Editor

ಯಡಿಯೂರಪ್ಪ ಕುಟುಂಬ ಸಮೇತ ಜೈಲುಪಾಲಾಗ್ತಾರೆ – ಹೆಚ್.ವಿಶ್ವನಾಥ್

ಮೈಸೂರು: ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದೆ ಅವರ ಪುತ್ರ ಬಿ.ವೈ. ವಿಜಯೇಂದ್ರ. ಸಿಎಂ ಯಡಿಯೂರಪ್ಪನವರ ನಕಲಿ ಸಹಿ ಮಾಡಿ ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದು, ಇದೀಗ ಇಡೀ ಕುಟುಂಬವನ್ನೇ ಜೈಲಿಗೆ ಕಳುಹಿಸುತ್ತಾರೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿ, ಸಿಎಂ ಪುತ್ರ ವಿಜಯೇಂದ್ರ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಆರೋಪಿಸಿದ್ದಾರೆ. ಹಿಂದುಳಿದ ನಾಯಕರನ್ನು ತುಳಿಯುವ ಕೆಲಸ ನಡೆಯುತ್ತಿದೆ. ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಅವರನ್ನು […]

ಯಡಿಯೂರಪ್ಪ ಕುಟುಂಬ ಸಮೇತ ಜೈಲುಪಾಲಾಗ್ತಾರೆ – ಹೆಚ್.ವಿಶ್ವನಾಥ್ Read More »

ಕೆಆರ್’ಎಸ್ ಸೋರದಂತೆ ಸುಮಲತಾರನ್ನು ಅಡ್ಡ ಮಲಗಿಸಬೇಕು: ಎಚ್’ಡಿಕೆ

ಬೆಂಗಳೂರು: ಜಿಲ್ಲೆಯ ಜೀವನಾಡಿ ಕೆಆರ್’ಎಸ್ ಸೋರುತ್ತಿದ್ದರೆ ಮಂಡ್ಯ ಸಂಸದೆ ಸುಮಲತಾ ಅವರನ್ನು ಅಡ್ಡ ಮಲಗಿಸಿ ಸೋರಿಕೆ ತಡೆಯಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಕೆಆರ್’ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಾಣಿಗಾರಿಕೆಯಿಂದ ಡ್ಯಾಮ್ ಬಿರುಕು ಬಿಟ್ಟಿದೆ. ತಜ್ಞರಿಂದ ಹೆಚ್ಚಿನ ತನಿಖೆ ನಡೆಸಲು ಪ್ರಭಾವಿ ರಾಜಕಾರಣಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಸಂಸದೆ ಸುಮಲತಾ ಆರೋಪಿಸಿದ್ದರು. ಇದಕ್ಕೆ ಎಚ್’ಡಿಕೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡ್ಯ ಇಂತಹ ಸಂಸದರನ್ನು ಇದುವರೆಗೆ ಕಂಡಿಲ್ಲ. ಕಾಣೋದೂ ಇಲ್ಲ. ಕೆಆರ್’ಎಸ್ ನ್ನು ಇವರೇ

ಕೆಆರ್’ಎಸ್ ಸೋರದಂತೆ ಸುಮಲತಾರನ್ನು ಅಡ್ಡ ಮಲಗಿಸಬೇಕು: ಎಚ್’ಡಿಕೆ Read More »

ಸುಳ್ಯ | ರಿಕ್ಷಾ ಡಿಕ್ಕಿ – ಬೈಕ್ ಸವಾರನಿಗೆ ಗಾಯ

ಸುಳ್ಯ: ತಾಲೂಕಿನ ಬೆಳ್ಳಾರೆಯ ನೆಟ್ಟಾರು ಎಂಬಲ್ಲಿ ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡಿದ್ದಾರೆ. ಬಾಯಂಬಾಡಿಯಿಂದ ಬರುತ್ತಿದ್ದ ಬೈಕ್ ಗೆ ಬೆಳ್ಳಾರೆ ಕಡೆಯಿಂದ ಹೋಗುತ್ತಿದ್ದ ರಿಕ್ಷಾ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರನ ತಲೆಗೆ ಗಾಯಗಳಾಗಿವೆ. ಬಾಯಂಬಾಡಿ ನಿವಾಸಿ ಇಂದ್ರೇಶ್ ತನ್ನ ಬೈಕ್ ನಲ್ಲಿ ಬಸ್ಸನ್ನು ಓವರ್ ಟೆಕ್ ಮಾಡುವ ವೇಳೆ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ್ದಾರೆ. ಗಾಯಗೊಂಡ ಅವರನ್ನು ಪುತ್ತೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾದಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಾಗಿವೆ.

ಸುಳ್ಯ | ರಿಕ್ಷಾ ಡಿಕ್ಕಿ – ಬೈಕ್ ಸವಾರನಿಗೆ ಗಾಯ Read More »

ಶಿಕಾರಿಗೆ ಕರೆದೊಯ್ದು ಗೆಳೆಯನನ್ನೇ ಬೇಟೆಯಾಡಿದರೇ…!? | ಸಾವಿನ ಸುತ್ತ ಅನುಮಾನದ ಹುತ್ತ

ಹಾಸನ: ಶಿಕಾರಿಗೆ ಕಾಡಿಗೆ ತೆರಳಿದ್ದ ವೇಳೆ ಸಹಚರರ ಗುಂಡೇಟಿಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಘಟನೆ ಬೆನ್ನಲ್ಲೇ ಸಹಚರರು ಪರಾರಿಯಾಗಿದ್ದು ಇದು ಕೊಲೆಯೇ ಎಂಬ ಅನುಮಾನ ಹುಟ್ಟುಹಾಕಿದೆ. ಬೇಲೂರು ತಾಲೂಕಿನ ಕುಶಾವರ ಗ್ರಾಮದ ನಿವಾಸಿ ಮಧು (24) ಮೃತ ಯುವಕ. ಮಧು ತನ್ನ ಸ್ನೇಹಿತರೊಂದಿಗೆ ಶಿಕಾರಿಗೆ ತೆರಳುವುದಾಗಿ ಮನೆಯವರೊಂದಿಗೆ ಹೇಳಿಹೋಗಿದ್ದ. ಈ ಸಂದರ್ಭ ಕಲ್ಲಹಳ್ಳಿ ಕಾಡಿನಲ್ಲಿ ಮಿಸ್ ಫೈಯರ್ ಆಗಿ ಮಧು ತಲೆಗೆ ಗುಂಡೇಟು ಬಿದ್ದಿದೆ ಎನ್ನಲಾಗಿದೆ. ಗುಂಡು ತಗುಲಿ ಗಾಯಗೊಂಡ ಯುವಕನನ್ನು ಜೊತೆಗಿದ್ದವರು ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಾರೆ. ಗಂಭೀರ

ಶಿಕಾರಿಗೆ ಕರೆದೊಯ್ದು ಗೆಳೆಯನನ್ನೇ ಬೇಟೆಯಾಡಿದರೇ…!? | ಸಾವಿನ ಸುತ್ತ ಅನುಮಾನದ ಹುತ್ತ Read More »

ಬ್ಯಾಟ್ ಯಾವಾಗಲು ನೆರೆಮನೆಯಾತನ ಹೆಂಡತಿಯಂತೆ | ದಿನೇಶ್ ಕಾರ್ತಿಕ್ ಕ್ಷಮೆಯಾಚನೆ

ನವದೆಹಲಿ: ಪ್ರತಿಯೊಬ್ಬ ಕ್ರಿಕೆಟಿಗನು ಇನ್ನೊಬ್ಬರ ಬ್ಯಾಟನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅದೊಂತರ ನೆರೆಮನೆಯಾತನ ಹೆಂಡತಿ ಇದ್ದಂತೆ ಎಂದು ಹೇಳಿದ್ದ ಕಮೆಂಟೇಟರ್ ದಿನೇಶ್ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ ನಡೆದ ಶ್ರೀಲಂಕಾ-ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯದ ವೇಳೆ ಕಮೆಂಟೇಟರ್ ಆಗಿದ್ದ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರತಿಯೊಬ್ಬ ಬ್ಯಾಟ್ಸ್ಮನ್ ತನ್ನ ಬ್ಯಾಟ್’ಗಿಂತ ಹೆಚ್ಚಾಗಿ ಸಹ ಆಟಗಾರರ ಬ್ಯಾಟ್’ನ್ನು ಇಷ್ಟಪಡುತ್ತಾರೆ. ಅದೊಂಥರಾ ಪಕ್ಕದ ಮನೆಯಾತನ ಹೆಂಡತಿ ಇದ್ದಂತೆ ಯಾವಾಗಲೂ ಚೆನ್ನಾಗಿ ಕಾಣುತ್ತದೆ ಎಂದಿದ್ದರು. ಈ ಹೇಳಿಕೆ ಸಾಮಾಜಿಕ ಜಾಲ ತಾಣಗಳಲ್ಲಿ

ಬ್ಯಾಟ್ ಯಾವಾಗಲು ನೆರೆಮನೆಯಾತನ ಹೆಂಡತಿಯಂತೆ | ದಿನೇಶ್ ಕಾರ್ತಿಕ್ ಕ್ಷಮೆಯಾಚನೆ Read More »

ಅಪ್ರಾಪ್ತ ತಂಗಿಯನ್ನೇ ಹರಿದು‌ ಮುಕ್ಕಿದ ಪಾಪಿ‌ ಅಣ್ಣ…! ಗರ್ಭವತಿಯಾದ ಬಾಲಕಿ

ತಿರುಪತಿ​: ಸ್ವಂತ ತಂಗಿಯ ಮೇಲೆ ಅಣ್ಣನೊಬ್ಬ ನಿರಂತರ ಅತ್ಯಾಚಾರವೆಸಗಿ, ಆಕೆಯನ್ನು ಗರ್ಭವತಿಯನ್ನಾಗಿಸಿದ ಘಟನೆ ತಿರುಪತಿ ಅಲಿಪಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕ ತನ್ನ ತಂಗಿಯನ್ನು ಹೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದನಂತೆ. ಪರಿಣಾಮ ಬಾಲಕಿ ಗರ್ಭವತಿಯಾಗಿದ್ದಾಳೆ. ಇವರ ತಂದೆ 20 ವರ್ಷಗಳ ಹಿಂದೆ ಮದುವೆಯಾಗಿದ್ದ. ಈತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈತನ ಮೊದಲನೇ ಹೆಂಡತಿ ಮನೆ ಬಿಟ್ಟು ಹೋಗಿದ್ದು ಎರಡನೇ ಮದುವೆಯಾಗಿದ್ದ. ಎರಡನೇ ಹೆಂಡತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.ಮೊದಲನೇ ಹೆಂಡತಿಯ ಮಗ

ಅಪ್ರಾಪ್ತ ತಂಗಿಯನ್ನೇ ಹರಿದು‌ ಮುಕ್ಕಿದ ಪಾಪಿ‌ ಅಣ್ಣ…! ಗರ್ಭವತಿಯಾದ ಬಾಲಕಿ Read More »

ಸರ್ಕಾರಿ ಕೆಲಸಗಳು ವಿಳಂಬ ಆಗ್ತಿದೆಯಾ? ಮೋದಿಗೆ ಪತ್ರ ಬರೆಯಿರಿ. ಹೇಗೆ ಗೊತ್ತಾ?

ಅನೇಕ ಬಾರಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅಂದರೆ ಸಾರ್ವಜನಿಕರಿಗೆ ಅಲ್ಲಿನ ಸಿಬ್ಬಂದಿಯಿಂದ ಕಿರಿಕಿರಿ ಉಂಟಾಗುವುದು ಇದೆ. ಇಂತಹ ಸಂದರ್ಭಗಳಲ್ಲಿ ಅನೇಕರು ಮೇಲಾಧಿಕಾರಿಗಳಿಗೆ ದೂರನ್ನ ಸಹ ನೀಡುತ್ತಾರೆ. ಆದರೆ ಈ ದೂರುಗಳನ್ನ ಕೆಲವರು ಗಂಭೀರವಾಗಿ ಪರಿಗಣಿಸೋದೇ ಇಲ್ಲ. ಆದರೆ ಇನ್ಮೇಲೆ ನೀವು ಈ ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗಿ ಬರೋದಿಲ್ಲ. ಏಕೆಂದರೆ ಸಾರ್ವಜನಿಕರು ನೇರವಾಗಿ ದೂರುಗಳನ್ನ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ತಲುಪಿಸಬಹುದಾಗಿದೆ. ನೀವು ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ದೂರನ್ನ ಸಲ್ಲಿಸಬೇಕು ಎಂದುಕೊಂಡಿದ್ದರೆ ಅನಾಯಾಸವಾಗಿ ಈ ಕೆಲಸವನ್ನ ಮಾಡಬಹುದಾಗಿದೆ. ಮನೆಯಲ್ಲಿ ಕುಳಿತುಕೊಂಡೇ

ಸರ್ಕಾರಿ ಕೆಲಸಗಳು ವಿಳಂಬ ಆಗ್ತಿದೆಯಾ? ಮೋದಿಗೆ ಪತ್ರ ಬರೆಯಿರಿ. ಹೇಗೆ ಗೊತ್ತಾ? Read More »

ನಮ್ಮವರು ನಮ್ಮ ಗಲ್ಲಿಗಳಲ್ಲಿ ಮಾತ್ರ ಸಿಂಹ – ಸಿದ್ದು ವ್ಯಂಗ್ಯ

ಬೆಂಗಳೂರು; ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಳಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧೈರ್ಯವಿಲ್ಲ. ಯಡಿಯೂರಪ್ಪ ಹಮಾರಾ ಕುತ್ತಾ, ಹಮಾರಾ ಗಲ್ಲಿ ಮೇ ಶೇರ್ ( ನಮ್ಮ ನಾಯಿ, ನಮ್ಮ ಬೀದಿಲಿ ಸಿಂಹ) ನಂತೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನ ಶ್ರೀನಗರದಲ್ಲಿಂದು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, 15ನೇ ಹಣಕಾಸು ಆಯೋಗವೇ ಕರ್ನಾಟಕಕ್ಕೆ 5495 ಕೋಟಿ ರೂ. ವಿಶೇಷ ಅನುದಾನಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಈ ಅನುದಾನವನ್ನು ರಾಜ್ಯಕ್ಕೆ

ನಮ್ಮವರು ನಮ್ಮ ಗಲ್ಲಿಗಳಲ್ಲಿ ಮಾತ್ರ ಸಿಂಹ – ಸಿದ್ದು ವ್ಯಂಗ್ಯ Read More »

ಸದ್ಯದಲ್ಲಿ ನಡೆಯುತ್ತದೆ ಸೆಮಿಸ್ಟರ್ ಪರೀಕ್ಷೆ | ಜು. ಎರಡನೇ ವಾರದಲ್ಲಿ ವೇಳಾಪಟ್ಟಿ ಪ್ರಕಟ: ಉನ್ನತ ಶಿಕ್ಷಣ ಇಲಾಖೆ

ಬೆಂಗಳೂರು: ಕೋವಿಡ್ ಕಾರಣದಿಂದ ಮುಂದೂಡಲಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಸದ್ಯದಲ್ಲೇ ನಡೆಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದ್ಯಂತ ಹೆಚ್ಚಿನ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿತ್ತು. ಆ ಸಮಯದಲ್ಲಿ ರಾಜ್ಯದ್ಯಂತ ಲಾಕ್ಡೌನ್ ಘೋಷಣೆಯಾದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಬಳಿಕ ಎಲ್ಲ ವಿಶ್ವವಿದ್ಯಾನಿಲಯಗಳು ಆನ್ಲೈನ್ ಮೂಲಕ ಮುಂದಿನ ಸೆಮಿಸ್ಟರ್ ನ ತರಗತಿಗಳನ್ನು ಆರಂಭಿಸಿವೆ. ಈ ಕಾರಣದಿಂದ ಬಾಕಿ ಉಳಿದ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತವೆಯೇ ಇಲ್ಲವೇ ಎಂದು ವಿದ್ಯಾರ್ಥಿಗಳಲ್ಲಿ

ಸದ್ಯದಲ್ಲಿ ನಡೆಯುತ್ತದೆ ಸೆಮಿಸ್ಟರ್ ಪರೀಕ್ಷೆ | ಜು. ಎರಡನೇ ವಾರದಲ್ಲಿ ವೇಳಾಪಟ್ಟಿ ಪ್ರಕಟ: ಉನ್ನತ ಶಿಕ್ಷಣ ಇಲಾಖೆ Read More »

ಕಾಸರಗೋಡು: ನಾಪತ್ತೆಯಾಗಿದ್ದ ಮೀನುಗಾರರ ಮೃತದೇಹ ಬೇಕಲಕೋಟೆ ಬಳಿ ಪತ್ತೆ

ಕಾಸರಗೋಡು: ನಿನ್ನೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ನಾಪತ್ತೆಯಾಗಿದ್ದ ಮೂರು ಜನ ಮೀನುಗಾರರ ಶವ ಪತ್ತೆಯಾಗಿದೆ. ಕಾಸರಗೋಡು: ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ ನಿನ್ನೆ ಬೆಳಿಗ್ಗೆ ತಳಂಗರೆ ಸಮೀಪದ ಕಸಬಾ ಕಡಪ್ಪುರ ಬಳಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿತ್ತು. ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ಇಂದು ನಾಪತ್ತೆಯಾಗಿದ್ದ ಕಡಪ್ಪುರ ನಿವಾಸಿಗಳಾದ ಸಂದೀಪ್ (33), ರತೀಶನ್ (30) ಮತ್ತು ಕಾರ್ತಿಕ್ (29 ) ಮೃತದೇಹಗಳು ಬೇಕಲ ಕೋಟೆ ಬಳಿ ಪತ್ತೆಯಾಗಿದೆ.

ಕಾಸರಗೋಡು: ನಾಪತ್ತೆಯಾಗಿದ್ದ ಮೀನುಗಾರರ ಮೃತದೇಹ ಬೇಕಲಕೋಟೆ ಬಳಿ ಪತ್ತೆ Read More »