ಕೊಟ್ಟಿಗೆಹಾರ: ಗೋಣಿಬೀಡು ವಿ.ಎಚ್.ಪಿ ಹಾಗೂ ಬಜರಂಗದಳ ವತಿಯಿಂದ ಸ್ವಚ್ಚತಾ ಕಾರ್ಯ

ಸಮಗ್ರ ನ್ಯೂಸ್: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಗೋಣಿಬೀಡುವಿನಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು. ಜನ್ನಾಪುರದ ಗೋಣಿಬೀಡು ಭಾಗದಲ್ಲಿ ಮಳೆಯ ಪರಿಣಾಮ ರಸ್ತೆಯ ಬದಿಯಲ್ಲಿ ರಾಶಿಗಟ್ಟಲೆ ಮಣ್ಣು ಮರಳು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಅದನ್ನು ಬುಧವಾರ ರಾತ್ರಿ ಸಂಪೂರ್ಣ ತೆರವುಗೊಳಿಸಿ ವಾಹನ ಸವಾರರಿಗೆ ಅಡಚಣೆಯಾಗದಂತೆ ವ್ಯವಸ್ಥೆ ಮಾಡಲಾಯಿತು. ಗೋಣಿಬೀಡಿನ ಬಸ್ ನಿಲ್ದಾಣವನ್ನು ಕೂಡ ತೊಳೆದು ಸ್ವಚ್ಚಗೊಳಿಸಲಾಯಿತು.

Ad Widget ... ..

ಈ ಸಂದರ್ಭದಲ್ಲಿ ವಿಎಚ್ ಪಿ ಬಜರಂಗದಳದ ಸಹ ಸಂಯೋಜಕರಾದ ಅಭಿ ಆರ್ ಗೌಡ,ಗೋರಕ್ಷಾ ಪ್ರಮುಖ್ ನವೀನ್ ಜನ್ನಾಪುರ,ನಗರ ಸಹ ಸಂಚಾಲಕ ರಾಜು,ಬಜರಂಗದಳದ ಕಾರ್ಯಕರ್ತರಾದ ಪ್ರೀತಮ್, ಪ್ರಜ್ವಲ್, ಅಭಿಜಿತ್, ಪವನ್, ಅಭಿಷೇಕ್, ಸುಜಯ್, ಮನೋಜ್, ಗೋಣಿ ಬೀಡು ಜೆಡಿಎಸ್ ಘಟಕದ ಅಧ್ಯಕ್ಷ ಪ್ರಹ್ಲಾದ್, ಆಟೋ ಚಾಲಕರಾದ ಸುದೀಪ್, ಅಣ್ಣಪ್ಪ, ಕೀರ್ತಿ ಪ್ರಸಾದ್, ಆರ್.ಜೆ.ಮೆಡಿಕಲ್ ನ ಪ್ರೀತಮ್, ಪ್ರಸನ್ನ, ಚಿನ್ನಿಗ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು

Ad Widget

Leave a Comment

Your email address will not be published. Required fields are marked *