ಸಮಗ್ರ ಸಮಾಚಾರ

ಮನೆಯಿಂದ ಕೇವಲ 100 ಮೀ. ದೂರದಲ್ಲಿದ್ದಳು ಅಂದು ನಾಪತ್ತೆಯಾಗಿದ್ದ ಯುವತಿ | ಪ್ರೇಯಸಿಯ ಹತ್ತು ವರ್ಷಗಳಿಂದ ತನ್ನ ಮನೆಯಲ್ಲಿಯೇ ಕೂಡಿಹಾಕಿದ್ದನು ಭಗ್ನಪ್ರೇಮಿ

ಕೇರಳ: ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮನೆಮಗಳು ಅಂದಿನಿಂದಲೂ ಇಂದಿನವರೆಗೆ ಮನೆಯ ಬಳಿಯೇ ಯಾರಿಗೂ ತೋಚದೆ ಇದ್ದಳೆಂದರೆ ಹೇಗಾಗಬೇಡ ಹೇಳಿ. ಇಂತಹದೊಂದು ಅಚ್ಚರಿಯ ಘಟನೆ ಪಕ್ಕದ ಕೇರಳ ರಾಜ್ಯದಲ್ಲಿ ನಡೆದಿದ್ದು ಎಲ್ಲರನ್ನು ನಿಬ್ಬೆರಾಗಗುವಂತೆ ಮಾಡಿದೆ. ಪಾಲಕ್ಕಾಡ್ ಜಿಲ್ಲೆಯ ಅರಿಯೂರ್ ಬಳಿಯ ಕರೈಕ್ಕಟ್ಟುಪರಂಬು ಎಂಬ ಪುಟ್ಟ ಗ್ರಾಮದಲ್ಲಿ ಯುವಕನೋರ್ವ ಕುಟುಂಬಸ್ಥರು, ನೆರೆಹೊರೆಯವರಿಗೆ ಒಂದು ಸಣ್ಣ ಸುಳಿವೂ ಸಿಗದಂತೆ ಬರೋಬ್ಬರಿ 10 ವರ್ಷಗಳ ಕಾಲ ತನ್ನ ಪ್ರೇಯಸಿಯನ್ನು ಮನೆಯಲ್ಲೇ ಕೂಡಿಹಾಕಿಕೊಂಡಿದ್ದ. ಈ ಗ್ರಾಮದಲ್ಲಿ ಮನೆಗಳ ಸಂಖ್ಯೆ ಬಹಳ ಕಡಿಮೆ ಇರುವುದರಿಂದ […]

ಮನೆಯಿಂದ ಕೇವಲ 100 ಮೀ. ದೂರದಲ್ಲಿದ್ದಳು ಅಂದು ನಾಪತ್ತೆಯಾಗಿದ್ದ ಯುವತಿ | ಪ್ರೇಯಸಿಯ ಹತ್ತು ವರ್ಷಗಳಿಂದ ತನ್ನ ಮನೆಯಲ್ಲಿಯೇ ಕೂಡಿಹಾಕಿದ್ದನು ಭಗ್ನಪ್ರೇಮಿ Read More »

ಕರಾವಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದಳು ಪಾಕಿಸ್ತಾನಿ ಮಹಿಳೆ…! | ಪೊಲೀಸರಿಂದ ತನಿಖೆ ಚುರುಕು

ಭಟ್ಕಳ: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ ಎಂಬಾಕೆ ಇಲ್ಲಿ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.‌ ಕಳೆದ ಎಂಟು ವರ್ಷಗಳ ಹಿಂದೆ ಈಕೆಯನ್ನು ಸ್ಥಳೀಯ ನಿವಾಸಿ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್‌ ಎಂಬಾತ ದುಬೈನಲ್ಲಿ ವಿವಾಹವಾಗಿದ್ದ. ಈಕೆ ಮದುವೆ ನಂತರ 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ಸಾಗಿದ್ದಳು. ಆ ಬಳಿಕ 2015ರಲ್ಲಿ ಅಕ್ರಮವಾಗಿ ಭಾರತ ಪ್ರವೇಶ

ಕರಾವಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದಳು ಪಾಕಿಸ್ತಾನಿ ಮಹಿಳೆ…! | ಪೊಲೀಸರಿಂದ ತನಿಖೆ ಚುರುಕು Read More »

ನನ್ನ ವರ್ಗಾವಣೆ ಹಿಂದೆ ಭೂ ಮಾಫಿಯಾ ಕೈಯಾಡಿಸಿದೆ | ದಾಖಲೆ ಬಿಡುಗಡೆ ಮಾಡಿದ ಸಿಂಧೂರಿ

ಬೆಂಗಳೂರು: ಒತ್ತಡಕ್ಕೆ ಮಣಿಯದೆ ಮೈಸೂರಿನಲ್ಲಿ ನಡೆಯುತ್ತಿರುವ ಭೂ ಮಾಫಿಯಾ ನಿಗ್ರಹದ ಬೆನ್ನು ಹತ್ತಿರುವುದೇ ನನ್ನ ವರ್ಗಾವಣೆಗೆ ಕಾರಣ ಎಂದು ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಮೈಸೂರಿಗೆ ಬಂದ ಆರಂಭದಲ್ಲಿ ನಗರದ ಲಿಂಗಾಂಬುದಿ ಕೆರೆಯ ಪ್ರದೇಶದಲ್ಲಿ ನಡೆದ ಭೂ ಮಾಫಿಯಾ ವಿರುದ್ಧ ತನಿಖೆ ಕೈಗೊಂಡಿದ್ದೆ. ಮೈಸೂರಿನ ರಾಜಕಾಲುವೆ ಮೇಲೆ ಸಾರಾ ಮಹೇಶ್ ಮಾಲಕತ್ವದ ಸಾರಾ ಕಲ್ಯಾಣ ಮಂಟಪ ನಿರ್ಮಾಣವಾಗಿದೆ. ಅದರ ಬಗ್ಗೆ ಸ್ಥಳ ಸರ್ವೆ ನಡೆಸಿ, ಭೂ ಹಗರಣದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದೆ. ಅದರ

ನನ್ನ ವರ್ಗಾವಣೆ ಹಿಂದೆ ಭೂ ಮಾಫಿಯಾ ಕೈಯಾಡಿಸಿದೆ | ದಾಖಲೆ ಬಿಡುಗಡೆ ಮಾಡಿದ ಸಿಂಧೂರಿ Read More »

ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಪದ್ದು ಬಂಗೇರ ವಿಧಿವಶ

ಉಡುಪಿ: 80ರ ದಶಕದಲ್ಲಿ ಭಾರತ ಫುಟ್ಬಾಲ್ ತಂಡವನ್ನೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದ ಶೇಖರ್ ಪದ್ದು ಬಂಗೇರ (75ವ.) ಇಂದು ಮೃತಪಟ್ಟಿದ್ದಾರೆ. ಜಿಲ್ಲೆಯ ಬಡಾನಿಡಿಯೂರು ಮೂಲದವರಾದ ಅವರಿಗೆ ಕೆಲ ದಿನಗಳ ಹಿಂದೆ ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭಾರತ ತಂಡದಲ್ಲಿ ಗೋಲ್ಕೀಪರ್ ಹಾಗೂ ನಾಯಕನಾಗಿದ್ದ ಇವರು ದೇಶಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಹಾಗೂ ಹಲವಾರು ಪ್ರತಿಷ್ಠಿತ

ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಪದ್ದು ಬಂಗೇರ ವಿಧಿವಶ Read More »

ಕರಾವಳಿಯಲ್ಲಿ ಇಂದಿನಿಂದ ಭಾರಿ ಮಳೆ: ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ಇಂದಿನಿಂದ ಒಂದು ವಾರಗಳ ಕಾಲ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಸಾರ್ವಜನಿಕರು ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಇಂದಿನಿಂದ ಅಂದರೆ ಜೂನ್ 10 ರಿಂದ ಮೂರು ದಿನ ಎಲ್ಲೊ ಅಲರ್ಟ್ ಹಾಗೂ ನಂತರದ ಮೂರು ದಿನಗಳಲ್ಲಿ (13 ರಿಂದ 15) ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ,

ಕರಾವಳಿಯಲ್ಲಿ ಇಂದಿನಿಂದ ಭಾರಿ ಮಳೆ: ರೆಡ್ ಅಲರ್ಟ್ ಘೋಷಣೆ Read More »

ಕಂದಮ್ಮನಿಗೆ ಕೇಬಲ್ ನಿಂದ ಹೊಡೆದು ಕೊಂದ ಕ್ರೂರಿ ತಂದೆ-ತಾಯಿ

ಆಂಧ್ರಪ್ರದೇಶ: ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ತಮ್ಮ ಕರುಳ ಕುಡಿಗೆ ಕೇಬಲ್ ನಿಂದ ಹೊಡೆದ ಪರಿಣಾಮ ಮಗು ಮೃತಪಟ್ಟ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮೂರು ವರ್ಷದ ಮಗು ಉಮೇಶ ಮೃತಪಟ್ಟ ದುರ್ದೈವಿ. ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ತಂದೆ-ತಾಯಿ ಇಬ್ಬರೂ ಸೇರಿಕೊಂಡು ವಯರ್ ಕೇಬಲ್ ನಿಂದ ಒಂದೇ ಸಮನೆ ಮಗುವಿಗೆ ಥಳಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಮಗುವನ್ನು ಅವರೇ ಆಸ್ಪತ್ರೆಗೆ ಕೊಂಡೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಹಾಗೂ ಮೃತಪಟ್ಟಿದೆ ಎಂದಿದ್ದಾರೆ. ಈ ಮಗು ದಂಪತಿಗೆ ಇಷ್ಟವಿರಲಿಲ್ಲ. ಆದ್ದರಿಂದ

ಕಂದಮ್ಮನಿಗೆ ಕೇಬಲ್ ನಿಂದ ಹೊಡೆದು ಕೊಂದ ಕ್ರೂರಿ ತಂದೆ-ತಾಯಿ Read More »

ಜೂ.14ರಿಂದ ಅನ್ ಲಾಕ್ ಫಿಕ್ಸ್! ಇಂದು ಸಿಎಂ ಮಹತ್ವದ ಸಭೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಮಹತ್ವದ ಸಭೆ ನಡೆಯಲಿದ್ದು, ಸೋಮವಾರದಿಂದ ಹಂತ ಹಂತವಾಗಿ ನಿರ್ಬಂಧ ತೆರವು ಮಾಡುವುದು ಬಹುತೇಕ ಫಿಕ್ಸ್ ಆಗಿದೆ ಎನ್ನಲಾಗಿದೆ.ಕೊರೊನಾ ಎರಡನೇ ಅಲೆ ಪ್ರಭಾವ ತಗ್ಗುತ್ತಿದ್ದರೂ ಕೆಲವು ಜಿಲ್ಲೆಗಳಲ್ಲಿ ಗಂಭೀರ

ಜೂ.14ರಿಂದ ಅನ್ ಲಾಕ್ ಫಿಕ್ಸ್! ಇಂದು ಸಿಎಂ ಮಹತ್ವದ ಸಭೆ Read More »

ಮಂಗಳೂರು: ಮಧ್ಯರಾತ್ರಿ ಬಾಲ್ಕನಿ ಮೂಲಕ ಒಳನ್ನುಗ್ಗಿ ಲವ್ವಿ ಡವ್ವಿ | ಬಾಲಕಿ ಪ್ರೆಗ್ನೆಂಟ್

ಮಂಗಳೂರು: ವ್ಯಕ್ತಿಯೋರ್ವ ಅಪ್ರಾಪ್ತ ಯುವತಿಗೆ ಮೊಬೈಲ್ ಗಿಫ್ಟ ನೀಡಿ ಸಲುಗೆ ಬೆಳೆಸಿ ಮಧ್ಯರಾತ್ರಿ ಆಕೆ ಮನೆಗೆ ಬಂದು ನಿರಂತರ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಘಟನೆ ನಗರದ ಜೋಕಟ್ಟೆ ಎಂಬಲ್ಲಿ ನಡೆದಿದೆ. ಕಳೆದ ಅಕ್ಟೋಬರ್ನಲ್ಲಿ ಸ್ಥಳೀಯ ಯುವಕ ಅಬ್ದುಲ್ ರಸೂಲ್ ಪರಿಚಯವಾಗಿದ್ದ. ಬಾಲಕಿಯನ್ನು ಆಗಾಗ ಬೇಟಿಯಾಗಿ ಸಲುಗೆ ಬೆಳೆಸಿದ್ದ. ದಿನಗಳೆದಂತೆ ಪ್ರೀತಿಸುವ ನಾಟಕವಾಡಿ ಮೊಬೈಲ್ ಗಿಫ್ಟ್ ನೀಡಿದ್ದ. ಇದರಿಂದ ಖುಷಿಯಾಗಿದ್ದ ಯುವತಿ ತಾನು ಯುವಕರೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾಳೆ. ಇದನ್ನೇ ಕಾಯುತ್ತಿದ್ದ ಆರೋಪಿ ಯುವತಿಯ ಮನೆಗೆ ಮಧ್ಯರಾತ್ರಿಯೇ ಬರಲಾರಂಭಿಸಿದ್ದಾನೆ.

ಮಂಗಳೂರು: ಮಧ್ಯರಾತ್ರಿ ಬಾಲ್ಕನಿ ಮೂಲಕ ಒಳನ್ನುಗ್ಗಿ ಲವ್ವಿ ಡವ್ವಿ | ಬಾಲಕಿ ಪ್ರೆಗ್ನೆಂಟ್ Read More »

ಜೂ.14ರ ನಂತರವೂ ದಕ್ಷಿಣ ಕನ್ನಡಕ್ಕಿಲ್ಲ ಅನ್ ಲಾಕ್ ಭಾಗ್ಯ…!?

ಮಂಗಳೂರು: ಕೋವಿಡ್ ಎರಡನೆಯ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಂತಹಂತದ ಅನ್ಲಾಕ್ ಗೆ ಸಿದ್ಧತೆ ನಡೆಸುತ್ತಿದ್ದು ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಮುಂದುವರಿಸುವ ಸಾಧ್ಯತೆ ಎದ್ದು ಕಾಣುತ್ತಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಕೋವಿಡ್ ಪಾಸಿಟಿವ್ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿದೆ. ಸದ್ಯ ಅಂತಹ ಜಿಲ್ಲೆಗಳಲ್ಲಿ ಹಂತಹಂತವಾಗಿ ನಿರ್ಬಂಧ ತೆರವು ಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇನ್ನು ದಕ್ಷಿಣ ಕನ್ನಡ ಸೇರಿದಂತೆ ಮೈಸೂರು ಶಿವಮೊಗ್ಗ ಹಾಸನ ತುಮಕೂರು ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ

ಜೂ.14ರ ನಂತರವೂ ದಕ್ಷಿಣ ಕನ್ನಡಕ್ಕಿಲ್ಲ ಅನ್ ಲಾಕ್ ಭಾಗ್ಯ…!? Read More »

ಲಾಕ್ಡೌನ್ ನಡುವೆ ರಾಜ್ಯದ ಜನತೆಗೆ ಕರೆಂಟ್ ಶಾಕ್ | ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್ ಸಿ ಅನುಮೋದನೆ

ಬೆಂಗಳೂರು: ರಾಜ್ಯದ ಜನತೆಗೆ ಕೋವಿಡ್ ಲಾಕ್ಡೌನ್ ನಡುವೆ ಪೆಟ್ರೋಲಿಯಮ್ ಉತ್ಪನ್ನಗಳು ಹಾಗು ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಕಷ್ಟ ಎದುರಿಸುತ್ತಿರುವಾಗಲೇ ವಿದ್ಯುತ್ ಬಿಲ್ ಏರಿಕೆ ಬಿಸಿ ತಟ್ಟಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ರಾಜ್ಯದಲ್ಲಿ ವಿದ್ಯುತ್​ ದರಗಳನ್ನು ಹೆಚ್ಚಿಸಲು ಅನುಮೋದನೆ ನೀಡಿದೆ. ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳು 135 ಪೈಸೆ (₹1.35) ಬೆಲೆ ಏರಿಕೆ ಕೋರಿ ಬಹಳ ಹಿಂದೆಯೇ ಪ್ರಸ್ತಾವ ಸಲ್ಲಿಸಿದ್ದವು. ಈ ಪ್ರಸ್ತಾವಗಳನ್ನು ಕೂಲಂಕಶ ಪರಿಶೀಲಿಸಿರುವ ಆಯೋಗವು ಸರಾಸರಿ 30 ಪೈಸೆ ದರ ಹೆಚ್ಚಳಕ್ಕೆ

ಲಾಕ್ಡೌನ್ ನಡುವೆ ರಾಜ್ಯದ ಜನತೆಗೆ ಕರೆಂಟ್ ಶಾಕ್ | ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್ ಸಿ ಅನುಮೋದನೆ Read More »