ಸುಬ್ರಹ್ಮಣ್ಯ:ಅಸ್ವಸ್ಥ ಅಪರಿಚಿತ ವ್ಯಕ್ತಿ ಮೃತ್ಯು; ವಾರಿಸುದಾರರ ಪತ್ತೆಗೆ ಮನವಿ

ಸಮಗ್ರ ನ್ಯೂಸ್: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಮೃತರ ವಾರಿಸುದಾರರು ಇದ್ದಲ್ಲಿ ಸಂಪರ್ಕಿಸುವಂತೆ ಕಡಬ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget ... ..

ಡಿ.21ರಂದು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ರೈಲ್ವೇ ಸ್ಟೇಷನ್ ಬಳಿ ಅಪರಿಚಿತ ವ್ಯಕ್ತಿ ಅಸ್ವಸ್ಥನಾಗಿ ಬಿದ್ದುಕೊಂಡಿದ್ದು, ಆ ವ್ಯಕ್ತಿಯನ್ನು 108 ಆಂಬ್ಯುಲೆನ್ಸ್ ವಾಹನದಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.22ರಂದು ಬೆಳಗ್ಗೆ ಆ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತರಾಗಿದ್ದು,ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget


ಸುಮಾರು ಅಂದಾಜು 30-35 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ 7 ಪೀಟ್ ಎತ್ತರ, ಕೋಲು ಮುಖ, ಗೋದಿ ಮೈ ಬಣ್ಣ, ಸಾಧರಣ ಶರೀರ, ಕಪ್ಪು ಬಿಳಿ ಮಿಶ್ತಿತ ತಲೆ ಕೂದಲು, ಗಡ್ಡ ಬಿಟ್ಟಿದ್ದು, ಎಡ ಕೈ ಹೆಬ್ಬೆಟ್ಟು ಮತ್ತು ತೋರು ಬೆರಳಿನ ಮಧ್ಯೆಯಲ್ಲಿ A ಎಂದು ಟ್ಯಾಟು ಹಾಕಿರುವುದು ಕಂಡು ಬರುತ್ತದೆ. ಎಡಕೆನ್ನೆಯ ಮೇಲೆ ಎಳ್ಳು ಮಚ್ಚೆ ಗುರುತು ಇರುತ್ತದೆ. ಸಿಮೆಂಟ್ ಬಣ್ಣದ ಟೀ ಶರ್ಟ್, ಟೀ ಶರ್ಟ್ ಮೇಲೆ FREEDOM IS NOT GIVER ಎಂದು ಬರೆದಿರುತ್ತದೆ ಹಾಗೂ ನೀಲಿ ಬಣ್ಣದ ಬರ್ಮುಡ ಚಡ್ಡಿ ಧರಿಸಿರುತ್ತಾರೆ. ಈ ಚಹರೆಯುಳ್ಳ ಗಂಡಸಿನ ಶವವು ಪುತ್ತೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ಶವದ ಗುರುತು ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಡಬ ಪೊಲೀಸು ಠಾಣೆಯನ್ನು ಸಮಪರ್ಕಿಸಲು ತಿಳಿಸಲಾಗಿದೆ.

Leave a Comment

Your email address will not be published. Required fields are marked *