ಸಮಗ್ರ ಸಮಾಚಾರ

ಉಪ್ಪಿನಂಗಡಿ: ಮನೆಯಿಂದ ಲಕ್ಷಾಂತರ ಮೌಲ್ಯದ ನಗ-ನಗದು ಕಳವು

ಉಪ್ಪಿನಂಗಡಿ: ಮನೆಯಲ್ಲಿ ಮನೆಮಂದಿ ಇಲ್ಲದ ಸಮಯದಲ್ಲಿ ಕೈಚಳಕ ತೋರಿಸಿದ ಕಳ್ಳರು ಚಿನ್ನಾಭರಣ ಸಹಿತ ಮನೆಯಲ್ಲಿದ್ದ ನಗದು ದೋಚಿದ ಘಟನೆ ಇಲ್ಲಿಗೆ ಸಮೀಪದ ಕರಾಯ ಎಂಬಲ್ಲಿ ನಡೆದಿದೆ. ಕರಾಯ ಗ್ರಾಮದ ಮುರಿಯಾಳ ಮಹಮ್ಮದ್ ಅಶ್ರಫ್ ಎಂಬವರ ಮನೆಯಿಂದ, ಮನೆಮಂದಿ ಇಲ್ಲದಿದ್ದಾಗ ಬೀಗ ಒಡೆದು ಕಳ್ಳತನ ನಡೆದಿದೆ. ಅಶ್ರಫ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅವರ ತಂದೆ, ಪತ್ನಿ ಮತ್ತು ಮಕ್ಕಳು ಮನೆಯಲ್ಲಿರುತ್ತಿದ್ದರು. ಕಳೆದವಾರ ಹಬ್ಬದ ನಿಮಿತ್ತ ಮನೆಯವರೆಲ್ಲರೂ ಅಶ್ರಫ್ ಅವರ ಪತ್ನಿ ಶಾಹಿದ್ ಅವರ ತವರು ಮನೆಗೆ ತೆರಳಿದ್ದು ಸೋಮವಾರ […]

ಉಪ್ಪಿನಂಗಡಿ: ಮನೆಯಿಂದ ಲಕ್ಷಾಂತರ ಮೌಲ್ಯದ ನಗ-ನಗದು ಕಳವು Read More »

ಮಂಗಳೂರು: ಎಸ್ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪಿಎಸ್ಐ ಕೊರೋನಾಗೆ ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತುಂಬು ಗರ್ಭಿಣಿ ಮಹಿಳಾ ಪಿಎಸ್ಐ ಕೋವಿಡ್ ಗೆ ಬಲಿಯಾದ ಘಟನೆ ನಡೆದಿದೆ. ಕಳೆದ 5 ತಿಂಗಳ ಹಿಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದ ಶ್ಯಾಮಿಲಿ (24 ವ) ಮೃತಪಟ್ಟ ಮಹಿಳೆ. ಶ್ಯಾಮಿಲಿಯವರು ಹೆರಿಗೆ ರಜೆ ನಿಮಿತ್ತ ತವರಿಗೆ ತೆರಳಿದ್ದರು. ಕಳೆದೆರಡು ವಾರಗಳ ಹಿಂದೆ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ನಂತರ ಕೋಲಾರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ

ಮಂಗಳೂರು: ಎಸ್ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪಿಎಸ್ಐ ಕೊರೋನಾಗೆ ಬಲಿ Read More »

ಮಂಗಳೂರು | ಜೆಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಬಸ್ಸು ಬೆಂಕಿಗಾಹುತಿ

ಮಂಗಳೂರು: ಇಂದು ಬೆಳಿಗ್ಗಿನ ಜಾವ ಲಾಕ್‌ಡೌನ್ ಹಿನ್ನಲೆಯಲ್ಲಿ ಜೆಪ್ಪು ಮಾಕೆರ್ಟ್ನಲ್ಲಿ ನಿಂತಿದ್ದ ಬಸ್ಸುವೊಂದು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ನರೇಶ್ ಪೂಜಾರಿ ಮಾಲಕತ್ವದ ರಾಜಲಕ್ಷ್ಮಿ ಟ್ರಾವೆಲ್ಸ್ ಬಸ್ಸಿನಲ್ಲಿ ಮುಂಜಾನೆ 4ರ ಹೊತ್ತಿಗೆ ಬೆಂಕಿಕಾಣಿಸಿಕೊಂಡಿದೆ. ಹಾಗೆಯೇ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹತ್ತಿರದಲ್ಲೇ ಇದ್ದ ಬಸ್ಸುಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ. ಇದು ದುಷ್ಕರ್ಮಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು | ಜೆಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಬಸ್ಸು ಬೆಂಕಿಗಾಹುತಿ Read More »

‘ಇತ್ತೆ ಪಂಪ್ವೆಲ್ ಬತ್ತ್ ತೂಲೆ’ ವರ್ಲಿ‌ಕಲೆಯಿಂದ ಕಂಗೊಳಿಸುತ್ತಿದೆ ಮಂಗಳೂರಿನ ಪಂಪ್ವೆಲ್

ಮಂಗಳೂರು: ಟ್ರೋಲಿಗರಿಂದ ಸಾಕಷ್ಟು ಸುದ್ದಿಯಾಗಿದ್ದ ಮಂಗಳೂರಿನ ಪಂಪ್ ವೆಲ್ ಪ್ಲೈ ಓವರ್ ಮತ್ತೆ ಸುದ್ದಿಯಾಗುತ್ತಿದೆ. ಪ್ಲೈ ಓವರ್ ನ ಗೋಡೆಗಳು ಸುಂದರ ವರ್ಣರಂಜಿತ ವರ್ಲಿ ಚಿತ್ರಗಳಿಂದ ಕಂಗೊಳಿಸುತ್ತಿದ್ದು, ತನ್ನನ್ನು ಅಣಕಿಸಿದವರನ್ನು ಕೆಣಕುತ್ತಿದೆ. ಪ್ಲೈ ಓವರ್ ನ ಎರಡು ಬದಿ ರಸ್ತೆಗಳಲ್ಲಿ ಸಂಚರಿಸುವಾಗ ವರ್ಲಿ ಚಿತ್ತಾರಗಳು ಕಣ್ಣುಗಳಿಗೆ ಮುದನೀಡುತ್ತಿವೆ. ಮಂಗಳೂರಿನ ಆದಿತತ್ವ ಕಲಾವಿದರ ಬಳಗದ ಕುಂಚದಲ್ಲಿ ಮೂಡಿದ ಈ ವರ್ಲಿ ಚಿತ್ತಾರಗಳು ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ.ಕರ್ನಾಟಕ ಬ್ಯಾಂಕ್ ಸಹಕಾರದೊಂದಿಗೆ ರಸ್ತೆ ಗೋಡೆಗೆ ಬೇಸ್ ಪೈಂಟ್ ನಿಂದ ಅಂದಗೊಳಿಸಿ ವರ್ಲಿ

‘ಇತ್ತೆ ಪಂಪ್ವೆಲ್ ಬತ್ತ್ ತೂಲೆ’ ವರ್ಲಿ‌ಕಲೆಯಿಂದ ಕಂಗೊಳಿಸುತ್ತಿದೆ ಮಂಗಳೂರಿನ ಪಂಪ್ವೆಲ್ Read More »

ಮಡಪ್ಪಾಡಿಯ ಸಂಕಟದ ಕೆಸರು ತೊಳೆಯೋದು ಯಾವಾಗ? ಸಚಿವರೇ ಒಂಚೂರು ಕಿವಿಗೊಟ್ಟು‌ ಕೇಳಿ ನಮ್ಮ ಅಳಲು.

ಸುಳ್ಯ. ಮೇ.17: ಹೌದು. ಈ ಮಾತನ್ನು ದಿನಂಪ್ರತಿ ಈ‌ ಭಾಗದ ಜನ ಕೇಳುತ್ತಾ ಬರುತ್ತಿದ್ದಾರೆ. ಜೊತೆಗೆ ಹಿಡಿಶಾಪವನ್ನೂ ಹಾಕುತ್ತಿದ್ದಾರೆ. ಕೆಲವೊಮ್ಮೆ ಕೈಕಾಲು‌ ಮುರಿದುಕೊಂಡು‌ ಕಣ್ಣೀರನ್ನೂ ಒರೆಸಿಕೊಳ್ಳುತ್ತಾ‌ ಈ ಊರಲ್ಲಿ ಹುಟ್ಟಬಾರದಿತ್ತು ಅಂದುಕೊಳ್ತಾರೆ. ಅಷ್ಟಕ್ಕೂ ಈ ಮಡಪ್ಪಾಡಿಯಲ್ಲಿ ಏನಾಯಿತು? ಯಾಕೇ ಹೀಗೆ ಆಗ್ತಾ ಇದೆ‌. ಈ ಸ್ಟೋರಿನಲ್ಲಿ ಓದಿ. ಮಡಪ್ಪಾಡಿ ಸುಳ್ಯ ತಾಲೂಕಿನ ಅತ್ಯಂತ ಪುಟ್ಟದಾದ ಹಾಗೂ ನೈಸರ್ಗಿಕ ಸಂಪತ್ತನ್ನು ತನ್ನೊಳಗೆ ಹೊತ್ತು ಕೊಂಡ ಸುಂದರ ಹಳ್ಳಿ. ತಾಲೂಕಿನ ಪ್ರಮುಖ ಜನಪ್ರತಿನಿಧಿಗಳ ತವರೂರು. ಇಷ್ಟೆಲ್ಲಾ ಇದ್ದರೂ ಈ ಜನ

ಮಡಪ್ಪಾಡಿಯ ಸಂಕಟದ ಕೆಸರು ತೊಳೆಯೋದು ಯಾವಾಗ? ಸಚಿವರೇ ಒಂಚೂರು ಕಿವಿಗೊಟ್ಟು‌ ಕೇಳಿ ನಮ್ಮ ಅಳಲು. Read More »

ಸುಳ್ಳೇ ನಿಮ್ಮನೆ ದೇವರು. ಮಾನಗೆಟ್ಟ ಸರ್ಕಾರ, ಸಚಿವರನ್ನು ಇದುವರೆಗೆ ಕಂಡಿಲ್ಲ ಎಂದು ಛೇಡಿಸಿದ ಸಿದ್ದು

ಕೋಲಾರ: ಕೊರೊನಾ ತಜ್ಞರು ವರದಿ ಕೊಟ್ಟಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಈ ಸರ್ಕಾರ ಸತ್ತೇ ಹೋಗಿದೆ. ಸರ್ಕಾರದ ಬಳಿ ಬರೀ ಸುಳ್ಳಿನ ಕಂತೆಯೇ ತುಂಬಿದೆ. ರಾಜ್ಯದಲ್ಲಿ ಯಡಿಯೂರಪ್ಪರಂತಹ ಮುಖ್ಯಮಂತ್ರಿಯನ್ನು ನೋಡೇ ಇಲ್ಲ. ಇಂತಹ ಮಾನಗೆಟ್ಟ ಸರ್ಕಾರ, ಸಚಿವರನ್ನು ಇಲ್ಲಿವರೆಗೂ ನೋಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಕೋಲಾರ ಜಿಲ್ಲೆ ಕೆಜಿಎಫ್ ನಗರದ ಮುನ್ಸಿಪಲ್ ಮೈದಾನದಲ್ಲಿ ನಡೆದ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರಕ್ಕೆ ಕೊರೊನಾ ಎರಡನೇ ಅಲೆ ಬರುವ

ಸುಳ್ಳೇ ನಿಮ್ಮನೆ ದೇವರು. ಮಾನಗೆಟ್ಟ ಸರ್ಕಾರ, ಸಚಿವರನ್ನು ಇದುವರೆಗೆ ಕಂಡಿಲ್ಲ ಎಂದು ಛೇಡಿಸಿದ ಸಿದ್ದು Read More »

ನಿದ್ದೆಗಣ್ಣಲ್ಲಿದ್ರಾ ಮುಕ್ಕ ಆಸ್ಪತ್ರೆ ಸಿಬ್ಬಂದಿ? ಇಂಥಾ ಅಚಾತುರ್ಯ ಮಾಡಿದವರನ್ನು ಏನ್ಮಾಡ್ಬೇಕು?

ಮಂಗಳೂರು. ಮೇ.17: ಇಂದಿನ ದಿನಗಳಲ್ಲಿ ಆಸ್ಪತ್ರೆಗೆ ಬರೋದು ಅಂದ್ರೇನೆ ಜನ ಭಯ ಪಡ್ತಿದಾರೆ. ಅಂತದ್ದರಲ್ಲಿ ಇಂತಹ ತಪ್ಪನ್ನು ಮಾಡಿದ್ರೆ ನಿಜಕ್ಕೂ ಆಸ್ಪತ್ರೆಗೆ ಜನ ತಿರುಗೀನೂ ನೋಡಲ್ಲ. ಅಷ್ಟಕ್ಕೂ ಈ ಆಸ್ಪತ್ರೆ ಸಿಬ್ಬಂದಿ ಮಾಡಿದ್ದಾದ್ರೂ ಏನು? ಮುಂದೆ ಓದಿ.ಮಂಗಳೂರಿನ ಸುರತ್ಕಲ್ ಸಮೀಪದ ಮುಕ್ಕದ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಇಬ್ಬರು ಮೃತಪಟ್ಟಿದ್ದರು. ಈ ವೇಳೆ ಮೃತ ವ್ಯಕ್ತಿಗಳ ಶವ ಸಿಬ್ಬಂದಿ ಎಡವಟ್ಟಿನಿಂದ ಅದಲು ಬದಲಾದ ಘಟನೆ ನಡದಿದೆ.ಸುರತ್ಕಲ್ ಸಮೀಪದ ಹೊಸಬೆಟ್ಟು ನಿವಾಸಿ ಜಗದೀಶ್ ಕುಂದರ್ (66) ಹಾಗೂ ಕಾರ್ಕಳದ ಸುಧಾಕರ

ನಿದ್ದೆಗಣ್ಣಲ್ಲಿದ್ರಾ ಮುಕ್ಕ ಆಸ್ಪತ್ರೆ ಸಿಬ್ಬಂದಿ? ಇಂಥಾ ಅಚಾತುರ್ಯ ಮಾಡಿದವರನ್ನು ಏನ್ಮಾಡ್ಬೇಕು? Read More »

ಕಾಪು: ಹೆತ್ತವರ ಬುದ್ದಿಮಾತಿಗೆ ನೊಂದು ಬಾಲಕಿ ಆತ್ಮಹತ್ಯೆ

ಕಾಪು, ಮೇ ೧೭: ಮೊಬೈಲ್ ಗೇಮ್ ಅತಿಯಾಗಿ ಆಡದಂತೆ ತಾಯಿಯ ಬುದ್ದಿಮಾತಿಗೆ ನೊಂದು ೧೬ರ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ.೧೫ರ ರಾತ್ರಿ ಇಲ್ಲಿನ ಮಣಿಪುರ ಗ್ರಾಮ ಕೋಟೆ ಬಳಿ ನಡೆದಿದೆ.ಮೃತ ಬಾಲಕಿಯನ್ನು ಶಾಬನ್ ಹಾಗೂ ಜುಬೇದಾ ಅವರ ಪುತ್ರಿ ಸುಹೇಬತ್ ಅಸ್ಲಮೀಯಾ(೧೬) ಎಂದು ಗುರುತಿಸಲಾಗಿದೆ. ಈಕೆಗೆ ಮೇ ೧೫ ರಂದು ರಾತ್ರಿ ೮.೦೦ ಗಂಟೆ ವೇಳೆಗೆ ತಾಯಿಯು ಮೊಬೈಲ್‌ನಲ್ಲಿ ಆಟ ಆಡದಂತೆ ಬುದ್ದಿ ಹೇಳಿ ಮೊಬೈಲ್‌ನ್ನು ತೆಗೆದುಕೊಂಡಿದ್ದರು.ಸ್ವಲ್ಪ ಸಮಯದ ಬಳಿಕ ಮಗಳು ಮನೆಯಲ್ಲಿರದಿರುವುದನ್ನು

ಕಾಪು: ಹೆತ್ತವರ ಬುದ್ದಿಮಾತಿಗೆ ನೊಂದು ಬಾಲಕಿ ಆತ್ಮಹತ್ಯೆ Read More »

ಸುಳ್ಯ: ಜೂಜಾಟವಾಡುತ್ತಿದ್ದ ಐವರ ಬಂಧನ

ಸುಳ್ಯ ಮೇ.೧೭: ನಗರದ ಬಾರೊಂದರ ಬಳಿ ಜೂಜಾಡುತಿದ್ದ ಐವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡ ಘಟನೆ ಇಂದು ಸಂಜೆ ನಡೆದಿದಡೆ.ನಗರದ ಜಟ್ಟಿಪಳ್ಳ ಬಳಿ ಇರುವ ಹಿಲ್‌ಸೈಡ್ ಬಾರ್ ಬಳಿ ಜೂಜಾಟವಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದರೆ. ಅಲ್ಲದೆ ಆಟಕ್ಕೆ ಬಳಸಿದ 2 ಅಟೋ ರಿಕ್ಷಾ, ಹಾಗೂ ನಗದು ಹಣ ವಶ ಪಡಿಸಿಕೊಂಡಿದ್ದಾರೆ.

ಸುಳ್ಯ: ಜೂಜಾಟವಾಡುತ್ತಿದ್ದ ಐವರ ಬಂಧನ Read More »

ಮಂಗಳೂರಿಗೂ ಕಾಲಿಟ್ಟಿತಾ ಬ್ಯ್ಲಾಕ್ ಫಂಗಸ್!? ಹೇಗಿರುತ್ತೆ ಮಹಾಮಾರಿಯ ಲಕ್ಷಣ?

ಮಂಗಳೂರು, ಮೇ 17 :ರಾಜ್ಯದಲ್ಲಿ ಜನ ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾಗುತ್ತಿರುವ ಬೆನ್ನಲ್ಲೇ ಬ್ಯ್ಲಾಕ್ ಫಂಗಸ್ ಅತಿ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಮಹಾಮಾರಿ ಮಂಗಳೂರಿಗೂ ಕಾಲಿಟ್ಟಿತಾ? ಎಂಬ ಶಂಕೆ ವ್ಯಕ್ತವಾಗಿದೆ. ದ.ಕ. ಜಿಲ್ಲೆಯಲ್ಲಿ ಭಾನುವಾರ ಇಬ್ಬರು ರೋಗಿಗಳಲ್ಲಿ ಬ್ಯ್ಲಾಕ್ ಫಂಗಸ್ ಲಕ್ಷಣಗಳು ಕಂಡುಬಂದಿದ್ದು, ಇದು ಇನ್ನೂ ದೃಢಪಟ್ಟಿಲ್ಲ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ. ಜಿಲ್ಲೆಯ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಬ್ಯ್ಲಾಕ್ ಫಂಗಸ್ ಲಕ್ಷಣ ಇರುವ ರೋಗಿಗಳು ಕಂಡುಬಂದಲ್ಲಿ

ಮಂಗಳೂರಿಗೂ ಕಾಲಿಟ್ಟಿತಾ ಬ್ಯ್ಲಾಕ್ ಫಂಗಸ್!? ಹೇಗಿರುತ್ತೆ ಮಹಾಮಾರಿಯ ಲಕ್ಷಣ? Read More »