Editor

ಮೂಡುಬಿದಿರೆ: ಮೆಕ್ಯಾನಿಕ್ಸ್ V/s ಇಲೆಕ್ಟ್ರಿಕಲ್ ವಿದ್ಯಾರ್ಥಿಗಳ ನಡುವೆ ಡಿಶ್ಯುಂ…ಡಿಶ್ಯು…| 8 ಮಂದಿ ಡಿಬಾರ್

ಮಂಗಳೂರು: ಇಲ್ಲಿಗೆ ಸಮೀಪದ ತೋಡಾರುವಿನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜ್ ಒಂದರಲ್ಲಿ ಮೆಕ್ಯಾನಿಕ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳ ಗುಂಪುಗಳ ಮಧ್ಯೆ ಹೊಡೆದಾಟ ನಡೆದು ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.ಗಾಯಗೊಂಡ ವಿದ್ಯಾರ್ಥಿಗಳನ್ನು ಸಹಾಝ್ ಮತ್ತು ಮಹಮ್ಮದ್ ಸ್ವರೂಬ್ ಎಂದು ಗುರುತಿಸಲಾಗಿದೆ. ಇವರು ಸದ್ಯ ಸರಕಾರಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದರೆ.ಘಟನೆ ಹಿನ್ನೆಲೆ:ಸಂಪ್ರದಾಯ ದಿನ ಎಂಬ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪೂರ್ವ ತಯಾರಿ ನಡೆಸುತ್ತಿದ್ದರು. ಈ ವೇಳೆ ತೃತೀಯ ವರ್ಷದ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳ

ಮೂಡುಬಿದಿರೆ: ಮೆಕ್ಯಾನಿಕ್ಸ್ V/s ಇಲೆಕ್ಟ್ರಿಕಲ್ ವಿದ್ಯಾರ್ಥಿಗಳ ನಡುವೆ ಡಿಶ್ಯುಂ…ಡಿಶ್ಯು…| 8 ಮಂದಿ ಡಿಬಾರ್ Read More »

ಮಹಿಳೆಯರಿಗೊಂದು ಗುಡ್ ನ್ಯೂಸ್| ಕೊನೆಗೂ ಇಳಿಕೆಯಾದ ಅಡುಗೆಎಣ್ಣೆ ದರ

ನವದೆಹಲಿ: ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಸ್ವಲ್ಪ ‌ನಿರಾಳರಾಗಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಡುಗೆ ಎಣ್ಣೆ ಅದರ ಲೀಟರ್ ಗೆ 20 ರೂ. ನಷ್ಟು ಕಡಿಮೆಯಾಗಿದೆ. ಇನ್ನು 5 ರೂಪಾಯಿಯಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಕೊರೋನಾ ನಂತರದಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಅಡುಗೆ ಎಣ್ಣೆ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಂದ ದರ ಇಳಿಕೆಯಾಗಿದೆ. ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಇಳಿಕೆ ಮಾಡಲಾಗಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಲೀಟರ್ ಅಡುಗೆ ಎಣ್ಣೆ ದರ 20

ಮಹಿಳೆಯರಿಗೊಂದು ಗುಡ್ ನ್ಯೂಸ್| ಕೊನೆಗೂ ಇಳಿಕೆಯಾದ ಅಡುಗೆಎಣ್ಣೆ ದರ Read More »

ಬೆಳ್ಳಿಪರದೆಯಲ್ಲಿ ‘ಭಜರಂಗಿ 2’ ಅಬ್ಬರ ಶುರು| ಗ್ರಾಂಡ್ ಎಂಟ್ರಿ ನೀಡಿದ ಶಿವಣ್ಣ|

ಬೆಂಗಳೂರು: ಒಂದೂವರೆ ವರ್ಷದ ನಂತರ ಬೆಳ್ಳಿತೆರೆಗೆ ಶಿವಣ್ಣ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನ ಥಿಯೇಟರ್ ಗಳಲ್ಲಿ ‘ಭಜರಂಗಿ 2’ ಅಬ್ಬರ ಜೋರಾಗಿದೆ. ಥಿಯೇಟರ್ ಗಳ ಎದುರು ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ‘ಭಜರಂಗಿ-2’ ಪ್ರದರ್ಶನ ಆರಂಭವಾಗಿದೆ. ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ.ಥಿಯೇಟರ್ ಗಳ ಮುಂದೆ ಹಬ್ಬದ ವಾತಾವರಣ ಕಂಡು ಬಂದಿದ್ದು, ದೀಪಾವಳಿಗೆ ಮೊದಲು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ರಾಜ್ಯದ 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ

ಬೆಳ್ಳಿಪರದೆಯಲ್ಲಿ ‘ಭಜರಂಗಿ 2’ ಅಬ್ಬರ ಶುರು| ಗ್ರಾಂಡ್ ಎಂಟ್ರಿ ನೀಡಿದ ಶಿವಣ್ಣ| Read More »

ಸುಳ್ಯ: ಜಡ ಹಿಡಿದ ಆಡಳಿತವರ್ಗಕ್ಕೆ ಬಿಸಿ ಮುಟ್ಟಿಸುತ್ತಿರುವ ನ್ಯಾಯಮೂರ್ತಿಗಳು| ನಮಗೆ ಇವರಿಬ್ಬರೇ ಸಾಕು| ಉಳಿದವರೆಲ್ಲ ಯಾಕೆ ಬೇಕು?

ಮಂಗಳೂರು: ಕಳೆದೊಂದು ವಾರದಿಂದ ಸುಳ್ಯ ಸಿವಿಲ್ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೋಮಶೇಖರ್ ಹಾಗೂ ಯಶವಂತಕುಮಾರ್ ರವರ ಕಾರ್ಯವೈಖರಿ ಗಮನಿಸಿದಾಗ ಸುಳ್ಯದ ಪ್ರತಿಯೊಬ್ಬ ‌ನಾಗರೀಕರ ಮನಸ್ಸಲ್ಲಿ ಬರುವ ಪ್ರಶ್ನೆಯೇ ಇದು..! ಪಾದರಸದಂತೆ ಸಮಸ್ಯೆ ಬಂದಲ್ಲಿಗೆ ತೆರಳಿ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಥಳದಲ್ಲೇ ಸೂಕ್ತ ಪರಿಹಾರ ಒದಗಿಸುತ್ತಾ ಜನಪ್ರತಿನಿಧಿ, ಅಧಿಕಾರ ವರ್ಗದವರು ಮಾಡಬೇಕಾದ ಕೆಲಸವನ್ನು‌ ಮಾಡುತ್ತಾ‌ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗಿದ್ದಾಗ ನಮಗೆ ಅಸಡ್ಡೆ‌ ಹೊಂದಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಯಾಕೆ ಬೇಕು? ಎಂದು ‌ಅಂದುಕೊಳ್ಳುವುದು ಸಹಜ. ಕಳೆದೆ ಸೋಮವಾರ ಪ್ರಾಥಮಿಕ ಶಾಲೆಗಳು

ಸುಳ್ಯ: ಜಡ ಹಿಡಿದ ಆಡಳಿತವರ್ಗಕ್ಕೆ ಬಿಸಿ ಮುಟ್ಟಿಸುತ್ತಿರುವ ನ್ಯಾಯಮೂರ್ತಿಗಳು| ನಮಗೆ ಇವರಿಬ್ಬರೇ ಸಾಕು| ಉಳಿದವರೆಲ್ಲ ಯಾಕೆ ಬೇಕು? Read More »

ರಾಜ್ಯದಲ್ಲಿ ಚುರುಕುಗೊಂಡ‌ ಹಿಂಗಾರು| ಅ.30 ಮತ್ತು 31ರಂದು ಭಾರೀ ಮಳೆ ಸಾಧ್ಯತೆ|

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಅ.30ರಿಂದ ಹಿಂಗಾರು ಮಳೆ ಚುರುಕಾಗಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ದಕ್ಷಿಣ ಒಳನಾಡಿನ ರಾಮನಗರ ಮಂಡ್ಯ, ಮೈಸೂರು ಮತ್ತು ಚಾಮರಾಜನಗರದಲ್ಲಿ ಅ.30, 31ರಂದು ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ಬೆಂಗಳೂರು, ಬೆಂ.ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಅ.31ರಂದು ಯೆಲ್ಲೋ ಅಲರ್ಟ್ ಇರಲಿದೆ. ಉತ್ತರ ಒಳನಾಡಿನಲ್ಲಿ

ರಾಜ್ಯದಲ್ಲಿ ಚುರುಕುಗೊಂಡ‌ ಹಿಂಗಾರು| ಅ.30 ಮತ್ತು 31ರಂದು ಭಾರೀ ಮಳೆ ಸಾಧ್ಯತೆ| Read More »

ಮಣಿಪಾಲ: ಮದ್ಯ ಕುಡಿಸಿ‌ ಯುವತಿಯ ಅತ್ಯಾಚಾರ| ಪ್ರಿಯಕರ ಅರೆಸ್ಟ್

ಉಡುಪಿ: ಇಲ್ಲಿನ ಮಣಿಪಾಲದಲ್ಲಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಅಕ್ಟೋಬರ್ 16 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಗೆ ಆಕೆಯ ಗೆಳೆಯನೇ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಆರ್ಯನ್ ಚಂದಾವನಿ ಬಂಧಿತ ಆರೋಪಿ. ವಿದ್ಯಾರ್ಥಿನಿಯ ಗೆಳೆಯನಾಗಿದ್ದ ಆರ್ಯನ್ ಅ. 16 ರಂದು ಮಧ್ಯಾಹ್ನ ಕರೆ ಮಾಡಿ ಹೋಟೆಲ್ ಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ್ದಾನೆ. ಹೋಟೆಲ್ ನಲ್ಲಿ ಮದ್ಯ ಕುಡಿಸಿ

ಮಣಿಪಾಲ: ಮದ್ಯ ಕುಡಿಸಿ‌ ಯುವತಿಯ ಅತ್ಯಾಚಾರ| ಪ್ರಿಯಕರ ಅರೆಸ್ಟ್ Read More »

ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ: ನಟ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಸಂಜೆ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿನ ವೈದ್ಯರು ರಜನಿಕಾಂತ್ ಅವರನ್ನು ವಿವಿಧ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಇಂದು ಸಂಜೆ 4.30ರ ಸುಮಾರಿಗೆ ಅವರು ಆಸ್ಪತ್ರೆಗೆ ತೆರಳಿದ್ದಾರೆ. ಎಂದಿನಂತೆ ನಿಯಮಿತ ಆರೋಗ್ಯ ತಪಾಸಣೆಗಾಗಿ ಅವರು ಆಸ್ಪತ್ರೆಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ ರಜನಿಕಾಂತ್ Read More »

ಉಪನ್ಯಾಸಕರ ಕೊಠಡಿಯಲ್ಲಿ ಆತ್ಮಹತ್ಯೆಗೈದ ಪ್ರಾಂಶುಪಾಲ

ಛತ್ತೀಸ್ ಗಡ: ಉಪನ್ಯಾಸಕರ ಕೊಠಡಿಯಲ್ಲಿ ಪ್ರಾಂಶುಪಾಲ ನೇಣಿಗೆ ಶರಣಾದ ಆಘಾತಕಾರಿ ಘಟನೆ ಚತ್ತೀಸಗಢದ ಸರ್ಕಾರಿ ಕಾಲೇಜೊಂದರಲ್ಲಿ ನಡೆದಿದೆ. ಅಹಿವಾರದ ಸರ್ಕಾರಿ ನಾಗರಿಕ ಕಲ್ಯಾಣ ಕಾಲೇಜಿನ ಪ್ರಾಂಶುಪಾಲರಾದ ಬಿ.ಪಿ. ನಾಯಕ್​(60) ಉಪನ್ಯಾಸಕರ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ದುರ್ಗ್​ ಹೆಚ್ಚುವರಿ ಎಸ್​ಪಿ ಅನಂತ್​ ಕುಮಾರ್ ಸಾಹು ಹೇಳಿದ್ದಾರೆ. ಸಿಬ್ಬಂದಿ ನೀಡಿರುವ ಮಾಹಿತಿಯ ಪ್ರಕಾರ, ನಾಯಕ್​ ಬೆಳಗ್ಗೆ 9:30ರ ಸುಮಾರಿಗೆ ಕಾಲೇಜಿಗೆ ಆಗಮಿಸಿದ್ದರು. ಸ್ವಲ್ಪ ಹೊತ್ತು ಬಿಟ್ಟು ವಾಚ್​ ಮನ್​ ಗಮನಿಸಿದ ವೇಳೆ ಪ್ರಾಂಶುಪಾಲ ನಾಯಕ್​​ ಉಪನ್ಯಾಸಕರ

ಉಪನ್ಯಾಸಕರ ಕೊಠಡಿಯಲ್ಲಿ ಆತ್ಮಹತ್ಯೆಗೈದ ಪ್ರಾಂಶುಪಾಲ Read More »

ಅಬ್ಬಬ್ಬಾ..! ಒಂದೇ ಹೆರಿಗೆಯಲ್ಲಿ ನಾಲ್ಕು‌ ಹಡೆದ ಮಹಾತಾಯಿ|

ಡಿಜಿಟಲ್ ಡೆಸ್ಕ್ : 27 ವರ್ಷದ ಮಹಿಳೆ ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ವಿಸ್ಮಯಕಾರಿ ಘಟನೆಯು ಹೈದರಾಬಾದ್​​ನಲ್ಲಿ ನಡೆದಿದೆ. ಹೈದರಾಬಾದ್​​​ನ ಹಫೀಜ್​ಬಾಬಾ ನಗರದ ನಿವಾಸಿಯಾದ ಮಹಿಳೆಯು ಒಂದೇ ಬಾರಿಗೆ ಒಂದು ಗಂಡು ಮಗು ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ರೀತಿ ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ 5 ಕೋಟಿ ಮಹಿಳೆಯರಲ್ಲಿ ಒಬ್ಬರು ಜನ್ಮ ನೀಡುತ್ತಾರೆ. ಆದರೆ ಇಂತಹ ಪರಿಸ್ಥಿತಿಗಳಲ್ಲಿ ಹೆರಿಗೆ ಸಾಮಾನ್ಯವಾಗಿ ಅತ್ಯಂತ ಕಠಿಣದಾಯಕವಾಗಿ ಇರುತ್ತದೆ. ಮೀನಾ ಮಲ್ಟಿ ಸ್ಪೆಷಾಲಿಟಿ

ಅಬ್ಬಬ್ಬಾ..! ಒಂದೇ ಹೆರಿಗೆಯಲ್ಲಿ ನಾಲ್ಕು‌ ಹಡೆದ ಮಹಾತಾಯಿ| Read More »

ಕೋವಿಡ್ ಗೆ ಕೊಡಲಿ ಏಟು ಕೊಡಲು ಸಿದ್ದವಾಯ್ತು ಟ್ಯಾಬ್ಲೆಟ್| ಭಾರತದಲ್ಲೇ ತಯಾರಾಗಲು ಈ ಮಾತ್ರೆಯ ಬೆಲೆ ಎಷ್ಟು ಗೊತ್ತಾ..?

ನವದೆಹಲಿ: ಕೋವಿಡ್‌-_19ರ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಮಾತ್ರೆ ಭಾರತದಲ್ಲೂ ಉತ್ಪಾದನೆಯಾಗುವ ಸಾಧ್ಯತೆ ಇದೆ. ಅಮೆರಿಕ ಮೂಲದ ಮೆರ್ಕ್ ಆ್ಯಂಡ್ ಕೋ ಅಭಿವೃದ್ಧಿಪಡಿಸಿರುವ ಮೋಲ್ನುಪಿರಾವಿರ್‌ ಗುಳಿಗೆಯನ್ನು ಭಾರತದಲ್ಲೂ ಉತ್ಪಾದಿಸಲು ಅನುಮತಿ ಕೋರಿ ಹೈದ್ರಾಬಾದ್‌ ಮೂಲದ ಆಪ್ಟಿಮಸ್‌ ಫಾರ್ಮಾ, ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ‘ಭಾರತದಲ್ಲಿ ಗುಳಿಗೆಯ ತುರ್ತು ಬಳಕೆಗೆ ಒಂದೊಮ್ಮೆ ಅನುಮೋದನೆ ದೊರೆತರೆ ಕಂಪನಿಯು ತಿಂಗಳಲ್ಲಿ 8 ಕೋಟಿ ಗುಳಿಗೆಗಳನ್ನು ಉತ್ಪಾದಿಸಲಿದೆ. ಪ್ರತಿ ಗುಳಿಗೆಗೆ ಅಂದಾಜು 30 ರೂ.ದರ ಇರಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌

ಕೋವಿಡ್ ಗೆ ಕೊಡಲಿ ಏಟು ಕೊಡಲು ಸಿದ್ದವಾಯ್ತು ಟ್ಯಾಬ್ಲೆಟ್| ಭಾರತದಲ್ಲೇ ತಯಾರಾಗಲು ಈ ಮಾತ್ರೆಯ ಬೆಲೆ ಎಷ್ಟು ಗೊತ್ತಾ..? Read More »