Editor

ಬಿಲ್ಲು ಮುರಿದ ವರ, ಹೂಮಾಲೆ ಹಾಕಿದ ವಧು, ಬಿಹಾರದಲ್ಲಿ ನಡೆಯಿತು ಕಲಿಯುಗ ‘ಸೀತಾ ಸ್ವಯಂವರ’

ಬಿಹಾರ: ರಾಮಾಯಣದಲ್ಲಿ ಸೀತಾ ಸ್ವಯಂವರ ಹೇಗೆ ನಡೆಯಿತು ಎಂದು ಎಲ್ಲರಿಗೂ ಗೊತ್ತಿದೆ. ಬೃಹತ್​ ಬಿಲ್ಲನ್ನು ಎದೆಯೇರಿಸಲು ಹೆಣಗಾಡುತ್ತಿದ್ದಾಗ ಶ್ರೀರಾಮ ಬಂದು ಬಿಲ್ಲು ಎತ್ತಿ ಜಯಶಾಲಿಯಾಗುತ್ತಾನೆ. ಸ್ವಯಂವರ ಗೆದ್ದ ರಾಮನಿಗೆ ಸೀತಾಮಾತೆ ವರಮಾಲೆ ಹಾಕುವ ಮೂಲಕ ಮದುವೆ ನೆರವೇರುತ್ತೆ. ಇದೇ ರೀತಿ ಸ್ವಯಂವರ ಈಗಲೇ ನಡೆದಿದೆ ಎಂದರೆ ನೀವು ನಂಬಲೇ ಬೇಕು. ಬಿಹಾರದ ಸರಾನ ಜಿಲ್ಲೆಯಲ್ಲಿ ಆಧುನಿಕ ಸ್ವಯಂವರ ನಡೆದಿದೆ. ರಿಸೆಪ್ಷನ್​​ ವೇದಿಕೆ ಮೇಲೆ ವರ ಬಿಲ್ಲನ್ನು ಮುರಿದ ಬಳಿಕವೇ ವಧು ವರ ಮಾಲೆ ಹಾಕಿರುವ ಸ್ವಾರಸ್ಯಕರ ಘಟನೆ […]

ಬಿಲ್ಲು ಮುರಿದ ವರ, ಹೂಮಾಲೆ ಹಾಕಿದ ವಧು, ಬಿಹಾರದಲ್ಲಿ ನಡೆಯಿತು ಕಲಿಯುಗ ‘ಸೀತಾ ಸ್ವಯಂವರ’ Read More »

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಪತ್ತೆ

ಕುಮಟಾ: ಮೀನಿನ ಬಾಕ್ಸ್’ಗಳಲ್ಲಿ ಇರಿಸಿ ಬರೋಬ್ಬರಿ ಮೂರು ಟನ್ ಗಿಂತಲೂ ಹೆಚ್ಚು ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕುಮಟಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಮಟದ ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅಕ್ರಮ ಗೋ ಮಾಂಸ ಸಾಗಟ ಮಾಡುತ್ತಿರುವುದು ಕಂಡು ಬಂದಿದೆ. ಕಂಟೈನರ್ ಚಾಲಕ ಮಹಮ್ಮದ್ ಶಾಹಿದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಾನಗಲ್ ನಿಂದ ಮಂಗಳೂರಿಗೆ ಗೋ ಮಾಂಸ ಸಾಗಿಸುತ್ತಿರುವುದಾಗಿ ಆತ ಹೇಳಿದ್ದಾನೆ. ಆತನ ಹೇಳಿಕೆಯಿಂದ ಮಂಗಳೂರಿನಲ್ಲಿ ಗೋ ಮಾಂಸ ಮಾರಾಟದ

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಪತ್ತೆ Read More »

ಪುತ್ತೂರು: ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಾದ ದಿನವೇ ಕುಸಿಯಿತು ಮನೆ | ಈ ಪರಿಸ್ಥಿತಿಯಲ್ಲಿ ನಾನು ಹೇಗೆ ಓದಲಿ | ವಿದ್ಯಾರ್ಥಿನಿಯ ಅಳಲು

ಪುತ್ತೂರು: ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡ ದಿನವೇ ಪುತ್ತೂರಿನ ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವಳ ಮನೆ ಕುಸಿದಿದ್ದು, ಪರೀಕ್ಷೆ ಸಿದ್ಧತೆ ನಡೆಸಲು ಸಂಕಷ್ಟ ಎದುರಾಗಿದೆ. ತಾಲೂಕಿನ ಚಿಕ್ಕಮುಂಡ್ಲೂರು ಗ್ರಾಮದ ನಿವಾಸಿ ಗೋಪಾಲ ಶೆಟ್ಟಿ ಎಂಬವರ ಮನೆ ಸೋಮವಾರ ಸಂಜೆ ಮಳೆಗೆ ಶಿಥಿಲಗೊಂಡು ಕುಸಿದಿದೆ. ಬಡವರಾದ ಗೋಪಾಲ ಶೆಟ್ಟಿ ಅವರು ಕಾಲು ನೋವಿನಿಂದ ದುಡಿಯಲು ಸಾಧ್ಯವಿಲ್ಲದೆ ಮನೆಯಲ್ಲೇ ಇದ್ದಾರೆ. ಇವರ ಪತ್ನಿ ಬೀಡಿಕಟ್ಟಿ ಕೂಲಿ ಕೆಲಸ ಮಾಡಿ ಸಿಗುವ ಅಲ್ಪ ಸ್ವಲ್ಪ ಸಂಪಾದನೆಯಲ್ಲಿ ಪತಿಯ ಆರೋಗ್ಯವನ್ನು ನೋಡಿಕೊಂಡು ಮಕ್ಕಳನ್ನು ಸಾಕುತ್ತಿದ್ದಾರೆ. ಇಬ್ಬರು ಮಕ್ಕಳಲ್ಲಿ

ಪುತ್ತೂರು: ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಾದ ದಿನವೇ ಕುಸಿಯಿತು ಮನೆ | ಈ ಪರಿಸ್ಥಿತಿಯಲ್ಲಿ ನಾನು ಹೇಗೆ ಓದಲಿ | ವಿದ್ಯಾರ್ಥಿನಿಯ ಅಳಲು Read More »

ಶೀಲ ಶಂಕಿಸಿದ ಪತಿಗೆ‌ ಸ್ವರ್ಗದ ದಾರಿ ತೋರಿದ ಪತ್ನಿ…!

ಮೈಸೂರು (ಜೂ.29): ತನ್ನ ಸಹೋದರರು ಮತ್ತು ಬಾವನೊಂದಿಗೆ ಸೇರಿಕೊಂಡು ಪತ್ನಿ ತನ್ನ ಪತಿಯನ್ನೆ ಹತ್ಯೆ ಮಾಡಿರುವ ಘಟನೆ ಮೈಸೂರಿನ ಹೊರವಲಯದ ಕೂರ್ಗಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ನಂಜನಗೂಡು ತಾಲೂಕಿನ ಹಿಬ್ಜಾಲ ಗ್ರಾಮದ ಕೆಂಪಶೆಟ್ಟಿ(35) ಎಂಬಾತ ಕೊಲೆಯಾದ ವ್ಯಕ್ತಿ. ಈತನ ಪತ್ನಿ ಶಶಿಕಲಾ, ಬಾಮೈದ ಕೆಂಡಶೆಟ್ಟಿ, ರಮೇಶ್‌ ಮತ್ತು ನಾಗೇಂದ್ರ ಎಂಬವರೇ ಹತ್ಯೆ ಮಾಡಿದ ಆರೋಪಿಗಳು. ಕಾರಣವೇನು? 12 ವರ್ಷಗಳ ಹಿಂದೆ ಕೆಂಪಶೆಟ್ಟಿ, ಎಚ್‌.ಡಿ. ಕೋಟೆ ತಾಲೂಕಿನ ಹೊಸಹುಂಡಿ ಗ್ರಾಮದ ಶಶಿಕಲಾ ಅವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಹೆಣ್ಣು

ಶೀಲ ಶಂಕಿಸಿದ ಪತಿಗೆ‌ ಸ್ವರ್ಗದ ದಾರಿ ತೋರಿದ ಪತ್ನಿ…! Read More »

ಆಷಾಡ ಮಾಸದಲ್ಲೇಕೆ ದಂಪತಿಗಳು ದೂರ ಇರ್ತಾರೆ ಗೊತ್ತಾ?. ಇಲ್ಲಿನ ಶಾಸ್ತ್ರ ಹಾಗೂ ವೈಜ್ಞಾನಿಕ ಕಾರಣಗಳು.

ಹಿಂದೂ ಧರ್ಮ ಹಲವು ಸಾಂಸ್ಕೃತಿಕ ಆಚರಣೆಗಳನ್ನು ತನ್ನ ಉದರದಲ್ಲಿಟ್ಟುಕೊಂಡು ಜಗತ್ತಿನ ಗಮನ ಸೆಳೆಯುತ್ತಿದೆ. ಹಲವು ವಿದೇಶಿ ವಿದ್ವಾಂಸರು ಸಂಸ್ಕೃತಿಯೇ ಹಿಂದೂ ಧರ್ಮ ಎಂದು ವ್ಯಾಖ್ಯಾನ ಮಾಡಿದ್ದಾರೆ. ಅಲ್ಲದೇ ಹಿಂದೂ ಧರ್ಮದಲ್ಲಿ ಹಲವು ಧಾರ್ಮಿಕ ನಂಬಿಕೆಗಳು, ಆಚರಣೆಗಳು ಅಸ್ತಿತ್ವದಲ್ಲಿವೆ. ಅವು ಜನರ ಸಾಮಾಜಿಕ ಜೀವನದ ಭಾಗವೇ ಆಗಿವೆ. ಇಂತಹ ನಂಬಿಕೆಗಳಲ್ಲಿ ಕಾಲನ ಚಲನೆಯನ್ನು ತಿಳಿಸುವ 12 ಮಾಸಗಳು ಸಹ ಸೇರುತ್ತವೆ. ಸೌರಮಾನದ ಮಾಸಗಳಲ್ಲಿ ಆಷಾಢ ನಾಲ್ಕನೇ ಮಾಸವಾಗಿದ್ದು, ಇದು ಸಾಮಾನ್ಯವಾಗಿ ಜುಲೈ ಹಾಗೂ ಆಗಸ್ಟ್​ನಲ್ಲಿ ಪ್ರಾರಂಭವಾಗುತ್ತದೆ. ಈ ಮಾಸವನ್ನು

ಆಷಾಡ ಮಾಸದಲ್ಲೇಕೆ ದಂಪತಿಗಳು ದೂರ ಇರ್ತಾರೆ ಗೊತ್ತಾ?. ಇಲ್ಲಿನ ಶಾಸ್ತ್ರ ಹಾಗೂ ವೈಜ್ಞಾನಿಕ ಕಾರಣಗಳು. Read More »

ಚೀನಾ ಗಡಿಗೆ 50 ಸಾವಿರ ಸೈನಿಕರ ರವಾನೆ, ಗಡಿಯಲ್ಲಿ ಯುದ್ದ ಭೀತಿ!?

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ ಚೀನಾ-ಭಾರತ ಗಡಿಗೆ 50,000 ಸೈನಿಕರನ್ನ ಕಳುಹಿಸಿದೆ. ಅಲ್ಲದೇ ಮೂರು ಫೈಟರ್​ ಜೆಟ್​ಗಳನ್ನೂ ಸಹ ಮೂರು ಗಡಿ ಪ್ರದೇಶಗಳಿಗೆ ಕಳುಹಿಸಿದೆ ಎನ್ನಲಾಗಿದ್ದು ಸದ್ಯ ಚೀನಾ-ಭಾರತ ಗಡಿಯಲ್ಲಿ ಒಟ್ಟು 2 ಲಕ್ಷ ಟ್ರೂಪ್​ಗಳಿವೆ. ಕಳೆದ ವರ್ಷಕ್ಕಿಂತ 40 ಪಟ್ಟು ಹೆಚ್ಚು ಸೈನಿಕರನ್ನ ನಿಯೋಜಿಸಿದಂತಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿಂದೆ ಚೀನಾದಿಂದ ಎದುರಾಗುವ ದಾಳಿಯನ್ನ ತಡೆಯುವಷ್ಟು ಮಾತ್ರವೇ ಸೇನೆಯನ್ನ ನಿಯೋಜಿಸಲಾಗಿತ್ತು. ಇದೀಗ ಚೀನಾದಿಂದ ಎದುರಾಗುವ ಸಂಭಾವ್ಯ ದಾಳಿಯ ವಿರುದ್ಧ ಹೋರಾಡಿ

ಚೀನಾ ಗಡಿಗೆ 50 ಸಾವಿರ ಸೈನಿಕರ ರವಾನೆ, ಗಡಿಯಲ್ಲಿ ಯುದ್ದ ಭೀತಿ!? Read More »

ಶಾಕಿಂಗ್ ಸಮಾಚಾರ |ನಿರಂತರ‌ ಏರಿಕೆಯತ್ತ ಪೆಟ್ರೋಲ್

ನವದೆಹಲಿ: ಒಂದು ದಿನದ ವಿರಾಮದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ ಮಾಡಲಾಗಿದೆ. ಇವತ್ತು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 35 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರಿಗೆ 28 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಈಗಾಗಲೇ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುಗತಿಯಲ್ಲೇ ಸಾಗುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಅಗತ್ಯ ವಸ್ತು ಸೇರಿದಂತೆ ಹಲವು ವಸ್ತುಗಳ ಬೆಲೆ ದುಬಾರಿಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತೆ ಪ್ರತಿದಿನವೂ

ಶಾಕಿಂಗ್ ಸಮಾಚಾರ |ನಿರಂತರ‌ ಏರಿಕೆಯತ್ತ ಪೆಟ್ರೋಲ್ Read More »

ಕನ್ನಡ ಗ್ರಾಮಗಳ ಹೆಸರನ್ನು ಯಾವುದೇ ಕಾರಣಕ್ಕೂ ಮಲಯಾಳೀಕರಣ ಮಾಡುವುದಿಲ್ಲ: ಮಂಜೇಶ್ವರ ಶಾಸಕ ಕೆ. ಎಂ. ಅಶ್ರಫ್ ಸ್ಪಷ್ಟನೆ

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರುಗಳನ್ನು ಮಲಯಾಳಂಗೆ ಬದಲಾಯಿಸಲು ಕೇರಳ ಸರ್ಕಾರ ಆದೇಶಿಸಿದೆ ಎಂದು ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಮಂಜೇಶ್ವರ ಶಾಸಕ ಸ್ಪಷ್ಟನೆ ನೀಡಿದ್ದಾರೆ. ಗ್ರಾಮಗಳ ಹೆಸರು ಬದಲಾಯಿಸುವ ಬಗ್ಗೆ ಈವರೆಗೆ ಕೇರಳ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿ ಕಚೇರಿ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಈ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಮಂಜೇಶ್ವರ ಶಾಸಕ ಕೆ ಎಂ ಅಶ್ರಫ್ ಸಾಮಾಜಿಕ ಜಾಲತಾಣಗಳ

ಕನ್ನಡ ಗ್ರಾಮಗಳ ಹೆಸರನ್ನು ಯಾವುದೇ ಕಾರಣಕ್ಕೂ ಮಲಯಾಳೀಕರಣ ಮಾಡುವುದಿಲ್ಲ: ಮಂಜೇಶ್ವರ ಶಾಸಕ ಕೆ. ಎಂ. ಅಶ್ರಫ್ ಸ್ಪಷ್ಟನೆ Read More »

ಇಂದಿನಿಂದ ಕೇರಳದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಿಸಿ ಡಾ. ರಾಜೇಂದ್ರ

ಮಂಗಳೂರು: ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಇಂದಿನಿಂದ ಆರ್’ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ದ. ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಹೇಳಿದ್ದಾರೆ. ನಿನ್ನೆ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ತಾವೇ ಕುದ್ದು ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಮಂಗಳವಾರ (29-06-2021) ದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕೇರಳ ಗಡಿ ಭಾಗದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿದ್ದು, ಡೆಲ್ಟಾ ವೇರಿಯಂಟ್ ಪತ್ತೆಯಾಗಿರುವ ಸಂಶಯವಿದೆ. ಈ ಬಗ್ಗೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದ್ದರಿಂದ

ಇಂದಿನಿಂದ ಕೇರಳದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಿಸಿ ಡಾ. ರಾಜೇಂದ್ರ Read More »

ಕಾರು ಪ್ರಪಾತಕ್ಕೆ ಉರುಳಿ 9 ಜನ ಸಾವು

ಶಿಮ್ಲಾ: ಕಾರೊಂದು ಪ್ರಪಾತಕ್ಕೆ ಉರುಳಿ ಬಿದ್ದು 9 ಜನ ಮೃತ ಪಟ್ಟ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ನಡೆದಿದೆ. ಪಚಾಡ್ ಪ್ರದೇಶದ ಬಾಗ್ ಪಶೋಗ್ ಗ್ರಾಮದ ಬಳಿ ಸೋಮವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿದೆ. ಅಪಘಾತಕ್ಕೀಡಾದ ಕಾರಿನಲ್ಲಿದ್ದ ಪ್ರಯಾಣಿಕರು ಮದುವೆಯ ಪಾರ್ಟಿಗೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದು, ಮೃತರನ್ನು ಯಾರೆಂದು ಇನ್ನೂ ಗುರುತಿಸಲಾಗಿಲ್ಲ ಎಂದು ಪೌಂಟಾ ಸಾಹಿಬ್ ಡಿಎಸ್ ಪಿ ಬೀರ್ ಬಹದ್ದೂರ್ ಹೇಳಿದ್ದಾರೆ.

ಕಾರು ಪ್ರಪಾತಕ್ಕೆ ಉರುಳಿ 9 ಜನ ಸಾವು Read More »