ಕಾರ್ಯಕರ್ತರ ಆಕ್ರೋಶಕ್ಕೆ ಬೆದರಿದ ಡಿ.ವಿ ಗೌಡ್ರು| ಇಂದು ಪ್ರವೀಣ್ ಮನೆಗೆ ಭೇಟಿ

ಸಮಗ್ರ ನ್ಯೂಸ್: ಕಾರ್ಯಕರ್ತರ ಆಕ್ರೋಶ ಮತ್ತು ತವರಿನಲ್ಲಿ ಟೀಕೆಗಳು ‌ವ್ಯಕ್ತವಾದ ಬೆನ್ನಲ್ಲೇ‌ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಸದಾನಂದ ಗೌಡ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಮನೆಗೆ (ಜು.೩೦)ರಂದು ದೌಡಾಯಿಸುತ್ತಿದ್ದಾರೆ.

Ad Widget ... ..

ಮಧ್ಯಾಹ್ನ ಪ್ರವೀಣ್ ಮನೆಗೆ ತಲುಪುವ ಕುರಿತಂತೆ ತಮ್ಮ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರವೀಣ್ ಹತ್ಯೆಗೀಡಾಗಿದ್ದ ವಿಷಯ ಗೊತ್ತಾಗಿದ್ದರೂ ಪ್ರವೀಣ್ ಮನೆಗೆ ಭೇಟಿ ಕೊಡದ ಸದಾನಂದ ಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Ad Widget

Leave a Comment

Your email address will not be published. Required fields are marked *