ಬಟ್ಟೆ ಎಕ್ಸಚೇಂಜ್ ಮಾಡದಕ್ಕೆ ಅಂಗಡಿ ಮಾಲೀಕನ ವಿರುದ್ಧ ದೂರು ದಾಖಲು

Samagra news: ರಂಜಾನ್ ಹಬ್ಬಕ್ಕೆ ಮುಸ್ಲೀಂ ಸಮುದಾಯ ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಯು ಜೋರಾಗಿದೆ. ಇದರ ನಡುವೆ ಇಲ್ಲೊಂದು ಕುಟುಂಬ ಬಟ್ಟೆ ಅಂಗಡಿಯ ಮಾಲೀಕ ಮತ್ತು ಇಬ್ಬರ ಕೆಲಸಗಾರರ ವಿರುದ್ಧ ದೂರು ದಾಖಲಿಸಿದೆ.

Ad Widget ... ..

ಆರ್ ಎಂ ಎಲ್ ನಗರದ ನಿವಾಸಿ ಅಬ್ದುಲ್ ಖಾದರ್ ಎಂಬುವರ ಸೊಸೆ ಹಬ್ಬದ ಪ್ರಯುಕ್ತ ಗಾಂಧಿ ಬಜಾರ್ ನ ಬಟ್ಟೆ ಅಂಗಡಿಗೆ ತೆರಳಿ 2500 ರೂ. ಮೌಲ್ಯದ ಬಟ್ಟೆ ಖರೀದಿಸಿದ್ದಾರೆ.

Ad Widget

ಆದರೆ ಈ ಬಟ್ಟೆಯ ಸೈಜ್ ಹೆಚ್ಚು ಕಡಿಮೆಯಿದ್ದ ಕಾರಣ ಮರುದಿನ ಅಬ್ದುಲ್ ಖಾದರ್ ಮರುದಿನ ಸೊಸೆ ಜೊತೆ ಅಂಗಡಿಗೆ ತೆರಳಿ ಬಟ್ಟೆ ಎಕ್ಸಜೇಂಜ್ ಮಾಡಿಕೊಡಿ ಎಂದು ಕೇಳುತ್ತಾರೆ. ಆದರೆ ಅಂಗಡಿಯ ಮಾಲೀಕ ಎಕ್ಸಚೇಂಜ್ ಗೆ ನಿರಾಕರಿಸುತ್ತಾರೆ.

ಖಾದರ್ ಎಷ್ಟು ಜೋರು ಮಾಡಿ ಕೇಳಿದರೂ ಬಗ್ಗದ ಅಂಗಡಿ ಮಾಲೀಕ ಮತ್ತು ಆತನ ಇಬ್ವರು ಕೆಲಸಗಾರರು ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಆತನ ಇಬ್ಬರು ಕೆಲಸಗಾರರು ಆತನ ದಾರಿಯನ್ನ ಅಡ್ಡಕಟ್ಟಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *