ಕಾವೇರಿ ವಿವಾದ| ಜೆಡಿಎಸ್ ಬಿಜೆಪಿ ಒಟ್ಟಾಗಿ ಇರ್ತೇವೆ: ಬಿಎಸ್ ವೈ

ಸಮಗ್ರ ನ್ಯೂಸ್: ಕಾವೇರಿ ವಿವಾದ ನಾಡಿನಾದ್ಯಂತ ಉಗ್ರ ಹೋರಾಟಕ್ಕೆ ರೂಪತಾಳಿದ್ದು, ಎಲ್ಲೆಡೆ ಬಂದ್ ನದ್ದೆ ಸುದ್ದಿಯಾಗಿದೆ, ನಾಳೆ ಬೆಂಗಳೂರು ಹಾಗೂ ಸೆ.29 ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.

Ad Widget ... ..

ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಸಭೆಯಲ್ಲಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ ಇನ್ನು ಒಂದೇ ಒಂದು ಹನಿ ಸರ್ಕಾರ ನೀರು ಬಿಟ್ಟರೂ ಹೋರಾಟ ತೀವ್ರ ಆಗಲಿದೆ. ಇನ್ಮುಂದೆ ನೀರು ಬಿಟ್ರೆ ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ಕಾರಣ ಆಗಲಿದೆ. ನಮ್ಮ ಹೋರಾಟಕ್ಕೆ ಜೆಡಿಎಸ್ ನಾಯಕರೂ ಕೈಜೋಡಿಸುವಂತೆ ಮನವಿ ಮಾಡ್ತೇನೆ, ಜೆಡಿಎಸ್ ಬಿಜೆಪಿ ಎಲ್ರೂ ಒಟ್ಟಾಗಿ ಇರ್ತೇವೆ. ಗಾಂಧಿ ಪ್ರತಿಮೆ ಎದುರು ಶಾಸಕರು, ಪರಿಷತ್ ಸದಸ್ಯರಿಂದ ಸತ್ಯಾಗ್ರಹ ಮಾಡುತ್ತೇವೆ ಎಂದು ಸರ್ಕಾರಕ್ಕೆ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

Ad Widget

Leave a Comment

Your email address will not be published. Required fields are marked *