ಕ್ರೈಂ

ಹೆತ್ತ ಮಕ್ಕಳಿಗೆ ‌ವಿಷಕೊಟ್ಟು ತಾನೂ ವಿಷ ಕುಡಿದ ತಂದೆ| ಜ್ಯೂಸ್ ನಲ್ಲಿ ಬೆರೆಸಿ ಪ್ರಾಣ ತೆಗೆಯುವ ಸಂಚಿಗೆ ಪ್ರೇರಣೆಯಾಯ್ತು ಹೆಂಡದ ಅಮಲು

ಕಡಬ:. ತಾನು ವಿಷ ಕುಡಿದು ತನ್ನ ಮಕ್ಕಳಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕುಡಿಸಿದ ಘಟನೆ ಕಡಬ ತಾಲೂಕಿನ ಬಲ್ಯದಿಂದ ವರದಿಯಾಗಿದೆ ಮೂಲತಃ ಬೆಳ್ತಂಗಡಿ ತಾಲೂಕಿನ ಶಿಶಿಲ ನಿವಾಸಿ ವಿಶ್ವನಾಥ ಎಂಬವರು ಕಡಬ ತಾಲೂಕಿನ ಬಲ್ಯದಿಂದ ಮದುವೆಯಾಗಿದ್ದು, ಕುಡಿತದ ಚಟ ಹೊಂದಿದ್ದ ವಿಶ್ವನಾಥರು ಕುಡಿದು ಬಂದು ಪತ್ನಿಯ ಜೊತೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿಯು ತವರು ಮನೆಗೆ ಬಂದಿದ್ದು, ಇಲ್ಲಿಗೆ ಬಂದಿದ್ದ ವಿಶ್ವನಾಥ್ ತನ್ನ ಸಣ್ಣ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಜ್ಯೂಸ್ ಕುಡಿಸಿದ್ದಾನೆ ಎನ್ನಲಾಗಿದೆ. ಓರ್ವ ಮಗ […]

ಹೆತ್ತ ಮಕ್ಕಳಿಗೆ ‌ವಿಷಕೊಟ್ಟು ತಾನೂ ವಿಷ ಕುಡಿದ ತಂದೆ| ಜ್ಯೂಸ್ ನಲ್ಲಿ ಬೆರೆಸಿ ಪ್ರಾಣ ತೆಗೆಯುವ ಸಂಚಿಗೆ ಪ್ರೇರಣೆಯಾಯ್ತು ಹೆಂಡದ ಅಮಲು Read More »

ವ್ಯಕ್ತಿಯನ್ನು ಕಡಿದು ಕೊಲೆಗೈದ ದುಷ್ಕರ್ಮಿಗಳು| ವೇಣೂರಿನಲ್ಲಿ ನಡೆಯಿತು ಬರ್ಬರ ಕೃತ್ಯ|

ಬೆಳ್ತಂಗಡಿ: ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ಸಂಜೀವ ಶೆಟ್ಟಿ(60) ಎಂದು ಗುರುತಿಸಲಾಗಿದೆ. ಸಂಜೀವ ಶೆಟ್ಟಿ ಇವರು ಇನ್ನೊಂದು ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಇವರನ್ನು ಜೊತೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಇನ್ನೋರ್ವ ಬೆಳಗ್ಗೆ ಕಾದು ಕುಳಿತರೂ ಬರದ ಕಾರಣ ಏಕೆ ಬಂದಿಲ್ಲ ಎಂದು ಅವರ ಮನೆಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವೇಣೂರು ಠಾಣಾ ವ್ಯಾಪ್ತಿಯಲ್ಲಿ

ವ್ಯಕ್ತಿಯನ್ನು ಕಡಿದು ಕೊಲೆಗೈದ ದುಷ್ಕರ್ಮಿಗಳು| ವೇಣೂರಿನಲ್ಲಿ ನಡೆಯಿತು ಬರ್ಬರ ಕೃತ್ಯ| Read More »

ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ| ವರದಕ್ಷಿಣೆ ಕಿರುಕುಳವೆಂದು ಆರೋಪಿಸಿದ ಪೋಷಕರು|

ಕೊಡಗು: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅಯಂಗೇರಿ ಗ್ರಾಮದಲ್ಲಿ ನಡೆದಿದೆ‌. ನೇಣು ಬಿಗಿದುಕೊಂಡು ಅಮೀರ(20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಅಮೀರ ಪೋಷಕರಿಂದ ವರದಕ್ಷಿಣೆ ಕಿರುಕುಳದ ಆರೋಪ ಕೇಳಿ ಬಂದಿದೆ. 11 ತಿಂಗಳ ಹಿಂದೆ ರುವೈಸ್ ಎಂಬಾತನನ್ನು ಅಮೀರ ವಿವಾಹವಾಗಿದ್ದರು. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ| ವರದಕ್ಷಿಣೆ ಕಿರುಕುಳವೆಂದು ಆರೋಪಿಸಿದ ಪೋಷಕರು| Read More »

ಕಾರಿನ ಟಯರ್ ಸ್ಫೋಟ – ತಾಯಿ, ಮಗ ದುರ್ಮರಣ

ಮೈಸೂರು: ಕಾರಿನ ಟಯರ್ ಸ್ಫೋಟಗೊಂಡು ತಾಯಿ, ಮಗ ಸಾವನ್ನಪ್ಪಿದ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ನಡೆದಿದೆ. ದೈವಿಕ್(12), ಗುಣಲಕ್ಷ್ಮಿ(35) ಮೃತಪಟ್ಟವರು. ನಿನ್ನೆ ಮುಂಜಾನೆ 4.30 ಸಮಯದಲ್ಲಿ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ಕಾರಿನಲ್ಲಿ ಪತಿ ಜಗದೀಶ್ ಜೊತೆಗೆ ಗುಣಲಕ್ಷ್ಮಿ ಮತ್ತು ಮಗ ದೈವಿಕ್ ಸಂಚಾರಿಸುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದ ಟೈಯರ್ ಗಳು ಸ್ಫೋಟ ಆಗಿದೆ. ಈ ಪರಿಣಾಮ ಕಾರು ಕಂಬಕ್ಕೆ ಗುದ್ದಿದೆ. ಕಾರು ಓಡಿಸುತ್ತಿದ್ದ ಜಗದೀಶ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಗುಣಲಕ್ಷ್ಮಿ

ಕಾರಿನ ಟಯರ್ ಸ್ಫೋಟ – ತಾಯಿ, ಮಗ ದುರ್ಮರಣ Read More »

ಅಶ್ಲೀಲ ವರ್ತನೆ ತೋರಿದ ಯುವಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಭಜರಂಗದಳ ಕಾರ್ಯಕರ್ತರು ಕೋಲು ಕೊಟ್ಟು ಪೆಟ್ಟು ತಿಂದರು..!

ಮಂಗಳೂರು: ನಗರದಲ್ಲಿ ನೈತಿಕ ಪೋಲಿಸ್ ಗಿರಿ ಹೆಚ್ಚಾಗುತ್ತಿದೆ ಎಂಬ ಆರೋಪದ ನಡುವೆಯೇ ಅಶ್ಲೀಲವಾಗಿ ವರ್ತಿಸುತ್ತಿದ್ದ ಜೋಡಿಗಳಿಗೆ ಬುದ್ದಿವಾದ ಹೇಳಲು ಹೋದ ಇಬ್ಬರು ಭಜರಂಗದಳ ಕಾರ್ಯಕರ್ತರನ್ನೇ ಪೋಲಿಸರು ಬಂಧಿಸಿರುವ ಘಟನೆ ನಡೆದಿದೆ‌. ಕದ್ರಿ ಠಾಣಾ ವ್ಯಾಪ್ತಿಯ ಸೈಂಟ್ ಆಗ್ನೆಸ್ ಬಳಿ ರಾತ್ರಿ ವೇಳೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಜೋಡಿಗಳನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು ಬುದ್ದಿವಾದ ಹೇಳಿ ಪೋಲೀಸರಿಗೆ ಒಪ್ಪಿಸಿದ್ದರು. ಆದರೆ ಜೋಡಿಗಳ ಜೊತೆ ಪೋಲೀಸ್ ಸ್ಟೇಷನ್ ಗೆ ತೆರಳಿದ ಕಾರ್ಯಕರ್ತರ ವಿರುದ್ಧವೇ ಆ ಜೋಡಿ ತಿರುಗಿಬಿದ್ದಿದ್ದು, ಬಜರಂಗದಳದ ಕಾರ್ಯಕರ್ತರು

ಅಶ್ಲೀಲ ವರ್ತನೆ ತೋರಿದ ಯುವಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಭಜರಂಗದಳ ಕಾರ್ಯಕರ್ತರು ಕೋಲು ಕೊಟ್ಟು ಪೆಟ್ಟು ತಿಂದರು..! Read More »

ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಚೈತ್ರಾ ಕುಂದಾಪುರ ವಿಡಿಯೋಗೆ ಅಶ್ಲೀಲ ವಾಯ್ಸ್| ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಕೀಳು ಮಟ್ಟದ ಅವಮಾನ ಮಾಡಿ ಪೋಸ್ಟಿಂಗ್| ಕೋಮು ಸಾಮರಸ್ಯ ಕದಡುತ್ತಿರುವವರಾರು?

ಮಂಗಳೂರು: ಚೈತ್ರಾ ಕುಂದಾಪುರ ಹಾಗೂ ತುಳುವರ ಆರಾಧ್ಯ ದೈವ ಕೊರಗಜ್ಜನನ್ನು ತೀರಾ ತುಚ್ಚ ರೀತಿಯಲ್ಲಿ, ಅಶ್ಲೀಲವಾಗಿ ನಿಂದಿಸುವ ಮೂಲಕ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಅವಮಾನ ಮಾಡಲಾಗಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆಯಲ್ಲದೆ ಆಕ್ರೋಶ ವ್ಯಕ್ತವಾಗಿದೆ. ಟಾರ್ಗೆಟ್ ಹಿಂದೂಸ್’ ಎಂಬ ಪ್ರೊಫೈಲ್ ಫೋಟೋ ಇಟ್ಟುsula-tuluver’ ಎಂಬ ಹೆಸರಲ್ಲಿ ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆಯಲಾಗಿದ್ದು, ಇದರ ಡಿಸ್ಕ್ರಿಪ್ಷನ್‍ನಲ್ಲಿ ತುಳು ಅಪ್ಪೆ ಹಾಗೂ ಕೊರಗಜ್ಜನಿಗೆ ತೀರಾ ತುಚ್ಚ ರೀತಿಯಲ್ಲಿ ನಿಂದಿಸಲಾಗಿದೆ. ಅಲ್ಲದೆ ಮೊನ್ನೆ ಸುರತ್ಕಲ್‍ನಲ್ಲಿ ಭಾಷಣ ಮಾಡಿದ್ದ ಚೈತ್ರಾ ಕುಂದಾಪುರ ಅವರ ಭಾಷಣದ ವಿಡಿಯೋದ

ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಚೈತ್ರಾ ಕುಂದಾಪುರ ವಿಡಿಯೋಗೆ ಅಶ್ಲೀಲ ವಾಯ್ಸ್| ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಕೀಳು ಮಟ್ಟದ ಅವಮಾನ ಮಾಡಿ ಪೋಸ್ಟಿಂಗ್| ಕೋಮು ಸಾಮರಸ್ಯ ಕದಡುತ್ತಿರುವವರಾರು? Read More »

ಮಂಗಳೂರು: ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು: ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಹಾಸ್ಟೇಲ್ ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಅ. 6 ಬುಧವಾರ ಘಟನೆ ವರದಿಯಾಗಿದೆ. ಮೃತರನ್ನು ಕೇರಳ ಮೂಲದ ನೀನಾ (19) ಎಂದು ಗುರುತಿಸಲಾಗಿದೆ. ಇವರು 2020-21 ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದು, ನಗರದ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು. ಈ ಹಿನ್ನಲೆ ಹಾಸ್ಟೇಲ್ ನಲ್ಲಿ ವಾಸವಾಗಿದ್ದರು. ಇದೀಗ ಹಾಸ್ಟೆಲ್ ನಲ್ಲಿ ವಾಸವಾಗಿದ್ದ ನೀನಾ ಬಾತ್ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಹೆತ್ತವರಿಗೆ

ಮಂಗಳೂರು: ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ Read More »

ನಿದ್ದೆ ಮಾಡುವುದಾಗಿ ರೂಮ್ ಬಾಗಿಲು ಹಾಕಿಕೊಂಡ ಬಾಲಕಿ ಮತ್ತೆ ಸಿಕ್ಕುದ್ದು ಶವವಾಗಿ..!, ಈ ಸಾವಿಗೆ ಕಾರಣವಾದನೇ ಆಕೆಯ ಅಪ್ಪ?

ಹೈದರಾಬಾದ್: ನಿದ್ದೆ ಮಾಡುವುದಾಗಿ ರೂಮ್ ಬಾಗಿಲು ಹಾಕಿಕೊಂಡ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ತೆಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಳಾಪುರ್ ಮೂಲದ ವೇಲದುರ್ತಿ ಮನೋಹರಚಾರಿ ಮತ್ತು ಕಲ್ಯಾಣ ದಂಪತಿ ಮಗಳಾಗಿದ ಕೌಶಿಕಿ (17) ಮೃತ ಬಾಲಕಿಯಾಗಿದ್ದಾಳೆ. ಇವರ ಕುಟುಂಬ ಮೀರ್‌ಪೇಟ್ ನ ಸರ್ವೋದಯ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸವಾಗಿದ್ದರು. ಕೌಶಿಕಿ ದ್ವೀತಿಯ ಪಿಯು ವಿದ್ಯಾರ್ಥಿನಿ ಆಗಿದ್ದಳು. ಮೊಬೈಲ್ ಗೀಳಿಗೆ ಬಿದ್ದಿದ್ದ ಕೌಶಿಕಿ ಅಪ್ಪನ ಮೊಬೈಲ್ ತೆಗೆದುಕೊಂಡು

ನಿದ್ದೆ ಮಾಡುವುದಾಗಿ ರೂಮ್ ಬಾಗಿಲು ಹಾಕಿಕೊಂಡ ಬಾಲಕಿ ಮತ್ತೆ ಸಿಕ್ಕುದ್ದು ಶವವಾಗಿ..!, ಈ ಸಾವಿಗೆ ಕಾರಣವಾದನೇ ಆಕೆಯ ಅಪ್ಪ? Read More »

ತಂದೆ ಹಾರಿಸಿದ ಗುಂಡು ಮಗನ ಪ್ರಾಣವನ್ನೇ ಬಲಿ ತೆಗೆದುಕೊಳ್ತು! ಕೋಪದ ಕೈಗೆ ಬುದ್ದಿ ಕೊಟ್ರೆ ಹೀಗೆ ಆಗೋದಲ್ವೇ?

ಮಂಗಳೂರು: ಸಂಬಳದ ವಿಚಾರದಲ್ಲಿ ನೌಕರರ ಜೊತೆ ಜಟಾಪಟಿಗಿಳಿದು ಫೈರಿಂಗ್ ಮಾಡಿದ್ದ ಪ್ರಕರಣದಲ್ಲಿ ತಲೆಗೆ ಗುಂಡೇಟು ಬಿದ್ದಿರುವ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕರ ಪುತ್ರನ ಮೆದುಳು ನಿಷ್ಕ್ರಿಯಗೊಂಡಿದ್ದು, ಮನೆಮಂದಿ ಆತನ ಅಂಗಾಂಗ ದಾನಕ್ಕೆ ಚಿಂತನೆ ನಡಸಿದ್ದಾರೆ. ವಿಷಯ ತಿಳಿದ ತಂದೆಗೆ ಹೃದಯಾಘಾತ ಸಂಭವಿಸಿದ್ದು, ಜುಜುಬಿ ಹಣಕ್ಕಾಗಿ ಕೋಪದ ಕೈಗೆ ಬುದ್ದಿ ಕೊಟ್ಟು ಮೂಗು ಕೊಯ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆ ವಿವರ:ವೈಷ್ಣವಿ ಕಾರ್ಗೋ ಸಂಸ್ಥೆಯ ಲಾರಿಗಳು ದೇಶಾದ್ಯಂತ ಸಂಚರಿಸುತ್ತವೆ. ಒಂದು ಲಾರಿಯಲ್ಲಿ ಡ್ರೈವರ್ ಮತ್ತು ಕ್ಲೀನರ್ ಆಗಿದ್ದ ಚಂದ್ರು ಮತ್ತು

ತಂದೆ ಹಾರಿಸಿದ ಗುಂಡು ಮಗನ ಪ್ರಾಣವನ್ನೇ ಬಲಿ ತೆಗೆದುಕೊಳ್ತು! ಕೋಪದ ಕೈಗೆ ಬುದ್ದಿ ಕೊಟ್ರೆ ಹೀಗೆ ಆಗೋದಲ್ವೇ? Read More »

ವಿದ್ಯಾರ್ಥಿನಿಯನ್ನು ಐ ಲವ್ ಯೂ ಎಂದು ಅಪ್ಪಿಕೊಳ್ಳಲು ಬಂದ ಕಾಮುಕ| ಕೈಹಿಡಿದೆಳೆದವನ ಖಾಕಿ ಕೈಗಿತ್ತ ಗ್ರಾಮಸ್ಥರು|

ಮಂಗಳೂರು: ವಿದ್ಯಾರ್ಥಿನಿಯೋರ್ವಳು‌ ಕಾಲೇಜು ಮುಗಿಸಿ ಬಸ್ಸಿನಿಂದಿಳಿದು‌ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆಯ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಗ್ರಾಮಸ್ಥರು ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ಮಂಗಳೂರಿ‌ನ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂದಿತ ಆರೋಪಿಯನ್ನು ಅಡ್ಯಾರ್ ಕಣ್ಣೂರು‌ ನಿವಾಸಿ ಯಾಕೂಬ್ ಎಂದು ಗುರುತಿಸಲಾಗಿದೆ. ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೋರ್ವಳು ಹರೇಕಳ ಎಂಬಲ್ಲಿ ಬಸ್ಸಿನಿಂದ ಇಳಿದು ಮನೆಗೆ ತೆರಳುತ್ತಿದ್ದಳು. ಈ ವೇಳೆ ಆಕೆಗೆ ಎದುರಾದ ಯಾಕೂಬ್ ‘ಐ ಲವ್ ಯೂ’ ಎಂದು ಆಕೆಯ ಮೇಲೆ ಮುಗಿ ಬಿದ್ದಿದ್ದಾನೆ. ಆಕೆಯನ್ನು

ವಿದ್ಯಾರ್ಥಿನಿಯನ್ನು ಐ ಲವ್ ಯೂ ಎಂದು ಅಪ್ಪಿಕೊಳ್ಳಲು ಬಂದ ಕಾಮುಕ| ಕೈಹಿಡಿದೆಳೆದವನ ಖಾಕಿ ಕೈಗಿತ್ತ ಗ್ರಾಮಸ್ಥರು| Read More »