ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು, ಬೆಳ್ಳಾರೆ ವಲಯದ ದೇವರಕಾನ ಒಕ್ಕೂಟದಲ್ಲಿ ನೂತನವಾಗಿ ಶ್ರೀಮಾತಾ ಸ್ವಸಹಾಯ ಸಂಘವು ಜು.7ರಂದು ಉದ್ಘಾಟನೆಗೊಂಡಿತು.
ಪ್ರಬಂಧಕರಾಗಿ ಅಜೇಯಕೃಷ್ಣ. ಕೆ, ಸಂಯೋಜಕರಾಗಿ ದೀಕ್ಷಿತ್. ಎಂ, ಕೋಶಾಧಿಕಾರಿಯಾಗಿ ವಿನೋದ್.ಕೆ ಯವರು ಆಯ್ಕೆಗೊಂಡರು.ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣರವರು ಯೋಜನೆಯ, ಹಾಗೂ ಸಂಘದ ನಿರ್ವಹಣೆ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಸಂಘದ ದಾಖಲಾತಿಯನ್ನು ಪ್ರಗತಿಪರ ಕೃಷಿಕರಾದ ಬಾಲಕೃಷ್ಣರವರು ಸಂಘದ ದಾಖಲಾತಿಯನ್ನು ಸಂಘಕ್ಕೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಸೇವಾಪ್ರತಿನಿಧಿಯಾದ ಶ್ರೀಮತಿ ಯಶೋಧ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.






