವವನ್ನೇ ಮಾರಾಟ ಮಾಡಲು ತಯಾರಾದಳು..! ಅಷ್ಟಕ್ಕೂ ಆ ಬಾಲಕಿಗೆ ಇದ್ದ ಆ ಸಮಸ್ಯೆ ಏನು ಗೊತ್ತೆ..? Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)ಮಕ್ಕಳಿಗೆ ವಿದ್ಯಾಭ್ಯಾಸದ ಬಗ್ಗೆ ತಿಳಿ ಹೇಳುವುದರ ಜೊತೆಗೆ ಪ್ರೋತ್ಸಾಹ ಸಿಗುತ್ತದೆ. ವಾಹನ ಚಾಲನೆ ಮಾಡುವವರು ಜಾಗರೂಕರಾಗಿರುವುದು ಉತ್ತಮ. ಕೃಷಿ ಕಾರ್ಯಗಳ ವೆಚ್ಚಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುವಿರಿ.ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ವಿಷಯವೊಂದನ್ನು ಬಹಳ ದೃಢನಿರ್ಧಾರ ಮಾಡಿ ಕೈಗೆತ್ತಿಕೊಳ್ಳುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ವರಮಾನ ಹೆಚ್ಚಿಗೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ. ವಿದೇಶಗಳಿಗೆ ಸಿದ್ಧಪಡಿಸಿದ ಆಹಾರ ವಸ್ತು ರಫ್ತು ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ವೃಷಭರಾಶಿ (ಕೃತಿಕಾ2 3

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ಪ್ರೀತಿಗಾಗಿ ಗೂಡು ತೊರೆದ ಹಕ್ಕಿ| ಮುಸ್ಲಿಂ ಯುವಕನ ಜೊತೆ ಬಾಳ ಹೊರಟ ಹಿಂದೂ ಯುವತಿ|

ಪುತ್ತೂರು: ಇಲ್ಲಿನ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ಮುಸ್ಲಿಂ ಯುವಕನ ಮನೆಯಲ್ಲಿದ್ದ ಹಿಂದು ಯುವತಿಯು ಇದೀಗ ಆಕೆಯ ಇಚ್ಛೆಯಂತೆ ಆತನ ಜೊತೆಗೆ ಹೊಸಬಾಳಿಗೆ ತುದಿಗಾಲಲ್ಲಿ ನಿಂತಿರುವುದಾಗಿ ವರದಿಯಾಗಿದೆ. ಆಕೆಯನ್ನು ಸ್ವಧರ್ಮದಲ್ಲಿ ಉಳಿಸಿಕೊಳ್ಳಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಅವಿರತ ಶ್ರಮ ವಹಿಸುತ್ತಿದ್ದಾರೆ ಕೇರಳದ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇಲಂಪಾಡಿ ಕಲ್ಲಡ್ಕ ದಿಂದ ನಾಪತ್ತೆಯಾದ ಯುವತಿಯನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಪ್ರಬುದ್ದಳಾದ ಆಕೆಗೆ ಅವಳ ಇಚ್ಛೆಯಂತೆ ನಡೆಯಲು ಅವಕಾಶ ಕೊಡಲಾಗಿತ್ತು. ದೇಲಂಪಾಡಿ ಕಲ್ಲಡ್ಕ ನಿವಾಸಿ ಭವ್ಯಶ್ರೀ ಬುಧವಾರ ಸೆ.29 ರಂದು

ಪ್ರೀತಿಗಾಗಿ ಗೂಡು ತೊರೆದ ಹಕ್ಕಿ| ಮುಸ್ಲಿಂ ಯುವಕನ ಜೊತೆ ಬಾಳ ಹೊರಟ ಹಿಂದೂ ಯುವತಿ| Read More »

11ನೇ‌ ಮಹಡಿಯಿಂದ ಬಿದ್ದ ಮಗು ದಾರುಣ ಸಾವು, ಪೋಷಕರ ಆಕ್ರಂದನ

ಬೆಂಗಳೂರು: ಪೋಷಕರು ಹೊರಗೆ ಹೋಗಿದ್ದ ಸಮಯದಲ್ಲಿ 11ನೇ ಮಹಡಿಯಲ್ಲಿ ಆಟವಾಡುತ್ತಿದ್ದ ಹನ್ನೊಂದು ವರ್ಷದ ಬಾಲಕ ಆಯ ತಪ್ಪಿ ಪಕ್ಕದ ಕ್ಲಬ್ ಹೌಸ್‍ನ 5ನೇ ಮಹಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಆರ್‍ಆರ್ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾಫ್ಟ್‌ವೇರ್ ಇಂಜಿನಿಯರ್ ಪುತ್ರ ಗಗನ್ ಮೃತಪಟ್ಟ ಬಾಲಕ. ಬನಶಂಕರಿ 3ನೇ ಹಂತದಲ್ಲಿರುವ ಶೋಭಾ ವ್ಯಾಲಿ ವ್ಯೂ ಅಪಾರ್ಟ್‍ಮೆಂಟ್‍ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಗನ್ ನಿನ್ನೆ ಸ್ನೇಹಿತರ ಜೊತೆ ಆಟವಾಡುತ್ತಿದ್ದುದನ್ನು ಗಮನಿಸಿದ ಪೋಷಕರು, ಮನೆ ಬಳಿಯೇ ಬಿಟ್ಟು ಕಾರ್ಯನಿಮಿತ್ತ ಹೊರಗೆ

11ನೇ‌ ಮಹಡಿಯಿಂದ ಬಿದ್ದ ಮಗು ದಾರುಣ ಸಾವು, ಪೋಷಕರ ಆಕ್ರಂದನ Read More »

ಇಂದು ನೂತನ ಜಿಲ್ಲೆ ವಿಜಯನಗರ ಉದ್ಘಾಟನೆ

ಹೊಸಪೇಟೆ: ರಾಜ್ಯದ 31ನೇ ಜಿಲ್ಲೆಯಾಗಿ ಉದಯಗೊಂಡಿರುವ ವಿಜಯನಗರದ ಅಧಿಕೃತ ಉದ್ಘಾಟನಾ ಸಮಾರಂಭ ಶನಿವಾರ (ಅ. 2) ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮ ನಡೆಯಲಿರುವ ಜಿಲ್ಲಾ ಕ್ರೀಡಾಂಗಣ ಮಿನಿ ಹಂಪಿಯಾಗಿ ಬದಲಾಗಿದೆ. ಬೆಟ್ಟ-ಗುಡ್ಡ, ವಿರೂಪಾಕ್ಷೇಶ್ವರ ದೇವಸ್ಥಾನ, ಸಾಲು ಮಂಟಪ, ಉಗ್ರ ನರಸಿಂಹ, ಸಪ್ತಸ್ವರ ಮಂಟಪ ನಿರ್ಮಿಸಲಾಗಿದೆ. ಪ್ರವೇಶ ದ್ವಾರದ ಮುಂಭಾಗದಲ್ಲಿ 40 ಅಡಿ ಎತ್ತರದ ಶ್ರೀಕೃಷ್ಣದೇವರಾಯನ ಫೈಬರ್‌ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ನಗರದ ಎಲ್ಲಾ ರಸ್ತೆಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ತಳಿರು ತೋರಣ ಕಟ್ಟಲಾಗಿದೆ. ಶನಿವಾರ ಸಂಜೆ

ಇಂದು ನೂತನ ಜಿಲ್ಲೆ ವಿಜಯನಗರ ಉದ್ಘಾಟನೆ Read More »

‘ಮಹಾತ್ಮ ಹಚ್ಚಿದ ಬೆಳಕಿನಲ್ಲಿ’ – ಗಾಂಧೀ ಹಾಕಿದ ಹಾದಿಯಲ್ಲಿ ನನ್ನ ಆಡಳಿತ – ಎಚ್.ಡಿ ಕುಮಾರಸ್ವಾಮಿ

ಆಧುನಿಕ ಭಾರತದ ಸಂದರ್ಭದಲ್ಲಿ ಜನಮಾನಸವನ್ನು ಗಾಢವಾಗಿ ಪ್ರಭಾವಿಸಿದ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧಿಯವರು ನಿಸ್ಸಂದೇಹವಾಗಿ ಅಗ್ರಗಣ್ಯರು. ಕೇವಲ ಸ್ವಾತಂತ್ರ್ಯ ಹೋರಾಟದ ನಾಯಕತ್ವಕ್ಕೆ ಸೀಮಿತಗೊಳ್ಳಲಿಲ್ಲ. ಸಮಾಜದ ಅಸಮಾನತೆ, ಅನ್ಯಾಯಗಳ ವಿರುದ್ಧ ಜನಜಾಗೃತಿ ಮೂಡಿಸಿದವರು. ಸ್ವಾವಲಂಬನೆಯ ಪಾಠ ಹೇಳಿದವರು. ಸರ್ವೋದಯ ಮಂತ್ರ ಜಪಿಸಿದವರು. ಮಾತು ಮತ್ತು ಆಚರಣೆಯಲ್ಲಿ ಎಚ್ಚರ ತಪ್ಪದೇ ಬದುಕಿದವರು. ಧರ್ಮವನ್ನು ಆಧ್ಯಾತ್ಮಿಕ ಮಟ್ಟಕ್ಕೆ ಏರಿಸಿದ ದಾರ್ಶನಿಕರು. ಈ ಹಿನ್ನೆಲೆಯಲ್ಲಿ 2018ರಲ್ಲಿ ರಾಜ್ಯದ ಪ್ರಮುಖ ಪತ್ರಿಕೆಯೊಂದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬರೆದ ಲೇಖನ ಇಲ್ಲಿದೆ. ವಿಶ್ವದ ಅತೀ ಪ್ರಭಾವಶಾಲಿ

‘ಮಹಾತ್ಮ ಹಚ್ಚಿದ ಬೆಳಕಿನಲ್ಲಿ’ – ಗಾಂಧೀ ಹಾಕಿದ ಹಾದಿಯಲ್ಲಿ ನನ್ನ ಆಡಳಿತ – ಎಚ್.ಡಿ ಕುಮಾರಸ್ವಾಮಿ Read More »

ಪ್ರೀತಿಸಲು ಒಲ್ಲೆ ಎಂದವಳ ಇರಿದು ಕೊಂದ ಪಾಗಲ್ ಪ್ರೇಮಿ|

ಕೊಚ್ಚಿ: ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾದ ಸೇಂಟ್ ಥಾಮಸ್ ಕಾಲೇಜಿನ ಆವರಣದಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಆಕೆಯ ಕ್ಲಾಸ್ ಮೇಟ್ ಹುಡುಗನೊಬ್ಬ ಇರಿದು ಕೊಲೆ ಮಾಡಿರುವ ಘಟನೆ ‌ನಡೆದಿದೆ. ಶುಕ್ರವಾರ ಬೆಳಿಗ್ಗೆ ಕಾಲೇಜಿನಲ್ಲಿ ನಡೆದ ಪೂರಕ ಪರೀಕ್ಷೆಯ ನಂತರ ಆರೋಪಿ ಅಭಿಷೇಕ್ ಬೈಜು ಎಂಬಾತ ತನ್ನ ಬ್ಯಾಚ್‌ಮೇಟ್ ನಿತಿನಮೋಲ್(22) ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದ ಹಾಗೂ ಆಕೆಯ ಗಂಟಲನ್ನು ಕತ್ತರಿಸಿದ್ದ ಎಂದು ಪಾಲಾ ಸಬ್ ಇನ್ಸ್‌ಪೆಕ್ಟರ್ ಅಭಿಲಾಷ್ ಹೇಳಿದ್ದಾರೆ. ದಾಳಿಯ ಪ್ರತ್ಯಕ್ಷದರ್ಶಿಯಾಗಿದ್ದ ಕಾಲೇಜಿನ ಸೆಕ್ಯುರಿಟಿ-ಗಾರ್ಡ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಆರೋಪಿ

ಪ್ರೀತಿಸಲು ಒಲ್ಲೆ ಎಂದವಳ ಇರಿದು ಕೊಂದ ಪಾಗಲ್ ಪ್ರೇಮಿ| Read More »