ರಾಷ್ಟ್ರೀಯ

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ‌ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆ| ಮೊದಲ ಬಾರಿಗೆ ಉನ್ನತ ಹುದ್ದೆ ಅಲಂಕರಿಸಿದ ಭಾರತ|

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಅಧ್ಯಕ್ಷ ಸ್ಥಾನವನ್ನು ಭಾರತ ಭಾನುವಾರ ವಹಿಸಿಕೊಂಡಿದೆ. ಮುಂದಿನ ಒಂದು ತಿಂಗಳ ಕಾಲ ಭಾರತ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲಿದೆ. ಈ ಅವಧಿಯಲ್ಲಿ ಹಲವು ಮಹತ್ವದ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳಲು ಭಾರತ ನಿರ್ಧರಿಸಿದೆ. ಇನ್ನೊಂದು ವಿಶೇಷವೆಂದರೆ ಆ.9ರಂದು ಭದ್ರತಾ ಮಂಡಳಿಯ ಸಭೆ ಆಯೋಜನೆಯಾಗಿದ್ದು, ಸಭೆಯ ಅಧ್ಯಕ್ಷರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಿಸಲಿದ್ದಾರೆ. ಈ ಮೂಲಕ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡ ದೇಶದ ಮೊದಲ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. 1992ರಲ್ಲಿ […]

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ‌ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆ| ಮೊದಲ ಬಾರಿಗೆ ಉನ್ನತ ಹುದ್ದೆ ಅಲಂಕರಿಸಿದ ಭಾರತ| Read More »

ಇ-ರುಪಿಗೆ ಚಾಲನೆ ನೀಡಿದ ಪ್ರಧಾನಿ| ಇಂಟರ್ನೆಟ್ ಇಲ್ಲದೇ ಹಣ ಪಾವತಿ ಸೌಲಭ್ಯ ಏನಿದರ ವಿಶೇಷತೆ ಅಂತೀರಾ? ಈ ಸ್ಟೋರಿ ಓದಿ.

ನವದೆಹಲಿ: ಭಾರತವನ್ನು ಡಿಜಿಟಲೀಕರಣ ಮಾಡಲು ಪಣ ತೊಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಮೂಲಕ ಹಣ ಪಾವತಿ ಮಾಡುವ ಇ-ರುಪಿ (E-RUPI) ಸೇವೆಗೆ ಇಂದು ಚಾಲನೆ ನೀಡಿದ್ದಾರೆ. ಈಗಾಗಲೇ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ವಾಟ್ಸಾಪ್ ಪೇ ಮುಂತಾದ ಡಿಜಿಟಲ್ ಪೇಮೆಂಟ್​ ಆಯ್ಕೆಗಳಿವೆಯಲ್ಲ ಎಂದು ನೀವು ಹುಬ್ಬೇರಿಸಬಹುದು. ಆದರೆ, ಈ ಇ-ರುಪಿ ಬಹಳ ವಿಶೇಷವಾಗಿದ್ದು, ಇದರ ಮೂಲಕ ಇಂಟರ್ನೆಟ್, ಸ್ಮಾರ್ಟ್​ಫೋನ್​ಗಳು ಇಲ್ಲದೆಯೂ ವೋಚರ್ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿದೆ. ಇಂದು ಈ ಇ-ರುಪಿ ಸೇವೆಗೆ

ಇ-ರುಪಿಗೆ ಚಾಲನೆ ನೀಡಿದ ಪ್ರಧಾನಿ| ಇಂಟರ್ನೆಟ್ ಇಲ್ಲದೇ ಹಣ ಪಾವತಿ ಸೌಲಭ್ಯ ಏನಿದರ ವಿಶೇಷತೆ ಅಂತೀರಾ? ಈ ಸ್ಟೋರಿ ಓದಿ. Read More »

ಜೂಜು‌ ದಂಧೆ ಪ್ರಕರಣ| ಹರಿರಾಜ್ ಶೆಟ್ಟಿ ಮೇಲೆ ಚಾರ್ಜ್ ಶೀಟ್

ಬೆಂಗಳೂರು: ಮಹಾನಗರದ ಹಲವು ಕಡೆ ಜೂಜು ಅಡ್ಡೆ ನಿರ್ಮಿಸಿ ಗ್ಯಾಂಬ್ಲಿಂಗ್ ನಡೆಸುತ್ತಿದ್ದ ಆರೋಪದ ಮೇರೆಗೆ ಮುಂಗಾರು ಮಳೆ-2 ಸಿನಿಮಾ ಖ್ಯಾತಿಯ ನಟಿ ನೇಹಾ ಶೆಟ್ಟಿ ತಂದೆ, ಉದ್ಯಮಿ ಹರಿರಾಜ್ ಶೆಟ್ಟಿಯನ್ನು ಬಂಧಿಸಿದ ಸಿಸಿಬಿ ಅಧಿಕಾರಿಗಳು ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಗ್ಯಾಬ್ಲಿಂಗ್ ಉದ್ಯಮಿ ಹರಿರಾಜ್ ಶೆಟ್ಟಿ, ಮಹಿಳೆಯರು ಸೇರಿದಂತೆ ಒಟ್ಟು 42 ಮಂದಿ ಗ್ಯಾಂಬ್ಲರ್ ಗಳ ವಿರುದ್ಧ 250 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇವರು ಪೂಲ್ ಮತ್ತು ರಿ ಕ್ರಿಯೇಷನ್ ಹೆಸರಿನಲ್ಲಿ

ಜೂಜು‌ ದಂಧೆ ಪ್ರಕರಣ| ಹರಿರಾಜ್ ಶೆಟ್ಟಿ ಮೇಲೆ ಚಾರ್ಜ್ ಶೀಟ್ Read More »

ಪ್ರಜ್ವಲ್ ಹೊದ್ದೇಟ್ಟಿಗೆ ಆಸ್ಟ್ರೇಲಿಯಾದ ಬ್ರೀಸ್ಬನೆ ಕ್ಯಾಂಪಸ್ ನಿಂದ ಫೆಲೋಶಿಪ್

ಆಸ್ಟ್ರೇಲಿಯಾದ ಜೆಂಸ್ ಕುಕ್ಕ್ ಯುನಿವರ್ಸಿಟಿ ಯ ಸಿಂಗಾಪುರ್ ನ ಕ್ಯಾಂಪಸ್ ನಲ್ಲಿ ಬ್ಯಾಚುಲರ್ ಆಫ್ ಬ್ಯುಸಿನೆಸ್‌ ಮೇಜರಿಂಗ್ ಅಂತರಾಷ್ಟ್ರೀಯ ಬ್ಯುಸಿನೆಸ್ ಎರಡು ವರ್ಷಗಳ ವಿಧ್ಯಾಭ್ಯಾಸ ವನ್ನು, ಆಸ್ಟ್ರೇಲಿಯಾದ ಬ್ರೀಸ್ಬೆನೆ ಕ್ಯಾಂಪಸ್ ನಲ್ಲಿ ಎರಡು ವರ್ಷಗಳ ವಿಧ್ಯಾಭ್ಯಾಸ ವನ್ನು ಪೂರೈಸಿದ ಪ್ರಜ್ವಲ್ ಹೊದ್ದೇಟ್ಟಿ ಯವರು ಫೆಲೋಶಿಪ್ ಪಡೆದಿರುತ್ತಾರೆ.ಮಂಗಳೂರುನಲ್ಲಿ BSNL ಉದ್ಯೋಗಿ ಗೋವರ್ಧನ ಹೊದ್ದೇಟ್ಟಿ ಹಾಗೂ ಶ್ರೀಮತಿ ಭಾಗೀರಥಿ ದಂಪತಿಗಳ ಪುತ್ರ

ಪ್ರಜ್ವಲ್ ಹೊದ್ದೇಟ್ಟಿಗೆ ಆಸ್ಟ್ರೇಲಿಯಾದ ಬ್ರೀಸ್ಬನೆ ಕ್ಯಾಂಪಸ್ ನಿಂದ ಫೆಲೋಶಿಪ್ Read More »

ಮೀನು, ಚಿಕನ್, ಮಟನ್‍ಗಿಂತ ಜಾಸ್ತಿ ಗೋಮಾಂಸವನ್ನೇ ತಿನ್ನಿ: ಬಿಜೆಪಿ ಸಚಿವ

ಶಿಲ್ಲಾಂಗ್: ಮೀನು, ಚಿಕನ್, ಮಟನ್‍ಗಳಿಗಿಂತ ಜಾಸ್ತಿ ಗೋಮಾಂಸವನ್ನು ತಿನ್ನಿ ಎಂದು ರಾಜ್ಯದ ಜನರಿಗೆ ಮೇಘಾಲಯದ ಬಿಜೆಪಿ ಸಚಿವ ಸ್ಯಾನ್ಬೋರ್ ಶುಲ್ಲೈ ಪ್ರೋತ್ಸಾಹಿಸಿದ್ದಾರೆ. ಕಳೆದವಾರವಷ್ಟೇ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಬೆನ್ನಲೇ ಶುಲ್ಲೈ, ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರತಿಯೊಬ್ಬರಿಗೂ ಬೇಕಾದನ್ನು ತಿನ್ನಲ್ಲು ಸ್ವಾತಂತ್ರ್ಯವಿದೆ. ನಾನಂತೂ ಜನರಿಗೆ ಚಿಕನ್, ಮಟನ್, ಮೀನಿಗಿಂತಲೂ ಜಾಸ್ತಿ ಗೋಮಾಂಸ ತಿನ್ನಿ ಎಂದೇ ಪ್ರೋತ್ಸಾಹಿಸುತ್ತೇನೆ. ಬಿಜೆಪಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುತ್ತದೆಂಬ ಗ್ರಹಿಕೆ ತುಂಬ ಜನರಿಗೆ ಇದೆ. ಗೋಮಾಂಸ ತಿನ್ನಲು ಹೆಚ್ಚೆಚ್ಚು ಪ್ರೋತ್ಸಾಹ ನೀಡುವ

ಮೀನು, ಚಿಕನ್, ಮಟನ್‍ಗಿಂತ ಜಾಸ್ತಿ ಗೋಮಾಂಸವನ್ನೇ ತಿನ್ನಿ: ಬಿಜೆಪಿ ಸಚಿವ Read More »

ಸಿಬಿಎಸ್ ಸಿ 12ನೇ ತರಗತಿ ಫಲಿತಾಂಶ ಇಂದು ಪ್ರಕಟ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಇಂದು 12 ನೇ ತರಗತಿ ಫಲಿತಾಂಶವನ್ನು ಸಿಬಿಎಸ್ಸಿಯು 2 ಗಂಟೆಗೆ ಘೋಷಿಸಲಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ CBSE ಬೋರ್ಡ್ ಇಂದು ಮಧ್ಯಾಹ್ನ 2 ಗಂಟೆಗೆ ಸಿಬಿಎಸ್ಸಿ 12ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿಸಿದೆ. ಫಲಿತಾಂಶ ವೀಕ್ಷಣೆ ಹೇಗೆ.? ವಿದ್ಯಾರ್ಥಿಗಳು ಇಂದು ಮಧ್ಯಾಹ್ನ ಪ್ರಕಟಗೊಳ್ಳಲಿರುವಂತ ಸಿಬಿಎಸ್ಸಿ 12ನೇ ತರಗತಿಯ ಫಲಿತಾಂಶವನ್ನು ಬೋರ್ಡ್ ಅಧಿಕೃತ ಜಾಲತಾಣ cbse.nic.in ಇಲ್ಲವೇ cbseresults.nic.in ನೋಡಬಹುದಾಗಿದೆ. ಇದಲ್ಲದೇ ವಿದ್ಯಾರ್ಥಿಗಳು ಡಿಜಿಲಾಕರ್ ನಲ್ಲಿ

ಸಿಬಿಎಸ್ ಸಿ 12ನೇ ತರಗತಿ ಫಲಿತಾಂಶ ಇಂದು ಪ್ರಕಟ Read More »

ಮತಾಂತರಗೊಂಡಿಲ್ಲ ಎಂದು ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ನತ್ತ ಹೊರಟ ಯುವಕ

ದೆಹಲಿ: ಇಲ್ಲಿನ ಇಸ್ಲಾಮಿಕ್ ಪ್ರಚಾರಕರಿಂದ ಮತಾಂತರಗೊಂಡ ನೂರಾರು ಮಂದಿಯ ಪಟ್ಟಿಯಲ್ಲಿ ಯುವಕನ ಹೆಸರಿರುವುದನ್ನು ಕಂಡು ಆತ ಕಾಲ್ನಡಿಗೆಯಲ್ಲೇ ದೆಹಲಿಗೆ ಹೊರಟು ಸುಪ್ರೀಂ ಕೋರ್ಟ್ ಮುಂದೆ ತಾವು ಮತಾಂತರಗೊಂಡಿಲ್ಲ ಎಂದು ಸಾಬೀತು ಪಡಿಸಲು ಮುಂದಾಗಿದ್ದಾರೆ.ಉತ್ತರ ಪ್ರದೇಶದ ಸಹರಾನ್ಪುರದ ಪ್ರವೀಣ್ ಕುಮಾರ್ ಕಾಲ್ನಡಿಗೆಯಲ್ಲೇ ಹೊರಟ ಯುವಕ. ಪಿಎಚ್‌ಡಿ ಪದವೀಧರರಾದ ಇವರು ಕಳೆದ ತಿಂಗಳು ವಿಧ್ವಂಸಕ ಕೃತ್ಯಗಳ ಸಂಬಂಧ ತನಿಖೆ ನಡೆಸುತ್ತಿದ್ದ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳದ ತನಿಖೆ ವಿಚಾರಿಸಿ ಕ್ಲೀನ್ ಚಿಟ್ ಪಡೆದಿದ್ದರು. ಆರರೆ ಆತನ ಗ್ರಾಮವಾದ ಶಿಟ್ಲಾ

ಮತಾಂತರಗೊಂಡಿಲ್ಲ ಎಂದು ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ನತ್ತ ಹೊರಟ ಯುವಕ Read More »

ಭೂಗತ ಪಾತಕಿ ಛೋಟಾ ರಾಜನ್ ಗೆ ಅನಾರೋಗ್ಯ| ಏಮ್ಸ್‌ಗೆ ದಾಖಲು

ನವದೆಹಲಿ: ಭೂಗತ ದೊರೆ ಛೋಟಾ ರಾಜನ್ ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್‌ಗೆ ಜುಲೈ 27ರಂದು ದಾಖಲಾಗಿದ್ದಾನೆ. ಛೋಟಾ ರಾಜನ್ ದೇಶದ ಕಾನೂನುಗಳನ್ನು ಗೌರವಿಸದ ಕಾರಣ ಅವರಿಗೆ ಜಾಮೀನು ನೀಡಬಾರದು ಎಂದು ಕೇಂದ್ರ ತನಿಖಾ ದಳ ಬುಧವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ. ಇದಾದ ಒಂದು ದಿನದ ನಂತರ ರಾಜನ್ ನ ಅನಾರೋಗ್ಯದ ಸುದ್ದಿ ಬಂದಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪರದೀಪ್ ಘರತ್ ಅವರು ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರ ಏಕೈಕ ನ್ಯಾಯಪೀಠಕ್ಕೆ ಅಂಡರ್ವರ್ಲ್ಡ್ ಡಾನ್ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ

ಭೂಗತ ಪಾತಕಿ ಛೋಟಾ ರಾಜನ್ ಗೆ ಅನಾರೋಗ್ಯ| ಏಮ್ಸ್‌ಗೆ ದಾಖಲು Read More »

ಜಾಲತಾಣಗಲ್ಲಿ ವಿವಾದಕ್ಕೀಡಾದ ವಿರಾಟ್‌ ಕೊಹ್ಲಿ

ನವದೆಹಲಿ : ಟೀಮ್‌ ಇಂಡಿಯಾ ಆಟಗಾರ ವಿರಾಟ್‌ ಕೊಯ್ಲಿ ವಿಶ್ವವಿದ್ಯಾಲಯದ ಕುರಿತು ಪೋಸ್ಟ್‌ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೀಡಾಗಿದ್ದರೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಕೊಹ್ಲಿ ಸಿದ್ದತೆ ನಡೆಸುತ್ತಿದ್ದಾರೆ. ಅಭ್ಯಾಸದ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೊಹ್ಲಿ ಸಕ್ರೀಯವಾಗಿದ್ದಾರೆ. ಇಷ್ಟು ದಿನ ತಮ್ಮ ಖಾಸಗಿ ಬದುಕಿನ ಕುರಿತು ಪೋಸ್ಟ್‌ ಮಾಡುತ್ತಿದ್ದ ಕೊಹ್ಲಿ ಇದೀಗ ಖಾಸಗಿ ವಿಶ್ವವಿದ್ಯಾಲಯದ ಕುರಿತು ಪೋಸ್ಟ್‌ ಮಾಡಿದ್ದರು. ಪೋಸ್ಟ್‌ನಲ್ಲಿ,

ಜಾಲತಾಣಗಲ್ಲಿ ವಿವಾದಕ್ಕೀಡಾದ ವಿರಾಟ್‌ ಕೊಹ್ಲಿ Read More »

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ರೈಲ್ವೆ ಇಲಾಖೆಯಲ್ಲಿ 1664 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ : ಉತ್ತರ ಮಧ್ಯ ರೈಲ್ವೆಯ (ಎನ್​ಸಿಆರ್​​) ಪ್ರಯಾಗ್​ರಾಜ್​, ಉತ್ತರ ಪ್ರದೇಶ ವಿಭಾಗದಲ್ಲಿ ಖಾಲಿ ಇರುವ ಬರೋಬ್ಬರಿ 1664 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಮಧ್ಯ ರೈಲ್ವೆ ನೇಮಕಾತಿ 2021ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಟ 10ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸವನ್ನು ಪೂರೈಸಿರಬೇಕು. ಅಲ್ಲದೆ ಕನಿಷ್ಟ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.ವೆಲ್ಡರ್, ವೈರ್​ ಮ್ಯಾನ್​ ಹಾಗೂ ಬಡಗಿ ಕೆಲಸಕ್ಕೆ

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ರೈಲ್ವೆ ಇಲಾಖೆಯಲ್ಲಿ 1664 ಹುದ್ದೆಗಳಿಗೆ ಅರ್ಜಿ ಆಹ್ವಾನ Read More »