ಕ್ರೈಂ

ಕೆಲಸದಾಕೆಯ‌ ಮೇಲೆ‌ ಮನೆ ಮಾಲೀಕನಿಂದ ಅತ್ಯಾಚಾರ| ಆರೋಪಿಯ ಬಂಧನ

ಬೆಳಗಾವಿ: ತೋಟದಲ್ಲಿ ಕೆಲಸಕ್ಕೆ ಇದ್ದ ಮಹಿಳೆಯ ಮೇಲೆ ಮಾಲೀಕನೇ ಅತ್ಯಾಚಾರವೆಸಗಿರುವ ಕೃತ್ಯ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ನಡೆದಿದೆ. ಸೆ.17ರಂದೇ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತೋಟದ ಕೆಲಸಕ್ಕೆಂದು ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪತಿ, ಆರೋಪಿ ಮಾಲೀಕನ ತೋಟದಲ್ಲಿ ಶೆಡ್ ನಿರ್ಮಿಸಿಕೊಂಡು ಕೆಲಸ ಮಾಡುತ್ತಿದ್ದರು. ಸೆ.17ರಂದು ಸಂಜೆ ಮಹಿಳೆಯ ಪತಿ ಹೊರಗಡೆ ಹೋಗಿದ್ದಾಗ ತೋಟಕ್ಕೆ ಬಂದ ಮಾಲೀಕ ಶೆಡ್ ಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಗೋಕಾಕ್ ಪೊಲೀಸರು ಇದೀಗ ಆರೋಪಿ […]

ಕೆಲಸದಾಕೆಯ‌ ಮೇಲೆ‌ ಮನೆ ಮಾಲೀಕನಿಂದ ಅತ್ಯಾಚಾರ| ಆರೋಪಿಯ ಬಂಧನ Read More »

ಪುತ್ತೂರು: ‘ನೆಕ್ಕಿಲಾಡಿ’ಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾದ ವ್ಯಕ್ತಿ ಹಿಮಾಚಲ ಪ್ರದೇಶದಲ್ಲಿ?

ಪುತ್ತೂರು: ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾದ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿ ಮೊಬೈಲ್‌ ಸಂಖ್ಯೆ ಹಿಮಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಳಿವು ಪೊಲೀಸರಿಗೆ ಸಿಕ್ಕಿದೆ. ಜಿಲ್ಲಾ ಪೊಲೀಸ್‌ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಬೆಂಗಳೂರಿಗೆ ಭೇಟಿ ನೀಡುವುದಾಗಿ ಹೇಳಿ ತನ್ನ ಮನೆಯನ್ನು ತೊರೆದಿದ್ದ ಆ ವ್ಯಕ್ತಿ ಹಿಮಾಚಲ ಪ್ರದೇಶಕ್ಕೆ ಏಕೆ ಹೋಗಿರುವುದು ಅಥವಾ ಅವರ ಮೊಬೈಲ್ ಫೋನ್ ಬೇರೆಯವರು ಹೊತ್ತೊಯ್ದಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಅವರ ಪತ್ನಿಯ

ಪುತ್ತೂರು: ‘ನೆಕ್ಕಿಲಾಡಿ’ಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾದ ವ್ಯಕ್ತಿ ಹಿಮಾಚಲ ಪ್ರದೇಶದಲ್ಲಿ? Read More »

ಕಣಜದ ಹುಳು ದಾಳಿಗೆ ಯುವಕ ಸಾವು

ಮಂಗಳೂರು: ಇಲ್ಲಿನ ಎಡಪದವಿನ ಪಟ್ಲಚ್ಚಿಲ್‌ನ ನಿವಾಸಿ ಸದಾಶಿವ ಮತ್ತು ಕಮಲಾಕ್ಷಿ ದಂಪತಿ ಪುತ್ರ, ಎಂಸಿಎಫ್‌ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕೇಶವ ಯಾನೆ ಕಿಟ್ಟ (24) ಎಂಬವರು ಕಣಜದ ಹುಳುಗಳ (ಪಿಲಿಕುಂಡೋಲು) ದಾಳಿಯಿಂದ ತೀವ್ರ ಗಾಯಗೊಂಡು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ನಡೆದಿದೆ. ಮನೆಯ ತೆಂಗಿನ ಮರಗಳ ಕಾಯಿ ಕೀಳಲು ತಾನು ಹೊಸದಾಗಿ ಖರೀದಿಸಿ ತಂದಿದ್ದ ಯಂತ್ರ ಬಳಸಿಕೊಂಡು ಮರ ಏರಿದ ಸಂದರ್ಭದಲ್ಲಿ ಮರದಲ್ಲಿ ಗೂಡು ಕಟ್ಟಿದ್ದ ಕಣಜ ಹುಳುವಿನ ಗೂಡಿಗೆ ಕೇಶವರ ತಲೆ ತಾಗಿದೆ.

ಕಣಜದ ಹುಳು ದಾಳಿಗೆ ಯುವಕ ಸಾವು Read More »

ಮನೆಯ ಕೊಟ್ಟಿಗೆಯಲ್ಲಿ ದಾಸ್ತಾನಿರಿಸಿದ್ದ ರಕ್ತ ಚಂದನ ವಶ| ಆರೋಪಿಗಳ ಬಂಧನ

ಸುಳ್ಯ: ಪಂಜ ವಲಯ ಅರಣ್ಯ ಇಲಾಖೆ ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳ ಘಟಕ ಚಿಕ್ಕಮಗಳೂರು ಇವರ ಜಂಟಿ ಕಾರ್ಯಾಚರಣೆಯಲ್ಲಿ ಬಾಳಿಲದ ಮನೆಯೊಂದರ ಕೊಟ್ಟಿಗೆಯಲ್ಲಿ ರಕ್ತಚಂದನ ಸೆ.22 ರಂದು ಪತ್ತೆಯಾಗಿದೆ. ಪೊಲೀಸ್ ಅರಣ್ಯ ಸಂಚಾರಿ ದಳ ಘಟಕಕ್ಕೆ ದೊರೆತ ಮಾಹಿತಿ ಮೇರೆಗೆ ಸೆ.22 ರಂದು ಮುಂಜಾನೆ ಬಾಳಿಲದ ಅಬ್ದುಲ್ ಎಂಬವರ ಮನೆಗೆ ಜಂಟಿ ಇಲಾಖೆಗಳ ಅಧಿಕಾರಿಗಳು ದಾಳಿ ನಡೆಸಿದಾಗ ಮನೆಯ ಕೊಟ್ಟಿಗೆಯಲ್ಲಿ 40 ತುಂಡು 260 ಕೆ.ಜಿ.ರಕ್ತ ಚಂದನ ಪತ್ತೆಯಾಗಿದ್ದು ಇಲಾಖೆಯವರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ

ಮನೆಯ ಕೊಟ್ಟಿಗೆಯಲ್ಲಿ ದಾಸ್ತಾನಿರಿಸಿದ್ದ ರಕ್ತ ಚಂದನ ವಶ| ಆರೋಪಿಗಳ ಬಂಧನ Read More »

ಹೆದ್ದಾರಿಯಲ್ಲಿ ಬಿದ್ದಿದ್ದ ಕಾಂಡೋಮ್ ರಾಶಿ ಪ್ರಕರಣ| ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಹೈಟೆಕ್ ವೇಶ್ಯಾವಾಟಿಕೆ| ಗಂಟೆ ಲೆಕ್ಕದಲ್ಲಿ ಯುವತಿಯರ ರೇಟ್ ಫಿಕ್ಸ್..!?

ತುಮಕೂರು: ಇಲ್ಲಿನ ಕ್ಯಾತಸಂದ್ರ ಪೊಲೀಸ್​ ಠಾಣೆ ಕೂಗಳತೆ ದೂರದ ನಂದಿ ಲಾಡ್ಜ್​ನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಮೈಸೂರಿನ ‘ಒಡನಾಡಿ’ ಸ್ವಯಂ ಸೇವಾ ಸಂಸ್ಥೆ ಬಯಲಿಗೆಳೆದಿದೆ. ಲಾಡ್ಜ್ ಸುರಂಗ ನಿರ್ಮಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಘಾತಕಾರಿ ಅಂಶ ಬಯಲಾಗಿದ್ದು, ಪೊಲೀಸ್ ಠಾಣೆಯ ಹತ್ತಿರವೇ ಅಕ್ರಮ ನಡೀತಿದ್ರೂ ಪೊಲೀಸರಿಗೆ ಗೊತ್ತಾಗದಿರುವುದು ಹಲವು ಅನುಮಾನ ಹುಟ್ಟುಹಾಕಿದೆ. ಜೊತೆಗೆ ತುಮಕೂರು ವೇಶ್ಯಾವಾಟಿಕೆ ಹಬ್ ಆಗ್ತಿದ್ಯಾ? ಎಂಬ ಸಂಶಯ ವ್ಯಕ್ತವಾಗಿದೆ. ಇತ್ತೀಚಿಗೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಾಶಿರಾಶಿ ಕಾಂಡೋಮ್​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಹೆದ್ದಾರಿಯಲ್ಲಿ ಬಿದ್ದಿದ್ದ ಕಾಂಡೋಮ್ ರಾಶಿ ಪ್ರಕರಣ| ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಹೈಟೆಕ್ ವೇಶ್ಯಾವಾಟಿಕೆ| ಗಂಟೆ ಲೆಕ್ಕದಲ್ಲಿ ಯುವತಿಯರ ರೇಟ್ ಫಿಕ್ಸ್..!? Read More »

ಸುಳ್ಯ| ಅರಣ್ಯಾಧಿಕಾರಿಗಳಿಂದ ಮನೆ ಮೇಲೆ ದಾಳಿ| ರಕ್ತಚಂದನ ವಶ

ಸುಳ್ಯ: ಚಿಕ್ಕಮಗಳೂರಿನ ಅರಣ್ಯಾಧಿಕಾರಿಗಳು ಸುಳ್ಯ ತಾಲೂಕಿನ ಬಾಳಿಲದ ವ್ಯಕ್ತಿಯೋಬ್ಬರ ಮನೆಯೊಂದಕ್ಕೆ ದಾಳಿ ನಡೆಸಿ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ಇಂದು ವರದಿಯಾಗಿದೆ. ಬಾಳಿಲದ ಮಜೀದ್ ಎಂಬವರ ಮನೆಗೆ ಅರಣ್ಯಧಿಕಾರಿಗಳು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದಾಗಿ ತಿಳಿದುಬಂದಿದೆ. ಈ ವೇಳೆ ರಕ್ತಚಂದನ ಮರದ ತುಂಡುಗಳ ಪತ್ತೆಯಾಗಿದ್ದು, ಈ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ| ಅರಣ್ಯಾಧಿಕಾರಿಗಳಿಂದ ಮನೆ ಮೇಲೆ ದಾಳಿ| ರಕ್ತಚಂದನ ವಶ Read More »

ಕಡಬ:ಕಾಲೇಜು ವಿದ್ಯಾರ್ಥಿ ನಾಪತ್ತೆ| ಅಪಹರಣ ಶಂಕೆ, ಪೊಲೀಸ್ ದೂರು- ಸಂಬಂಧಿಕರ ಮನೆಯಲ್ಲಿ ಪತ್ತೆ|

ಕಡಬ: ಇಲ್ಲಿನ ಸಮೀಪದ ರಾಮಕುಂಜ ಶ್ರೀ ರಾಮಕುಂಜೇಶ್ವರ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಯೋರ್ವ ಕಾಲೇಜಿಗೂ ಹೋಗದೆ, ಮನೆಗೂ ತೆರಳದೆ ನಾಪತ್ತೆಯಾಗಿರುವ ಘಟನೆ ಮಂಗಳವಾರದಂದು ನಡೆದಿದೆ. ನಿಗೂಢವಾಗಿ ನಾಪತ್ತೆಯಾಗಿರುವ ವಿದ್ಯಾರ್ಥಿ ಕುರಿತು ಅಪಹರಣ ಆಗಿರಬಹುದೆಂದು ಶಂಕಿಸಿ ಕಡಬ ಠಾಣೆಯಲ್ಲಿ ಪ್ರಕರಣ ದ ದಾಖಲಾಗಿತ್ತು. . ದೂರಿನ ಬಳಿಕ ತ‌ನಿಖೆ ನಡೆಸಿದ‌ ಪೊಲೀಸರಿಗೆ ಆತ ಬೆಂಗಳೂರಿನಲ್ಲಿ ‌ತನ್ನ ಸಂಬಂಧಿಕರ ಮನೆಯಲ್ಲಿ ‌ಇರುವುದು ಗೊತ್ತಾಗಿದೆ. ರಾಮಕುಂಜೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಚಿಕ್ಕಮಗಳೂರು ನಿವಾಸಿ ಅಂಜನ್ ಸಿ.ಎಂ. ಎಂಬಾತನೇ ಕಾಣೆಯಾಗಿರುವ ವಿದ್ಯಾರ್ಥಿ.

ಕಡಬ:ಕಾಲೇಜು ವಿದ್ಯಾರ್ಥಿ ನಾಪತ್ತೆ| ಅಪಹರಣ ಶಂಕೆ, ಪೊಲೀಸ್ ದೂರು- ಸಂಬಂಧಿಕರ ಮನೆಯಲ್ಲಿ ಪತ್ತೆ| Read More »

ಸಿನಿಮಾ ಸ್ಟೈಲ್‌ನಲ್ಲಿ ಮುತ್ತು ಕೊಟ್ಟವನನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ತೆಲುಗಿನ ಗೀತಾ-ಗೋವಿಂದಂ ಸಿನಿಮಾ ಮಾದರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಮುತ್ತು ಕೊಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಮಧುಸೂದನ್ ರೆಡ್ಡಿ (25) ಬಂಧಿತ.ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಧುಸೂದನ್ ರೆಡ್ಡಿ, ವಿಜಯನಗರದಲ್ಲಿ ನೆಲೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಷ್ಠಿತ ಕಾಲೇಜಿನಲ್ಲಿ ಆರ್ಕಿಟೆಕ್ಟರ್ ವಿದ್ಯಾರ್ಥಿನಿಯೊಬ್ಬಳು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಹೋಗಿದ್ದರು. ಸೆ.12ರ ರಾತ್ರಿ ಬಳ್ಳಾರಿಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅಪರಿಚಿತ ಯುವಕ ಪಕ್ಕದಲ್ಲೇ ಕುಳಿತು ಪ್ರಯಾಣ ಬೆಳೆಸಿದ್ದ. ಸೆ.13ರ ಬೆಳಗಿನ ಜಾವ

ಸಿನಿಮಾ ಸ್ಟೈಲ್‌ನಲ್ಲಿ ಮುತ್ತು ಕೊಟ್ಟವನನ್ನು ಬಂಧಿಸಿದ ಪೊಲೀಸರು Read More »

ಹೆದ್ದಾರಿ ಬದಿ ಸಿಕ್ಕಿದ ಕಾಂಡೋಮ್ ರಾಶಿ ಪ್ರಕರಣ| ಅಲ್ಲಿ ಅಷ್ಟೊಂದು ಕಾಂಡೋಮ್ ರಾಶಿ ಬಿದ್ದಿದ್ದು ಹೇಗೆ ಗೊತ್ತಾ?

ತುಮಕೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯುದ್ದಕ್ಕೂ ಕಂಡುಬಂದಿದ್ದ ರಾಶಿ ರಾಶಿ ಕಾಂಡೋಮ್ ಗಳ ಪತ್ತೆ ಪ್ರಕರಣಕ್ಕೆ ಮರುಜೀವ ಬಂದಿದ್ದು ಶಾಕಿಂಗ್ ತಿರುವು ಪಡೆದುಕೊಂಡಿದೆ‌. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಲಾಡ್ಜ್ ಒಂದರ ಸುರಂಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವೊಂದು ಸಿಕ್ಕಿಬಿದ್ದಿದೆ. ರಸ್ತೆಯಲ್ಲಿ ಬಿಸಾಕಿದ್ದ ರಾಶಿ ರಾಶಿ ಕಾಂಡೋಮ್ ಗಳ ಮೂಲ ಹುಡುಕಲು ಖಚಿತ ಮಾಹಿತಿ ಆಧಾರದ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ತುಮಕೂರಿನ ಕ್ಯಾತ್ಸಂದ್ರದ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದ್ದು, ಹೈಟೆಕ್

ಹೆದ್ದಾರಿ ಬದಿ ಸಿಕ್ಕಿದ ಕಾಂಡೋಮ್ ರಾಶಿ ಪ್ರಕರಣ| ಅಲ್ಲಿ ಅಷ್ಟೊಂದು ಕಾಂಡೋಮ್ ರಾಶಿ ಬಿದ್ದಿದ್ದು ಹೇಗೆ ಗೊತ್ತಾ? Read More »

ನೀರು ತರಲು ಹೋದ ಹಿಂದೂ ಸಮುದಾಯದ ಜನರಿಗೆ ಕಿರುಕುಳ| ಮಸೀದಿಯ ಪಾವಿತ್ರ್ಯತೆಗೆ ಧಕ್ಕೆ ಆರೋಪ|

ಇಸ್ಲಾಮಾಬಾದ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿನ ಮಸೀದಿಯೊಂದರಿಂದ ಕುಡಿಯುವ ನೀರು ತಂದಿದ್ದಕ್ಕಾಗಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಬಡ ರೈತ ಕುಟುಂಬ ತೊಂದರೆಗೆ ಸಿಲುಕಿದೆ. ಧಾರ್ಮಿಕ ಸ್ಥಳದ ಪಾವಿತ್ರ್ಯ ಹಾಳು ಮಾಡಲಾಗಿದೆ ಎಂದು ಆರೋಪಿಸಿ ಕೆಲವರು ಕುಟುಂಬ ಸದಸ್ಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಕಿರುಕುಳ ನೀಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಕುಟುಂಬದ ಸದಸ್ಯರು ಸಮೀಪದ ಮಸೀದಿಯ ನೆಲ್ಲಿಯಿಂದ ನೀರು ತರಲು ಹೋದಾಗ ಸ್ಥಳೀಯರು ಅವರ ಮೇಲೆ ಹಲ್ಲೆ ಮಾಡಿರುವುದಾಗಿ ಅಲಾಂ ರಾಮ್‌ ಭೀಲ್‌ ಅವರು ಹೇಳಿರುವುದಾಗಿ ಡಾನ್‌ ಪತ್ರಿಕೆ ವರದಿ

ನೀರು ತರಲು ಹೋದ ಹಿಂದೂ ಸಮುದಾಯದ ಜನರಿಗೆ ಕಿರುಕುಳ| ಮಸೀದಿಯ ಪಾವಿತ್ರ್ಯತೆಗೆ ಧಕ್ಕೆ ಆರೋಪ| Read More »