ಆರೋಗ್ಯವೇ ಭಾಗ್ಯ

ಪಾಕೆಟ್ ನಲ್ಲಿ ಮೊಬೈಲ್ ಇಟ್ಕೋತೀರಾ? | ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು | ತಜ್ಞರ ವರದಿಯಲ್ಲಿ ಏನಿದೆ ಗೊತ್ತಾ?

ನವದೆಹಲಿ : ಸಧ್ಯ ಮೊಬೈಲ್ ನಮ್ಮ ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ. ನಾವು ಎಲ್ಲಾದಕ್ಕೂ ಫೋನ್ ಅವಲಂಭಿಸಿದ್ದೇವೆ. ಊಟ ಮಾಡುವಾಗ, ಟಾಯ್ಲೆಟ್ ಹೋಗುವಾಗ, ಕುಳಿತಾಗ, ನಿದ್ರೆ ಮಾಡುವಾಗ ಮೊಬೈಲ್ ಹತ್ತಿರ ಇರಲೇ ಬೇಕು. ಆದರೆ ಇದರಿಂದ ಕಣ್ಣಿನ ದೃಷ್ಟಿ ಮತ್ತು ಕಳಪೆ ಭಂಗಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಪುರುಷರ ಲೈಂಗಿಕ ಜೀವನದ ಮೇಲೆಯೂ ಪರಿಣಾಮ ಬೀರಬಹುದು. ಸ್ಮಾರ್ಟ್ ಫೋನ್ ನ ಹಾನಿಕಾರಕ ಪರಿಣಾಮಗಳು: ಮೊಬೈಲ್(Mobile) ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣವು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ನಮ್ಮ ಆರೋಗ್ಯಕ್ಕೆ […]

ಪಾಕೆಟ್ ನಲ್ಲಿ ಮೊಬೈಲ್ ಇಟ್ಕೋತೀರಾ? | ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು | ತಜ್ಞರ ವರದಿಯಲ್ಲಿ ಏನಿದೆ ಗೊತ್ತಾ? Read More »

ಕದ್ದು‌ ಮುಚ್ಚಿ ಪೋರ್ನ್ ವಿಡಿಯೋ ನೋಡ್ತಿದೀರಾ? ಹಾಗಾದ್ರೆ ನೀವು ಈ ಸುದ್ದಿ ಓದ್ಲೇಬೇಕು.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇರುತ್ತೆ ಅದಕ್ಕೆ ಇಂಟರ್ನೆಟ್ ಸಂಪರ್ಕವಂತೂ ಇದ್ದೇ ಇರುತ್ತೆ. ಹಾಗಾಗಿ ಅಶ್ಲೀಲತೆಯನ್ನು ನೋಡುವುದು ಸಾಮಾನ್ಯ ವಿಷಯವಾಗಿದೆ. ಆದರೆ, ನಮ್ಮ ಸುಸಂಸ್ಕೃತ ದೇಶದಲ್ಲಿ ಇದೆಲ್ಲವನ್ನು ಯಾರೂ ಒಪ್ಪಲ್ಲ. ಕೆಟ್ಟದು ಅಂತಾನೇ ಪರಿಗಣಿಸಲಾಗುತ್ತೆ. ಆದ್ರೂ ಬಹಳಷ್ಟು ಜನ ಅಶ್ಲೀಲ ವಿಡಿಯೋಗಳನ್ನ ನೋಡ್ತಾನೆ ಇರ್ತಾರೆ. ಇದಕ್ಕಾಗಿ ಹಲವು ಗಂಟೆಗಳನ್ನು ಹಾಳು ಮಾಡ್ತಾರೆ. ಸಧ್ಯ ಇಂತಹ ವಿಡಿಯೋಗಳನ್ನ ನೋಡೋದ್ರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳೇನು ನೋಡೋಣ.ಅಶ್ಲೀಲತೆಯನ್ನು ವೀಕ್ಷಿಸಲು ಅನುಮತಿಸಲಾಗಿದೆ ಅನ್ನೋದರ ಕುರಿತು ಯಾವುದೇ ವೈಜ್ಞಾನಿಕ ಮಾಹಿತಿಯಿಲ್ಲ.ಕೆಲವು ಸಮಯದ

ಕದ್ದು‌ ಮುಚ್ಚಿ ಪೋರ್ನ್ ವಿಡಿಯೋ ನೋಡ್ತಿದೀರಾ? ಹಾಗಾದ್ರೆ ನೀವು ಈ ಸುದ್ದಿ ಓದ್ಲೇಬೇಕು. Read More »

ಶೀಘ್ರದಲ್ಲೇ 12+ ಮಕ್ಕಳಿಗೆ ಲಸಿಕೆ

ನವದೆಹಲಿ: 12 ರಿಂದ 18 ವರ್ಷದ ಮಕ್ಕಳಿಗೆ ಶೀಘ್ರವೇ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಮುಖ ಔಷಧ ಕಂಪನಿ ಜೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಜೈಕೋವ್ ಡಿ ಲಸಿಕೆಯನ್ನು 12 ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಭಾರತ್ ಬಯೋಟೆಕ್ ಲಸಿಕೆಯನ್ನು 12 -18 ವರ್ಷದವರ ಮೇಲೆ ಪ್ರಯೋಗಕ್ಕೆ ಕಳೆದ ಮೇ ನಲ್ಲಿ ಅನುಮತಿ ನೀಡಲಾಗಿದೆ. ಅನುಮತಿ ದೊರೆತ ಕೂಡಲೇ ಕ್ಲಿನಿಕಲ್ ಪ್ರಯೋಗ ಮುಗಿಸಿದ ಜೈಡಸ್

ಶೀಘ್ರದಲ್ಲೇ 12+ ಮಕ್ಕಳಿಗೆ ಲಸಿಕೆ Read More »

ಜೂ.21ರಿಂದ ವ್ಯಾಕ್ಸಿನೇಷನ್‌ ಹೊಸ ಅಭಿಯಾನ, ಪ್ರತಿಯೊಬ್ಬರಿಗೂ ಸಿಗುತ್ತೆ ಉಚಿತ ವ್ಯಾಕ್ಸಿನ್

ನವದೆಹಲಿ: ಜೂನ್ 7 ರಂದು ಪ್ರಧಾನಿ ಮೋದಿ ಘೋಷಿಸಿದಂತೆ, ಕೋವಿಡ್ -19 ವ್ಯಾಕ್ಸಿನೇಷನ್‌ನ ಹೊಸ ಅಭಿಯಾನ ಜೂನ್ 21 ರಿಂದ ಪ್ರಾರಂಭವಾಗಲಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲಾಗುವುದು. ವ್ಯಾಕ್ಸಿನೇಷನ್ ಡ್ರೈವ್‌ ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೋವಿಡ್ -19 ಲಸಿಕೆಗಳನ್ನು ನೀಡಲಿದ್ದು, ಲಸಿಕೆ ನೀತಿಯಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ, ರಾಜ್ಯಗಳು ಲಸಿಕೆ ಉತ್ಪಾದಕರಿಂದ ಲಸಿಕೆಗಳನ್ನು ಸಂಗ್ರಹಿಸಬೇಕಾಗಿಲ್ಲ. ಕೇಂದ್ರವು ಶೇಕಡ 75 ರಷ್ಟು ಲಸಿಕೆಗಳನ್ನು ಖರೀದಿಸಿ

ಜೂ.21ರಿಂದ ವ್ಯಾಕ್ಸಿನೇಷನ್‌ ಹೊಸ ಅಭಿಯಾನ, ಪ್ರತಿಯೊಬ್ಬರಿಗೂ ಸಿಗುತ್ತೆ ಉಚಿತ ವ್ಯಾಕ್ಸಿನ್ Read More »

ದೇಶದಲ್ಲಿ ಒಂದೇ ದಿನ 1.2 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ

ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕೊಂಚ ಕೊಂಚವಾಗಿ ಇಳಿಕೆಯಾಗುತ್ತಿದೆ. ಇದೀಗ ಕಳೆದ 24 ಗಂಟೆಗಳಲ್ಲಿ, ಭಾರತವು ಕೋವಿಡ್-19 ರ 1.2 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ಕಳೆದ 58 ದಿನಗಳಲ್ಲಿ ಪ್ರಕರಣಗಳ ಕನಿಷ್ಠ ಏಕ ದಿನದ ಹೆಚ್ಚಳವಾಗಿದೆ. ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು 15,55,248. ದೇಶಾದ್ಯಂತ ಕೋವಿಡ್ ಸೋಂಕಿನಿಂದ ಈವರೆಗೆ ೨.೬೭ ಕೋಟಿಗೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ, ಕಳೆದ ೨೪ ಗಂಟೆಗಳಲ್ಲಿ 1,97,894 ಜನರು ಚೇತರಿಸಿಕೊಂಡಿದ್ದಾರೆ.ದೈನಂದಿನ ಪಾಸಿಟಿವಿಟಿ ದರವು ಶೇಕಡಾ 5.78 ಕ್ಕೆ

ದೇಶದಲ್ಲಿ ಒಂದೇ ದಿನ 1.2 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ Read More »

ಕೋವಿಡ್ ಲಸಿಕೆ ಹಾಕಿಸಿಕೊಂಡ ಬಳಿಕ ಬರುವ ಜ್ವರ, ಮೈಕೈ ನೋವು, ತಲೆನೋವಿಗೆ ನಿಖರ ಕಾರಣವೇನು? ಹಾಗೂ ಪರಿಹಾರವೇನು?

ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಜ್ವರ, ಸುಸ್ತು, ಮೈಕೈ ನೋವು ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಉತ್ತಮ ಬೆಳವಣಿಗೆ. ಹೌದು, ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಲಸಿಕೆ ಪಡೆದ ಬಳಿಕ ಹೆಚ್ಚು ಜ್ವರ, ಮೈಕೈ ನೋವು, ಸುಸ್ತು, ತಲೆನೋವು ಇತ್ಯಾದಿ ಲಕ್ಷಣ ಕಾಣಿಸಿಕೊ೦ಡವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಹೆಚ್ಚು 400ಕ್ಕೂ ಆ್ಯಂಟಿಬಾಡಿ ಉತ್ಪತ್ತಿ ಆಗಿರುವುದು ಕಂಡುಬಂದಿದೆ. ಇಂಥ ಲಕ್ಷಣ ಕಾಣಿಸಿಕೊಳ್ಳದೇ ಇರುವವರಲ್ಲಿ 150ರ ಇಂದ 200 ಕೌಂಟ್ಸ್ ಆ್ಯಂಟಿಬಾಡಿ ಜನರೇಟ್ ಆಗಿರುವುದು ತಿಳಿದುಬಂದಿದೆ. ಹೀಗಾಗಿ ಲಸಿಕೆ ಪಡೆದ ನಂತರ

ಕೋವಿಡ್ ಲಸಿಕೆ ಹಾಕಿಸಿಕೊಂಡ ಬಳಿಕ ಬರುವ ಜ್ವರ, ಮೈಕೈ ನೋವು, ತಲೆನೋವಿಗೆ ನಿಖರ ಕಾರಣವೇನು? ಹಾಗೂ ಪರಿಹಾರವೇನು? Read More »

ಈ‌ ಕಂದನ ನಗುವನ್ನು ಉಳಿಸಿಕೊಡುವಿರಾ ಪ್ಲೀಸ್….

ಮಂಡ್ಯ.ಮೇ.23: ಈ ಮುದ್ದಾದ ಕಂದಮ್ಮನ ಹೆಸರು ಮನಸ್ವಿ. ಮಂಡ್ಯದ ದುದ್ದ ಹೋಬಳಿಯ ಹಾಡ್ಯ ಗ್ರಾಮದ ಹೆಚ್.ಡಿ ಸುಧಾಕರ್ ಎಂಬುವರ ಮಗಳು. ಈಕೆಗಿನ್ನೂ ಐದೂವರೆ ವರ್ಷ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುವ ಸುಧಾಕರ್ ಅವರಿಗೆ ಮಗಳ ಸಮಸ್ಯೆ ಎರಡೂವರೆ ತಿಂಗಳು ಇದ್ದಾಗಲೇ  ಮನವರಿಕೆ ಆಗಿತ್ತು. ಅಂದಿನಿಂದ ಇಲ್ಲೀವರೆಗೂ ಮಗಳ ಜೀವ ಉಳಿಸುವುದಕ್ಕಾಗಿ ಹೋರಾಡುತ್ತಿದ್ದಾರೆ. ಸುಧಾಕರ್ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಹಲವಾರು ರೀತಿಯ ಕೆಲಸ ಮಾಡಿಕೊಂಡಿದ್ದರು. ಕಳೆದ 5 ವರ್ಷದಿಂದ ಕಾರು ಚಾಲಕನಾಗಿ ಕುಟುಂಬವನ್ನು ಸಾಕುತ್ತಿದ್ದಾರೆ. ಮದುವೆಯಾದ

ಈ‌ ಕಂದನ ನಗುವನ್ನು ಉಳಿಸಿಕೊಡುವಿರಾ ಪ್ಲೀಸ್…. Read More »

ಸದ್ಯದಲ್ಲೆ ಬಳಕೆಗೆ ಸಿಗಲಿದೆ ಕೊವಿಸೆಲ್ಫ್ ಟೆಸ್ಟಿಂಗ್ ಕಿಟ್, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು

ನವದೆಹಲಿ: ಮನೆಯಲ್ಲೇ ಕುಳಿತು ಸ್ವತಃ ಶಂಕಿತ ವ್ಯಕ್ತಿಗಳೇ ಕೋವಿಡ್ ಟೆಸ್ಟ್ ಮಾಡಿಕೊಳ್ಳುವ ಕೊವಿ-ಸೆಲ್ಫ್ ಎಂಬ ಟೆಸ್ಟಿಂಗ್ ಕಿಟ್ ಇನ್ನೇನು ಹೊರಬರಲಿದೆ. ಇದೊಂದು ರಾಪಿಡ್ ಆಂಟಿಜನ್ ಮಾದರಿ ಪರೀಕ್ಷಾ ಸಾಧನವಾಗಿದ್ದು, ಇದರ ಬಳಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ಟೆಸ್ಟಿಂಗ್ ಕಿಟ್, ಬಳಕೆದಾರರ ಮಾಹಿತಿ ಚೀಟಿ, ಫ್ರೀ-ಫೀಲ್ಡ್ ಎಕ್ಸ್ಟ್ರಾಕ್ಷನ್ ಟ್ಯೂಬ್, ಟೆಸ್ಟಿಂಗ್ ಸ್ಟ್ರಿಪ್, ತ್ಯಾಜ್ಯ ಬಿಸಾಡಲು ಪುಟ್ಟ ಪ್ಲಾಸ್ಟಿಕ್ ಅನ್ನು ಒಳಗೊಂಡಿದೆ. ಇದರ ಉಪಯೋಗದಿಂದ ಕೇವಲ 15 ನಿಮಿಷಗಳಲ್ಲಿ ಫಲಿತಾಂಶ ಪಡೆಯಬಹುದು. ಮನೆಯಲ್ಲಿ ಕುಳಿತು

ಸದ್ಯದಲ್ಲೆ ಬಳಕೆಗೆ ಸಿಗಲಿದೆ ಕೊವಿಸೆಲ್ಫ್ ಟೆಸ್ಟಿಂಗ್ ಕಿಟ್, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು Read More »

ಬ್ಲ್ಯಾಕ್ ಫಂಗಸ್ ನಿರ್ಲಕ್ಷ್ಡಿಸಬೇಡಿ ಏಮ್ಸ್ ಮಾರ್ಗಸೂಚಿ ಸಲಹೆ, ಪತ್ತೆ ಕ್ರಮ ಮತ್ತು ಆರೈಕೆ ಸಲಹೆಗಳು ಇಲ್ಲಿವೆ

ನವದೆಹಲಿ.ಮೇ.20: ಕೊರೋನಾ ಎರಡನೇ ಅಲೆ ಅಬ್ಬರದ ನಡುವೆಯೇ ಬ್ಲ್ಯಾಕ್ ಫಂಗಸ್ ವೈದ್ಯರ ಹಾಗೂ ಜನಸಾಮಾನ್ಯರ ಆತಂಕವನ್ನು ಹೆಚ್ಚಿಸಿದೆ. ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಅಥವಾ ಮ್ಯುಕೋರ್ಮೈಕೋಸಿಸ್ಗೆ ಸಂಬಂಧಿಸಿದಂತೆ ದೆಹಲಿಯ ಪ್ರತಿಷ್ಠಿತ ವೈದ್ಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಬ್ಲ್ಯಾಕ್ ಫಂಗಸ್ ಅನ್ನು ಹೇಗೆ ಗುರುತಿಸಬೇಕು ಮತ್ತು ಅದಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುವುದನ್ನು ಮಾರ್ಗಸೂಚಿಯಲ್ಲಿ ವಿವರಿಸಿದೆ. ಅನಿಯಂತ್ರಿತ ಮಧುಮೇಹ ಹೊಂದಿರುವವರು ಹಾಗೂ ಅತಿ ಹೆಚ್ಚು ಸ್ಟಿರಾಯ್ಡ್ ಬಳಕೆ ಮಾಡುವವರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಬಲುಬೇಗ ತುತ್ತಾಗುತ್ತಾರೆ.

ಬ್ಲ್ಯಾಕ್ ಫಂಗಸ್ ನಿರ್ಲಕ್ಷ್ಡಿಸಬೇಡಿ ಏಮ್ಸ್ ಮಾರ್ಗಸೂಚಿ ಸಲಹೆ, ಪತ್ತೆ ಕ್ರಮ ಮತ್ತು ಆರೈಕೆ ಸಲಹೆಗಳು ಇಲ್ಲಿವೆ Read More »

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ನಮ್ಮ ಸುತ್ತಲಿದೆ ಮನೆ ಮದ್ದು

ಶುಂಠಿ ಮತ್ತು ನಿಂಬೆ ಟೀ: ಹೆಚ್ಚಿನ ಜನರಿಗೆ ಬೆಳಿಗ್ಗೆ ಚಹಾ ಕುಡಿಯುವ ಅಭ್ಯಾಸವಿದೆ. ಇದರ ಜೊತೆ ಶುಂಠಿ ಮತ್ತು ನಿಂಬೆ ಮಿಶ್ರಣ ಮಾಡಬೇಕಷ್ಟೇ. ಇದಕ್ಕಾಗಿ ಒಂದು ಕಪ್ ನೀರನ್ನು ಬಿಸಿ ಮಾಡಿ, ನಂತರ ಅದಕ್ಕೆ ಅರ್ಧ ತುಂಡು ನಿಂಬೆ ಮತ್ತು ಸಣ್ಣ ತುಂಡು ಶುಂಠಿ ಹಾಕಿ ಒಂದು ನಿಮಿಷ ಕುದಿಸಿ. ಇದರ ನಂತರ, ಅದನ್ನು ಒಂದು ಕಪ್​ನಲ್ಲಿ ಹಾಕಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯಿರಿ. ಇದು ಆರೋಗ್ಯಕ್ಕೆ ಉತ್ತಮ ಪಾನೀಯ. ಕಿತ್ತಳೆ ರಸ: ದೇಹದ ರೋಗನಿರೋಧಕ ಶಕ್ತಿಯನ್ನು

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ನಮ್ಮ ಸುತ್ತಲಿದೆ ಮನೆ ಮದ್ದು Read More »