ರಾಜ್ಯ

ಶವ ಹೊತ್ತ ಅಂಬ್ಯುಲೆನ್ಸ್ ಚಲಾಯಿಸಿದ ರೇಣುಕಾಚಾರ್ಯ | ಕ್ಷೇತ್ರದ ಸೋಂಕಿತರ ಸೇವೆಗೆ ಸ್ವತಃ ಫೀಲ್ಡಿಗಿಳಿದ ಬಿಜೆಪಿ ಶಾಸಕ

ದಾವಣಗೆರೆ: ರಾಜ್ಯದ ಹೆಚ್ಚಿನ ಶಾಸಕರು ಮತ್ತು ಸಂಸದರುಗಳು ಇಂತಹ ಕಠಿಣ ತುರ್ತು ಪರಿಸ್ಥಿತಿಯಲ್ಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ಬ್ಯುಸಿಯಾಗಿರುವ ಈ ಸಂದರ್ಭದಲ್ಲಿ , ತಮ್ಮ ಕ್ಷೇತ್ರದ ಜನರ ಸೇವೆಗೆ ನಿಂತಿರುವ ಕೆಲವೇ ಕೆಲವು ಶಾಸಕ, ಸಂಸದರಲ್ಲಿ ರೇಣುಕಾಚಾರ್ಯ ಒಬ್ಬರು. ಹೌದು, ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರವ ಎಂ.ಪಿ. ರೇಣುಕಾಚಾರ್ಯ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಪ್ರಸ್ತುತ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದರೂ, ಅವರು ಬೆಂಗಳೂರಿನಲ್ಲಿ ಕಾಲ ಕಳೆಯದೆ ತನ್ನ ಸ್ವ ಕ್ಷೇತ್ರದ ಕೊರೋನಾ ಸೋಂಕಿತರ ಸೇವೆಯಲ್ಲಿ […]

ಶವ ಹೊತ್ತ ಅಂಬ್ಯುಲೆನ್ಸ್ ಚಲಾಯಿಸಿದ ರೇಣುಕಾಚಾರ್ಯ | ಕ್ಷೇತ್ರದ ಸೋಂಕಿತರ ಸೇವೆಗೆ ಸ್ವತಃ ಫೀಲ್ಡಿಗಿಳಿದ ಬಿಜೆಪಿ ಶಾಸಕ Read More »

ಅಂತೂ ಇಂತೂ ಕರಾವಳಿ ಜನತೆಗೆ ಕೆಂಪು ಕುಚ್ಚಲಕ್ಕಿ ಭಾಗ್ಯ | ಸ್ಪಷ್ಟನೆ ನೀಡಿದ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ

ಬೆಂಗಳೂರು: ಕರಾವಳಿಯ ಜನತೆಗೆ ಮುಂದಿನ ನವೆಂಬರ್ ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಕೆಂಪು ಕುಚ್ಚಲಕ್ಕಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಕರಾವಳಿ ಜನರ ಬೇಡಿಕೆಯಾಗಿದ್ದ ನ್ಯಾಯಬೆಲೆ ಅಂಗಡಿಗಳಲ್ಲಿ ಕುಚ್ಚಲಕ್ಕಿ ವಿತರಣೆ ಬಗ್ಗೆ ಸರ್ಕಾರದ ಬೆನ್ನುಹತ್ತಿದ್ದ ಸಚಿವರು, ಈ ಬಗ್ಗೆ ಆಹಾರ ಸಚಿವರಲ್ಲಿ ಚರ್ಚಿಸಿ ಮುಂದಿನ ನವಂಬರ್ ತಿಂಗಳಿನಿಂದ, ಕರಾವಳಿಯ ಜನತೆ ನಿತ್ಯ ಸೇವಿಸುವ ಕೆಂಪು ಕುಚ್ಚುಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ದಕ್ಷ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ

ಅಂತೂ ಇಂತೂ ಕರಾವಳಿ ಜನತೆಗೆ ಕೆಂಪು ಕುಚ್ಚಲಕ್ಕಿ ಭಾಗ್ಯ | ಸ್ಪಷ್ಟನೆ ನೀಡಿದ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ Read More »

ವೈದ್ಯನ ನರಳಾಟ ನೋಡಿಯೂ‌ ಕಾಲ್ಕಿತ್ತ‌ ಬಿಜೆಪಿ ಶಾಸಕ | ಇವರೇನಾ ಜನಪ್ರತಿನಿಧಿಗಳು?

ಚಿಕ್ಕಮಗಳೂರು.: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ವೈದ್ಯರನ್ನು ನೋಡಿಯೂ ನೋಡದಂತೆ ತೆರಳಿದ್ದ ಬಿಜೆಪಿ ಶಾಸಕರೋರ್ವರ ನಡೆಯಿಂದಾಗಿ ವೈದ್ಯ ಕೊನೆಯುಸಿರೆಳೆದ ಘಟನೆ ಇಲ್ಲಿನ ಲಕ್ಕವಳ್ಳಿ ಎಂಬಲ್ಲಿ ನಡೆದಿದೆ.ಮಧ್ಯಾಹ್ನ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರಮೇಶ್ ಎಂಬವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದಾರಿ ಮದ್ಯೆ ಅವರ ವಾಹನ ಅಪಘಾತಕ್ಕೆ ಈಡಾಗಿದೆ. ಅಪಘಾತದ ರಭಸಕ್ಕೆ ವೈದ್ಯ ರಮೇಶ್ ರಸ್ತೆಗುರುಳಿದ್ದು, ಅದೇ ವೇಳೆಗೆ ಸ್ಥಳೀಯ ಶಾಸಕ ಡಿ.ಎಸ್. ಸುರೇಶ್ ಕಾರಲ್ಲಿ ಆಗಮಿಸಿದ್ದು, ವೈದ್ಯರ ಸ್ಥಿತಿ ನೋಡಿಯೂ ನೋಡದಂತೆ ತೆರಳಿದ್ದರು.

ವೈದ್ಯನ ನರಳಾಟ ನೋಡಿಯೂ‌ ಕಾಲ್ಕಿತ್ತ‌ ಬಿಜೆಪಿ ಶಾಸಕ | ಇವರೇನಾ ಜನಪ್ರತಿನಿಧಿಗಳು? Read More »

ಸಚಿವರಿಗೆ ಪಿಡಿಒ ಕಾನೂನು ಪಾಠ: ಬುದ್ದಿಮಾತು ಹೇಳಿ ಓದಾರ್ಯ ಮೆರೆದ ಕೋಟ ವೈರಲ್ ಆದ ಸಂಭಾಷಣೆಯ ಆಡಿಯೋ ಇಲ್ಲಿದೆ

ಸಚಿವರೆಂದರೆ ಸಾಮಾನ್ಯವಾಗಿ ಅಧಿಕಾರಿ ವರ್ಗದವರು ಮಾತನಾಡಲೂ ಭಯಪಡುತ್ತಾರೆ. ಆದರೆ ಇಲ್ಲೊಬ್ಬ ಪಿಡಿಒ ಉಸ್ತುವಾರಿ ಸಚಿವರನ್ನು ಪ್ರಶ್ನಿಸುವುದಲ್ಲದೆ ಸಚಿವರಿಗೇ ಕಾನೂನು ಪಾಠ ಮಾಡಿದ ಘಟನೆ ‌ನಡೆದಿದೆ. ಪಿಡಿಒ ರಿಂದ‌ ಪಾಠ ಹೇಳಿಸಿಕೊಂಡ ಸಚಿವರು ಬುದ್ದಿಮಾತು ಹೇಳಿ ಕಳಿಸಿದ ಸ್ವಾರಸ್ಯ ಸಂಗತಿಯೊಂದು‌ ಬೆಳಕಿಗೆ ಬಂದಿದೆ.ದ.ಕ ಜಿಲ್ಲೆಯ ಕಂದಾವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಶವಂತರವರು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಫೋನ್‌ ಮಾಡಿ ಕೋವಿಡ್ ಕಿಟ್ ವಿತರಣೆ ವಿಚಾರದಲ್ಲಿ ಚರ್ಚೆ ಮಾಡಿದ್ದಲ್ಲದೇ, ವಾಗ್ವಾದ ನಡೆಸಿದ ಆಡಿಯೋ ವೈರಲ್ ಆಗಿದೆ.

ಸಚಿವರಿಗೆ ಪಿಡಿಒ ಕಾನೂನು ಪಾಠ: ಬುದ್ದಿಮಾತು ಹೇಳಿ ಓದಾರ್ಯ ಮೆರೆದ ಕೋಟ ವೈರಲ್ ಆದ ಸಂಭಾಷಣೆಯ ಆಡಿಯೋ ಇಲ್ಲಿದೆ Read More »

ರಾಜಕೀಯ ಸಮಾಚಾರ : ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು| ಯಡಿಯೂರಪ್ಪ ಪದಚ್ಯುತಿಗೆ ತೀವ್ರಗೊಂಡ ಪ್ರಯತ್ನ..!

ಬೆಂಗಳೂರು. ಮೇ.26: ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದ್ದು, ಸಿಎಂ ಬದಲಾವಣೆಗೆ ಕೆಲವು ನಾಯಕರು ಟೊಂಕಕಟ್ಟಿ‌ ನಿಂತಿದ್ದಾರೆ. ದೆಹಲಿ ಮಟ್ಟದಲ್ಲೂ ಚಿತಾವಣೆ ನಡೆಸಿದ್ದು, ಹೈಕಮಾಂಡ್ ಈ ಬಾರಿ ನಾಯಕತ್ವ ಬದಲಾವಣೆ ಮಾಡುತ್ತಾ? ರಾಜ್ಯ ನಾಯಕರ ಒತ್ತಡಕ್ಕೆ ಮಣಿಯುತ್ತಾ? ಈ ಕುರಿತು ಮುಂದೆ ಓದಿ… ಕಳೆದ ಆರೇಳು ತಿಂಗಳಿಂದಲೂ ಯಡಿಯೂರಪ್ಪನವರನ್ನ ಕೆಳಗಿಳಿಸೋ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಲೇ ಇವೆ.ಆದ್ರೆ ಕೋವಿಡ್ ನ ಕಾರಣದಿಂದ ಯಾವ ಪ್ರಯತ್ನಗಳೂ ಕೈಗೂಡುತ್ತಿಲ್ಲ. ಈ ಹಿಂದೆ ರಾಷ್ಟ್ರೀಯ ನಾಯಕರು ಸಿಎಂ ಬದಲಾವಣೆಗೆ ಮನಸ್ಸು

ರಾಜಕೀಯ ಸಮಾಚಾರ : ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು| ಯಡಿಯೂರಪ್ಪ ಪದಚ್ಯುತಿಗೆ ತೀವ್ರಗೊಂಡ ಪ್ರಯತ್ನ..! Read More »

ಅಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ: ಮೇ.27ರಿಂದ ಅರ್ಜಿ ಸ್ವೀಕಾರ

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಹೇರಿರುವ ಲಾಕ್‍ಡೌನ್‍ನಿಂದ ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ಆಟೋರಿಕ್ಷಾ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರಿಗೆ ತಲಾ 3 ಸಾವಿರ ರೂ. ಸಹಾಯಧನ ಘೋಷಣೆ ಮಾಡಲಾಗಿದ್ದು, ನಾಳೆ ಮೇ 27ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಇಂದು ಈ ಸಂಬಂಧ ಮಾತನಾಡಿರುವ ಅವರುಅರ್ಹ ಅಭ್ಯರ್ಥಿಗಳು `ಸೇವಾ ಸಿಂಧು’ ವೆಬ್ ಪೋರ್ಟಲ್ ಮೂಲಕ ಸೂಕ್ತ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ

ಅಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ: ಮೇ.27ರಿಂದ ಅರ್ಜಿ ಸ್ವೀಕಾರ Read More »

ಕಾಸರಗೋಡು: ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಅಹಮ್ಮದ್ ದೇವರ್ ನೇಮಕ

ಕಾಸರಗೋಡು: ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಳ್‌ರವರು  ನೇಮಕರಾಗಿದ್ದಾರೆ. ಈ ಬಾರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರದಲ್ಲಿ ಕಾಸರಗೋಡಿಗೆ ಸಚಿವ ಸ್ಥಾನ ಲಭಿಸಿಲ್ಲ. ಈ ಹಿನ್ನೆಲೆ ಅಹಮ್ಮದ್ ದೇವರ್ ಅವರಿಗೆ ಕಾಸರಗೋಡು ಜಿಲ್ಲಾ ಉಸ್ತುವಾರಿ ಸ್ಥಾನ ಲಭಿಸಿದೆ. ಜಿಲ್ಲೆಯ ಸಚಿವರ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಹಮ್ಮದ್ ದೇವರ್ ಕೋವಿಳ್ ರವರನ್ನು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಕೋಜಿಕ್ಕೋಡ್ ಸೌತ್ ಕ್ಷೇತ್ರದಿಂದ ಆಯ್ಕೆಯಾದ ಎಲ್‌ಡಿಎಫ್ ಘಟಕ ಪಕ್ಷವಾದ ಇಂಡಿಯನ್ ನ್ಯಾಷನಲ್ ಲೀಗ್(ಐ.ಎನ್.ಎಲ್)ನ ಶಾಸಕರಾಗಿದ್ದು,

ಕಾಸರಗೋಡು: ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಅಹಮ್ಮದ್ ದೇವರ್ ನೇಮಕ Read More »

ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಬೆಳವಣಿಗೆ | ಮತ್ತೆ ಬಿಜೆಪಿ- ಜೆಡಿಎಸ್ ಮೈತ್ರಿ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಯಾರೂ ನಿರೀಕ್ಷಿಸಲಾಗದ ಬೆಳವಣಿಗೆಗಳು ಗರಿಗೆದರುತ್ತಿದ್ದು ಮತ್ತೆ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಕುರಿತು ಆಲೋಚಿಸುತ್ತಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ನಾಯಕರು ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನ ಕದ ತಟ್ಟಿದ್ದು, ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.ಈಗಾಗಲೇ ಕೆಲ ಪ್ರಭಾವಿ ನಾಯಕರು ಯಡಿಯೂರಪ್ಪ ನಾಯಕತ್ವ ಬದಲಾವಣೆಗಾಗಿ ದೆಹಲಿಯಲ್ಲಿ ಝಂಡಾ ಹೂಡಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯದಿದ್ದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ತಂತ್ರಗಳನ್ನು ರೂಪಿಸುತ್ತಿರುವುದಾಗಿ ಹೇಳಲಾಗುತ್ತಿದೆ.ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಹೈಕಮಾಂಡ್

ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಬೆಳವಣಿಗೆ | ಮತ್ತೆ ಬಿಜೆಪಿ- ಜೆಡಿಎಸ್ ಮೈತ್ರಿ? Read More »

ಆಸ್ಪತ್ರೆ ಆವರಣದಲ್ಲೇ ಹೆರಿಗೆ | ಕೆಳಗೆ ಬಿದ್ದು ಶಿಶು ಮೃತ್ಯು

ಮಂಡ್ಯ: ಹೆರಿಗೆ ನೋವು ತೀವ್ರಗೊಂಡು ಗರ್ಬಿಣಿಯೊಬ್ಬರು ದಯವಿಟ್ಟು ಅಡ್ಮಿಟ್​ ಮಾಡಿಕೊಳ್ಳಿ, ನಮ್ಮನ್ನು ಬದುಕಿಸಿ ಎಂದು ಗೋಗರೆದರೂ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಯೊಳಗೆ ಸೇರಿಸಿಕೊಳ್ಳದೆ, ಆಸ್ಪತ್ರೆ ಆವರಣದಲ್ಲೆ ಹೆರಿಗೆಯಾಗಿ, ನೆಲಕ್ಕೆ ಬಿದ್ದು ಮಗು ಮೃತಪಟ್ಟ ಆಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ. ಇಂತಹ ಅಮಾನವೀಯ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಮುಂಭಾಗ ಇಂದು ಬೆಳಿಗ್ಗೆ ಸಂಭವಿಸಿದ್ದು, ನಿನ್ನೆ ಸೋನು ಎಂಬ ಗರ್ಬಿಣಿ ಹೆರಿಗೆಗೆ ದಿನವಾದ ಕಾರಣ ಆಸ್ಪತ್ರೆಗೆ ಬಂದಿದ್ದರು. ಕೋವಿಡ್ ರಿಪೋರ್ಟ್ ಇಲ್ಲ ಎನ್ನುವ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಅಡ್ಮಿಟ್

ಆಸ್ಪತ್ರೆ ಆವರಣದಲ್ಲೇ ಹೆರಿಗೆ | ಕೆಳಗೆ ಬಿದ್ದು ಶಿಶು ಮೃತ್ಯು Read More »

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಇನ್ನಿಲ್ಲ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇಂದು ವಿಧಿವಶರಾಗಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಅವರು ನಿಧನಹೊಂದಿದ್ದಾರೆ. ಇತ್ತೀಚೆಗೆ ಅವರು ಕೊರೋನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದರು.ಬಳಿಕ ಉಸಿರಾಟದ ಸಮಸ್ಯೆ ತಲೆದೋರಿದ ಕಾರಣ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋ ಸಹಜ ಇತರ ಕಾಯಿಲೆಯಿಂದ ಕೂಡ ಅವರು ಬಳಲುತ್ತಿದ್ದರು. ಸಮಾಜದ ಎಲ್ಲ ಪ್ರಸಕ್ತ ವಿದ್ಯಮಾನಗಳಿಗೂ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಿದ್ದರು. ಸರಳತೆಗೆ ಹೆಸರುವಾಸಿಯಾಗಿದ್ದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಇನ್ನಿಲ್ಲ Read More »