Editor

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ: ಬಸವರಾಜ ಹೊರಟ್ಟಿ

ಸಮಗ್ರ ನ್ಯೂಸ್: ಇತ್ತೀಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸ್ಸಿಗೆ ಬೇಸರ ತಂದಿದೆ. ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ. ನಾನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸ್ಸಿಗೆ ಬೇಸರ ತಂದಿದೆ. ಸದನದಲ್ಲಿ ನಡೆದ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ನಾನು ವಿಫಲನಾಗಿದ್ದೇನೆ. ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂಬ ಭಾವನೆ ನನ್ನಲ್ಲಿ ಬಂದಿದೆ ಎಂದು ಹೇಳಿದರು. ಸಭಾಪತಿಗೆ ಹೇಳುವವರು- […]

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ: ಬಸವರಾಜ ಹೊರಟ್ಟಿ Read More »

ನಾಳೆಯಿಂದ ನಂದಿಗಿರಿಧಾಮ ಒಂದು ತಿಂಗಳು ಬಂದ್.. ವೀಕೆಂಡ್ ನಲ್ಲಿ ಓಪನ್..!

ಸಮಗ್ರ ನ್ಯೂಸ್: ಪ್ರವಾಸಿಗರ ವಿಶ್ವವಿಖ್ಯಾತ ನಂದಿಗಿರಿಧಾಮ ನಾಳೆಯಿಂದ (ಮಾರ್ಚ್ 24) ಒಂದು ತಿಂಗಳ ಕಾಲ  ಬಂದ್ ಇರಲಿದೆ. ಆದ್ರೆ ಒಂದು ಗುಡ್ ನ್ಯೂಸ್ ಎಂದರೆ ವೀಕೆಂಡ್​ ಎಂಜಾಯ್ ಮಾಡಲು ಮಾತ್ರ ಅವಕಾಶವಿದೆ. ರಸ್ತೆ ನವೀಕರಣ ಕಾಮಗಾರಿ ಹಿನ್ನಲೆಯಲ್ಲಿ 1 ತಿಂಗಳು ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ. ನಂದಿಗಿರಿಧಾಮದ ಅಂಕು ಡೊಂಕಿನ ರಸ್ತೆಗೆ ಡಾಂಬರೀಕರಣ ಮಾಡುವ ಸಲುವಾಗಿ ಮಾರ್ಚ್ 24 ರಿಂದ ಏಪ್ರಿಲ್ 25 ರವರೆಗೂ ಬರೋಬ್ಬರಿ 1

ನಾಳೆಯಿಂದ ನಂದಿಗಿರಿಧಾಮ ಒಂದು ತಿಂಗಳು ಬಂದ್.. ವೀಕೆಂಡ್ ನಲ್ಲಿ ಓಪನ್..! Read More »

ನೋ ರೊಮ್ಯಾನ್ಸ್..‌ ಇದು ಕ್ಯಾಬ್‌ ಓಯೋ ಅಲ್ಲ, ವೈರಲ್ ಆದ ಬೋರ್ಡ್..!

ಸಮಗ್ರ ನ್ಯೂಸ್: ಪ್ರೀತಿಯಲ್ಲಿ ಬಿದ್ದವರು ಲೋಕವನ್ನೇ ಮರೆಯುತ್ತಾರೆ ಎಂದು ಹೇಳುತ್ತಾರೆ ಅದರಂತೆ ಪ್ರೇಮಿಗಳು ನಾವು ಎಲ್ಲಿದ್ದೇವೆ ಏನುಮಾಡುತ್ತಿದ್ದೇವೆ ಎಂಬ ಗುಂಗೇ ಇಲ್ಲದೆ ಪಾರ್ಕ್‌ , ಬಸ್‌, ಟ್ರೈನ್‌, ಬಸ್‌ಸ್ಟ್ಯಾಂಡ್‌ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಮೈ ಮರೆತು ಕಿಸ್ಸಿಂಗ್‌-ರೊಮ್ಯಾನ್ಸ್‌ ಮಾಡುವವರು ತುಂಬಾ ಜನ ಇದ್ದರೆ ಅದು ಮುಜುಗರಕ್ಕೆ ಒಳಗಾಗಿಸುತ್ತದೆ. ಅದರಂತೆ ಇದೀಗ ಬೆಂಗಳೂರಿನ ಕ್ಯಾಬ್‌ನಲ್ಲೂ ಇಂತಹ ಘಟನೆ ನಡೆಯುತ್ತಿರುವುದರಿಂದ ಬೇಸತ್ತು ಕ್ಯಾಬ್ ಡ್ರೈವರ್ ನೋ ರೊಮ್ಯಾನ್ಸ್..‌ ಇದು ಕ್ಯಾಬ್‌ ಓಯೋ ಅಲ್ಲ, ನಡುವೆ ಅಂತರವಿರಲಿ ಎಂದು ವಾರ್ನಿಂಗ್‌ ಬೋರ್ಡ್‌

ನೋ ರೊಮ್ಯಾನ್ಸ್..‌ ಇದು ಕ್ಯಾಬ್‌ ಓಯೋ ಅಲ್ಲ, ವೈರಲ್ ಆದ ಬೋರ್ಡ್..! Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಮಾರ್ಚ್ ತಿಂಗಳ ಕೊನೆಯ ವಾರವಿದು. ವಾರಾಂತ್ಯದಲ್ಲಿ ನಾವು ಯುಗಾದಿ ಹಬ್ಬದೊಂದಿಗೆ ನವ ಸಂವತ್ಸರಕ್ಕದ ಕಾಲಿಡಲಿದ್ದೇವೆ. ಈ ವಾರದಲ್ಲಿ ಯಾವ ರಾಶಿಗೆ ಲಾಭ? ಯಾರಿಗೆ ಶುಭ? ನೋಡೋಣ ಬನ್ನಿ… ಮೇಷ ರಾಶಿ:ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ರಾಶಿ ಚಕ್ರದ ಮೊದನೇ ರಾಶಿಯವರಿಗೆ ಮಿಶ್ರಫಲ. ವಿಶ್ರಾಂತಿಯನ್ನು ಪಡೆಯಬೇಕು ಎಂಬ ಮನೋಭಾವ ಅಧಿಕವಾಗಲಿದೆ. ಶತ್ರುಗಳಿಂದ ಸಂಪತ್ತು ಹರಣ ಹಾಗೂ ವ್ಯರ್ಥವಾದ ಕೆಸಗಳಿಂದ ಬೇಸರವುಂಟಾಗುವುದು. ಮಕ್ಕಳು ಮತ್ತು ಸಂಗಾತಿಗಳು ರೋಗಬಾಧೆಯಿಂದ ತಪಿಸುವರು. ತಂದೆ-ತಾಯಿಯರ ಪ್ರೀತಿ ಸಿಗಲಿದೆ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸುಳ್ಯ: ಸುಳ್ಳು ಸುದ್ದಿ ಪ್ರಸಾರ ಆರೋಪ| ವೆಬ್ ಸೈಟ್ ಹಾಗೂ ಸಂಪಾದಕರ ವಿರುದ್ಧ ದೂರು ದಾಖಲು

ಸಮಗ್ರ ನ್ಯೂಸ್: ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ, ವೆಬ್‌ ನ್ಯೂಸ್‌ನ ವರದಿಗಾರ ಹಾಗೂ ಸಂಪಾದಕರ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.20ರಂದು ರಾತ್ರಿ ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಳಿ ಧನುಷ್‌ ಪಿ.ಎಸ್‌. ಎಂಬಾತನು ಕಲ್ಲುಗುಂಡಿ ಕಡೆಗೆ ಮಾರುತಿ ಆಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದವರೊಂದಿಗೆ ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಇದನ್ನು ಸುಳ್ಯದ ವೆಬ್‌ಸೈಟೊಂದು, “ಹಿಂದೂ ಹುಡುಗಿಯರ ಜತೆ ಅನ್ಯ ಕೋಮಿನ ಯುವಕರು; ಸಂಪಾಜೆ ತನಕ ತಡರಾತ್ರಿ ಕಾರನ್ನು ಬೆನ್ನಟ್ಟಿದ

ಸುಳ್ಯ: ಸುಳ್ಳು ಸುದ್ದಿ ಪ್ರಸಾರ ಆರೋಪ| ವೆಬ್ ಸೈಟ್ ಹಾಗೂ ಸಂಪಾದಕರ ವಿರುದ್ಧ ದೂರು ದಾಖಲು Read More »

ಎಸ್.ಎಸ್.ಎಲ್.ಸಿ ಮೊದಲ ಪರೀಕ್ಷೆಗೆ ದ.ಕ ಜಿಲ್ಲೆಯಲ್ಲಿ 229 ಮಂದಿ, ಉಡುಪಿ ಜಿಲ್ಲೆಯಲ್ಲಿ 65 ಮಂದಿ ಗೈರು 

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ.21 ರ ಶುಕ್ರವಾರ ಮೊದಲ ದಿನದ ಎಸೆಸೆಲ್ಸಿ ಪರೀಕ್ಷೆ ಸಾಂಗವಾಗಿ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಪ್ರಥಮ ಭಾಷೆ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 28925 ವಿದ್ಯಾರ್ಥಿಗಳ ಪೈಕಿ 28728 ಮಂದಿ ಪರೀಕ್ಷೆ ಬರೆದಿದ್ದಾರೆ. ಹಾಗೂ 229 ಮಂದಿ ವಿವಿಧ ಕಾರಣಗಳಿಂದ ಗೈರು ಹಾಜರಾಗಿದ್ದಾರೆ. ಕನ್ನಡ ಭಾಷಾ ಪರೀಕ್ಷೆಗೆ 202, ಇಂಗ್ಲಿಷ್‌ ಗೆ 23 ಹಾಗೂ ಸಂಸ್ಕೃತ ಭಾಷಾ ಪರೀಕ್ಷೆಗೆ 4 ಮಂದಿ ಗೈರಾಗಿದ್ದಾರೆ. ಬಂಟ್ವಾಳದಲ್ಲಿ ಒಟ್ಟು

ಎಸ್.ಎಸ್.ಎಲ್.ಸಿ ಮೊದಲ ಪರೀಕ್ಷೆಗೆ ದ.ಕ ಜಿಲ್ಲೆಯಲ್ಲಿ 229 ಮಂದಿ, ಉಡುಪಿ ಜಿಲ್ಲೆಯಲ್ಲಿ 65 ಮಂದಿ ಗೈರು  Read More »

ಬೆಳ್ತಂಗಡಿ: ಐದು ತಿಂಗಳ‌ ಹಸುಗೂಸು ಕಾಡೊಳಗೆ ಅನಾಥವಾಗಿ ಪತ್ತೆ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಬೆಳಾಲು ಕೊಡೋಳುಕೆರೆ ಎಂಬಲ್ಲಿ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕಾಡಿನ ಮಧ್ಯೆ ಬಿಟ್ಟು ಹೋದ ಘಟನೆ ಶನಿವಾರ (ಮಾ.22) ಬೆಳಗ್ಗೆ ಕಂಡುಬಂದಿದೆ. ಬೆಳಾಲು ಗ್ರಾ.ಪಂ. ವ್ಯಾಪ್ತಿಯ ಮುಂಡ್ರೊಟ್ಟು ರಸ್ತೆಯ ಕೊಡೋಳುಕೆರೆ ಕಾಡಿನಲ್ಲಿ ಮಗುವೊಂದು ಅಳುವ ಶಬ್ಧ ದಾರಿಹೋಕ ಮಹಿಳೆಗೆ ಕೇಳಿದ್ದು, ತಕ್ಷಣ ಅವರು ಮಗುವನ್ನು ಕಂಡು ಸಂಬಂಧ ಪಟ್ಟವರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಮತ್ತು ಆರೋಗ್ಯ ಇಲಾಖೆ ದೌಡಾಯಿಸಿದ್ದು, ಮಹಿಳಾ ಮತ್ತು ಮಕ್ಕಳ ಇಲಾಖಾ ಬರುವಿಕೆಗಾಗಿ ಕಾಯುತ್ತಿದ್ದಾರೆ. ಈ

ಬೆಳ್ತಂಗಡಿ: ಐದು ತಿಂಗಳ‌ ಹಸುಗೂಸು ಕಾಡೊಳಗೆ ಅನಾಥವಾಗಿ ಪತ್ತೆ Read More »

ಹವಾಮಾನ ವರದಿ| ಗುಡುಗು,ಮಿಂಚಿನೊಂದಿಗೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ| ಐದು ದಿನಗಳ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಸಮಗ್ರ‌ ನ್ಯೂಸ್: ರಾಜ್ಯದಾದ್ಯಂತ ಮಾರ್ಚ್ 25 ರವರೆಗೆ ಮೋಡ ಕವಿದ ವಾತಾವರಣದೊಂದಿಗೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗಲಿದೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ತುಂತುರು ಮಳೆಯಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾ. 23ರಂದು ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ,

ಹವಾಮಾನ ವರದಿ| ಗುಡುಗು,ಮಿಂಚಿನೊಂದಿಗೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ| ಐದು ದಿನಗಳ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ Read More »

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಕೋರ್ಟ್ ಆದೇಶದನ್ವಯ ಸಮೀರ್ ಎಂ.ಡಿ ಮಾಡಿದ ವಿಡಿಯೋ ಡಿಲಿಟ್

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಾನಹಾನಿಕರ ವಿಡಿಯೋ ಹರಿಬಿಟ್ಟಿದ್ದ ಯೂಟ್ಯೂಬರ್‌ ಸಮೀರ್‌ ಎಂಡಿ ವಿರುದ್ಧ ಕೋರ್ಟ್‌ ಆದೇಶ ನೀಡಿದ್ದು, ಸಮೀರ್‌ ತನ್ನ ಯೂಟ್ಯೂಬ್‌ ಚಾನೆಲ್‌ ನಲ್ಲಿ ಹರಿಬಿಟ್ಟಿದ್ದ ವೀಡಿಯೋ ಮಾನ್ಯ ಪ್ರಧಾನ ಸಿಟಿ ಸಿವಿಲ್‌ ಕೋರ್ಟ್‌ ಆದೇಶದನ್ವಯ ಡಿಲೀಟ್ ಆಗಿದೆ. ಈ ಹಿಂದೆ ಕರ್ನಾಟಕ ಹೈಕೋರ್ಟ್ ನ್ಯಾ. ಆರ್‌ ದೇವದಾಸ್‌ ಅವರಿದ್ದ ಏಕಸದಸ್ಯ ಪೀಠ ಮಹೇಶ್‌ ಶೆಟ್ಟಿ ತಿಮರೋಡಿ ಹಾಗೂ ಅವರ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಕೋರ್ಟ್ ಆದೇಶದನ್ವಯ ಸಮೀರ್ ಎಂ.ಡಿ ಮಾಡಿದ ವಿಡಿಯೋ ಡಿಲಿಟ್ Read More »

ನಾಳೆ‌(ಮಾ.22) ಕರ್ನಾಟಕ ಬಂದ್| ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಬೃಹತ್‌ ಬಂದ್‌ಗೆ ಕರೆ ನೀಡಲಾಗಿದೆ. ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ, ರಾಜ್ಯದ ಹಲವು ಭಾಗಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಂದ್‌ನ ಮುಖ್ಯ ಉದ್ದೇಶ ಮಹಾರಾಷ್ಟ್ರದ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿದೆ. ಹಾಗೂ ಕರ್ನಾಟಕ ಗಡಿಭಾಗದ ಜನರ ಹಕ್ಕುಗಳನ್ನು ಕಾಪಾಡಲು ಸರ್ಕಾರದ ಗಮನ ಸೆಳೆಯುವುದಾಗಿದೆ. ನಾಳೆ ಬೆಳಗ್ಗೆ 6 ಗಂಟೆಗೆ ಶುರುವಾಗುಬ ಬಂದ್, ಸಂಜೆ 6 ಗಂಟೆಯವರೆಗೂ ಇರಲಿದೆ. ಈ ಬಂದ್‌ನಲ್ಲಿ ಕನ್ನಡ ಪರ ಸಂಘಟನೆಗಳು,

ನಾಳೆ‌(ಮಾ.22) ಕರ್ನಾಟಕ ಬಂದ್| ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ Read More »