Uncategorized

19 ಜಿಲ್ಲೆಗಳಲ್ಲಿ ‌ಇಂದಿನಿಂದ ವೀಕೆಂಡ್ ‌ಕರ್ಪ್ಯೂ ಜಾರಿ. ಏನಿರುತ್ತೆ? ಏನಿರಲ್ಲ?

ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಣಕ್ಕೆ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಇಂದು ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿ ಇರಲಿದೆ.ಅಗತ್ಯ ವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಮಧ್ಯಾಹ್ನ 2 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಉತ್ಪಾದನೆಯ ಎಲ್ಲಾ ಕೈಗಾರಿಕೆಗಳು, ಸಂಸ್ಥೆಗಳಿಗೆ […]

19 ಜಿಲ್ಲೆಗಳಲ್ಲಿ ‌ಇಂದಿನಿಂದ ವೀಕೆಂಡ್ ‌ಕರ್ಪ್ಯೂ ಜಾರಿ. ಏನಿರುತ್ತೆ? ಏನಿರಲ್ಲ? Read More »

ಪಂಪ್ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಶಾಕ್ | ಯುವಕರಿಬ್ಬರ ಸಾವು

ಶಿವಮೊಗ್ಗ: ಪಂಪ್ ಸೆಟ್ ಸರಿಪಡಿಸುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಯುವಕರಿಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಹಾರೋಗೊಪ್ಪ ಬಿ ಕ್ಯಾಂಪ್ ನಿವಾಸಿಗಳಾದ ಶಶಿಕುಮಾರ್ ನಾಯ್ಕ (32) ಮತ್ತು ಶೇಖರ ನಾಯ್ಕ (36) ಮೃತ ದುರ್ದೈವಿಗಳು. ಇವರಿಬ್ಬರು ಜಮೀನಿನಲ್ಲಿ ಬೋರ್ವೇಲ್ ಗೆ ಅಳವಡಿಸದ್ದ ಪಂಪ್ ಸೆಟ್ ದುರಸ್ಥಿ ಪಡಿಸುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ದುರ್ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಂಪ್ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಶಾಕ್ | ಯುವಕರಿಬ್ಬರ ಸಾವು Read More »

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ

ಉತ್ತರ ಪ್ರದೇಶದ: ಇಲ್ಲಿನ ಘಾಜಿಯಾಬಾದ್ ಜಿಲ್ಲೆಯ ದಾದ್ರಿ ಘಾಟ್ ಪ್ರದೇಶದಲ್ಲಿ 21 ದಿನದ ಹೆಣ್ಣು ಮಗು ಒಂದು ಪತ್ತೆಯಾಗಿದೆ. ಮರದ ಬಾಕ್ಸ್ ಒಂದರಲ್ಲಿ ಹೆಣ್ಣು ಮಗುವನ್ನು ಇರಿಸಿ ನದಿಯಲ್ಲಿ ತೇಲಿ ಬಿಡಲಾಗಿದೆ. ಆ ಮಗುವಿನ ಜನ್ಮಕುಂಡಲಿಯನ್ನೂ ಜೊತೆಯಲ್ಲಿ ಇಟ್ಟಿದ್ದು ಮಗುವಿನ ಹೆಸರು ಗಂಗಾ ಎಂದು ಬರೆಯಲಾಗಿದೆ. ಜೊತೆಯಲ್ಲಿ ಒಂದು ದೇವರ ಫೋಟೋ ಕೂಡ ಅಂಟಿಸಲಾಗಿದೆ. ಇದೀಗ ಮಗುವನ್ನು ಆಶಾ ಜ್ಯೋತಿ ಅನಾಥಾಲಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.ಮಹಾಭಾರತದಲ್ಲಿ ಕೌಂತಯ ದೇಶದ ರಾಜಕುಮಾರಿ ಕುಂತಿ

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ Read More »

ಉಪ್ಪಿನಂಗಡಿ: ನೆರೆಭಾದಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ಪರಿಶೀಲನೆ

ಉಪ್ಪಿನಂಗಡಿ: ರಾಷ್ಟೀಯ ವಿಪತ್ತು ನಿರ್ವಹಣಾ ಪಡೆ ಉಪ್ಪಿನಂಗಡಿಯ ಹಲವು ನೆರೆ ಹಾವಳಿಗೆ ಒಳಗಾಗುವ ಸಂಭವ ಇರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿತು. ಉಪ್ಪಿನಂಗಡಿ ಪ್ರದೇಶವು ಕುಮಾರಧಾರ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಳವಾಗಿದೆ. ಇಲ್ಲಿ ಪ್ರತಿ ವರ್ಷ ಪಶ್ಚಿಮ ಘಟ್ಟ ಪ್ರದೇಶ ಗಳಲ್ಲಿ ಮಳೆ ಹೆಚ್ಚಾದಾಗ ನೆರೆ ಹಾವಳಿ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ವಿಜಯವಾಡ ಇನ್‌ಸ್ಪೆಕ್ಟರ್ ಆರ್.ಪಿ. ಚೌಧರಿ ನೇತೃತ್ವದ ಐದು ಮಂದಿಯ ತಂಡ ಪರಿಶೀಲನೆ ನಡೆಸಿದೆ. ಸಹಸ್ರಲಿಂಗೇಶ್ವರ ದೇವಸ್ಥಾನದ

ಉಪ್ಪಿನಂಗಡಿ: ನೆರೆಭಾದಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ಪರಿಶೀಲನೆ Read More »

ಹೆಣ್ಮಕ್ಳಿಗೆ ಗುಡ್ ನ್ಯೂಸ್, ಖಾದ್ಯತೈಲಗಳ ಬೆಲೆಯಲ್ಲಿ ಇಳಿಕೆ

ನವದೆಹಲಿ:‌ ಕಳೆದ ಒಂದು ತಿಂಗಳಲ್ಲಿ ಖಾದ್ಯ ತೈಲಗಳ ಬೆಲೆಗಳು ಕಡಿಮೆಯಾಗುತ್ತಿದ್ದು, ಕೆಲವು ವಿಭಾಗಗಳಲ್ಲಿ ಸುಮಾರು 20% ವರೆಗೆ ಕುಸಿಯುತ್ತಿವೆ. ಪಾಮ್ ಆಯಿಲ್ ಬೆಲೆ ಪ್ರತಿ ಕೆಜಿಗೆ 115 ರೂ.ಗೆ ಇಳಿದಿದ್ದು, ಇದು ಶೇ.19ರಷ್ಟು ಕುಸಿತವಾಗಿದೆ. ಇನ್ನು ಸೂರ್ಯಕಾಂತಿ ಎಣ್ಣೆಯ ಬೆಲೆ ಕೆ.ಜಿ. 157 ರೂ.ಗೆ ಇಳಿಕೆಯಾಗಿದ್ದು, ಶೇ.16ರಷ್ಟು ಕುಸಿತ ಕಂಡಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.ಅಂತರಾಷ್ಟ್ರೀಯ ಬೆಲೆಗಳು ಮತ್ತು ದೇಶೀಯ ಉತ್ಪಾದನೆಯನ್ನ ಒಳಗೊಂಡಿರುವ ಸಂಕೀರ್ಣ ಅಂಶಗಳ ಮೇಲೆ ಅವಲಂಬಿತವಾಗಿರುವ ಖಾದ್ಯ

ಹೆಣ್ಮಕ್ಳಿಗೆ ಗುಡ್ ನ್ಯೂಸ್, ಖಾದ್ಯತೈಲಗಳ ಬೆಲೆಯಲ್ಲಿ ಇಳಿಕೆ Read More »

ಜೂ. 16ರಿಂದ ತಾಜ್ ಮಹಲ್ ಭೇಟಿಗೆ ಪ್ರವಾಸಿಗರಿಗೆ ಅವಕಾಶ | ಆನ್‌ಲೈನ್ ಟಿಕೆಟ್ ಬುಕಿಂಗ್‌ಗೆ ಅವಕಾಶ

ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಪರಿಣಾಮ ಕಳೆದ ಎರಡು ತಿಂಗಳಿಂದ ಮುಚ್ಚಲ್ಪಟ್ಟಿದ್ದು, ಕೇಂದ್ರ ಸರ್ಕಾರದ ರಕ್ಷಣೆಗೊಳಪಟ್ಟಿರುವ ಸ್ಮಾರಕಗಳಾದ ತಾಜ್ ಮಹಲ್ ಸೇರಿದಂತೆ ಇನ್ನತರ ಪ್ರಸಿದ್ಧ ಸ್ಥಳಗಳನ್ನು ಜೂನ್ 16 ರಿಂದ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಎಎಸ್ ಐ(ಭಾರತೀಯ ಪುರಾತತ್ವ ಸಮೀಕ್ಷಾ) ತಿಳಿಸಿದೆ. ಸ್ಮಾರಕಕ್ಕೆ ಭೇಟಿ ನೀಡುವ ಪ್ರವಾಸಿಗರು ಪ್ರವೇಶ ಟಿಕೆಟ್ ಅನ್ನು ಆನ್‌ಲೈನ್ ನಲ್ಲಿ ಕಾಯ್ದಿರಿಸಬಹುದಾಗಿದೆ. ಆದರೆ ಯಾವುದೇ ಆಫ್ ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಇಲ್ಲ ಎಂದು ಎಎಸ್‌ಐ ವಿವರಿಸಿದೆ. ಪ್ರಸ್ತುತ

ಜೂ. 16ರಿಂದ ತಾಜ್ ಮಹಲ್ ಭೇಟಿಗೆ ಪ್ರವಾಸಿಗರಿಗೆ ಅವಕಾಶ | ಆನ್‌ಲೈನ್ ಟಿಕೆಟ್ ಬುಕಿಂಗ್‌ಗೆ ಅವಕಾಶ Read More »

ನಾನು ಸಿಎಂ ಆದ್ರೆ ಭ್ರಷ್ಟಾಚಾರಿಗಳಿಗೆ ಜೈಲೂಟ ಗ್ಯಾರೆಂಟಿ – ವಾಟಾಳ್

ಮೈಸೂರು: ನಾನು ಮುಖ್ಯಮಂತ್ರಿಯಾದರೆ ಭೂಗಳ್ಳರು, ಖನಿಜ ಕಳ್ಳರನ್ನು ಜೈಲಿಗಟ್ಟಿ, ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ತನಿಖೆ ನಡೆಸುತ್ತೇನೆ. ನನಗೆ 5 ವರ್ಷಗಳ ಕಾಲಾವಕಾಶ ಬೇಕಿಲ್ಲ, ಕೇವಲ 5 ತಿಂಗಳು ಅವಕಾಶ ಕೊಟ್ಟರೆ ಸಾಕು ಎಂದು ಮಾಜಿ ಶಾಸಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ. ಮೈಸೂರಿನಲ್ಲಿ ಭೂ ಮಾಫಿಯಾ ವಿರುದ್ಧ ಪ್ರತಿಭಟನೆ ನಡೆಸಿದ ಅವರು, ಮೂಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ವಿರುದ್ಧವೂ ಭೂ ಹಗರಣ ಆರೋಪ ಕೇಳಿಬಂದಿದೆ. ಹೀಗಾಗಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಅಕ್ರಮಗಳನ್ನು ತಡೆಗಟ್ಟುವ

ನಾನು ಸಿಎಂ ಆದ್ರೆ ಭ್ರಷ್ಟಾಚಾರಿಗಳಿಗೆ ಜೈಲೂಟ ಗ್ಯಾರೆಂಟಿ – ವಾಟಾಳ್ Read More »

ಆನ್ಲೈನ್ ನಲ್ಲಿ ಮಗು ಖರೀದಿಸಿದ ದಂಪತಿ | ಸಿಕ್ಕಿಬಿದ್ದಳು 1.5 ಲಕ್ಷಕ್ಕೆ ಡೆಲಿವರಿ ಕೊಟ್ಟ ಮಹಾತಾಯಿ

ಎಚ್.ಡಿ. ಕೋಟೆ: ಅಕ್ರಮವಾಗಿ ತನ್ನ ಕರುಳಕುಡಿಯನ್ನೇ ಹಣದಾಸೆಗೆ ಮಾರಾಟ ಮಾಡಿ ತಾಯಿಯೊಬ್ಬಳು ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಆನ್ಲೈನ್ ಮೂಲಕ ಗಿಡಮೂಲಿಕೆ ತೈಲ, ಕೇಶ ತೈಲ ಇತ್ಯಾದಿ ಮಾರಾಟ ಮಾಡುತ್ತಿದ್ದ ಹಾಸನ ಮೂಲದ ರೋಜಾ ಎಂಬಾಕೆಯೇ ಮಗು ಮಾರಾಟ ಮಾಡಿ ಸಿಕ್ಕಿ ಬಿದ್ದವಳು. ಆಕೆಗೆ ವ್ಯವಹಾರದ ಸಮಯದಲ್ಲಿ ಎಚ್ ಡಿ ಕೋಟೆ ಸಮೀಪದ ಟೈಗರ್‌ಬ್ಲಾಕ್‌ನ ನಿವಾಸಿಗಳಾದ ಅಂಬರೀಶ್‌ ಹಾಗೂ ಮಧುಮಾಲತಿ ದಂಪತಿಯ ಪರಿಚವಾಗಿದೆ. ಆಗಾಗ ರೋಜಾ ಬಳಿ ವ್ಯವಹಾರ ನಡೆಸುತ್ತಿದ್ದ ದಂಪತಿಗೆ 7 ತಿಂಗಳ ಹಿಂದೆ ಆಕೆಗೆ

ಆನ್ಲೈನ್ ನಲ್ಲಿ ಮಗು ಖರೀದಿಸಿದ ದಂಪತಿ | ಸಿಕ್ಕಿಬಿದ್ದಳು 1.5 ಲಕ್ಷಕ್ಕೆ ಡೆಲಿವರಿ ಕೊಟ್ಟ ಮಹಾತಾಯಿ Read More »

ಮಾತೃಪಕ್ಷಕ್ಕೆ ಜಂಪ್ ಹೊಡೆದ ಮುಕುಲ್ ರಾಯ್ , ಬಿಜೆಪಿಗೆ ಆಘಾತ

ತೃಣ ಮೂಲ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಜಿಗಿದು ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಇಂದು ಟಿಎಂಸಿ ಪಕ್ಷ ಸೇರ್ಪಡೆಯಾಗುವ ಮೂಲಕ ಮರಳಿ ಗೂಡಿಗೆ ಸೇರ್ಪಡೆಯಾಗಿದ್ದಾರೆ.ಮುಕುಲ್ ರಾಯ್ ಮತ್ತು ಅವರ ಪುತ್ರ ಸುಬ್ರಾಂಶು ರಾಯ್ ಅವರು ಕೋಲ್ಕತ್ತಾ ದಲ್ಲಿರುವ ಟಿಎಂಸಿ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾದರು.ವಿಧಾನಸಭಾ ಚುನಾವಣೆಗೂ ಮುನ್ನ ಟಿಎಂಸಿ ಇಂದ ಬಿಜೆಪಿಗೆ ಜಿಗಿದ ಅನೇಕ ಮುಖಂಡರು ಇದೀಗ ಮರಳಿ ಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಅದಕ್ಕೆ ಮುಕುಲ್ ರಾಯ್ ಆರಂಭ ನೀಡಿದ್ದಾರೆ.ಒಂದು

ಮಾತೃಪಕ್ಷಕ್ಕೆ ಜಂಪ್ ಹೊಡೆದ ಮುಕುಲ್ ರಾಯ್ , ಬಿಜೆಪಿಗೆ ಆಘಾತ Read More »

ಇದೊಂದು ಪಿಕ್ ಪಾಕೇಟ್ ಸರ್ಕಾರ, ತೆರಿಗೆ ಏರಿಸಿ ತಿಗಣೆಗಳಂತೆ ಜನರ ರಕ್ತ ಕುಡಿಯುತ್ತಿರುವ ಬಿಜೆಪಿ – ಕೇಂದ್ರದ ಮೇಲೆ ಹರಿಹಾಯ್ದ ಕಾಂಗ್ರೆಸ್.

ಬೆಂಗಳೂರು. ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಕೇಂದ್ರ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದೆ. ಇದು ಪಿಕ್‌ಪಾಕೆಟ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನಡೆಸಿರುವ 100 ನಾಟ್‌ಔಟ್ ಆಂದೋಲನದ ಭಾಗವಾಗಿ ಇಂದು ಬೆಂಗಳೂರಿನ ಶಿವಾನಂದ ವೃತ್ತ ಪೆಟ್ರೋಲ್ ಬಂಕ್ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಕೇವಲ ವಾಹನ ಹೊಂದಿರುವವರಿಗೆ ಮಾತ್ರ ಹೊರೆಯಾಗುತ್ತಿಲ್ಲ. ಈ ದರ ಏರಿಕೆಯಿಂದ

ಇದೊಂದು ಪಿಕ್ ಪಾಕೇಟ್ ಸರ್ಕಾರ, ತೆರಿಗೆ ಏರಿಸಿ ತಿಗಣೆಗಳಂತೆ ಜನರ ರಕ್ತ ಕುಡಿಯುತ್ತಿರುವ ಬಿಜೆಪಿ – ಕೇಂದ್ರದ ಮೇಲೆ ಹರಿಹಾಯ್ದ ಕಾಂಗ್ರೆಸ್. Read More »