ಕಡಬ: ಅನಾರೋಗ್ಯದಿಂದ ಹೂವಿನ ವ್ಯಾಪಾರಿ ಸಾವು

ಸಮಗ್ರ ನ್ಯೂಸ್ : ಇಲ್ಲಿನ ದುರ್ಗಾಂಬಿಕ ದೇವಸ್ಥಾನದ ಸಮೀಪ ವ್ಯಕ್ತಿಯೋರ್ವರು ಹಲವು ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

Ad Widget ... ..

ಮೃತರು ಕಡಬದ ಹೊಯ್ಗೆಕೆರೆ ನಿವಾಸಿ ರಮೇಶ್ ಶೆಟ್ಟಿ ಹಲವು ಸಮಯಗಳಿಂದ ಮಾರಕ ಕಾಯಿಲೆಗೆ ತುತ್ತಾಗಿದ್ದ ಇವರು ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಮಾ.14 ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.

Ad Widget

ಇತ್ತೀಚೆಗೆ ಉತ್ಸಾಹಿ ಯುವಕರ ಕಾರುಣ್ಯ ಸೇವಾ ಬಳಗ , ಬದುಕು ಕಟ್ಟೋಣ ತಂಡ ಸೇರಿದಂತೆ ಹಲವು ಸಾಮಾಜಿಕ ಸಂಘಟನೆಗಳು ಆರ್ಥಿಕ ನೆರವು ನೀಡಿದ್ದವು.

Leave a Comment

Your email address will not be published. Required fields are marked *