ಸಮಗ್ರ ನ್ಯೂಸ್: ಬೆಂಕಿ ತಗುಲಿ ರೇಡಿಯೇಟರ್ ಸರ್ವಿಸ್ ಅಂಗಡಿ
ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ನಗರದ ಐಜಿ ರಸ್ತೆಯಲ್ಲಿ ನಡೆದಿದೆ.
ಇದು ಲುಕ್ಮನ್ ಎಂಬುವರಿಗೆ ಸೇರಿದ ಅಂಗಡಿಯಾಗಿದೆ. ಇವರು ರೇಡಿಯೇಟರ್ ಸರ್ವಿಸ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.







