ರಾಷ್ಟ್ರೀಯ

ನಾಳೆ(ಫೆ.27) ರಾಜ್ಯಕ್ಕೆ ಮತ್ತೊಮ್ಮೆ ಪಿಎಂ ಮೋದಿ ಭೇಟಿ| ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ| ಬೆಳಗಾವಿಯಲ್ಲಿ ಕಿಸಾನ್ ಸಮ್ಮಾನ್ ಕಂತು ಬಿಡುಗಡೆ

ಸಮಗ್ರ ನ್ಯೂಸ್: ಫೆಬ್ರವರಿ 27ರಂದು ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:35ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬೆಳಗ್ಗೆ 11:45 ರಿಂದ 11:55 ರ ವರೆಗೆ ಶಿವಮೊಗ್ಗದಲ್ಲಿ ಟರ್ಮಿನಲ್ ಬಿಲ್ಡಿಂಗ್ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ 1.15 ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1:30 ಕ್ಕೆ ಶಿವಮೊಗ್ಗದಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 2.20 ಕ್ಕೆ ಬೆಳಗಾವಿ ವಿಮಾನ […]

ನಾಳೆ(ಫೆ.27) ರಾಜ್ಯಕ್ಕೆ ಮತ್ತೊಮ್ಮೆ ಪಿಎಂ ಮೋದಿ ಭೇಟಿ| ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ| ಬೆಳಗಾವಿಯಲ್ಲಿ ಕಿಸಾನ್ ಸಮ್ಮಾನ್ ಕಂತು ಬಿಡುಗಡೆ Read More »

ಮದ್ಯ‌ಹಗರಣ; ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ‌ ಅರೆಸ್ಟ್

ಸಮಗ್ರ ನ್ಯೂಸ್: ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. ಈ ಹಿಂದೆ ಸಿಬಿಐ ಈ ಪ್ರಕರಣದಲ್ಲಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಅವರು (ಮನೀಶ್ ಸಿಸೋಡಿಯಾ) ಅಬಕಾರಿ ನೀತಿಯನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಕೆಲವು ಸೂಚನೆಗಳನ್ನು ನೀಡಿದ್ದರು ಎಂದು ಅವರು ಹೇಳಿದರು ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. ಆಪ್‌ ಬೆಂಬಲಿಗರ ಭಾರಿ ಬೆಂಬಲದೊಂದಿಗೆ ಸಿಸೋಡಿಯಾ ಅವರು ಭಾನುವಾರ ದಿಲ್ಲಿಯ ಸಿಬಿಐ ಪ್ರಧಾನ ಕಚೇರಿಗೆ ಬೆಳಗ್ಗೆ

ಮದ್ಯ‌ಹಗರಣ; ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ‌ ಅರೆಸ್ಟ್ Read More »

ಅರುಣ್ ಜೇಟ್ಲಿ ಪುತ್ರನಿಂದ ಲೈಂಗಿಕ ದೌರ್ಜನ್ಯ ಆರೋಪ| ಬಿಸಿಸಿಐ ಗೆ ದೂರು ನೀಡಿದ ಮಹಿಳೆ

ಸಮಗ್ರ ನ್ಯೂಸ್: ದೆಹಲಿ ಡಿಸ್ಟ್ರಿಕ್ಟ್​​ ಕ್ರಿಕೆಟ್​​ ಅಸೋಸಿಯೇಷನ್​ ಅಧ್ಯಕ್ಷ ರೋಹಿತ್​ ಜೇಟ್ಲಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಜ್ಯೋತ್ಸ್ನಾ ಸಹ್ನಿ ಎಂಬ ಮಹಿಳೆ ರೋಹನ್ ಜೇಟ್ಲಿ ವಿರುದ್ಧ ಈ ಆರೋಪವನ್ನು ಮಾಡಿದ್ದು ಬಿಸಿಸಿಐಗೆ ದೂರು ನೀಡಿದ್ದಾರೆ. 3 ಪುಟಗಳ ಈಮೇಲ್‌ನಲ್ಲಿ ಮದುವೆಯ ನೆಪದಲ್ಲಿ ರೋಹನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಡಿಡಿಸಿಎ ನಿಧಿ ದುರ್ಬಳಕೆಯ ಆರೋಪ ಮಾಡಿದ್ದು, ತನಗೆ ಜೀವ ಬೆದರಿಕೆಯನ್ನು ಕೂಡ ಒಡ್ಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಸಂತ್ರಸ್ತ

ಅರುಣ್ ಜೇಟ್ಲಿ ಪುತ್ರನಿಂದ ಲೈಂಗಿಕ ದೌರ್ಜನ್ಯ ಆರೋಪ| ಬಿಸಿಸಿಐ ಗೆ ದೂರು ನೀಡಿದ ಮಹಿಳೆ Read More »

ಹುಲಿಗಳು ಹಾದುಹೋಗಲೆಂದೇ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ| ಭಾರತೀಯ ಹೆದ್ದಾರಿ ಪ್ರಾಧಿಕಾರದ ಸೂಪರ್ ಐಡಿಯಾ

ಸಮಗ್ರ ನ್ಯೂಸ್: ಭೂಮಿ ಮೇಲೆ ಬದುಕಲು ಮನುಷ್ಯರಿಗೆಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಪ್ರಾಣಿಗಳಿಗಿದೆ. ಆದರೆ ಮನುಷ್ಯರು ಕಾಡಿನೊಳಕ್ಕೆ ನುಗ್ಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ. ಮತ್ತೊಂದೆಡೆ ಅದರ ಆಹಾರವನ್ನು ಕಸಿದುಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರಾಣಿಗಳು ನಾಡಿನತ್ತ ಬರುತ್ತಿವೆ. ಮತ್ತೊಂದೆಡೆ ಅದರ ವಾಸಸ್ಥಾನವಾದ ಕಾಡಿನತ್ತ ರಸ್ತೆಗಳು ಹಾದು ಹೋಗುತ್ತಿವೆ. ಇದರಿಂದ ವಾಹನಕ್ಕೆ ಸಿಲುಕಿ ವರ್ಷಕ್ಕೆ ಅದೆಷ್ಟೋ ಪ್ರಾಣಿಗಳು ಅಪಘಾತದಲ್ಲಿ ಸಾವನ್ನಪ್ಪುತ್ತಿವೆ. ಆದರೆ ಇಂತಹ ಸನ್ನಿವೇಷ ಎದುರಾಗಬಾರದು ಎಂಬ ಕಾರಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಲಂಗಾಣ ಮತ್ತು ಮಹಾರಾಷ್ಟ್ರಕ್ಕೆ ಹಾದು ಹೋಗುವ

ಹುಲಿಗಳು ಹಾದುಹೋಗಲೆಂದೇ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ| ಭಾರತೀಯ ಹೆದ್ದಾರಿ ಪ್ರಾಧಿಕಾರದ ಸೂಪರ್ ಐಡಿಯಾ Read More »

ಅಪರೂಪದ ಖಗೋಳ ವಿಸ್ಮಯ| ಒಂದೇ ರೇಖೆಯಲ್ಲಿ ಗುರು, ಶುಕ್ರ ಮತ್ತು ಚಂದ್ರ

ಸಮಗ್ರ ನ್ಯೂಸ್: ಅಪರೂಪದ ಖಗೋಳ ವಿಸ್ಮಯಕ್ಕೆ ಅಂತರಿಕ್ಷ ಸಾಕ್ಷಿಯಾಗುತ್ತಿದೆ. ಚಂದ್ರ, (Moon) ಶುಕ್ರ (Venus) ಮತ್ತು ಗುರು (Jupiter) ಗ್ರಹಗಳು ಏಕಕಾಲದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಖಗೊಳಾಸಕ್ತರನ್ನು ಪುಳಕಗೊಳಿಸಿದೆ. ಗುರುವಾರ(ಫೆ.23) ಮೂರೂ ಆಕಾಶಕಾಯಗಳು ಪರಸ್ಪರ ಒಟ್ಟಿಗೆ ಬರುತ್ತಿದ್ದಂತೆ ಆಕಾಶದಲ್ಲಿ ತ್ರಿಕೋನದಂತಹ ಆಕಾರ ಸೃಷ್ಟಿಯಾಯಿತು. ಸೌರಮಂಡಲದಲ್ಲಿ ಪ್ರಕಾಶಮಾನವಾದ ಗ್ರಹಗಳು ಎಂದೇ ಕರೆಸಿಕೊಳ್ಳುವ ಶುಕ್ರ ಹಾಗೂ ಗುರುಗ್ರಹಗಳು, ಭೂಮಿಯ ಏಕೈಕ ಉಪಗ್ರಹವಾದ ಚಂದ್ರನ ಸಮೀಪದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿವೆ. ಸುಮಾರು 29 ಡಿಗ್ರಿಗಳ ಅಂತರವನ್ನು ಹೊಂದಿರುವ ಗ್ರಹಗಳು ಇತ್ತೀಚಿಗೆ

ಅಪರೂಪದ ಖಗೋಳ ವಿಸ್ಮಯ| ಒಂದೇ ರೇಖೆಯಲ್ಲಿ ಗುರು, ಶುಕ್ರ ಮತ್ತು ಚಂದ್ರ Read More »

ಅವರಿವರು ಬೇಡ, ನಮಗೆ ಮೋದಿಯೇ ಪ್ರಧಾನಿಯಾಗಲಿ| ಪಾಕಿಸ್ತಾನಿ ಪ್ರಜೆಗಳ ಹೇಳಿಕೆ ವೈರಲ್

ಸಮಗ್ರ ನ್ಯೂಸ್: ಪಾಕಿಸ್ತಾನದ ಪ್ರಜೆಗಳು ಅದೆಷ್ಟು ಬೇಸತ್ತಿದ್ದಾರೆ ಅಂದರೆ ನಮಗೆ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ ಬೇಡ. ಬೆನ್‌ಜೀರ್ ಭುಟ್ಟೋ ಬೇಡ. ಇಮ್ರಾನ್ ಖಾನ್ ಬೇಡ. ಸರ್ವಾಧಿಕಾರಿ ಪರ್ವೇಜ್ ಮುಷರಫ್ ನಮಗೆ ಬೇಡ. ಭಾರತದ ಪ್ರಧಾನಿ ನರೇಂದ್ರ ಮೋದಿಯೇ ನಮ್ಮ ದೇಶದ ಆಳ್ವಿಕೆ ಮಾಡಲಿ ಎನ್ನುತ್ತಿದ್ದಾರೆ. ಹಾಲು, ಕಾಫಿ, ಟೀ, ಗೋಧಿ ಹಿಟ್ಟು, ಚಿಕನ್, ಮಟನ್, ಪೆಟ್ರೋಲ್, ಡೀಸೆಲ್‌ ಹೀಗೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಪಾಕಿಸ್ತಾನದಲ್ಲಿ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ರೋಸಿ ಹೋದ

ಅವರಿವರು ಬೇಡ, ನಮಗೆ ಮೋದಿಯೇ ಪ್ರಧಾನಿಯಾಗಲಿ| ಪಾಕಿಸ್ತಾನಿ ಪ್ರಜೆಗಳ ಹೇಳಿಕೆ ವೈರಲ್ Read More »

ಸರ್ಕಾರಕ್ಕೆ ಬಿಸಿ ತುಪ್ಪವಾದ 7ನೇ ವೇತನ ಆಯೋಗ| ಮಾ.1 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ನಿರ್ಧಾರ

ಸಮಗ್ರ ನ್ಯೂಸ್: ಬಿಜೆಪಿ ಸರ್ಕಾರಕ್ಕೆ ಸರ್ಕಾರಿ ನೌಕರರ ಏಳನೇ ಪರಿಷ್ಕ್ರೃತ ವೇತನ ಹಾಗೂ ಹಳೆ ಪಿಂಚಣಿ ಯೋಜನೆಗಾಗಿನ ಪಟ್ಟು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವರದಿ ಜಾರಿಗಾಗಿ ನೌಕರರ ಪಟ್ಟು ಹಿಡಿದಿದ್ದು, ಫೆ.22 ರಿಂದ ಫೆ.28 ರವರೆಗೆ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ್ದಾರೆ. ಒಂದೇ ವೇಳೆ ಯೋಜನೆ ಜಾರಿಗೆ ತರದಿದ್ದರೆ ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ನೌಕರರು ನಿರ್ಧರಿಸಿದ್ದಾರೆ. ಇಂದು ನಡೆದ ನೌಕರರ ಸಂಘದ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು

ಸರ್ಕಾರಕ್ಕೆ ಬಿಸಿ ತುಪ್ಪವಾದ 7ನೇ ವೇತನ ಆಯೋಗ| ಮಾ.1 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ನಿರ್ಧಾರ Read More »

ಪಾಸ್ ಪೋರ್ಟ್ ವೆರಿಫಿಕೇಶನ್ ಈಗ ಇನ್ನಷ್ಟು ಸುಲಭ| ಹೊಸದೊಂದು ಸೌಲಭ್ಯ ಜಾರಿಗೊಳಿಸಿದ ವಿದೇಶಾಂಗ ಇಲಾಖೆ

ಸಮಗ್ರ ನ್ಯೂಸ್: ಪಾಸ್‌ಪೋರ್ಟ್ ವೆರಿಫಿಕೇಷನ್‌ಗಾಗಿ ಭಾರತ ಸರ್ಕಾರವು ದೆಹಲಿಯಲ್ಲಿ “ಎಂಪಾಸ್ ಪೋರ್ಟ್ ಸೇವಾ” (” mPassport”) ಎಂಬ ಹೊಸ ಆನ್‌ಲೈನ್ ಸರ್ವೀಸ್ ಸೇವೆಯನ್ನು ಪ್ರಾರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸೌಲಭ್ಯವನ್ನು ಆರಂಭಿಸಿದ್ದು, ಈ ಸೌಲಭ್ಯದ ಮೂಲಕ ಪಾಸ್ ಪೋರ್ಟ್ ಪರಿಶೀಲನೆ ಪ್ರಕ್ರಿಯೆ ಕೇವಲ ಐದು ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ಪಾಸ್ ಪೋರ್ಟ್ ಪರಿಶೀಲನೆಗಾಗಿ ಇದ್ದ 15 ದಿನಗಳ ಕಾಯುವಿಕೆ ಅವಧಿಯನ್ನು (ವೇಟಿಂಗ್ ಪಿರೀಯೆಡ್) ಇದು ಕಡಿಮೆ ಮಾಡುವುದಲ್ಲದೆ

ಪಾಸ್ ಪೋರ್ಟ್ ವೆರಿಫಿಕೇಶನ್ ಈಗ ಇನ್ನಷ್ಟು ಸುಲಭ| ಹೊಸದೊಂದು ಸೌಲಭ್ಯ ಜಾರಿಗೊಳಿಸಿದ ವಿದೇಶಾಂಗ ಇಲಾಖೆ Read More »

ದೆಹಲಿಯಲ್ಲಿ ಮತ್ತೊಂದು ತಣ್ಣನೆಯ ಕೊಲೆ| ಗೆಳತಿಯ ಕೊಂದು ಪ್ರಿಡ್ಜ್ ನಲ್ಲಿ ಇರಿಸಿ ಅದೇ ದಿನ ಮತ್ತೊಬ್ಬಾಕೆಯ ಮದ್ವೆಯಾದ ಪಾತಕಿ

ಸಮಗ್ರ ನ್ಯೂಸ್: ಶ್ರದ್ಧಾ ವಾಕರ್​ ಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಲಿವ್‌ ಇನ್‌ ರಿಲೇಶನ್​​ಶಿಪ್​ನಲ್ಲಿದ್ದ ಯುವಕ ತನ್ನ ಸಂಗಾತಿಯನ್ನು ಕತ್ತು ಹಿಸುಕಿ ಕೊಂದು, ಆಕೆಯ ಶವವನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದಾನೆ. ಅಲ್ಲದೇ ಅದೇ ದಿನವೇ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ದೆಹಲಿ ಕ್ರೈಂ ಬ್ರಾಂಚ್ ಘಟಕದ ಪ್ರಕಾರ, ಆರೋಪಿಯನ್ನು ಸಾಹಿಲ್ ಗೆಹ್ಲೋಟ್ (24) ಎಂದು ಗುರುತಿಸಲಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಮೃತ ಯುವತಿಯನ್ನು ನಿಕ್ಕಿ ಯಾದವ್ ಎಂದು ಗುರುತಿಸಲಾಗಿದೆ.

ದೆಹಲಿಯಲ್ಲಿ ಮತ್ತೊಂದು ತಣ್ಣನೆಯ ಕೊಲೆ| ಗೆಳತಿಯ ಕೊಂದು ಪ್ರಿಡ್ಜ್ ನಲ್ಲಿ ಇರಿಸಿ ಅದೇ ದಿನ ಮತ್ತೊಬ್ಬಾಕೆಯ ಮದ್ವೆಯಾದ ಪಾತಕಿ Read More »

ಫೆಬ್ರವರಿ 14 ಭಾರತೀಯರು ಮರೆಯಬಾರದ ದಿನ| ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ಫೆ.14. ಭಾರತೀಯರು ಮರೆಯಲಾಗದ ದಿನ. ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದೇ ಹೇಳಬಹುದು. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಫೆಬ್ರವರಿ 14 ರಂದು 40 ಸಿಆರ್ಪಿಎಫ್ ಅಧಿಕಾರಿಗಳ ಸಾವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವರದಿಯಾದಾಗ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು. ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ

ಫೆಬ್ರವರಿ 14 ಭಾರತೀಯರು ಮರೆಯಬಾರದ ದಿನ| ಯಾಕೆ ಗೊತ್ತಾ? Read More »