ಕಾಗವಾಡ: ಹಿಟ್ ಆ್ಯಂಡ್ ರನ್; ವೃದ್ದ ಬಲಿ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಂಬರಗಿ ಗ್ರಾಮದ ಹೊರವಲಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವೃದ್ಧನೋರ್ವ ಸಾವನ್ನಪ್ಪಿದ್ದಾನೆ. ಸಂಬರಗಿ ಗ್ರಾಮದ ನಿವಾಸಿ ಅಪ್ಪಣ ಸಿದ್ದರಾಯ ಕೊಳ್ಳಿ ಮೃತ ದುರ್ದೈವಿ.

Ad Widget ... ..

ಈತ ಮನೆಯಿಂದ ಸಂಬಂದಿಕರ ಮನೆಗೆ ತೆರಳುವಾಗ ರಸ್ತೆಯ ಮಧ್ಯೆ ‌ ಅಪರಿಚಿತರ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭಿರ ಗಾಯಗೊಂಡಿದ್ದು
ರಸ್ತೆಯಿಂದ ೨೦೦ ಅಡಿಯ ಅಂತರದಲ್ಲಿರುವ ಗುಂಡಿಯೊಂದಕ್ಕೆ ತಳ್ಳಿ ಅತನನ್ನು ಮರಣಪಡಿಸಿ ತನ್ನ ವಾಹನ ತೆಗೆದು ಕೊಂಡು ತೇರಳಿದ್ದಾನೆ ಎಂದು ಹೇಳಲಾಗುತ್ತಿದೆ. ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ

Ad Widget

Leave a Comment

Your email address will not be published. Required fields are marked *