‘ಭಾರತ ಹಲವು ಭಾಷೆಗಳ ರಂಗೋಲಿ’ – ಬಿಳಿಮಲೆ

ಸಮಗ್ರ ನ್ಯೂಸ್: ‘ಹಲವು ಭಾಷೆಗಳ ಸಂಗಮವಾಗಿರುವ ಭಾರತವು ಭಾಷೆಗಳ ರಂಗೋಲಿ. ಆದರೆ, ದೇಶದಲ್ಲಿ ಕೆಲವು ಭಾಷೆಗಳು ನಶಿಸಿ ಹೋಗುತ್ತಿವೆ. ಅದಕ್ಕೆ ನಾವು ಸಾಕ್ಷಿಯಾಗುತ್ತಿವೆ. ಬಹುಭಾಷಾ ಕವಿಗೋಷ್ಠಿಗಳು ಭಾಷೆ ಉಳಿವಿಗೆ ಸಹಕಾರಿಯಾಗಲಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

Ad Widget ... ..

ಮಂಗಳೂರು ದಸರಾ ಪ್ರಯುಕ್ತ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರದಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳವಾರ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Ad Widget

ಮನೋಜ್ ಕುಮಾರ್ ಶಿಬಾರ್ಲ (ಕನ್ನಡ), ಗೀತಾ ಲಕ್ಷ್ಮೀಶ ಶೆಟ್ಟಿ (ತುಳು), ಜೊಸ್ಸಿ ಪಿಂಟೊ ಕಿನ್ನಿಗೋಳಿ ಮತ್ತು ವೆಂಕಟೇಶ್ ನಾಯಕ್ (ಕೊಂಕಣಿ), ಹಂಝ ಮಲಾರ್ (ಬ್ಯಾರಿ), ಬಿ.ಮುರಾರಿ ತಂತ್ರಿ (ಸಂಸ್ಕೃತ), ವಿನೋದ್ ಮೂಡಗದ್ದೆ (ಅರೆಭಾಷೆ), ಬಾಬು ಕೊರಗ ಪಾಂಗಾಳ (ಕೊರಗಭಾಷೆ), ಡಾ. ಅಣ್ಣಯ್ಯ ಕುಲಾಲ (ಕುಂದಗನ್ನಡ), ಕವಿತಾ ಅಡೂರು (ಶಿವಳ್ಳಿ ತುಳು), ಸುರೇಶ್ ನೆಗಳಗುಳಿ (ಹವ್ಯಕ) ಕವನ ವಾಚಿಸಿದರು.

ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಉಪಸ್ಥಿತರಿದ್ದರು. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ಸ್ವಾಗತಿಸಿದರು. ಉಪನ್ಯಾಸಕ ಕರುಣಾಕರ ಬಳ್ಕೂರು ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *