ಕಾಸರಗೋಡು: ಮಧೂರು ಮಲ್ಲ ಸೇರಿದಂತೆ ಜಿಲ್ಲೆಯ ಹಲವು ಊರುಗಳ ಹೆಸರು ಮಲಯಾಳಂಗೆ | ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ
ಕಾಸರಗೋಡು: ಕಾಸರಗೋಡು ಜಿಲ್ಲೆಯ ಹಲವು ಕನ್ನಡ ಊರುಗಳ ಹೆಸರುಗಳನ್ನು ಕೇರಳ ಸರಕಾರ ಮಲಯಾಳಮ್ ಗೆ ಬದಲಾಯಿಸಿದೆ. ಇದೀಗ ಪಿಣರಾಯಿ ಸರಕಾರದ ವಿರುದ್ಧ ಆಕ್ರೋಶಿತರಾಗಿರುವ ಜನ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿದ್ದರೂ ಬಹುವಾಗಿ ಕನ್ನಡ ಮತ್ತು ತುಳು ಭಾಷಿಗರಿರುವ ಕಾಸರಗೋಡು ಜಿಲ್ಲೆಯಲ್ಲಿರುವ ಹಲವು ಊರುಗಳ ಹೆಸರು ಈಗ ಮಳಯಾಳಂಗೆ ಬದಲಾಗಿದೆ. ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಮಧೂರು ಮತ್ತು ಮಲ್ಲ ಊರುಗಳ ಹೆಸರನ್ನೂ ಕೂಡ ಬದಲಾಯಿಸಲಾಗಿದೆ. ಜಿಲ್ಲೆಯ ಕನ್ನಡ ಮಾತನಾಡುವ ಬಹುಸಂಖ್ಯಾತ ಕನ್ನಡಿಗರ ಅಭಿಪ್ರಾಯ ಕೇಳದೆ ಸರಕಾರ […]










