ಯುವಕರಿಗೆ ಸ್ಪೂರ್ತಿ ತುಂಬಲು ಎಸ್. ಸೋಮನಾಥ್ ಆತ್ಮಚರಿತ್ರೆ/ ಇಸ್ರೋ ಅಧ್ಯಕ್ಷರ ಬದುಕಿನ ಚರಿತ್ರೆ ನವೆಂಬರ್‍ನಲ್ಲಿ ಲೋಕಾರ್ಪಣೆ

ಸಮಗ್ರ ನ್ಯೂಸ್: ಚಂದ್ರಯಾನ – 3 ಮತ್ತು ಆದಿತ್ಯ ಎಲ್ 1 ನ ಐತಿಹಾಸಿಕ ಸಾಧನೆಗಳ ನಂತರ ಇದೀಗ ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಬರಹದ ಸಾಧನೆಯನ್ನು ಮಾಡಿದ್ದು, ತಮ್ಮ ಆತ್ಮಚರಿತ್ರೆಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದ್ದಾರೆ. ಪುಸ್ತಕವು ಮಲಯಾಳಂ ಭಾಷೆಯಲ್ಲಿ ತಯಾಗುತ್ತಿದ್ದು, “ನಿಲುವು ಕುಡಿಚ್ಚ ಸಿಂಹಗಳ್” (ಚಂದ್ರನ ಬೆಳಕನ್ನು ಸೇವಿಸಿದ ಸಿಂಹಗಳು) ಎಂಬ ಹೆಸರಿನಲ್ಲಿ ಹೊರಬರುತ್ತಿದೆ. ಕೇರಳದ ಲಿಬಿ ಪಬ್ಲಿಕೇಶನ್ಸ್ ಈ ಪುಸ್ತಕವನ್ನು ಹೊರತರುತ್ತಿದೆ.

Ad Widget ... ..

ಎಸ್. ಸೋಮನಾಥ್ ಅವರ ಬಾಲ್ಯ ಮತ್ತು ವಿದ್ಯಾರ್ಥಿ ಜೀವನದ ಘಟನೆಗಳನ್ನು ಈ ಪುಸ್ತಕ ತೆರೆದಿಡಲಿದ್ದು, ಜೀವನದಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಮತ್ತು ಭಾರತದಲ್ಲಿ ಅವರಿಗೆ ದೊರೆತ ಅವಕಾಶಗಳು ಯುವಕರಿಗೆ ಪ್ರೇರಣೆಯನ್ನು ನೀಡಲಿವೆ.

Ad Widget

Leave a Comment

Your email address will not be published. Required fields are marked *