ರಾಷ್ಟ್ರೀಯ

ಜ್ಞಾನವಾಪಿ ಮಸೀದಿ/ ವರದಿ ಸಲ್ಲಿಸಲು 10 ದಿನಗಳ ಅವಕಾಶ ನೀಡಿದ ಕೋರ್ಟ್

ಸಮಗ್ರ ನ್ಯೂಸ್: ನ್ಯಾಯಾಲಯವು ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಇನ್ನೂ 10 ದಿನಗಳ ಕಾಲಾವಕಾಶ ನೀಡಿದೆ. ವೈಜ್ಞಾನಿಕ ಸಮೀಕ್ಷೆಯ ವರದಿಯು ಒಂದು ತಿಂಗಳ ಹಿಂದೆ ಪೂರ್ಣಗೊಂಡಿದ್ದು, ಅದನ್ನು ಕೋರ್ಟ್ ಗೆ ಸಲ್ಲಿಸಲು ಪುರಾತತ್ವ ಸಂಸ್ಥೆಗೆ ಇನ್ನೂ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಇದು ನಾಲ್ಕನೇ ಬಾರಿಗೆ ವಿಸ್ತರಣೆಯಾಗಿದೆ. ಪುರಾತತ್ವ ಸರ್ವೇಕ್ಷಣಾ ಇಲಾಖೆ 21 ದಿನಗಳ ಕಾಲಾವಕಾಶ ಕೋರಿದ್ದು, ಇದನ್ನು ಮಸೀದಿ ಸಮಿತಿ ವಿರೋಧಿಸಿತ್ತು. ಸಧ್ಯ ನ್ಯಾಯಾಲಯ ಇನ್ನೂ […]

ಜ್ಞಾನವಾಪಿ ಮಸೀದಿ/ ವರದಿ ಸಲ್ಲಿಸಲು 10 ದಿನಗಳ ಅವಕಾಶ ನೀಡಿದ ಕೋರ್ಟ್ Read More »

ಕೆಲವೇ ಕ್ಷಣಗಳಲ್ಲಿ ಹೊರಬರಲಿದ್ದಾರೆ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರು

ಸಮಗ್ರ ನ್ಯೂಸ್: ಉತ್ತರಕಾಶಿಯ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತೆಗೆಯಲು ಎಲ್ಲ ರೀತಿಯ ಕಾರ್ಯಚರಣೆ ನಡೆಸಲಾಗಿದ್ದು, ಇದೀಗ ಎಲ್ಲ ಕಾರ್ಮಿಕರು ಸುರಕ್ಷಿತವಾಗಿ ಕೆಲವೇ ಕ್ಷಣದಲ್ಲಿ ಹೊರಬರಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ರಕ್ಷಣಾ ತಂಡ ತನ್ನ ಕಾರ್ಯವನ್ನು ಮುಂದುವರಿಸಿದ್ದು, ಕಾರ್ಮಿಕರನ್ನು ರಕ್ಷಣೆ ಮಾಡಲಿದೆ ಎಂದು ಎನ್​​ಡಿಆರ್​​ಎಫ್​​​​ ಹೇಳಿದೆ. ಸುರಂಗದ ಒಳಗೆ ಎನ್​​​ಡಿಆರ್​ಎಫ್​​​​ ತಂಡ ಕೂಡ ಈಗಾಗಲೇ ಹೋಗಿದೆ. ಸ್ಥಳದಲ್ಲಿ ಆರೋಗ್ಯ ಸಿಬ್ಬಂದಿಗಳು ಧಾವಿಸಿದ್ದು, ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ.ಇಲ್ಲಿ41 ಕಾರ್ಮಿಕರಿಗೆ 41 ಆಂಬುಲೆನ್ಸ್ ವ್ಯವಸ್ಥೆ

ಕೆಲವೇ ಕ್ಷಣಗಳಲ್ಲಿ ಹೊರಬರಲಿದ್ದಾರೆ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರು Read More »

ಕೇವಲ 60 ಸಾವಿರಕ್ಕೆ iPhone 14 ಪರ್ಚೇಸ್ ಮಾಡ್ಬೋದು! ಇಲ್ಲಿದೆ ಬಿಗ್ ಆಫರ್

ಆಪಲ್ ಕಂಪನಿಯ ಐಫೋನ್‌ಗಳನ್ನು ಅನೇಕ ಜನರು ಇಷ್ಟಪಡುತ್ತಾರೆ. ಈ ಸ್ಮಾರ್ಟ್‌ಫೋನ್‌ನ ವಿನ್ಯಾಸ, ಕಾರ್ಯಕ್ಷಮತೆ, ಕ್ಯಾಮೆರಾ ಮತ್ತು ವೈಶಿಷ್ಟ್ಯಗಳು ಅದನ್ನು ಖರೀದಿಸಲು ಆಸಕ್ತಿಯನ್ನು ತೋರಿಸುತ್ತವೆ. ಹೆಚ್ಚಿನ ಬೆಲೆಯ ಕಾರಣದಿಂದಾಗಿ ಪ್ರತಿಯೊಬ್ಬರೂ ಈ ಪ್ರಮುಖ ಸಾಧನವನ್ನು ಹೊಂದಲು ಸಾಧ್ಯವಿಲ್ಲ. ಕೆಲವರು ಉತ್ತಮ ಡೀಲ್‌ಗಳು ಮತ್ತು ರಿಯಾಯಿತಿ ಬೆಲೆಗಳಿಗಾಗಿ ಕಾಯುತ್ತಾರೆ. ನೀವು ಈ ಪಟ್ಟಿಯಲ್ಲಿ ಇದ್ದೀರಾ? ಈ ತಿಂಗಳ ಆರಂಭದಲ್ಲಿ ಹಬ್ಬದ ಮಾರಾಟದಲ್ಲಿ iPhone 14 ಒಪ್ಪಂದವನ್ನು ಪಡೆಯಲು ಸಾಧ್ಯವಾಗಲಿಲ್ಲವೇ? ಆದರೆ ನಿಮಗೆ ಒಳ್ಳೆಯ ಸುದ್ದಿ. ಅತ್ಯಂತ ಕಡಿಮೆ ಬೆಲೆಯಲ್ಲಿ ಐಫೋನ್

ಕೇವಲ 60 ಸಾವಿರಕ್ಕೆ iPhone 14 ಪರ್ಚೇಸ್ ಮಾಡ್ಬೋದು! ಇಲ್ಲಿದೆ ಬಿಗ್ ಆಫರ್ Read More »

ಕಾರ್ ಡ್ರೈವ್ ಸಮಯದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಈ ಟಿಪ್ಸ್ ಫಾಲೋ ಮಾಡಿ

ಸಮಗ್ರ ನ್ಯೂಸ್:ಕಾರಿನಲ್ಲಿ ದೂರ ಪ್ರಯಾಣಿಸುವಾಗ ಆ ಪ್ರಯಾಣ ನಮಗೆ ಆರಾಮದಾಯಕವಾಗಿರಬೇಕೆಂದು ಬಯಸುತ್ತೇವೆ. ಈ ಆರಾಮದಾಯಕ ಪ್ರಯಾಣಕ್ಕಾಗಿ ಕಾರಿನ ಇಡೀ ಅವಸ್ಥೆಯ ಬಗ್ಗೆ ಒಮ್ಮೆ ಯೋಚಿಸುತ್ತೇವೆ ಮತ್ತು ಅದರಲ್ಲಿ ಏನಾದರೂ ಕೊರತೆ ಇದ್ದರೆ, ಮೊದಲು ಮೆಕ್ಯಾನಿಕ್ ಬಳಿ ಅದನ್ನು ಒಯ್ದು ಸರಿಪಡಿಸಿಕೊಂಡು ಬರುತ್ತೇವೆ. ಹೀಗೆ ಸರಿಪಡಿಸಿಕೊಳ್ಳುವ ಅನೇಕ ವಿಷಯಗಳಲ್ಲಿ ಕಾರಿನ ಸ್ಟೇರಿಂಗ್, ಚಕ್ರಗಳು(Wheels) ಮತ್ತು ಕುಳಿತುಕೊಳ್ಳುವ ಆಸನಗಳು ಸರಿಯಾಗಿರುವುದು ಸಹ ತುಂಬಾನೇ ಮುಖ್ಯವಾಗುತ್ತದೆ. ಹೌದು, ನಿಮ್ಮ ಕಾರಿನ ಸ್ಟೇರಿಂಗ್ ವೀಲ್ ಮತ್ತು ಸೀಟಿನ ಸರಿಯಾದ ಹೊಂದಾಣಿಕೆಯು ನಿಮ್ಮ ಡ್ರೈವಿಂಗ್

ಕಾರ್ ಡ್ರೈವ್ ಸಮಯದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಈ ಟಿಪ್ಸ್ ಫಾಲೋ ಮಾಡಿ Read More »

ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂದಿದೆ ಎಲೆಕ್ಟ್ರಿಕ್ ಸ್ಕೂಟರ್‌! ಸೂಪರ್​ ಮೈಲೇಜ್​ ಕೊಡುತ್ತೆ ಕೂಡ

ಈ ಪಟ್ಟಿಯಲ್ಲಿರುವ ಅತಿ ಹೆಚ್ಚು ಶ್ರೇಣಿಯ ಸ್ಕೂಟರ್ ಸಿಂಪಲ್ ಒನ್ ಆಗಿದೆ, ಇದು ಒಂದೇ ಚಾರ್ಜ್‌ನಲ್ಲಿ 212 ಕಿಮೀ ವ್ಯಾಪ್ತಿಯನ್ನು (ಮೈಲೇಜ್) ನೀಡುತ್ತದೆ. ಇದು 5kWh ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ. ನೀವು ಇದನ್ನು ರೂ.1.45 ಲಕ್ಷದ ಆರಂಭಿಕ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಸಬಹುದು. Ola S1 Pro ಸ್ಕೂಟರ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಫುಲ್ ಚಾರ್ಜ್‌ನಲ್ಲಿ 181 ಕಿಲೋಮೀಟರ್ ರೇಂಜ್ ನೀಡಬಲ್ಲದು. ಈ ಎಲೆಕ್ಟ್ರಿಕ್ ಸ್ಕೂಟರ್ 4 kWh ಸಾಮರ್ಥ್ಯದ

ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂದಿದೆ ಎಲೆಕ್ಟ್ರಿಕ್ ಸ್ಕೂಟರ್‌! ಸೂಪರ್​ ಮೈಲೇಜ್​ ಕೊಡುತ್ತೆ ಕೂಡ Read More »

ಐಫೋನ್​ ಬಳಕೆದಾರರಿಗೆ ಶಾಕ್​ ನೀಡಿದ ಕಂಪನಿ!

ಸಮಗ್ರ ನ್ಯೂಸ್: ಬಳಕೆದಾರರಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ ಕಂಪನಿ ತಂದ ಕೆಲವು ವೈಶಿಷ್ಟ್ಯಗಳನ್ನು ಶಾಶ್ವತವಾಗಿ ತೆಗೆದುಹಾಕಲು Apple ಹಿಂಜರಿಯುವುದಿಲ್ಲ. ಈಗ ಕಂಪನಿಯು ಅಂತಹ ಒಂದು ಸೌಲಭ್ಯವನ್ನು ತೆಗೆದುಹಾಕಲು ಸಿದ್ಧವಾಗಿದೆ. ಇಂಟಿಗ್ರೇಟೆಡ್ ಸರ್ಕ್ಯೂಟ್ ಪರಿಣಿತರಿಂದ Weibo ನಲ್ಲಿ ಇತ್ತೀಚಿನ ಪೋಸ್ಟ್ ಪ್ರಕಾರ, ಭವಿಷ್ಯದ ಐಫೋನ್‌ಗಳಿಂದ ಟಚ್ ಐಡಿ ವೈಶಿಷ್ಟ್ಯವನ್ನು ಹಂತಹಂತವಾಗಿ ಹೊರಹಾಕಲು ಆಪಲ್ ಯೋಜಿಸಿದೆ. ಟಚ್ ಐಡಿಯೊಂದಿಗೆ, ಬಳಕೆದಾರರು ಫಿಂಗರ್‌ಪ್ರಿಂಟ್‌ನೊಂದಿಗೆ ಐಫೋನ್‌ಗಳನ್ನು ಅನ್‌ಲಾಕ್ ಮಾಡಬಹುದು. ಕಂಪನಿಗಳು ಬಜೆಟ್ ಶ್ರೇಣಿಯಿಂದ ಬಹುತೇಕ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ನೀಡುತ್ತಿವೆ.

ಐಫೋನ್​ ಬಳಕೆದಾರರಿಗೆ ಶಾಕ್​ ನೀಡಿದ ಕಂಪನಿ! Read More »

ಕೈಗೆಟುಕುವ ದರದಲ್ಲಿ ಸಿಗಲಿದೆ ರತನ್ ಟಾಟಾ ಅವರ ಕನಸಿನ ಕಾರು?

ಸಮಗ್ರ ನ್ಯೂಸ್: ಮಧ್ಯಮ ವರ್ಗದ ಜನರಿಗೆಂದೇ ತಯಾರಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಟ್ಯಾಟೋ ನ್ಯಾನೋ ಒಂದು ಸಮಯದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಐಷಾರಾಮಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾದ ಟಾಟಾ ನ್ಯಾನೋ, ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರಾಗಿ ಮತ್ತೊಮ್ಮೆ ಮಾರುಕಟ್ಟೆಗೆ ವಿಶಿಷ್ಟ ಫೀಚರ್ಸ್​ಗಳೊಂದಿಗೆ ಬರಲು ಸಜ್ಜಾಗಿದೆ. ಆದರೆ, ಈ ಬಾರಿ ಎಲೆಕ್ಟ್ರಿಕ್​ ಎಂಬುದು ಮತ್ತಷ್ಟು ವಿಶೇಷ. ಟಾಟಾ ನ್ಯಾನೊದ ಹೊಸ ಅವತಾರವು ಕಡಿಮೆ ಬೆಲೆಯಲ್ಲಿ ನಂಬಲಾಗದ ವೈಶಿಷ್ಟ್ಯಗಳೊಂದಿಗೆ ತಯಾರಾಗುತ್ತಿದೆ. ನ್ಯಾನೋದ ಎಲೆಕ್ಟ್ರಿಕ್ ಆವೃತ್ತಿಯು

ಕೈಗೆಟುಕುವ ದರದಲ್ಲಿ ಸಿಗಲಿದೆ ರತನ್ ಟಾಟಾ ಅವರ ಕನಸಿನ ಕಾರು? Read More »

ಸಂವಿಧಾನ ದಿನ/ ಸುಪ್ರೀಂ ಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ

ಸಮಗ್ರ ನ್ಯೂಸ್: ಡಾ.ಬಿ.ಆ‌ರ್ ಅಂಬೇಡ್ಕ‌ರ್ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ಸಂವಿಧಾನದ ದಿನದ ಅಂಗವಾಗಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ ಆವರಣದಲ್ಲಿ ಅನಾವರಣಗೊಳಿಸಿದರು. ಸಸಿ ನಡುವ ಮೂಲಕ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ .ವೈ ಚಂದ್ರಚೂಡ್ ಹಾಗೂ ರಾಷ್ಟ್ರಪತಿ ಮುರ್ಮು ಅವರು ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸೇರಿದಂತೆ ಸುಪ್ರೀಂ ಕೋರ್ಟ್‌ ಹಲವು ನ್ಯಾಯಾಧೀಶರು

ಸಂವಿಧಾನ ದಿನ/ ಸುಪ್ರೀಂ ಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ Read More »

ಜಗತ್ತನ್ನೇ ತಲ್ಲಣಗೊಳಿಸಿದ ಮುಂಬೈ ದಾಳಿ/ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ

ಸಮಗ್ರ ನ್ಯೂಸ್: ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ, ಭಾರತದ ಆರ್ಥಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮುಂಬೈ ಮೇಲೆ ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ ತುಂಬಿದೆ. ಲಷ್ಕರ್-ಎ-ತೋಯ್ಬಾ ಸಂಘಟನೆಯ 10 ಮಂದಿ ಭಯೋತ್ಪಾದಕರ ಈ ಸಂಘಟಿತ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು ಮತ್ತು 300ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು ಈ ಭಯೋತ್ಪಾದಕ ದಾಳಿ ಸಂಭವಿಸಿ 15 ವರ್ಷಗಳು ಕಳೆದರೂ ಸಹ ಘಟನೆಯ ಕರಾಳತೆ ಮತ್ತು ಮೃತಪಟ್ಟವರ ನೆನಪು ಇನ್ನು ಜೀವಂತವಾಗಿದೆ. ಭಾರತೀಯರು, ಯರೋಪಿಯನ್ನರು ಹಾಗೂ

ಜಗತ್ತನ್ನೇ ತಲ್ಲಣಗೊಳಿಸಿದ ಮುಂಬೈ ದಾಳಿ/ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ Read More »

‘ನೋ ನಾನ್ ವೆಜ್ ಡೇ’/ ಉತ್ತರ ಪ್ರದೇಶದಲ್ಲಿ ಇಂದು ಮಾಂಸದಂಗಡಿಗಳು ಬಂದ್

ಉತ್ತರ ಪ್ರದೇಶ ಸರ್ಕಾರ ಸಂತ ತನ್ವರದಾಸ್‌ ಲೀಲಾರಾಮ್ ವಾಸ್ವಾನಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನವೆಂಬರ್ 25 ಶನಿವಾರವನ್ನು (ಇಂದು) ‘ನೋ ನಾನ್ ವೆಜ್ ಡೇ’ (ಮಾಂಸ ರಹಿತ ದಿನ)ಎಂದು ಅಧಿಕೃತವಾಗಿ ಘೋಷಿಸಿದೆ. ಅಂತಾರಾಷ್ಟ್ರೀಯ ಮಾಂಸರಹಿತ ದಿನವೆಂದು ಸಾಧು ವಾಸ್ವಾನಿ ಅವರ ಜನ್ಮದಿನವನ್ನು ಗುರುತಿಸಿ, ಉತ್ತರ ಪ್ರದೇಶದಲ್ಲಿ ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಬೇಕೆಂದು ಆದೇಶಿಸಲಾಗಿದೆ. ವಾಸ್ವಾನಿ ಭಾರತೀಯ ಶಿಕ್ಷಣತಜ್ಞರಾಗಿದ್ದು, ಪಾಕಿಸ್ತಾನದ ಸಿಂದ್‌ನಲ್ಲಿ ಸೇಂಟ್ ಮೀರಾ ಶಾಲೆಯನ್ನು ತೆರೆದರು. ಪುಣೆಯಲ್ಲಿ ಸಾಧುವಾಸ್ವಾನಿಯವರ ಬೋಧನೆಗಳಿಗೆ ಸಂಬಂಧಿಸಿದ

‘ನೋ ನಾನ್ ವೆಜ್ ಡೇ’/ ಉತ್ತರ ಪ್ರದೇಶದಲ್ಲಿ ಇಂದು ಮಾಂಸದಂಗಡಿಗಳು ಬಂದ್ Read More »