ರಾಷ್ಟ್ರೀಯ

ಭೂಮಿಯ ಮೂಲಕ ಹಾದು ಹೋಗಲಿದೆ ಕ್ಷುದ್ರ ಗ್ರಹ! ನಾಸಾ ಹೇಳಿದ್ದೇನು ?

ಮುಂದಿನ ಮೂರು ದಿನಗಳಲ್ಲಿ ಕನಿಷ್ಠ ಮೂರು ಕ್ಷುದ್ರ ಆಕಾಶ ಕಾಯಗಳು ಭೂಮಿಗೆ ಅತೀ ಸನಿಹವಾಗಿ ಹಾದುಹೋಗಲಿವೆ.  ಈ ಕ್ಷುದ್ರ ಕಾಯ ರವಿವಾರ ಬೆಳಗ್ಗೆ ಭೂಮಿಯಿಂದ 47 ಲಕ್ಷ ಕಿ.ಮೀ. ದೂರದಲ್ಲಿ ಪ್ರತೀ ಸೆಕುಂಡಿಗೆ 5.7 ಕಿ.ಮೀ. ವೇಗದಲ್ಲಿ ಹಾದುಹೋಗಲಿದೆ. ಅತೀ ದೊಡ್ಡದಾಗಿರುವ 110 ಅಡಿ ಅಗಲದ ಕ್ಷುದ್ರ ಗ್ರಹ ಅಪ್ಪಳಿಸಿದರೆ ಪ್ಯಾರಿಸ್‌ನಷ್ಟು ದೊಡ್ಡದಾದ ಕುಳಿ ಉಂಟಾಗಬಹುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ನಾಸಾದ ಆಸ್ಟರಾಯ್ಡ ವಾಚ್‌ ಭೂಮಿಗೆ 75 ಲಕ್ಷ ಕಿ.ಮೀ. ಆಸುಪಾಸಿಗೆ ಬರುವ ಕ್ಷುದ್ರಗ್ರಹ, ಧೂಮಕೇತುಗಳ […]

ಭೂಮಿಯ ಮೂಲಕ ಹಾದು ಹೋಗಲಿದೆ ಕ್ಷುದ್ರ ಗ್ರಹ! ನಾಸಾ ಹೇಳಿದ್ದೇನು ? Read More »

ದೇಶಾದ್ಯಂತ ಮನೆಮನೆಯಲ್ಲೂ ಹಾರಾಡಲಿದೆ ತ್ರಿವರ್ಣ ಧ್ವಜ| ನೆನಪಿರಲಿ ಈ ಕೆಲಸ ಎಚ್ಚರಿಕೆಯಿಂದ ಮಾಡಿ!

ಸಮಗ್ರ ನ್ಯೂಸ್: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಶಾಲಾ- ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳಲ್ಲಿ, ಗ್ರಾಮ ಪಂಚಾ​ಯಿತಿ ಮಟ್ಟದಲ್ಲಿ, ಕೋಟೆ ಕೊತ್ತಲಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಸೇರಿದಂತೆ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡಲಿವೆ. ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಬೇಕು ಎಂಬ ಪ್ರಧಾನಮಂತ್ರಿ ಮೋದಿ ಆಶಯದಂತೆ ಜಿಲ್ಲೆಯಲ್ಲೂ ‘ಹರ್‌ ಘರ್‌ ತಿರಂಗಾ’ ಧ್ವಜ ಶನಿವಾರದಿಂದ ಹಾರಾಡಲಿದೆ. ಇದಕ್ಕಾಗಿ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಸರ್ಕಾರದ ಜೊತೆ

ದೇಶಾದ್ಯಂತ ಮನೆಮನೆಯಲ್ಲೂ ಹಾರಾಡಲಿದೆ ತ್ರಿವರ್ಣ ಧ್ವಜ| ನೆನಪಿರಲಿ ಈ ಕೆಲಸ ಎಚ್ಚರಿಕೆಯಿಂದ ಮಾಡಿ! Read More »

ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದಿಂದ ಪದಕ

ಸಮಗ್ರ ನ್ಯೂಸ್: ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖೆ ನಡೆಸಿದ ಪೊಲೀಸರಿಗೆ ನೀಡುವ ಕೇಂದ್ರ ಗೃಹ ಸಚಿವಾಲಯದ ಪದಕಕ್ಕೆ ಕರ್ನಾಟಕ ರಾಜ್ಯದ ಆರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರತಿವರ್ಷ ನೀಡುವ ಈ ಉನ್ನತ ಪದಕಕ್ಕೆ ದೇಶದ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಕೆಲಸ ಮಾಡಿದ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಈ ವರ್ಷ ದೇಶದಾದ್ಯಂತ ಸಿವಿಲ್ ಪೊಲೀಸ್ ಸಿಬಿಐ, ಎನ್ ಸಿಬಿ ಸೇರಿ 151 ಅಧಿಕಾರಿಗಳನ್ನು ಈ ಪದಕಕ್ಕೆ ಆಯ್ಕೆ ಮಾಡಲಾಗಿದ್ದು, ಪಟ್ಟಿ ಬಿಡುಗಡೆಯಾಗಿದೆ. ಈ

ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದಿಂದ ಪದಕ Read More »

ಷೇರುಪೇಟೆಯಲ್ಲಿ ಗುಮ್ಮಿದ ಗೂಳಿ| 59 ಸಾವಿರಕ್ಕೆ ಏರಿದ ಸೆನ್ಸೆಕ್ಸ್

ಸಮಗ್ರ ನ್ಯೂಸ್: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 515 ಅಂಶ ಏರಿಕೆ ಕಂಡು ಮತ್ತೆ 59 ಸಾವಿರದ ಮಟ್ಟವನ್ನು ದಾಟಿತು. ವಿದೇಶಿ ಬಂಡವಾಳ ಒಳಹರಿವು ಮುಂದುವರಿದಿದೆ. ಇದರ ಜೊತೆಗೆ ಹೂಡಿಕೆದಾರರು ಐ.ಟಿ, ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯದ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವುದು ಸೂಚ್ಯಂಕದ ಏರಿಕೆಗೆ ಕಾರಣವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 124 ಅಂಶ ಹೆಚ್ಚಾಗಿ 17,659 ಅಂಶಗಳಿಗೆ ತಲುಪಿತು. ಸೆನ್ಸೆಕ್ಸ್‌ನಲ್ಲಿ ಎಕ್ಸಿಸ್‌ ಬ್ಯಾಂಕ್‌ ಷೇರು ಶೇ 2.75ರಷ್ಟು ಗರಿಷ್ಠ ಏರಿಕೆ ಕಂಡಿತು.

ಷೇರುಪೇಟೆಯಲ್ಲಿ ಗುಮ್ಮಿದ ಗೂಳಿ| 59 ಸಾವಿರಕ್ಕೆ ಏರಿದ ಸೆನ್ಸೆಕ್ಸ್ Read More »

ಎಸಿಬಿ ಇನ್ಮುಂದೆ ಲೋಕಾಯುಕ್ತ ವ್ಯಾಪ್ತಿಗೆ| ಹೈಕೋರ್ಟ್ ನಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ಎಸಿಬಿ ರಚನೆ ಸರ್ಕಾರದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಮಹತ್ವದ ಆದೇಶ ಹೊರಡಿಸಿದೆ. ಎಸಿಬಿ ರಚನೆ ಆದೇಶಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ, ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನವನ್ನು ರದ್ದುಪಡಿಸಿ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಅಗತ್ಯವಿದೆ. ಮೂರು ವರ್ಷಗಳ ಅವಧಿಗೆ ಅಧಿಕಾರಿಗಳ ನೇಮಕ ಮಾಡಬೇಕು. ಲೋಕಾಯುಕ್ತರ ನೇಮಕದ

ಎಸಿಬಿ ಇನ್ಮುಂದೆ ಲೋಕಾಯುಕ್ತ ವ್ಯಾಪ್ತಿಗೆ| ಹೈಕೋರ್ಟ್ ನಿಂದ ಮಹತ್ವದ ಆದೇಶ Read More »

ದೇಶದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧಂಕರ್ ಪ್ರಮಾಣವಚನ ಸ್ವೀಕಾರ

ಸಮಗ್ರ ನ್ಯೂಸ್: ಭಾರತದ ಹದಿನಾಲ್ಕನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧಂಕರ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಕಳೆದ ತಿಂಗಳು ದೇಶದ ಹದಿನೈದನೇ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸಿದ‌್ದರು. ಮಾಜಿ ರಾಜ್ಯಪಾಲ ಮತ್ತು ಮಾಜಿ ಕೇಂದ್ರ ಸಚಿವ ಧಂಕರ್ ಅವರನ್ನು ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್ಡಿಎ ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ನಾಮನಿರ್ದೇಶನ ಮಾಡಿದೆ. ಆಗಸ್ಟ್ 6 ರಂದು ನಡೆದ ಚುನಾವಣೆಯಲ್ಲಿ 71 ವರ್ಷದ ಅವರು

ದೇಶದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧಂಕರ್ ಪ್ರಮಾಣವಚನ ಸ್ವೀಕಾರ Read More »

 PUC ಪಾಸ್‌ ಆದವರಿಗೆ ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ

  ಸಮಗ್ರ ನ್ಯೂಸ್: ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF ನೇಮಕಾತಿ) ವಿವಿಧ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಒಟ್ಟು 323 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಡ್ ಕಾನ್‌ಸ್ಟೆಬಲ್ ಎಚ್‌ಸಿ ಮಿನಿಸ್ಟ್ರಿಯಲ್, ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಎಎಸ್‌ಐ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rectt.bsf.gov.in ಗೆ ಭೇಟಿ ನೀಡಬಹುದು. ಮೂಲಕ ಅರ್ಜಿ ಸಲ್ಲಿಸಬಹುದು ಖಾಲಿ ಹುದ್ದೆಗಳ ವಿವರಗಳು ಪೋಸ್ಟ್ – ಹೆಡ್ ಕಾನ್‌ಸ್ಟೆಬಲ್  ಅಂತಿಮ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 6. ಆಗಸ್ಟ್ 8ರಿಂದ ಅರ್ಜಿ ಸಲ್ಲಿಕೆ

 PUC ಪಾಸ್‌ ಆದವರಿಗೆ ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ Read More »

ಈ ವರ್ಷದ ಸೂಪರ್ ಮೂನ್ ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ ! ಇಲ್ಲಿದೆ ವಿವರ

ಸೂಪರ್‌ ಮೂನ್‌ ಪ್ರಪಂಚದಾದ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ವೈಜ್ಞಾನಿಕವಾಗಿ ಸೂಪರ್‌ ಮೂನ್‌ ಗಳು ಸಾಮಾನ್ಯಕ್ಕಿಂತ 30% ಹೆಚ್ಚು ಬೆಳಕನ್ನು ಭೂಮಿಯ ಮೇಲೆ ಹೊರಸೂಸುತ್ತವೆ. ಒಂದು ವರ್ಷದಲ್ಲಿ ಬರೋಬ್ಬರಿ 3-4 ಸೂಪರ್ ಮೂನ್ ಗಳು ಕಾಣಿಸುತ್ತವೆ. ಈ ವರ್ಷ 11ನೇ ಆಗಸ್ಟ್ 2022 ರಂದು ಕಾಣಿಸಿಕೊಳ್ಳುತ್ತದೆ. 2022 ರ ಕೊನೆಯ ಸೂಪರ್‌ಮೂನ್ ಇಂದು ! ಇಂದು ನಾಸಾ ಪ್ರಕಾರ, ಚಂದ್ರನು ರಾತ್ರಿ 9:36 ಕ್ಕೆ ಕಾಣಿಸಿಕೊಳ್ಳಬಹುದು. ಅಥವಾ 6:36 p.m. ಪಿಟಿ ಸಮಯದಲ್ಲಿ ಕಾಣಿಸಬಹುದು. ಆಗಸ್ಟ್‌ ನಲ್ಲಿ ಸೂಪರ್‌ ಮೂನ್

ಈ ವರ್ಷದ ಸೂಪರ್ ಮೂನ್ ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ ! ಇಲ್ಲಿದೆ ವಿವರ Read More »

ರಾಷ್ಟ್ರಧ್ವಜಕ್ಕೆ ಅಪಮಾನ ಹಿನ್ನಲೆ| ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ದೂರು

ಸಮಗ್ರ ನ್ಯೂಸ್: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯಲ್ಲಿ ಚಿಕ್ಕಮಾಗರಹಳ್ಳಿಯ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೇಸರಿ, ಬಿಳಿ, ಹಸಿರು ಎನ್ನುವ ಬದಲು ಕೆಂಪು, ಬಿಳಿ ಹಸಿರು ಎಂದು ತಪ್ಪಾಗಿ ಹೇಳಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದರು. ಇದೀಗ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿ ಮುಖಂಡ ಗಿರೀಶ್, ಮನು ಹಾಗೂ ಭಜರಂಗದಳದ ಶಿವು ಎಂಬುವರು ದೂರು ನೀಡಿದ್ದಾರೆ.

ರಾಷ್ಟ್ರಧ್ವಜಕ್ಕೆ ಅಪಮಾನ ಹಿನ್ನಲೆ| ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ದೂರು Read More »

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಯು.ಯು ಲಲಿತ್ ನೇಮಕ

ಸಮಗ್ರ ನ್ಯೂಸ್: ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಉಮೇಶ್ ಲಲಿತ್ ಅವರನ್ನು ನೇಮಿಸಿ ಕೇಂದ್ರ ಸರ್ಕಾರದಿಂದ ಆದೇಶ ಹೋರಾಡಿಸಿದೆ. ಹಾಲಿ ಸಿಜೆಐ ರಮಣ ಸೇವಾವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ. ದೇಶದ‌ 49ನೇ ಸಿಜೆಐಯಾಗಿ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಲಲಿತ್ ನೇಮಿಸಿ ಕೇಂದ್ರ ಸರ್ಕಾರದಿಂದ ಆದೇಶ ಹೋರಾಡಿಸಿದೆ. ಶೀಘ್ರವೇ ಹಾಲಿ ಸಿಜೆಐ ರಮಣ ಸೇವಾವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಈ ನೇಮಕ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಯು.ಯು ಲಲಿತ್ ನೇಮಕ Read More »