ರಾಷ್ಟ್ರೀಯ

ದೇಶ ಬಿಡಲು ನಿರ್ಧರಿಸಿದ ಯುವಕನಿಗೆ ಖುಲಾಯಿಸಿತು ಅದೃಷ್ಟ| ಈ ಆಟೋ‌ಡ್ರೈವರ್ ಈಗ ಕೋಟ್ಯಾಧಿಪತಿ!!

ಸಮಗ್ರ ನ್ಯೂಸ್: ಅದೃಷ್ಟ, ಹಣೆಬರಹಗಳನ್ನು ನಂಬಬಾರದು ಮೈ ಬಗ್ಗಿಸಿ ದುಡಿಯಬೇಕು. ಅದೃಷ್ಟಗಳೆಲ್ಲಾ ಸುಳ್ಳು ಕಷ್ಟಪಟ್ಟು ದುಡಿದರೆ ಇಷ್ಟಪಟ್ಟಂತೆ ಬದುಕಬಹುದು ಎಂಬೆಲ್ಲಾ ಸ್ಪೂರ್ತಿದಾಯಕ ಹಾಗೂ ಜೀವನವನ್ನು ಹುರಿದುಂಬಿಸುವ ಸಾಕಷ್ಟು ಮಾತುಗಳನ್ನು ಕೇಳಿದ್ದೇವೆ. ಈ ಮಾತುಗಳು ಸತ್ಯವೂ ಹೌದು. ಆದರೆ ಕೇರಳದಲ್ಲಿ ಅದೃಷ್ಟವೊಂದು ವ್ಯಕ್ತಿಯ ಬದುಕನ್ನೇ ಬದಲಿಸಿದೆ. ಕೆಲಸ ಅರಸಿ ದೇಶ ಬಿಟ್ಟು ಹೋಗಲು ಬಯಸಿದ್ದ ಯುವಕನ್ನು ಅದೃಷ್ಟವೊಂದು ತಡೆದು ನಿಲ್ಲಿಸಿದ್ದು, ಈಗ ಆತ ಕೋಟ್ಯಾಧಿಪತಿ ಇದಕ್ಕೆ ಕಾರಣವಾಗಿದ್ದು ಒಂದು ಲಾಟರಿ. ಮಲೇಷ್ಯಾಗೆ ಅಡುಗೆಯವನಾಗಿ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದ ಕೇರಳದ […]

ದೇಶ ಬಿಡಲು ನಿರ್ಧರಿಸಿದ ಯುವಕನಿಗೆ ಖುಲಾಯಿಸಿತು ಅದೃಷ್ಟ| ಈ ಆಟೋ‌ಡ್ರೈವರ್ ಈಗ ಕೋಟ್ಯಾಧಿಪತಿ!! Read More »

ದೇವಸ್ಥಾನದಲ್ಲಿ ನಡೆಯಿತು ‘ಪ್ಯಾಷನ್ ಶೋ’| ಭಜರಂಗದಳದಿಂದ ದೂರು ದಾಖಲು

ಸಮಗ್ರ ನ್ಯೂಸ್: ದೇವಸ್ಥಾನದಲ್ಲಿ ‘ಫ್ಯಾಷನ್ ಶೋ’ ಆಯೋಜಿಸಿದ್ದನ್ನು ಭಜರಂಗ ದಳದ ಕಾರ್ಯಕರ್ತರು ಆಕ್ಷೇಪಿಸಿರುವ ಘಟನೆ ಛತ್ತೀಸ್ ಗಢ ರಾಜ್ಯದ ರಾಯ್ಪುರದ ಬಾಲಾಜಿ ದೇವಸ್ಥಾನದಲ್ಲಿ ‌ನಡೆದಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಭಜರಂಗ ದಳ ಹೇಳಿದೆ. ಟೆಲಿಬಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಲಸರ್ ದೇವಸ್ಥಾನದಲ್ಲಿ ಭಾನುವಾರ ಎಫ್‌ಡಿಸಿಎ ಹೆಸರಿನ ಕಂಪನಿಯು ‘ಫ್ಯಾಷನ್ ಶೋ’ ಆಯೋಜಿಸಿದೆ. ಆರಿಫ್ ಮತ್ತು ಮನೀಶ್ ಸೋನಿ ಎಂಬುವವರೇ ಈ ‘ಫ್ಯಾಶನ್ ಶೋ’ದ ಆಯೋಜಕರು ಎಂದು ವರದಿಯಾಗಿದೆ. ಧಾರ್ಮಿಕ

ದೇವಸ್ಥಾನದಲ್ಲಿ ನಡೆಯಿತು ‘ಪ್ಯಾಷನ್ ಶೋ’| ಭಜರಂಗದಳದಿಂದ ದೂರು ದಾಖಲು Read More »

ಕೇರಳದ ಪ್ರಸ್ತಾವನೆಗೆ ಕರ್ನಾಟಕ ಎಳ್ಳುನೀರು| ಕಾಂಞಂಗಾಡ್- ಕಾಣಿಯೂರು ರೈಲು ಮಾರ್ಗ‌ ಅಸಾಧ್ಯವೆಂದ ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ರೈಲ್ವೆ ಮಾರ್ಗ, ರಸ್ತೆ ಸಾರಿಗೆ ಸೇರಿ ಮೂರು ವಿಚಾರಗಳಲ್ಲಿ ಕರ್ನಾಟಕ ಸರ್ಕಾರವನ್ನು ಮನವೊಲಿಸಲು ಬಂದಿದ್ದ ನೆರೆ ರಾಜ್ಯ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರ ಎಲ್ಲ ಮೂರು ಪ್ರಸ್ತಾವನೆಗಳನ್ನೂ ಕರ್ನಾಟಕ ಸರ್ಕಾರ ತಿರಸ್ಕರಿಸಿದೆ. ಕಾಞಂಗಾಡ್- ಕಾಣಿಯೂರು ರೈಲು ಮಾರ್ಗ ಸೇರಿದಂತೆ ವಿವಿಧ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಹಮತಿ ನೀಡುವಂತೆ ಕೇರಳ ಸರ್ಕಾರ ಕೋರಿದೆ. ಪ್ರಸ್ತಾವಿತ ಕಾಞಂಗಾಡ್ – ಕಾಣಿಯೂರು ರೈಲು ಮಾರ್ಗವು ಕೇರಳದಲ್ಲಿ 40 ಕಿ.ಮೀ. ಹಾಗೂ ಕರ್ನಾಟಕದಲ್ಲಿ 31 ಕಿ.ಮೀ.

ಕೇರಳದ ಪ್ರಸ್ತಾವನೆಗೆ ಕರ್ನಾಟಕ ಎಳ್ಳುನೀರು| ಕಾಂಞಂಗಾಡ್- ಕಾಣಿಯೂರು ರೈಲು ಮಾರ್ಗ‌ ಅಸಾಧ್ಯವೆಂದ ಸಿಎಂ ಬೊಮ್ಮಾಯಿ Read More »

ಚೀತಾ ಪ್ರಾಜೆಕ್ಟ್ ನಲ್ಲಿ ಪುತ್ತೂರಿನ ಮುಳಿಯದ ಪಶುವೈದ್ಯ ಡಾ. ಸನತ್ ಕೃಷ್ಣ|

ಸಮಗ್ರ ನ್ಯೂಸ್: ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತಂದ ನಿಯೋಗದಲ್ಲಿದ್ದ ಪಶುವೈದ್ಯ ಡಾ.ಸನತ್‌ ಕೃಷ್ಣ ಮುಳಿಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯದವರು. ಅವರು ನವದೆಹಲಿಯ ನ್ಯಾಷನಲ್‌ ಝೂವಾಲಾಜಿಕಲ್‌ ಪಾರ್ಕ್‌ನಲ್ಲಿ ಸಹಾಯಕ ಪಶುವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರತಕ್ಕೆ ಚೀತಾಗಳನ್ನು ತಂದ ಬಗ್ಗೆ ಖುಷಿ ಹಂಚಿಕೊಂಡ ಡಾ.ಸನತ್‌ಕೃಷ್ಣ ಮುಳಿಯ ಅವರ ಸಂಬಂಧಿ, ಗುತ್ತಿಗಾರು ಗ್ರಾಮದ ಕೇಶವ ಭಟ್‌ ಮುಳಿಯ, ‘ಇದು ದೇಶಕ್ಕೆ ಹೆಮ್ಮಯ ಕ್ಷಣ. ಅಂತೆಯೇ ಈ ಚೀತಾಗಳನ್ನು ಕರೆತಂದ ತಂಡದಲ್ಲಿದ್ದ ಪಶುವೈದ್ಯರು ನಮ್ಮ ರಾಜ್ಯದವರು ಎಂಬುದು

ಚೀತಾ ಪ್ರಾಜೆಕ್ಟ್ ನಲ್ಲಿ ಪುತ್ತೂರಿನ ಮುಳಿಯದ ಪಶುವೈದ್ಯ ಡಾ. ಸನತ್ ಕೃಷ್ಣ| Read More »

ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕ ಸಿಬ್ಬಂದಿಯನ್ನು ನೇಮಿಸಿ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಸಮಗ್ರ ನ್ಯೂಸ್: ಬ್ಯಾಂಕ್‌ಗಳಿಗೆ ಸ್ಥಳೀಯ ಭಾಷೆ ಮಾತನಾಡಬಲ್ಲ ಸಿಬ್ಬಂದಿಯನ್ನು ನೇಮಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ. ನೀವು ವ್ಯಾಪಾರ ಮಾಡಲು ಅಲ್ಲಿದ್ದೀರಿ. ನಾಗರಿಕರಲ್ಲಿ ಕೆಲವು ಮೌಲ್ಯ ವ್ಯವಸ್ಥೆಯನ್ನು ಬೆಳೆಸಲು ಅಲ್ಲ ಎಂದು ಮುಂಬೈನಲ್ಲಿ ನಡೆದ ಭಾರತೀಯ ಬ್ಯಾಂಕ್‌ಗಳ ಸಂಘದ 75ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಾದೇಶಿಕ ಭಾಷೆಯಲ್ಲಿ ಮಾತನಾಡದ ಸಿಬ್ಬಂದಿಯನ್ನು ನೀವು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಹೊಂದಿದ್ದು ಅಲ್ಲಿ ನೀವು ಹಿಂದಿ ಮಾತನಾಡುವುದಿಲ್ಲ, ಬಹುಶಃ ನೀವು ಭಾರತೀಯರಲ್ಲ ಎಂದು

ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕ ಸಿಬ್ಬಂದಿಯನ್ನು ನೇಮಿಸಿ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ Read More »

‘ನಮೋ’ಗೆ ವಿಶಿಷ್ಟವಾಗಿ ಬರ್ತ್ ಡೇ ಶುಭಾಶಯ ತಿಳಿಸಿದ ಪುಟಿನ್

ಸಮಗ್ರ ನ್ಯೂಸ್: ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ ನಡೆದ ಎಸ್ ಸಿಒ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಸಂಪ್ರದಾಯದಲ್ಲಿ, ಜನ್ಮದಿನಗಳಿಗೆ ಮುಂಚಿತವಾಗಿ ಶುಭಾಶಯಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದರು. ಆದ್ದರಿಂದ ನಾನು ಈ ಸಮಯದಲ್ಲಿ ನಿಮ್ಮನ್ನು ಅಭಿನಂದಿಸುತ್ತಿಲ್ಲ, ಆದರೆ ನನ್ನ ಶುಭ ಹಾರೈಕೆಗಳು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ. ನಿಮ್ಮ ನಾಯಕತ್ವದಲ್ಲಿ

‘ನಮೋ’ಗೆ ವಿಶಿಷ್ಟವಾಗಿ ಬರ್ತ್ ಡೇ ಶುಭಾಶಯ ತಿಳಿಸಿದ ಪುಟಿನ್ Read More »

ಕೋತಿಗಳ ಕಾಟಕ್ಕೆ ಸಿಲುಕಿದ ಪೊಲೀಸರು/ ಮಧ್ಯೆ ಎಂಟ್ರಿ ಕೊಟ್ಟ ಹಾವು/ ಮುಂದೇನಾಯ್ತು ನೀವೇ ನೋಡಿ

ತಿರುವನಂತಪುರಂ: ಸಮಾಜದಲ್ಲಿ ಶಾಂತಿ ಭದ್ರತೆಯನ್ನು ಕಾಪಾಡುವ ಪೊಲೀಸರನ್ನು ಕೋತಿಗಳಿಂದ ಕಾಪಾಡುವವರೇ ಇರಲಿಲ್ಲ. ಇಲ್ಲಿ ನಡೆದಿರೋದು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಕೇರಳ ಅರಣ್ಯ ಪ್ರದೇಶದ ಕುಂಬುಮೆಟ್ಟು ಪೊಲೀಸ್​ ಠಾಣೆಯಯಲ್ಲಿ. ಕೋತಿಗಳ ಗುಂಪು ಏಕಾಏಕಿ ದಾಳಿ ಮಾಡಿ ನಾನಾ ಹಂಗಾಮಾ ಮಾಡೋದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಸ್ಥಳೀಯ ರೈತರೊಬ್ಬರು ನೀಡಿದ್ದ ಸಲಹೆ ಸದ್ಯ ವರ್ಕ್​ ಆಗಿದ್ದು, ಪೊಲೀಸರ ಸಮಸ್ಯೆಗೆ ಪರಿಹಾರ ಲಭ್ಯವಾಗಿದೆ. ಕೇರಳದ ಇಡುಕಿಯಲ್ಲಿರುವ ಕುಂಬುಮೆಟ್ಟು ಪೊಲೀಸ್​​ ಠಾಣೆಯ ಬಳಿ ಅತೀ ಹೆಚ್ಚು ಕೋತಿಗಳ ಕಾಟವಿದ್ದು.

ಕೋತಿಗಳ ಕಾಟಕ್ಕೆ ಸಿಲುಕಿದ ಪೊಲೀಸರು/ ಮಧ್ಯೆ ಎಂಟ್ರಿ ಕೊಟ್ಟ ಹಾವು/ ಮುಂದೇನಾಯ್ತು ನೀವೇ ನೋಡಿ Read More »

ನಾಳೆ ಪ್ರಧಾನಿ ಮೋದಿ ಹುಟ್ಟುಹಬ್ಬ| ಹುಟ್ಟಿದ ಪ್ರತೀ ಮಗುವಿಗೂ ಸಿಗಲಿದೆ ಚಿನ್ನದ ಉಂಗುರ, 720 ಕೆ.ಜಿ ಮೀನು!!

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17 (ನಾಳೆ)ರಂದು ತಮಿಳುನಾಡಿನ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಘಟಕವು ನಾಳೆ ಜನಿಸಿದ ಪ್ರತಿ ಮಗುವಿಗೆ ಚಿನ್ನದ ಉಂಗುರವನ್ನು ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲದೇ, 720 ಕೆಜಿ ಮೀನುಗಳನ್ನು ಸಹ ವಿತರಿಸಲಾಗುತ್ತದೆ. ಈ ಯೋಜನೆಗಾಗಿ ಪಕ್ಷವು ಆರ್‌ಎಸ್‌ಆರ್‌ಎಂ ಆಸ್ಪತ್ರೆಯನ್ನು ಆಯ್ಕೆ ಮಾಡಿದೆ ಎಂದು ರಾಜ್ಯದ ಸಚಿವ ಎಲ್ ಮುರುಗನ್ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಪ್ರತಿ ಉಂಗುರವು 2 ಗ್ರಾಂ ತೂಗುತ್ತದೆ. ಸ್ಥಳೀಯ ಘಟಕದ ಪ್ರಕಾರ, ಸೆಪ್ಟೆಂಬರ್

ನಾಳೆ ಪ್ರಧಾನಿ ಮೋದಿ ಹುಟ್ಟುಹಬ್ಬ| ಹುಟ್ಟಿದ ಪ್ರತೀ ಮಗುವಿಗೂ ಸಿಗಲಿದೆ ಚಿನ್ನದ ಉಂಗುರ, 720 ಕೆ.ಜಿ ಮೀನು!! Read More »

ಯೋಗಿನಾಡಲ್ಲಿ ದಲಿತ ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರವೆಸಗಿ ಕೊಲೆ| ಮತ್ತೊಂದು ಕರಾಳ ಘಟನೆಗೆ ಸಾಕ್ಷಿಯಾಯ್ತು ಲಖೀಂಪುರ

ಸಮಗ್ರ ನ್ಯೂಸ್: ಯೋಗಿ ಆದಿತ್ಯನಾಥ್ ರವರ ರಾಜ್ಯ ಉತ್ತರ ಪ್ರದೇಶದ ಲಖೀಂಪುರಖೇರಿಯಲ್ಲಿ ಇಬ್ಬರು ದಲಿತ ಸಹೋದರಿಯರು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಈ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಆರು ಮಂದಿಯನ್ನು ಬಂಧಿಸಲಾಗಿದೆ. 15 ಮತ್ತು 17 ವರ್ಷದ ಈ ಹೆಣ್ಣುಮಕ್ಕಳನ್ನು ಇಬ್ಬರು ಆರೋಪಿಗಳು ಮದುವೆ ಮಾಡಿಕೊಳ್ಳುವುದಾಗಿ ಹೇಳಿ, ನಾಲ್ವರ ಜತೆಗೆ ಸೇರಿಕೊಂಡು ಅತ್ಯಾಚಾರ ಎಸಗಿ, ಕತ್ತುಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಯೋಗಿನಾಡಲ್ಲಿ ದಲಿತ ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರವೆಸಗಿ ಕೊಲೆ| ಮತ್ತೊಂದು ಕರಾಳ ಘಟನೆಗೆ ಸಾಕ್ಷಿಯಾಯ್ತು ಲಖೀಂಪುರ Read More »

ನಿಮ್ಮ ಫೋನ್‌ನಲ್ಲಿ ಈ ಆ್ಯಪ್ ಗಳು ಡೇಂಜರ್!

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಪಯಾಕಾರಿ, ಅಕ್ರಮ ಆಯಪ್‌ಗಳಿಗೆ ಪ್ರವೇಶವಿಲ್ಲ. ಆದರೆ ಹಲವು ಬಾರಿ ಹ್ಯಾಕರ್‌ಗಳು ಗೂಗಲ್ ಪ್ಲೇ ಸ್ಟೋರ್ ಕಣ್ತಪ್ಪಿಸಿ ಅಪಾಯಾಕಾರಿ ಆಯಪ್‌ಗಳನ್ನು ಸೇರಿಸುತ್ತಾರೆ. ಹೀಗಾಗಿ ಹ್ಯಾಕರ್‌ಗಳು ಸೇರಿಸಿದ 35ಕ್ಕೂ ಹೆಚ್ಚು ಆಯಪ್‌ಗಳು ಅತ್ಯಂತ ಅಪಾಯಕಾರಿ ಎಂದು ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಸಂಸ್ಥೆ ಹೇಳಿದೆ. ಆಯಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ 35 ಆಯಪ್ ಕುರಿತು ಗೂಗಲ್‌ಗೆ ಮಾಹಿತಿ ನೀಡಲಾಗಿದೆ. ಈ ಆಯಪ್‌ಗೆ ನಿರ್ಬಂಧ ವಿಧಿಸಲು ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಸಂಸ್ಥೆ ಸೂಚಿಸಿದೆ. ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಕಂಪನಿ

ನಿಮ್ಮ ಫೋನ್‌ನಲ್ಲಿ ಈ ಆ್ಯಪ್ ಗಳು ಡೇಂಜರ್! Read More »