-ದೇಶ ಕೋಶ

ಎಚ್‌ಪಿಸಿಎಲ್ ಸ್ಥಾವರದಲ್ಲಿ ಭಾರೀ ಸ್ಫೋಟ

ವಿಶಾಖಪಟ್ಟಣಂ: ಇಲ್ಲಿನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಸ್ಥಾವರದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಎಚ್‌ಪಿಸಿಎಲ್‌ನ ಯುನಿಟ್ -3 ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಐದು ಅಗ್ನಿಶಾಮಕ ದಳಗಳು ಸ್ಥಳಕ್ಕೆ ದೌಡಾಯಿಸಿವೆ. ಹೆಚ್ಚಿನ ಅಗ್ನಿಶಾಮಕ ಟೆಂಡರ್‌ಗಳನ್ನು ರವಾನಿಸಲಾಗುತ್ತಿದೆ. ಘಟನೆಗೆ ಇನ್ನೂ ಸ್ಪಷ್ಟ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಎಚ್‌ಪಿಸಿಎಲ್ ಸ್ಥಾವರದಲ್ಲಿ ಭಾರೀ ಸ್ಫೋಟ Read More »

ಕೇರಳಕ್ಕೆ ಹೋಗುವವರಿಗೆ ನಕಲಿ ಕೋವಿಡ್ ರಿಪೋರ್ಟ್ | ಸಿದ್ದಾಪುರದ ಪತ್ರಕರ್ತ ಅರೆಸ್ಟ್

ಸಿದ್ದಾಪುರು: ವಿಶ್ವದಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿರುವಾಗ, ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ ಸಮಾಜಮುಖಿ ಕೆಲಸ ಮಾಡಬೇಕಾದ ಪತ್ರಕರ್ತರೋರ್ವರು, ಸಾರ್ವಜನಿಕರಿಗೆ ಅಕ್ರಮವಾಗಿ ನಕಲಿ ಕೋವಿಡ್ ಪ್ರಮಾಣಪತ್ರ ನೀಡಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಕರ್ನಾಟಕದಿಂದ ಕೇರಳಕ್ಕೆ ಹೋಗುವವರಿಗೆ ಕೊರೋನಾ ನೆಗೆಟೀವ್ ರಿಪೋರ್ಟ್ ಕಡ್ಡಾಯವಾಗಿದ್ದು,  ಸಿದ್ಧಾಪುರದ ವಿಜಯವಾಣಿ ಪತ್ರಿಕೆಯ ವರದಿಗಾರ ಅಬ್ದುಲ್ ಅಜೀಜ್ ಎಂಬಾತ ಕೇರಳಕ್ಕೆ  ಹೋಗುವವರಿಗೆ  ತನ್ನ ಸ್ಟುಡಿಯೋದಲ್ಲಿಯೇ ಕೂತು ಯಾವುದೇ ಟೆಸ್ಟ್ ಮಾಡಿಸದೇ, ನೆಗಟೀವ್ ರಿಪೋರ್ಟ್ ಕೊಟ್ಟು ಹಣಪಡೆದು ಸಿಕ್ಕಿಬಿದ್ದಿದ್ದಾನೆ. ಆತನ ಈ ಕೃತ್ಯಕ್ಕೆ ಇಡೀ ಪತ್ರಿಕಾ ವಲಯ ತಲೆ

ಕೇರಳಕ್ಕೆ ಹೋಗುವವರಿಗೆ ನಕಲಿ ಕೋವಿಡ್ ರಿಪೋರ್ಟ್ | ಸಿದ್ದಾಪುರದ ಪತ್ರಕರ್ತ ಅರೆಸ್ಟ್ Read More »

‘ಯಾಸ್’ ಚಂಡಮಾರುತದ ಎಫೆಕ್ಟ್ | ಒಡಿಶಾದ ಕರಾವಳಿಯಲ್ಲಿ ಭಾರೀ ಮಳೆ

ಭುವನೇಶ್ವರ: ಯಾಸ್ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದು, ಇದರ ಪರಿಣಾಮ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ ಪರಿಸ್ಥಿತಿ ಎದುರಿಸಲು ರಾಷ್ಟ್ರೀಯ ವಿವತ್ತು ನಿರ್ವಹಣಾ ತಂಡವನ್ನು ಕೇಂದ್ರ ಸರ್ಕಾರ ಒ಼ಡಿಶಾಕ್ಕೆ ರವಾನಿಸಿದೆ. ಮೇ 26ರಂದು ಯಾಸ್ ಚಂಡಮಾರುತ ಒಡಿಶಾ ತಲುಪುವ ಸಾಧ್ಯತೆ ಇದೆ. ಯಾಸ್ ಚಂಡಮಾರುತ ತನ್ನ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದು, ಶಕ್ತಿಶಾಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

‘ಯಾಸ್’ ಚಂಡಮಾರುತದ ಎಫೆಕ್ಟ್ | ಒಡಿಶಾದ ಕರಾವಳಿಯಲ್ಲಿ ಭಾರೀ ಮಳೆ Read More »

ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಹಿಂಬದಿ ಸವಾರನ ಜೀವ ತೆಗೆದ ಸವಾರ, ಚೆಕ್ ಪೋಸ್ಟ್ ಗೇಟ್ ಗೆ ಬೈಕ್ ಗುದ್ದಿದ ವೀಡಿಯೋ ವೈರಲ್

ತೆಲಂಗಾಣ: ಅಸಾದ್ಯ ರೀತಿಯಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ತಪ್ಪಿಸುವ ಸಾಹಸ ಮಾಡಲು ಹೋಗಿ ಹಿಂಬದಿ ಸವಾರನ ಸಾವಿಗೆ ಬೈಕ್ ಸವಾರನೇ ಕಾರಣನಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಂಚೇರಿಯಲ್ ಜಿಲ್ಲೆಯ ತಪುರ್ ಚೆಕ್ ಪೋಸ್ಟ್ ನಲ್ಲಿ ಘಟನೆಯು ಮೇ 22 ರ ಮಧ್ಯಾಹ್ನ 12.53 ರ ವೇಳೆಗೆ ನಡೆದಿದ್ದು , ಘಟನೆಗೆ ಸಂಬಂಧಿಸಿದ ಸಿಸಿಟಿವಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ. ಸೆರೆಯಾಗಿರುವ ವೀಡಿಯೋದಲ್ಲಿ ಯುವಕರಿಬ್ಬರು ಅತಿ ವೇಗವಾಗಿ ಬಂದಿದ್ದು, ಈ ಸಂದರ್ಭ ಚೆಕ್ ಪೋಸ್ಟ್

ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಹಿಂಬದಿ ಸವಾರನ ಜೀವ ತೆಗೆದ ಸವಾರ, ಚೆಕ್ ಪೋಸ್ಟ್ ಗೇಟ್ ಗೆ ಬೈಕ್ ಗುದ್ದಿದ ವೀಡಿಯೋ ವೈರಲ್ Read More »

ಕೊರೊನ ‌ಮೂರನೇ ಅಲೆ: ಆತಂಕದಲ್ಲಿದ್ದ ಪೋಷಕರಿಗೆ ಗುಡ್ ನ್ಯೂಸ್

ನವದೆಹಲಿ.ಮೇ.25: ಮಾರಣಾಂತಿಕ ಕೊರೋನಾ ವೈರಸ್ ಭವಿಷ್ಯದಲ್ಲಿ ರೂಪಾಂತರಗೊಳ್ಳಬಹುದು, ಮಕ್ಕಳಿಗೆ ಹೆಚ್ಚು ಅಪಾಯವನ್ನುಂಟು ಮಾಡಬಹುದು ಎಂಬ ಆತಂಕದ ನಡುವೆ ಮುಖ್ಯವಾದ ಮಾಹಿತಿ ಸಿಕ್ಕಿದೆ. ಕೋವಿಡ್ 19 ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುವ ಬಗ್ಗೆ ಯಾವುದೇ ಸೂಚನೆ ಇಲ್ಲವೆಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ. ತಜ್ಞರ ಪ್ರಕಾರ, ಕೊರೋನಾ ಮೊದಲ ಅಲೆ ವೃದ್ಧರ ಮೇಲೆ ಆಕ್ರಮಣ ಮಾಡಿದ್ದು, ಎರಡನೇ ಅಲೆಯಲ್ಲಿ ಯುವಕರ ಮೇಲೆ ಪರಿಣಾಮ ಬೀರಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯಕಾರಿಯಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳು

ಕೊರೊನ ‌ಮೂರನೇ ಅಲೆ: ಆತಂಕದಲ್ಲಿದ್ದ ಪೋಷಕರಿಗೆ ಗುಡ್ ನ್ಯೂಸ್ Read More »

ಅಚ್ಚ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಕೆ.ಎಮ್. ಅಶ್ರಫ್

ತಿರುವನಂತಪುರಂ: ಕೇರಳ ವಿಧಾನಸಭೆಗೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ಮತದಾನ ನಡೆದು ಈ ತಿಂಗಳಾರಂಭದಲ್ಲಿ ಫಲಿತಾಂಶ ಹೊರ ಬಿದ್ದಿತ್ತು. ಒಟ್ಟು 140 ಸ್ಥಾನಗಳಿರುವ ಕೇರಳ ವಿಧಾನಸಭೆ ಶಾಸಕರಾಗಿ ಆಯ್ಕೆಯಾದವರ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ತಿರುವನಂತಪುರಂ ನಲ್ಲಿ ನಡೆದಿದೆ. ಈ ವೇಳೆ ಮಂಜೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಕೆ ಎಂ ಅಶ್ರಫ್ ಅವರು ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡ ಅಭಿಮಾನ ಮೆರೆದಿದ್ದಾರೆ. ಅಶ್ರಫ್ ಅವರು ತನ್ನ ಸಂಪೂರ್ಣ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ಪಡೆದಿದ್ದು, ಕನ್ನಡದಲ್ಲಿ ಸ್ನಾತಕೋತ್ತರ

ಅಚ್ಚ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಕೆ.ಎಮ್. ಅಶ್ರಫ್ Read More »

ಅಕ್ಕ- ತಂಗಿಯರ ವರಿಸಿದ ಮತ್ತೊಬ್ಬ ಯುವಕ!

ತೆಲಂಗಾಣ: ಈ ಹಿಂದೆ ಕೋಲಾರದ ಉಮಾಪತಿ ಎಂಬ ಯುವಕ ಅಕ್ಕತಂಗಿಯರನ್ನು ವರಿಸಿ ರಾಜ್ಯಾದ್ಯಂತ ಸುದ್ದಿಯಾಗಿ, ಬಳಿಕ ಕಂಬಿ ಸೇರಿದ್ದ ಘಟನೆ ಮರೆಯುವಾಗಲೇ ಇಂತದ್ದೇ ಮದುವೆಯೋಗ ಮತ್ತೊಬ್ಬನಿಗೆ ಒಲಿದಿದ್ದು, ಆತನೊಂದಿಗೆ ಒಮ್ಮೆಲೆ ಇಬ್ಬರು ಯುವತಿಯರು ಸಪ್ತಪದಿ ತುಳಿದಿದ್ದಾರೆ. ಅಂದಹಾಗೆ ವಧುಗಳಿಬ್ಬರೂ ಒಡಹುಟ್ಟಿದವರು! ತೆಲಂಗಾಣ ರಾಜ್ಯದ ಮೆದಕ್​ ಜಿಲ್ಲೆಯ ಕೋಲ್ಚರಂ ಪಂಚಾಯಿತಿ ವ್ಯಾಪ್ತಿಯ ಅನ್ಸಾನ್ ಪಲ್ಲಿ ಗ್ರಾಮದಲ್ಲಿ ಇಂತದ್ದೊಂದು ಮದುವೆ ನಡೆದಿದೆ. ಗ್ರಾಮದ ಗೋಪಾಲ ವೆಂಕಟೇಶ್ ಎಂಬುವರ ಮಕ್ಕಳಾದ ಸ್ವಾತಿ ಮತ್ತು ಶ್ವೇತಾ ಇಬ್ಬರೂ ಒಬ್ಬನನ್ನೇ ಮದುವೆ ಆಗಿದ್ದಾರೆ. ಅಕ್ಕ

ಅಕ್ಕ- ತಂಗಿಯರ ವರಿಸಿದ ಮತ್ತೊಬ್ಬ ಯುವಕ! Read More »

“ರಿಷಭ್ ಒಬ್ಬ ಫೆಂಟಾಸ್ಟಿಕ್ ಪ್ಲೇಯರ್” ಸಹಾ ನಿಸ್ವಾರ್ಥತೆಗೆ ಕ್ರಿಕೆಟ್ ವಲಯ ದಿಲ್ ಖುಷ್

ಕೊಲ್ಕತ್ತಾ: “ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಟೂರ್ನಿಯ ಕಳೆದ ಕೆಲ ಪಂದ್ಯಗಳಲ್ಲಿ ರಿಷಬ್ ಪಂತ್ ಅಮೋಘ ಆಟವಾಡಿದ್ದಾರೆ . ಹೀಗಾಗಿ ಮುಂಬರುವ ಉಧ್ಟಾಟನಾ ಆವೃತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲೂ ಅವರೇ ನನ್ನ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್” ಎಂದಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರ ಮಾತಿಗೆ ಕ್ರಿಕೆಟ್ ವಲಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಪೋರ್ಟ್ಸ್ ಚಾನೆಲ್ ಒಂದರ ಸಂದರ್ಶನದಲ್ಲಿ  ಮಾತನಾಡಿದ್ದ ವೃದ್ಧಿಮಾನ್, ನಾನಿನ್ನು ಅವಕಾಶಕ್ಕಾಗಿ

“ರಿಷಭ್ ಒಬ್ಬ ಫೆಂಟಾಸ್ಟಿಕ್ ಪ್ಲೇಯರ್” ಸಹಾ ನಿಸ್ವಾರ್ಥತೆಗೆ ಕ್ರಿಕೆಟ್ ವಲಯ ದಿಲ್ ಖುಷ್ Read More »

ಮೇ.26ಕ್ಕೆ ವರ್ಷದ ಮೊದಲ ಚಂದ್ರಗ್ರಹಣ
ಭಾರತದಲ್ಲಿ ಗೋಚರಿಸಲಿದೆ ವೈಶಾಖ ಪೂರ್ಣಿಮೆಯ ‘ಬ್ಲಡ್ ಮೂನ್’

ನವದೆಹಲಿ : 2021 ನೇ ವರ್ಷದ ಮೊದಲ ಚಂದ್ರಗ್ರಹಣ ಮೇ. 26 ನೇ ದಿನಾಂಕದಂದು ವೈಶಾಖ ಪೂರ್ಣಿಮೆಯ ದಿನದಂದು ಗೋಚರಿಸಲಿದೆ. ಮೇ. 26 ರ ಸಂಜೆ ಆರಂಭವಾಗುವ ಗ್ರಹಣವು ಭಾರತದ ಪೂರ್ವ ದಿಕ್ಕಿನ ರಾಜ್ಯಗಳಾದ ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಪೂರ್ವ ಓರಿಸ್ಸಾ, ಮಣಿಪುರ, ತ್ರಿಪುರ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಗ್ರಹಣ ಗೋಚರಿಸಲಿದೆ. ಭಾರತ ಹೊರತುಪಡಿಸಿ ಜಪಾನ್, ಬಾಂಗ್ಲಾದೇಶ, ಸಿಂಗಾಪುರ, ಬರ್ಮಾ, ದಕ್ಷಿಣ ಕೋರಿಯಾ, ಫಿಲಿಪೀನ್ಸ್, ಉತ್ತರ ಹಾಗೂ ದಕ್ಷಿಣ ಅಮೆರಿಕ, ಹಿಂದೂ ಮಹಾಸಾಗರ ಪ್ರದೇಶಗಳಲ್ಲಿ ಚಂದ್ರ

ಮೇ.26ಕ್ಕೆ ವರ್ಷದ ಮೊದಲ ಚಂದ್ರಗ್ರಹಣ
ಭಾರತದಲ್ಲಿ ಗೋಚರಿಸಲಿದೆ ವೈಶಾಖ ಪೂರ್ಣಿಮೆಯ ‘ಬ್ಲಡ್ ಮೂನ್’
Read More »

ನನ್ನ ಜೊತೆಗೆ ಮಧುಮಂಚಕ್ಕೆ ಬಾ, ಬೇಕಾದ್ದು ಕೊಡುವೆ! ಪ್ರೊಫೆಸರ್ ನ ಈ ಆಫರ್ ಗೆ ನಟಿ ಕಂಗಾಲು

ಚೆನ್ನೈ.ಮೇ22: ಇಂತದ್ದೊಂದು ದಿಗಿಲುಗೊಳ್ಳುವ ಆಫರ್ ಬಂದಿದ್ದು ತಮಿಳು ಚಿತ್ರರಂಗದ ಬಲು ಬೇಡಿಕೆಯ ನಟಿ ಹಾಗೂ ಗಾಯಕಿ ಸೌಂದರ್ಯ ನಂದಕುಮಾರ್ ರವರಿಗೆ.  ಗಾಯಕಿಯಾಗಿ ಚಿತ್ರರಂಗಕ್ಕೆ ಬಂದ ಸೌಂದರ್ಯ ರಜನಿಕಾಂತ್ ನಟನೆಯ ಕಬಾಲಿ, ವಿಜಯ್ ಮಾಸ್ಟರ್ ನಟನೆಯ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದಾಕೆ.ಇತ್ತೀಚಿನ ದಿನಗಳಲ್ಲಿ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರತಿಯೊಂದು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ತನ್ನ ಸಿನಿಮಾರಂಗದ ವಿಚಾರಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ನಟಿ ಸೌಂದರ್ಯಾ ಬಾಲ ನಂದಕುಮಾರ್ ಅವರಿಗೂ ಹೀಗೆಯೇ ಆಗಿದೆ. ಪ್ರಾಧ್ಯಾಪಕನೋರ್ವ ತಮ್ಮ ಜತೆ

ನನ್ನ ಜೊತೆಗೆ ಮಧುಮಂಚಕ್ಕೆ ಬಾ, ಬೇಕಾದ್ದು ಕೊಡುವೆ! ಪ್ರೊಫೆಸರ್ ನ ಈ ಆಫರ್ ಗೆ ನಟಿ ಕಂಗಾಲು Read More »