ರಾಷ್ಟ್ರೀಯ

9 ಮಂದಿ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕಾರ| ದೇಶದ ಮೊದಲ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ ಬಿ.ವಿ ನಾಗರತ್ನ|

ನವದೆಹಲಿ: ಇತ್ತೀಚೆಗಷ್ಟೇ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದ ಕರ್ನಾಟಕದ ನ್ಯಾಯಮೂರ್ತಿ ನಾಗರತ್ನ ಬಿ.ವಿ ಸೇರಿದಂತೆ ದೇಶದ 9 ನ್ಯಾಯಾಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಇಂದು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದವರಾದ, ರಾಜ್ಯ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದ ನಾಗರತ್ನ ಬಿ.ವಿ ಸೇರಿ ಮೂವರು ಮಹಿಳಾ ನ್ಯಾಯಮೂರ್ತಿಗಳೂ ಒಳಗೊಂಡಂತೆ ಒಂಬತ್ತು ಹೊಸ ನ್ಯಾಯಮೂರ್ತಿಗಳು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ನಾಗರತ್ನಿ ಬಿವಿ ಅವರೊಂದಿಗೇ ನ್ಯಾಯಮೂರ್ತಿ ಎ.ಎಸ್. ಓಕಾ, ನ್ಯಾಯಮೂರ್ತಿ, ವಿಕ್ರಮ್ ನಾಥ್, ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ, […]

9 ಮಂದಿ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕಾರ| ದೇಶದ ಮೊದಲ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ ಬಿ.ವಿ ನಾಗರತ್ನ| Read More »

ಶ್ರಿಲಂಕಾ ಉಗ್ರರ ಕರಿನೆರಳು| ಕೇರಳ, ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್

ಮಂಗಳೂರು: ಕೇರಳ ಹಾಗೂ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಶ್ರೀಲಂಕಾ ಉಗ್ರರು ನುಸಿಳಿರೋ ಸುಳಿವನ್ನು, ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಕೇರಳದ ಕರಾವಳಿ ಪ್ರದೇಶಕ್ಕೆ 12 ಶ್ರೀಲಂಕಾ ಮೂಲಕ ಉಗ್ರರು 2 ಯಾಂತ್ರಿಕ ದೋಣಿಗಳಲ್ಲಿ ಬಂದಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಇದರಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಹದ್ದಿನ ಕಣ್ಣು ನೆಟ್ಟಿದ್ದಾರೆ. ಕೇರಳ ಅಥವಾ ಕರ್ನಾಟಕದಿಂದ ಪಾಕಿಸ್ತಾನಕ್ಕೆ ತೆರಳುವ ಯೋಜನೆಯಿಂದ ಉಗ್ರರು ಬಂದಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ

ಶ್ರಿಲಂಕಾ ಉಗ್ರರ ಕರಿನೆರಳು| ಕೇರಳ, ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್ Read More »

ಬಿಜೆಪಿ ಆದಾಯದಲ್ಲಿ ಬರೋಬ್ಬರಿ 50% ಹೆಚ್ಚಳ| ಕೊರೊನಾ ಸಂಕಷ್ಟದಲ್ಲೂ ಆಶ್ಚರ್ಯ ತಂದ ಪಕ್ಷದ ಆದಾಯ ಏರಿಕೆ|

ನವದೆಹಲಿ: 2019-20ರಲ್ಲಿ ಬಿಜೆಪಿಯ ಆದಾಯವು 50% ಹೆಚ್ಚಾಗಿದೆ, ಬಹುಪಾಲು ದೇಣಿಗೆಗಳು ಚುನಾವಣಾ ಬಾಂಡ್‌ಗಳ ಮೂಲಕ ಬಂದಿವೆ ಎಂದು ಎಡಿಆರ್ ವರದಿ ಬಹಿರಂಗಪಡಿಸಿದೆ. ಆಡಳಿತಾರೂಢ ಬಿಜೆಪಿ ಆದಾಯವು 2019-20ರಲ್ಲಿ ಚುನಾವಣಾ ಬಾಂಡ್‌ಗಳ ಮರುಪಾವತಿಯಿಂದ ಶೇಕಡಾ 50.34 ರಷ್ಟು ಏರಿಕೆಯಾಗಿ 3,623.28 ಕೋಟಿಗೆ ಹೆಚ್ಚಳವಾಗಿದೆ. ಆದರೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಆದಾಯದಲ್ಲಿ 25.69 ಶೇಕಡಾ ಇಳಿಕೆಯನ್ನು ಕಂಡು 682.21 ಕೋಟಿಗೆ ಇಳಿಕೆಯಾಗಿದೆ. ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಸಿಪಿಐ (ಎಂ), ಸಿಪಿಐ ಮತ್ತು ಬಿಎಸ್‌ಪಿ-ಏಳು ರಾಷ್ಟ್ರೀಯ

ಬಿಜೆಪಿ ಆದಾಯದಲ್ಲಿ ಬರೋಬ್ಬರಿ 50% ಹೆಚ್ಚಳ| ಕೊರೊನಾ ಸಂಕಷ್ಟದಲ್ಲೂ ಆಶ್ಚರ್ಯ ತಂದ ಪಕ್ಷದ ಆದಾಯ ಏರಿಕೆ| Read More »

ಇವನೇ ನೋಡಿ ಕಾಬೂಲ್‍ನ ಆತ್ಮಾಹುತಿ ಬಾಂಬರ್ – ಆತನ ಫೋಟೋ ರಿಲೀಸ್

ಅಫ್ಘಾನಿಸ್ತಾನ: ಕಾಬೂಲ್‍ನಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಣೆ ಹೊತ್ತುಕೊಂಡಿರುವ ಐಸಿಸ್-ಕೆ ಸಂಘಟನೆ ಆತ್ಮಾಹುತಿ ಬಾಂಬರ್ ಫೋಟೋವನ್ನು ಪ್ರಕಟಿಸಿದೆ. ಆತನ ಹೆಸರು ಅಬ್ದುಲ್ ರೆಹಮಾನ್ ಅಲ್-ಲೊಘ್ರಿ. ಈತ ತನ್ನನ್ನೇ ತಾನು ಸ್ಫೋಟಿಸಿಕೊಂಡು ಬೇರೆಯವರ ಸಾವಿಗೂ ಕಾರಣವಾಗಿದ್ದು, ಆತನ ಚಿತ್ರವನ್ನು ಐಸಿಸ್ ಸಂಘಟನೆ ಪ್ರಕಟಿಸಿದೆ. ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ನಿನ್ನೆ ಸಂಭವಿಸಿದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕಂತ್ಯದ ಹೊಣೆಯನ್ನು ಹೊತ್ತುಕೊಂಡ ಐಸಿಸ್?-ಕೆ ಸಂಘಟನೆ ಟೆಲಿಗ್ರಾಂ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕಾಬೂಲ್‍ನಲ್ಲಿ ನಡೆದ ಎರಡೂ ಸ್ಫೋಟಗಳ

ಇವನೇ ನೋಡಿ ಕಾಬೂಲ್‍ನ ಆತ್ಮಾಹುತಿ ಬಾಂಬರ್ – ಆತನ ಫೋಟೋ ರಿಲೀಸ್ Read More »

ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯ್ತು ವಿಚಿತ್ರ ಗೊಂಬೆ…! ಅಪರೂಪದ ಈ ಗೊಂಬೆ ಸೃಷ್ಟಿಸುತ್ತಿದೆ ಕೌತುಕ| ಈ ವಿಚಿತ್ರ ಗೊಂಬೆ ಬಂದಿದ್ದೇಕೆ?

ವಿಜಯನಗರ: ಇಲ್ಲಿನ ಕೂಡ್ಲಿಗಿ ತಾಲೂಕು ತುಪ್ಪಕನಹಳ್ಳಿ ಗ್ರಾಮದ, ಹೊರವಲಯ ಅರಣ್ಯ ಪ್ರದೇಶದ ಮಾಗಡಿಕಲ್ಲು ಕಟ್ಟೆ ಎಂಬಲ್ಲಿ ಅಪರೂಪದ ಗೊಂಬೆ ಕಂಡುಬಂದಿದ್ದು, ವಾಮಾಚಾರ ಪ್ರಯೋಗಕ್ಕಾಗಿ ಅದನ್ನು ವಿಧಿವತ್ತಾಗಿ ಪ್ರತಿಷ್ಠ‍ಾಪಿಸಲಾಗಿದೆ ಎಂದು ಗ್ರ‍ಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಸಕಾಲಕ್ಕೆ ಮಳೆ ಬಾರದಿದ್ದಾಗ ಅಥವಾ ಗ್ರ‍ಾಮಕ್ಕೆ ಯಾವುದೋ ದುಷ್ಠ ಶಕ್ತಿಯ ಉಪಟಳ ಇದ್ದಾಗ, ಈ ರೀತಿಯಲ್ಲಿ ವಾಮಾಚಾರ ಪ್ರಯೋಗದ ಮೂಲಕ ಗ್ರಾಮದಿಂದ ಹೊರಹಾಕಿ ದಿಗ್ಭಂದನ ಹಾಕಲಾಗುತ್ತದೆ ಎಂದು ಕೆಲ ಹಿರಿಯ ಗ್ರ‍ಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಗೊಂಬೆ ಪ್ರತಿಷ್ಠಾಪನೆಯನ್ನು ಯಾರು.!?ಯಾವ ಉದ್ದೇಶಕ್ಕಾಗಿ

ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯ್ತು ವಿಚಿತ್ರ ಗೊಂಬೆ…! ಅಪರೂಪದ ಈ ಗೊಂಬೆ ಸೃಷ್ಟಿಸುತ್ತಿದೆ ಕೌತುಕ| ಈ ವಿಚಿತ್ರ ಗೊಂಬೆ ಬಂದಿದ್ದೇಕೆ? Read More »

ಸೈನಿಕರನ್ನು ಕೊಂದವರನ್ನು ಸುಮ್ನೆ ಬಿಡಲ್ಲ| ಕಾಬೂಲ್ ಸ್ಪೋಟದಿಂದ ವ್ಯಗ್ರನಾದ ದೊಡ್ಡಣ್ಣ|

ವಾಷಿಂಗ್ಟನ್: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ನಿಂಗ್ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ನಾವು ಉಗ್ರರ ದಾಳಿಗಳಿಂದ ಕಂಗೆಡುವುವುದಿಲ್ಲ. ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡುತ್ತೇವೆ. ಐಸಿಸ್ ವಿರುದ್ಧ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗಿದೆ. ಎಲ್ಲಿ? ಹೇಗೆ? ಎಷ್ಟು ಹೊತ್ತಿಗೆ ಹೊಡೆಯಬೇಕೋ ಅಷ್ಟುಹೊತ್ತಿಗೆ ಹೊಡೆಯುತ್ತೇವೆ. ಐಸಿಸ್ ಉಗ್ರರು ಯಾವತ್ತಿಗೂ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಜಗತ್ತಿನ ಜನ ಸಂಕಷ್ಟದಲ್ಲಿದ್ದಾಗ ಅಂಥವರ ನೆರವಿಗೆ ನಿಲ್ಲುವುದು ಅಮೆರಿಕ. ದೇವರ ಪ್ರಶ್ನೆಗೆ ಮಾತ್ರ ಅಮೆರಿಕ ಸೇನೆ ಉತ್ತರ

ಸೈನಿಕರನ್ನು ಕೊಂದವರನ್ನು ಸುಮ್ನೆ ಬಿಡಲ್ಲ| ಕಾಬೂಲ್ ಸ್ಪೋಟದಿಂದ ವ್ಯಗ್ರನಾದ ದೊಡ್ಡಣ್ಣ| Read More »

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 11 ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಒಂದು ಕಡೆ ತಾಲಿಬಾನಿಗಳ ಹಿಂಸೆ ನಡುವೆ, ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶದ್ವಾರವೊಂದರಲ್ಲಿ ಆತ್ಮಾಹುತಿ ದಾಳಿ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ 11 ಮಂದಿ ಮೃತಪಟ್ಟಿದ್ದಾರೆ. ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ತಾಲಿಬಾನಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಬ್ರಿಟನ್ ಎಚ್ಚರಿಕೆ ನೀಡಿತ್ತು. ಅಮೆರಿಕ ಕೂಡ ಕಾಬೂಲ್ ಏರ್‍ಪೋರ್ಟ್‍ನಿಂದ ದೂರ ಇರುವಂತೆ ಎಚ್ಚರಿಸಿತ್ತು. ಈ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆದಿದೆ. ಯಾರೂ ದೇಶಬಿಟ್ಟು ಹೋಗಬೇಡಿ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 11 ಮಂದಿ ಸಾವು Read More »

ಉದ್ದಟತನ ಪ್ರದರ್ಶಸಿದರೆ ತಕ್ಕ ಉತ್ತರ ನೀಡುತ್ತೇವೆ- ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ ರಾವತ್

ನವದೆಹಲಿ: ತಾಲಿಬಾನಿಗಳು ಉದ್ಧಟತನ ಪ್ರದರ್ಶಿಸಿದರೆ ಮುಲಾಜಿಲ್ಲದೆ ಭಾರತೀಯ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.ಕುರಿತು ದೆಹಲಿಯಲ್ಲಿ ಮಾತನಾಡಿರುವ ಅವರು, ನುಸುಳುವಿಕೆ ಸೇರಿದಂತೆ ಅಫ್ಘಾನಿಸ್ತಾನದ ಕಡೆಯಿಂದ ಯಾವುದೇ ಚಟುವಟಿಕೆ ನಡೆದರೆ ತಕ್ಕ ಉತ್ತರ ನೀಡಲಾಗುವುದು. ನುಸುಳುವಿಕೆಯನ್ನು ನಾವು ಭಯೋತ್ಪಾದನೆಯ ರೀತಿಯಲ್ಲೇ ಉತ್ತರಿಸುತ್ತೇವೆ ಎಂದು ಈಗಾಗಲೇ ಖಚಿತಪಡಿಸಲಾಗಿದೆ. ತಾಲಿಬಾನಿಗಳು ಉದ್ಧಟತನ ಪ್ರದರ್ಶಿಸಿದರೆ ಭಾರತೀಯ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಅವರು ಎಚ್ಚರಿಸಿದರು. ಇದೇ ವೇಳೆ ಭಯೋತ್ಪಾದನೆಯ ವಿರುದ್ಧ

ಉದ್ದಟತನ ಪ್ರದರ್ಶಸಿದರೆ ತಕ್ಕ ಉತ್ತರ ನೀಡುತ್ತೇವೆ- ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ ರಾವತ್ Read More »

ಎರಡು ವರ್ಷ ಹನಿಮೂನ್ ಮಾಡಿಕೊಂಡ ದಂಪತಿ| ಹೀಗೂ ಉಂಟೇ…?

ಮದುವೆಯಾದ ಮೇಲೆ ಎಲ್ಲ ದಂಪತಿ ಹನಿಮೂನ್ ಗೆ ಹೋಗ್ತಾರೆ. ಮದುವೆಯಾದ ಕೆಲ ದಿನಗಳ ನಂತರ ಒಂದು ವಾರ ಹನಿಮೂನ್ ಗೆ ಹೋಗುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ದಂಪತಿ ಒಂದು ವಾರವಲ್ಲ, ಒಂದು ತಿಂಗಳಲ್ಲ ಬರೋಬ್ಬರಿ 2 ವರ್ಷ ಹನಿಮೂನ್ ಗೆ ಹೋಗಿದ್ದರು. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಬರೀ ಪತಿ-ಪತ್ನಿಯಲ್ಲ ಮಗ ಹಾಗೂ ಸಾಕು ನಾಯಿ ಕೂಡ ಹನಿಮೂನ್ ಗೆ ಬಂದಿದ್ದರು ಎಂಬುದು ಇನ್ನೊಂದು ವಿಶೇಷ. 2 ವರ್ಷ ಹನಿಮೂನ್ ಆಚರಿಸಿದ ದಂಪತಿ ಹೆಸರು

ಎರಡು ವರ್ಷ ಹನಿಮೂನ್ ಮಾಡಿಕೊಂಡ ದಂಪತಿ| ಹೀಗೂ ಉಂಟೇ…? Read More »

ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – ಮೇಲ್ಭಾಗದಲ್ಲಿಯೇ ಸಿಲುಕಿಕೊಂಡ ಪ್ರವಾಸಿಗರು

ಚಿಕ್ಕಬಳ್ಳಾಪುರ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತವಾಗಿದ್ದು, ಮುಖ್ಯ ರಸ್ತೆ 10 ಅಡಿ ಆಳಕ್ಕೆ ಕುಸಿದಿದೆ. ನಂದಿಬೆಟ್ಟದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಇದರಿಂದ ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಮೇಲ್ಭಾಗದಲ್ಲಿಯೇ ಸಿಲುಕಿಕೊಂಡಿದ್ದಾರೆ. ಮಂಗಳವಾರ ರಾತ್ರಿ ನಂದಿಬೆಟ್ಟದ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಮೇಲ್ಭಾಗದಿಂದ ಮಣ್ಣು ಕೊಚ್ಚಿಕೊಂಡು ಬಂದಿದೆ. ಮಳೆಯ ನೀರಿನ ಜೊತೆ ಮಣ್ಣು, ಬೃಹತ್ ಬಂಡೆ, ಮರ ಗಿಡಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇನ್ನೂ ವಿದ್ಯುತ್ ಕಂಬಗಳು ಧರೆಗೆ ಉಳಿದಿರುವ ಕಾರಣ ನಂದಿಗಿರಿಧಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆ ಬಂದ್ ಆಗಿದ್ದರಿಂದ

ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – ಮೇಲ್ಭಾಗದಲ್ಲಿಯೇ ಸಿಲುಕಿಕೊಂಡ ಪ್ರವಾಸಿಗರು Read More »