ಸಾಹಿತಿ ಎಚ್.ಭೀಮರಾವ್ ವಾಷ್ಠರ್ ರವರ ಸೌಹಾರ್ದ ಸಂಗಮ ಆಡೀಯೋ ಮ್ಯೂಸಿಕ್ ಆಲ್ಬಮ್ ಬಿಡುಗಡೆ

ಸಮಗ್ರ ನ್ಯೂಸ್:ಕರ್ನಾಟಕ ರಾಜ್ಯ ಭಾವೈಕ್ಯತೆ ಪರಿಷತ್ ದಕ್ಷಿಣ ಕನ್ನಡ ರವರು ಮಂಗಳೂರಿನ ಜೆಪ್ಪು ಮರಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಭಾವೈಕ್ಯತಾ ಕವಿ ಸಮ್ಮಿಲನ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ಸಮಾರಂಭದಲ್ಲಿ ಸುಳ್ಯದ ಸಾಹಿತಿ,ಜ್ಯೋತಿಷಿ,ಸಂಘಟಕ ಮತ್ತು ಚಿತ್ರ ನಿರ್ದೇಶಕರಾದ ಎಚ್.ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿರುವ ಸೌಹಾರ್ದ ಸಂಗಮ ಆಡೀಯೋ ಮ್ಯೂಸಿಕ್ ಆಲ್ಬಮ್ ನ್ನು ಸಮಾರಂಭದ ವೇದಿಕೆಯಲ್ಲಿ ವೃತ್ತಿಯಲ್ಲಿ ವೈದ್ಯರು,ಸಾಹಿತಿಗಳೂ ಆದ ಡಾ. ಸುರೇಶ್ ನೇಗಿಲಗುಳಿ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು.

Ad Widget ... ..

ಸಮಾರಂಭದ ವೇದಿಕೆಯಲ್ಲಿ ಅಧ್ಯಕ್ಷ ಇಕ್ಬಾಲ್ ಬಾಳಿಲ,ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಚ್ .ಭೀಮರಾವ್ ವಾಷ್ಠರ್ ಸುಳ್ಯ,ಸಂಸ್ಥೆಯ ಉಪಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ ವಿಟ್ಲ , ಸಂಚಾಲಕರಾದ ಕೆ ಎ ಅಬ್ದುಲ್ ಅಝೀಝ್ ಪುಣಚ,ಎ ಬಿ ಎಮ್ ಕಳಂಜ,ಡಾ. ಮ್ಯಾಕ್ಸಿಮ್ ಡಿಸೋಜಾ,ಇಕ್ಬಾಲ್ ಕೊಲ್ಪೆ, ಲತೀಫ್ ಗುರುಪುರ,ಮಹಮ್ಮದ್ ಹಾಜಿ ಪರಪ್ಪು ಇನ್ನಿತರರು ಉಪಸ್ಥಿತರಿದ್ದರು .

Ad Widget

Leave a Comment

Your email address will not be published. Required fields are marked *