ಕರಾವಳಿ

ತುಳು‌ವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಡಿವಿಎಸ್

ಮಂಗಳೂರು: ತುಳು ಭಾಷೆಯು ಸಂಸ್ಕೃತಿ, ಆಚಾರ- ವಿಚಾರ, ಜೀವನ ಪದ್ಧತಿಯನ್ನು ಪ್ರತಿಬಿಂಬಿಸುತ್ತದೆ. ಭಾಷೆಯೊಂದರ ಅವನತಿ, ದೇಶದ ಸಂಸ್ಕೃತಿಯ ಅವನತಿಯಿದ್ದಂತೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಾನು ಮುಂದೆ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಆನ್ಲೈನ್ ವೇದಿಕೆ […]

ತುಳು‌ವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಡಿವಿಎಸ್ Read More »

ಕೋವಿಡ್ ರೂಲ್ಸ್ ಗಿಂತ ಮೋದಿ ಸರ್ಕಾರದ ಏಳನೇ ವರ್ಷಚಾರಣೆಯೇ ಮೇಲಾಯ್ತು ಈ ಸಂಸದರಿಗೆ…! | ತಮ್ಮದೇ ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು

ಮಂಗಳೂರು: ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಗಳು, ಸ್ಥಳೀಯ ಆಡಳಿತಗಳು ಅಗತ್ಯ ಸಭೆ ನಡೆಸಲು ಅಗತ್ಯ ಸಚಿವರುಗಳು ಮತ್ತು ಅಧಿಕಾರಿಗಳನ್ನು ಸೇರಿಸಿಕೊಳ್ಳುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದರೆ ಇಲ್ಲೊಬ್ಬ ಸಂಸದರು ತಮ್ಮ ಪಕ್ಷದ ಕಾರ್ಯಕ್ರಮಕ್ಕೆ ತಮ್ಮದೇ ಸರ್ಕಾರದ ನಿಯಮ ಮೀರಿ ಜನ ಸೇರಿಸಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಮಾರಂಭ ನಡೆಸಿರುವ ಘಟನೆ ನಡೆದಿದೆ. ಹೇಳಿ ಕೇಳಿ ಇವ್ರು ಬಿಜೆಪಿ ರಾಜ್ಯಾಧ್ಯಕ್ಷರು, ಜೊತೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್. ಇವ್ರು ಮಂಗಳೂರಿನ ಸರಕಾರಿ ಶಾಲೆಯೊಂದರಲ್ಲಿ

ಕೋವಿಡ್ ರೂಲ್ಸ್ ಗಿಂತ ಮೋದಿ ಸರ್ಕಾರದ ಏಳನೇ ವರ್ಷಚಾರಣೆಯೇ ಮೇಲಾಯ್ತು ಈ ಸಂಸದರಿಗೆ…! | ತಮ್ಮದೇ ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು Read More »

ಯಡಿಯೂರಪ್ಪನವರು ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ| ಸಿದ್ದರಾಮಯ್ಯಗೆ ನಳಿನ್ ತಿರುಗೇಟು

ಮಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಳಿಕ ಸಮರ್ಥ ನಾಯಕನಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, “ಯಡಿಯೂರಪ್ಪ ಸರ್ವ ಸಮ್ಮತಿಯ ನಾಯಕ, ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ” ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮುಂದೆ ಎಲ್ಲಿದ್ರು…?, ಯಾರು ಅವರ ಗುರು ಆಗಿದ್ರು….?, ಕಾಂಗ್ರೆಸ್ ಗೆ ಬೈದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ಮುಖ್ಯಮಂತ್ರಿ ಆಗಿದ್ದನ್ನು ಜಗತ್ತು ನೋಡಿದೆ. ಬಿಜೆಪಿಯಲ್ಲಲ್ಲ ಕಾಂಗ್ರೆಸ್ ನಲ್ಲಿ ನಿಜವಾಗಿ ನಾಯಕತ್ವದ ಕೊರತೆ ಇದೆ. ಅವತ್ತು ಸಮ್ಮಿಶ್ರ

ಯಡಿಯೂರಪ್ಪನವರು ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ| ಸಿದ್ದರಾಮಯ್ಯಗೆ ನಳಿನ್ ತಿರುಗೇಟು Read More »

ಬೆಳ್ತಂಗಡಿ:ವಿದ್ಯುತ್ ಶಾಕ್ ಗೆ ತಾಯಿ ಮಗು ಬಲಿ

ಬೆಳ್ತಂಗಡಿ: ಪಂಪ್ ಸ್ವಿಚ್ ಆನ್ ಮಾಡಲು ತೆರಳಿದ ತಾಯಿ-ಮಗು ಇಬ್ಬರು ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ತಾಲೂಕಿನ ಪಟ್ರಮೆ ಯಿಂದ ವರದಿಯಾಗಿದೆ. ಪಟ್ರಮೆ ಗ್ರಾಮದ ಕೋಡಂದೂರು ನಿವಾಸಿ ಹರೀಶ್ ಗೌಡ ಎಂಬವರ ಪತ್ನಿ 30 ವರ್ಷದ ಗೀತಾ ಮತ್ತು 4.5 ವರ್ಷದ ಮಗು ಭವಿಷ್ ಮೃತಪಟ್ಟ ದುರ್ದೈವಿಗಳು. ತಾಯಿ ಗೀತಾ ಮಗುವನ್ನು ಎತ್ತಿಕೊಂಡು, ಹೊಸದಾಗಿ ಕರಿಸಿ ಖರೀದಿಸಿದ ಜಾಗದಲ್ಲಿ ಬೋರ್ವೆಲ್ ಗೆ ಅಳವಡಿಸಿದ ಪಂಪ್ ಸ್ವಿಚ್ ಆನ್ ಮಾಡುವಾಗ ದುರ್ಘಟನೆ ಸಂಭವಿಸಿದೆ.

ಬೆಳ್ತಂಗಡಿ:ವಿದ್ಯುತ್ ಶಾಕ್ ಗೆ ತಾಯಿ ಮಗು ಬಲಿ Read More »

ಮಂಗಳೂರು : ರಾತ್ರೋ ರಾತ್ರಿ ಮುಸ್ಲಿಂ ಯುವತಿ ನಾಪತ್ತೆ

ಮಂಗಳೂರು: ಬಜ್ಪೆ ಸಮೀಪದ ಕೆಂಜಾರಿನಲ್ಲಿ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ನಡೆದಿದೆ. ಹುಸೈನ್ ಶರೀಫ್ ಎಂಬವರ ಪುತ್ರಿ ಫಾತಿಮಾ ಸಾಹಿರಾ (21) ನಾಪತ್ತೆಯಾದ ಯುವತಿ. ಇವರು ಮೇ 26ರಂದು ತಡರಾತ್ರಿ ನಾಪತ್ತೆಯಾಗಿದ್ದಾರೆ. ಹುಸೈನ್ ಶರೀಫ್ ಪತ್ನಿ ಹಾಗೂ ಇಬ್ಬರು ಪುತ್ರಿಯರು ಫಾತಿಮಾ ಸಾಹಿರಾ ಮತ್ತು ಮಿಶ್ರಿಯಾ ಎಂಬವರು ಮೇ. 26ರಂದು ಎಂದಿನಂತೆ ಊಟ ಮಾಡಿ ಮಲಗಿದ್ದರು. ಆದರೆ ಸಾಹಿರಾ ರಾತ್ರೋ ರಾತ್ರಿ ಮನೆಯಲ್ಲಿದ್ದವರು ಮಲಗಿದ್ದಾಗ ನಾಪತ್ತೆಯಾಗಿದ್ದಾರೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುತ್ರಿಯನ್ನು ಪತ್ತೆ ಹಚ್ಚಿಕೊಡಬೇಕೆಂದು ಹುಸೈನ್

ಮಂಗಳೂರು : ರಾತ್ರೋ ರಾತ್ರಿ ಮುಸ್ಲಿಂ ಯುವತಿ ನಾಪತ್ತೆ Read More »

ಕೊರೋನಾಗೆ ಜೀವತೆತ್ತರೆ 4 ಲಕ್ಷ :ವೈರಲ್ ಆಗುತ್ತಿದೆ ಫೇಕ್ ಪಿಡಿಎಫ್

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ, ಕೊರೋನಾದಿಂದ ಮೃತಪಟ್ಟರೆ 400000 ಪರಿಹಾರ ಧನ ಸಿಗಲಿದೆ ಮಾಹಿತಿಯುಳ್ಳ ಪಿಡಿಎಫ್ ಫೈಲ್ ನ ಅಂಶಗಳು ಸಂಪೂರ್ಣ ಶುದ್ಧ ಸುಳ್ಳು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಕಳೆದೆರಡುದಿನಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಪಿಡಿಎಫ್ ಫೈಲ್ ನಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಕೇಂದ್ರ ಸರ್ಕಾರ ನಾಲ್ಕು ಲಕ್ಷ ಪರಿಹಾರ ಧನ ನೀಡಲಿದೆ ಇದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಭ್ಯವಿದೆ ಎಂಬ ಇನ್ನಿತರ ಮಾಹಿತಿ ಇದ್ದು, ಇದನ್ನು ಎಲ್ಲರಿಗೂ ತಲುಪಿಸಿ

ಕೊರೋನಾಗೆ ಜೀವತೆತ್ತರೆ 4 ಲಕ್ಷ :ವೈರಲ್ ಆಗುತ್ತಿದೆ ಫೇಕ್ ಪಿಡಿಎಫ್ Read More »

ಕಾಪು: ಟಿಪ್ಪರ್ ಢಿಕ್ಕಿ ರಿಕ್ಷಾ ಚಾಲಕ ಮೃತ್ಯು

ಕಾಪು: ಆಟೋಗೆ ಟಿಪ್ಪರ್ ಢಿಕ್ಕಿಯಾಗಿ ಆಟೋ ಚಾಲಕ ಮೃತಪಟ್ಟ ಘಟನೆ ಇಂದು ಇಲ್ಲಿನ ಶಿರ್ವ ರಸ್ತೆಯ ಮಲ್ಲಾರು ಗ್ರಾಮದ ಸ್ವಾಗತನಗರ ಬಳಿ ನಡೆದಿದೆ.ಉಡುಪಿಯ ಮಧ್ವನಗರ ಕೊಡುವೂರು ನಿವಾಸಿ ಶಾವೂರು (೪೦) ಮೃತಪಟ್ಟವರು. ಇವರು ಶಾವೂರು ಫಕೀರಣ ಕಟ್ಟೆಗೆ ಆಗಮಿಸಿ ತಮ್ಮ ಆಟೋರಿಕ್ಷಾದಲ್ಲಿ ಹಿಂತಿರುಗುತ್ತಿದ್ದ ವೇಳೆ ಟಿಪ್ಪರ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಟಿಪ್ಪರ್ ಢಿಕ್ಕಿ ರಿಕ್ಷಾ ಚಾಲಕ ಮೃತ್ಯು Read More »

ಒಂದು ಲೀಟರ್ ಹಾಲಿಗೆ 40ml ಹಾಲು ಫ್ರೀ: ದ.ಕ ಹಾಲು ಒಕ್ಕೂಟ

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಯ ಹಾಲು ಗ್ರಾಹಕರಿಗೆ ದ.ಕ. ಹಾಲು ಒಕ್ಕೂಟ ಸಿಹಿ ಸುದ್ದಿ ನೀಡಿದ್ದು, ನಂದಿನಿ ಪ್ಯಾಕೆಟ್ ಜೊತೆ ಹೆಚ್ಚುವರಿ ಹಾಲು ನೀಡಲು ನಿರ್ಧರಿಸಿದೆ. ಕೋವಿಡ್‌ ಸಂಕಷ್ಟದ ನಡುವೆಯೂ ಹೈನುಗಾರರಿಗೆ ನೆರವಾಗಲು, ಮತ್ತು ಅಧಿಕ ಶೇಕರಣೆ ತಗ್ಗಿಸಲು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ನಿರ್ಧರಿಸಿದ್ದು, ಜೂನ್‌ 1ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಲು ಖರೀದಿಸುವವರಿಗೆ ಲೀಟರ್‌ಗೆ ಹೆಚ್ಚುವರಿ ಹಾಲನ್ನು ಕೊಡುಗೆಯಾಗಿ ನೀಡಲಿದೆ. ಅರ್ಧ ಲೀಟರ್‌ ಹಾಲಿಗೆ 20 ಎಂ.ಎಲ್‌. 1

ಒಂದು ಲೀಟರ್ ಹಾಲಿಗೆ 40ml ಹಾಲು ಫ್ರೀ: ದ.ಕ ಹಾಲು ಒಕ್ಕೂಟ Read More »

“ಪಂಪ್ವೆಲ್ ಡ್ಯಾಮ್ | ಇದು ನಳಿನಣ್ಣನ ಕೊಡುಗೆ” | ಫ್ಲೈ ಓವರ್ ಜಲಾವೃತ ಬೆನ್ನಲ್ಲೆ ನೆಟ್ಟಿಗರ ಆಕ್ರೋಶ

ಮಂಗಳೂರು: ನಿರ್ಮಾಣವಾಗಲು ಬರೋಬ್ಬರಿ ಹತ್ತು ವರ್ಷ ತೆಗೆದುಕೊಂಡು ಸ್ಥಳೀಯರ ಆಕ್ರೋಶಕ್ಕೆ ಮಣಿದು ಕೊನೆಗೂ ಉದ್ಘಾಟನೆಗೊಂಡ ಪಂಪಲ್ ಫ್ಲೈಓವರ್ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ರಾತ್ರಿ ಇಡೀ ಸುರಿದ ಭಾರೀ ಮಳೆಗೆ ಇಂದು ಬೆಳಿಗ್ಗೆ ಫ್ಲೈಓವರ್ ಕೆಳಗಿನ ಭಾಗ ಸಂಪೂರ್ಣ ಜಲಾವೃತವಾಗಿತ್ತು. ಸರ್ವಿಸ್ ರೋಡ್ ಮತ್ತು ಜಂಕ್ಷನ್ನಲ್ಲಿ ಕೆಲ ಗಂಟೆಗಳ ಕಾಲ ವಾಹನಗಳು ಅತ್ತಿತ್ತ ಚಲಿಸದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಸ್ಥಳೀಯರ ಮತ್ತು ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿದೆ. ಸ್ಥಳದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ

“ಪಂಪ್ವೆಲ್ ಡ್ಯಾಮ್ | ಇದು ನಳಿನಣ್ಣನ ಕೊಡುಗೆ” | ಫ್ಲೈ ಓವರ್ ಜಲಾವೃತ ಬೆನ್ನಲ್ಲೆ ನೆಟ್ಟಿಗರ ಆಕ್ರೋಶ Read More »

ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವಾರ್ | ಪರಸ್ಪರ ಆರೋಪ ಹೊರಿಸಿ ಆಸ್ಪತ್ರೆ ಸೇರಿದ ಉದ್ಯಮಿಗಳು

ಪುತ್ತೂರು: ಹಲ್ಲೆ ನಡೆಸಲಾಗಿದೆ ಎಂದು ಪರಸ್ಪರ ಆರೋಪಿಸಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳು ಆಸ್ಪತ್ರೆ ಸೇರಿ, ಪೊಲೀಸ್ ದೂರು ದಾಖಲಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ದಾವೂದ್ ನನ್ನ ಕಾರು ನಿಲ್ಲಿಸಿ ಹಲ್ಲೆ ನಡೆಸಿದ್ದಾಗಿ ಉದ್ಯಮಿ ರೋಶನ್ ರೈ ಆರೋಪಿಸಿದರೆ, ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದು ನನಗೆ ರೋಶನ್ ಹಲ್ಲೆ ನಡೆಸಿದ್ದಾರೆ ಎಂದು ದಾವೂದ್ ದೂರು ನೀಡಿದ್ದಾರೆ.ಇವರಿಬ್ಬರು ಬನ್ನೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದು ಪೊಲೀಸರು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಜಲ್ಪಡುವಿನ ಜಾಗದಲ್ಲಿ ಮಣ್ಣು ತೆಗೆಯುವ ವಿಷಯವಾಗಿ ರೋಶನ್ ರೈ

ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವಾರ್ | ಪರಸ್ಪರ ಆರೋಪ ಹೊರಿಸಿ ಆಸ್ಪತ್ರೆ ಸೇರಿದ ಉದ್ಯಮಿಗಳು Read More »