ರಾಷ್ಟ್ರೀಯ

ಪಾಕ್‌ನಲ್ಲಿ ಉಗ್ರರ ದಾಳಿ | ಬಸ್ಸಿನಿಂದ ಇಳಿಸಿ ಗುರುತು ಪರಿಶೀಲಿಸಿ 23 ಮಂದಿ ಶೂಟೌಟ್

ಸಮಗ್ರ ನ್ಯೂಸ್: ಪಾಕಿಸ್ತಾನದ ಬಲೂಚಿಸ್ತಾನ್ ಮುಸಾಖೆಲ್ ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿಗೆ 23 ಜನರು ಸಾವನ್ನಪ್ಪಿರುವ ಬಗ್ಗೆ ವರಿಯಾಗಿದೆ. ಭಯೋತ್ಪಾದಕರು ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಲು ಒತ್ತಾಯಿಸಿ, ಅವರ ಗುರುತುಗಳನ್ನು ಪರಿಶೀಲಿಸಿದ ನಂತರ ಗುಂಡು ಹಾರಿಸಿದ್ದಾರೆ. ಮುಸಖೇಲ್‌ನ ರಾರಶಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಅಂತರ-ಪ್ರಾಂತೀಯ ಹೆದ್ದಾರಿಯನ್ನು ತಡೆದು ಪ್ರಯಾಣಿಕರನ್ನು ಬಸ್‌ಗಳಿಂದ ಕೆಳಗಿಳಿಸಿದರು ಎಂದು ಸಹಾಯಕ ಕಮಿಷನರ್ ಮುಸಖೈಲ್ ನಜೀಬ್ ಕಾಕರ್ ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಮೃತರು ಪಂಜಾಬ್ ಮೂಲದವರು ಎಂದು ಗುರುತಿಸಲಾಗಿದೆ. ಇದರ ಜೊತೆಗೆ ಉಗ್ರರು 10 ವಾಹನಗಳಿಗೆ ಬೆಂಕಿ […]

ಪಾಕ್‌ನಲ್ಲಿ ಉಗ್ರರ ದಾಳಿ | ಬಸ್ಸಿನಿಂದ ಇಳಿಸಿ ಗುರುತು ಪರಿಶೀಲಿಸಿ 23 ಮಂದಿ ಶೂಟೌಟ್ Read More »

ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುಣಾವಣೆ/ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಸಮಗ್ರ ನ್ಯೂಸ್‌: ಜಮ್ಮು ಕಾಶ್ಮೀರದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುಣಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿತ್ತು. ಶ್ರೀ ಮಾತಾ ವೈಷ್ಟೋದೇವಿ ಕ್ಷೇತ್ರದಿಂದ ರೋಹಿತ್ ದುಬೆ ಅವರಿಗೆ ಟಿಕೆಟ್ ನೀಡಲಾಗಿದೆ. ಸುನೀಲ್ ಶರ್ಮಾ ಕಿಶ್ಚಾರ್ ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈ ಬಾರಿ ಬಿಜೆಪಿ ಹೊಸ ತಂತ್ರದೊಂದಿಗೆ ಚುನಾವಣಾ ಕಣಕ್ಕೆ ಇಳಿದಿರುವುದು ಪಟ್ಟಿಯಿಂದ ಸ್ಪಷ್ಟವಾಗಿದೆ. ಪಕ್ಷವು ತನ್ನ ಹಲವು ಹಳೆಯ ನಾಯಕರ

ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುಣಾವಣೆ/ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ Read More »

ಹಿರಿಯ ನಟಿ ಆಶಾ ಶರ್ಮಾ ಇನ್ನಿಲ್ಲ

ಸಮಗ್ರ ನ್ಯೂಸ್: ಟಾಲಿವುಡ್ ಖ್ಯಾತ ನಟ ಡಾರ್ಲಿಂಗ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟಿ ಆಶಾ ಶರ್ಮಾ(88) ನಿಧನರಾಗಿದ್ದಾರೆ. ಏಕ್ತಾ ಕಪೂರ್‌ ಅವರ ಖ್ಯಾತ ಕಾರ್ಯಕ್ರಮ ʻಕುಂಕುಮ್‌ ಭಾಗ್ಯʼ ಮೂಲಕ ಆಶಾ ಶರ್ಮಾ ಜನಪ್ರಿಯರಾಗಿದ್ದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದರು, ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ʻಕುಂಕುಮ್‌ ಭಾಗ್ಯʼ ಡ್ರಾಮಾ ಶೋ ಮೂಲಕ ಜನಪ್ರಿಯವಾಗಿದ್ದ ನಟಿ ಹೆಚ್ಚಾಗಿ ತಾಯಿ ಮತ್ತು ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೊನೆಯದಾಗಿ ಪ್ರಭಾಸ್‌ ಹಾಗೂ ಕೃತಿ ಸನೋನ್‌ ನಟನೆಯ

ಹಿರಿಯ ನಟಿ ಆಶಾ ಶರ್ಮಾ ಇನ್ನಿಲ್ಲ Read More »

ಆತ ಬರೀ ಭಗವಂತನಲ್ಲ; ಧರ್ಮದ ಸಾರಥಿ| ಬೆಣ್ಣೆ ಮೆತ್ತಿಕೊಂಡ ಹುಡುಗನ ಎತ್ತಿ ಕೊಂಡಾಡೋಣ ಬನ್ನಿ…

ಸಮಗ್ರ ವಿಶೇಷ: ಮಣ್ಣು ತಿಂದ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿಸಿದರೂ ಆತ ಬರೀ ಭಗವಂತನಲ್ಲ, ಆತ ಬೆಣ್ಣೆ ಮೆತ್ತಿಕೊಂಡ ಪುಟ್ಟ ಹುಡುಗ. ಆದರೆ ಕೇವಲ ಬಾಲ್ಯಲೀಲೆಯ ತುಂಟ ಮಾತ್ರನಲ್ಲ, ಪೂತನಿಯ ಸಾವಿಗೆ ಕಾರಣನಾಗಿ, ಗೋವರ್ಧನ ಗಿರಿಧಾರಿಯಾಗಿ ಗೋಪಿಕೆಯರ ಜೊತೆಯಿದ್ದೂ ಪರಿಶುದ್ಧ ಪ್ರೇಮದ ಪ್ರತೀಕವಾಗುತ್ತಲೇ ತನ್ನಬಣ್ಣ ಮತ್ತು ಹೆಸರನ್ನೇ ಹೊತ್ತಿದ್ದ ಕೃಷ್ಣೆಗೆ (ದ್ರ್ರೌಪದಿ) ಅಕ್ಷಯವಸ್ತ್ರ ನೀಡಿದ ದಯಾಳುವಾಗಿ ಕಂಡವನು. ದ್ರೌಪದಿ ಸಮೇತ ಪಾಂಡವರನ್ನು ದೂರ್ವಾಸ ಮುನಿಯ ಕೋಪದಿಂದ ತಪಿಸಲು ಅನ್ನದ ಅಗುಳು ತಿಂದು ಕಾಪಾಡಿದವನು. ಕಾಳಿಂಗಮರ್ದನಕ್ಕೆ ಸೆಟೆದು ನಿಂತವನು. ಸತ್ಯಭಾಮೆಯ

ಆತ ಬರೀ ಭಗವಂತನಲ್ಲ; ಧರ್ಮದ ಸಾರಥಿ| ಬೆಣ್ಣೆ ಮೆತ್ತಿಕೊಂಡ ಹುಡುಗನ ಎತ್ತಿ ಕೊಂಡಾಡೋಣ ಬನ್ನಿ… Read More »

35 ದೇಶಗಳಿಗೆ ಉಚಿತ ವೀಸಾ ಪ್ರವೇಶ ನೀಡಲು ನಿರ್ಧರಿಸಿದ ಶ್ರೀಲಂಕಾ/ ಅಕ್ಟೋಬರ್‌ನಿಂದ ಜಾರಿ

ಸಮಗ್ರ ನ್ಯೂಸ್‌: ಭಾರತ ಸೇರಿದಂತೆ 35 ದೇಶಗಳಿಗೆ ಅಕ್ಟೋಬರ್ 1 ರಿಂದ ಉಚಿತ ವೀಸಾ ಪ್ರವೇಶವನ್ನು ನೀಡಲು ಶ್ರೀಲಂಕಾ ನಿರ್ಧರಿಸಿದೆ ಎಂದು ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯದ ಸಲಹೆಗಾರ ಹರಿನ್ ಫೆರ್ನಾಂಡೋ ಹೇಳಿಕೆಯನ್ನು ಉಲ್ಲೇಖಿಸಿ ಶ್ರೀಲಂಕಾ ಮೂಲದ ಡೈಲಿ ಮಿರರ್ ವರದಿ ಮಾಡಿದೆ. ಭಾರತವನ್ನು ಹೊರತುಪಡಿಸಿ 34 ಇತರ ರಾಷ್ಟ್ರಗಳನ್ನು ಇದು ಒಳಗೊಂಡಿದೆ. ಪ್ರಮುಖ ಹೆಸರುಗಳಲ್ಲಿ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ, ಇಸ್ರೇಲ್, ನ್ಯೂಜಿಲ್ಯಾಂಡ್, ನೇಪಾಳ, ಇಂಡೋನೇಷಿಯಾ, ಮಲೇಷ್ಯಾ, ಥೈಲ್ಯಾಂಡ್, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿವೆ. ಶ್ರೀಲಂಕಾದ

35 ದೇಶಗಳಿಗೆ ಉಚಿತ ವೀಸಾ ಪ್ರವೇಶ ನೀಡಲು ನಿರ್ಧರಿಸಿದ ಶ್ರೀಲಂಕಾ/ ಅಕ್ಟೋಬರ್‌ನಿಂದ ಜಾರಿ Read More »

ಹೊಸ ಪಕ್ಷದ ಧ್ವಜ ಬಿಡುಗಡೆ ಮಾಡಿದ ದಳಪತಿ ವಿಜಯ್‌

ಸಮಗ್ರ ನ್ಯೂಸ್: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಅವರು ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂನ ಧ್ವಜ ಮತ್ತು ಚಿಹ್ನೆಯನ್ನು ಇಂದು ಅನಾವರಣಗೊಳಿಸಿದ್ದಾರೆ. ಮೆರೂನ್ (ಕೆಂಗಂದು) ಮತ್ತು ಹಳದಿ ಬಣ್ಣವಿರುವ ಧ್ವಜದ ಮಧ್ಯದಲ್ಲಿ ಎರಡು ಆನೆಗಳು ಮತ್ತು ನಕ್ಷತ್ರಗಳಿಂದ ಸುತ್ತುವರಿದ ನವಿಲಿನ ಗುರುತು ಇದೆ. ಈ ಧ್ವಜವನ್ನು ಪನೈಯೂರ್ ಪಕ್ಷದ ಕಚೇರಿಯಲ್ಲಿ ವಿಜಯ್ ಧ್ವಜಾರೋಹಣ ಮಾಡಿ ಬಳಿಕ ರಾಜಕೀಯ ಪಕ್ಷದ ಅಧಿಕೃತ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಫೆಬ್ರವರಿಯಲ್ಲಿ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ

ಹೊಸ ಪಕ್ಷದ ಧ್ವಜ ಬಿಡುಗಡೆ ಮಾಡಿದ ದಳಪತಿ ವಿಜಯ್‌ Read More »

ಶೇಖ್‌ ಹಸೀನಾರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿದ ಬಾಂಗ್ಲಾ ಸರಕಾರ

ಸಮಗ್ರ ನ್ಯೂಸ್‌: ಬಾಂಗ್ಲಾದೇಶದ ಸರ್ಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಮಾಜಿ ಸಂಸದರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿದೆ. ಈ ಹಿಂದೆ ಆಯ್ದ ದೇಶಗಳಿಗೆ ವೀಸಾ-ಮುಕ್ತ ಪ್ರಯಾಣದಂತಹ ವಿವಿಧ ಸವಲತ್ತುಗಳನ್ನು ನೀಡುತ್ತಿದ್ದ ಈ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಹಸೀನಾ ಅವರ ಆಡಳಿತದಲ್ಲಿ ಸಂಸದರಿಗೆ ನೀಡಲಾಗಿತ್ತು. ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಶೇಖ್ ಹಸೀನಾ ಆಗಸ್ಟ್ 5ರಿಂದ ಭಾರತದಲ್ಲಿ ನೆಲೆಸಿದ್ದು, ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅವರ ಸುರಕ್ಷತೆಗೆ ಬೆದರಿಕೆಗಳ ಮಧ್ಯೆ

ಶೇಖ್‌ ಹಸೀನಾರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿದ ಬಾಂಗ್ಲಾ ಸರಕಾರ Read More »

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ವಿದೇಶ ಪ್ರವಾಸ| ಆ. 23 ರಂದು ರೈಲಿನಲ್ಲಿ ಉಕ್ರೇನ್ ಗೆ ಪ್ರಯಾಣ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ವಿದೇಶ ಪ್ರವಾಸ ಕೈಗೊಂಡಿದ್ದು, ಪೋಲೆಂಡ್ನಲ್ಲಿ ಲ್ಯಾಂಡ್ ಆಗಿದ್ದಾರೆ. 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್ಗೆ ಭೇಟಿ ನೀಡಿದ್ದಾರೆ. ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಉಕ್ರೇನ್ಗೆ ಭೇಟಿ ನೀಡಲಿದ್ದಾರೆ. ರಷ್ಯಾ ಯುದ್ಧದ ಬಳಿಕ ಉಕ್ರೇನ್ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಪೋಲೆಂಡ್ನಿಂದ ಪ್ರಧಾನಿ ಮೋದಿ ಆ. 23 ರಂದು ಐಷಾರಾಮಿ ‘ಟ್ರೇನ್ ಫೋರ್ಸ್ ಒನ್’ನಲ್ಲಿ ಉಕ್ರೇನ್ಗೆ ಪ್ರಯಾಣಿಸಲಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ವಿದೇಶ ಪ್ರವಾಸ| ಆ. 23 ರಂದು ರೈಲಿನಲ್ಲಿ ಉಕ್ರೇನ್ ಗೆ ಪ್ರಯಾಣ Read More »

ಪ್ರಾಸಿಕ್ಯೂಷನ್ಗೆ ಅನುಮತಿ: ರಾಜ್ಯಪಾಲರಿಗೆ ಬಂತು ಬುಲೆಟ್‌ಪ್ರೂಫ್‌ ಕಾರು..!

ಸಮಗ್ರ ನ್ಯೂಸ್: ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ವಾಹನದಲ್ಲಿ ಗುಪ್ತಚರ ಇಲಾಖೆಯ ಸಲಹೆ ಮೇರೆಗೆ ಇದೀಗ ಬದಲಾವಣೆ ಮಾಡಲಾಗಿದೆ. ಇದುವರೆಗೆ ಸಾಮಾನ್ಯ ಕಾರು ಬಳಸುತ್ತಿದ್ದ ರಾಜ್ಯಪಾಲರು ಇನ್ನು ಮುಂದೆ ಬುಲೆಟ್‌ ಪ್ರೂಫ್‌ ಕಾರು ಬಳಸಲಿದ್ದಾರೆ. ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬಳಿಕ ರಾಜ್ಯದ ಎಲ್ಲೆಡೆ ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ರಾಜಭವನಕ್ಕೆ ನುಗ್ಗಲೂ ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನು, ರಾಜ್ಯದ ಹಲವೆಡೆ

ಪ್ರಾಸಿಕ್ಯೂಷನ್ಗೆ ಅನುಮತಿ: ರಾಜ್ಯಪಾಲರಿಗೆ ಬಂತು ಬುಲೆಟ್‌ಪ್ರೂಫ್‌ ಕಾರು..! Read More »

ಪಾವಗಡ: ಬೀಗರೂಟ ಮಾಡಿದ್ದ 24 ಮಂದಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಬೀಗರೂಟ ಮಾಡಿದ್ದ ನಂತರ ವಾಂತಿ, ಬೇಧಿ ಕಾಣಿಸಿಕೊಂಡು ಸುಮಾರು 24 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಶ್ರೀರಂಗಪುರ ತಾಂಡಾದಲ್ಲಿ ನಡೆದಿದೆ. ಅಸ್ವಸ್ಥಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಮಕೂರು ಜಿಲ್ಲೆಯ ಪಾವಗಡದ ನಾಗೇನಹಳ್ಳಿ ತಾಂಡಾದಲ್ಲಿ ಮದುವೆ ನಡೆದಿದೆ. ಅಲ್ಲದೇ ಅಗಸ್ಟ್ 16 ರಂದು ಶ್ರೀರಂಗಪುರ ತಾಂಡಾದಲ್ಲಿ ಬೀಗರೂಟ ನಡೆದಿತ್ತು. ಬೀಗರು ಊಟ ಮಾಡಿ ಮನೆಗೆ ತೆರಳಿದ ವೇಳೆಯಲ್ಲಿ ಹಲವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡವರನ್ನು ಪಾವಗಡ, ಬೆಂಗಳೂರು, ಹಿಂದೂಪುರದ ಆಸ್ಪತ್ರೆಗೆ

ಪಾವಗಡ: ಬೀಗರೂಟ ಮಾಡಿದ್ದ 24 ಮಂದಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು Read More »