Editor

ಬೆಳ್ಳಾರೆ: ಕೆರೆಗೆ ಬಿದ್ದು ಯುವಕ ಸಾವು.

ಸುಳ್ಯ : ಇಲ್ಲಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಸವಣೂರು ಗ್ರಾಮದ ಕಂಪ ಎಂಬಲ್ಲಿ ಯುವಕನೋರ್ವ ಕೆರೆಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಕುದ್ಮಾರು ಗ್ರಾಮದ ಕುಂಞ ಎಂಬವರ ಮಗ ನವೀನ್ (27 ವ.) ಎಂಬಾತನೇ ಮೃತಪಟ್ಟ ದುರ್ದೈವಿ. ಈತ ಸವಣೂರುಗ್ರಾಮದ ಕಂಪ ಎಂಬಲ್ಲಿ ಪ್ರವೀಣ್ ನಾಯಕ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು,ಜು.23ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋಗಿದ್ದು, ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಅನುಮಾನಗೊಂಡ ಮನೆಯವರು ಊರಿನವರಿಗೆ ವಿಷಯ ತಿಳಿಸಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ […]

ಬೆಳ್ಳಾರೆ: ಕೆರೆಗೆ ಬಿದ್ದು ಯುವಕ ಸಾವು. Read More »

ದ.ಕ ಜಿಲ್ಲೆಯಲ್ಲಿ ಮಳೆ ನಡುವೆಯೂ ಕೊರೊನಾ ಹಾವಳಿ: ಆತಂಕ ಮೂಡಿಸುತ್ತಿರುವ ಪಾಸಿಟಿವಿಟಿ ದರ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಲವಾರು ಕಡೆ‌ ಅವಘಡಗಳು ಸಂಭವಿಸುತ್ತಿರುವ ನಡುವೆಯೇ ಕೊರೊನಾ ಹಾವಳಿಯೂ ಮುಂದುವರೆದಿದೆ. ರಾಜ್ಯದ ಒಟ್ಟು ಕೇಸ್ ಗಳನ್ನು ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ‌ಸೋಂಕಿತರ ಪ್ರಮಾಣ ದಿನೇದಿನೇ ಏರಿಕೆ ಕಾಣಿಸುತ್ತಿದೆ. ಇದರಿಂದ ಜಿಲ್ಲೆಯಲ್ಲಿ ‌ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಶುಕ್ರವಾರ 300 ಇದ್ದ ಹೊಸ ಕೇಸ್ ಗಳು‌ ಶನಿವಾರ 269 ಕ್ಕೆ ಇಳಿಕೆಯಾಗಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

ದ.ಕ ಜಿಲ್ಲೆಯಲ್ಲಿ ಮಳೆ ನಡುವೆಯೂ ಕೊರೊನಾ ಹಾವಳಿ: ಆತಂಕ ಮೂಡಿಸುತ್ತಿರುವ ಪಾಸಿಟಿವಿಟಿ ದರ Read More »

ನಾಳೆ(ಜು.26)ಯಿಂದ ರಾಜ್ಯದಲ್ಲಿ ಕಾಲೇಜುಗಳು ರೀ ಓಪನ್

ಬೆಂಗಳೂರು: ನಾಳೆ(ಜು.26)ರಿಂದ ರಾಜ್ಯಾದ್ಯಂತ ಪದವಿ ಕಾಲೇಜುಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳ ಸ್ವಾಗತಕ್ಕೆ ಕಾಲೇಜು ಶಿಕ್ಷಣ ಇಲಾಖೆ ಸಕಲ ತಯಾರಿ ಮಾಡಿಕೊಂಡಿದೆ. ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಪದವಿಯ ಭೌತಿಕ ತರಗತಿಗಳು ಸೋಮವಾರದಿಂದ ಆರಂಭವಾಗಲಿದ್ದು, ಉನ್ನತ ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ಮಾರ್ಗಸೂಚಿ ಪ್ರಕಟವಾಗಿದೆ. ಆನ್ಲೈನ್ ಮತ್ತು ಆಫ್ಲೈನ್ ನಲ್ಲಿಯೂ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಪ್ರತಿ ಕೊಠಡಿಗೆ ಕನಿಷ್ಠ 30 ವಿದ್ಯಾರ್ಥಿಗಳು ನಿಗದಿಗೊಳಿಸಲು ವಿವಿಗಳು ಮುಂದಾಗಿದ್ದು, ಕೊರೋನಾ ನಿಯಮಗಳನ್ನು ಪಾಲಿಸುವುದರೊಂದಿಗೆ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು

ನಾಳೆ(ಜು.26)ಯಿಂದ ರಾಜ್ಯದಲ್ಲಿ ಕಾಲೇಜುಗಳು ರೀ ಓಪನ್ Read More »

ದ್ವಾದಶ ರಾಶಿಗಳ ವಾರಭವಿಷ್ಯ

ರಾಶಿ, ನಕ್ಷತ್ರಗಳ ಚಲನೆಗಳು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ದೈನಂದಿನ ಜೀವನದಲ್ಲಿ ಘಟಿಸುವ ಘಟನೆಗಳಿಗೆ ರಾಶಿಗಳ ಚಲನೆಗಳು, ಮತ್ತು ಅವುಗಳ ಪ್ರಭಾವಗಳೇ ಕಾರಣ ಎಂದು ನಂಬಲಾಗುತ್ತದೆ. ಇದು ನಿಜವೂ ಹೌದು. ನಿತ್ಯಜೀವನದಲ್ಲಿ ನಡೆಯಬಹುದಾದ ಸಂಗತಿಗಳ ಅನಾವರಣವೇ ಭವಿಷ್ಯ. ಈ ವಾರದ ಮೇಷಾದಿ ದ್ವಾದಶ ರಾಶಿಗಳ ಭವಿಷ್ಯ, ಫಲಾಫಲಗಳ ಚಿತ್ರಣ ಇಲ್ಲಿದೆ. ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಾಗಿದೆ. ಜು.25ರಿಂದ 31 ರವರೆಗಿನ ಒಂದಿಡೀ ವಾರದ ಭವಿಷ್ಯ ಇಲ್ಲಿದೆ. ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1) ಗೃಹ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಶಾಲೆ ಯಾವಾಗ ಓಪನ್ ಮಾಡ್ತೀರಿ? ಇಲ್ಲದಿದ್ದರೆ ನಾವೇ ಶಾಲೆ ಓಪನ್ ಮಾಡ್ಕೋತೀವಿ. ಸರ್ಕಾರಕ್ಕೆ ರುಪ್ಸಾ ಟಕ್ಕರ್! ಆ.2ರಿಂದ ಶಾಲೆ ತೆರೆಯುವ ಎಚ್ಚರಿಕೆ.

ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿದ್ದು, ಲಾಕ್​ಡೌನ್​ ಕೂಡ ಸಡಿಲವಾಗಿದೆ. ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆ ಕೂಡ ಯಶಸ್ವಿಯಾಗಿದ್ದು, ಈಗಿರುವ ಬೇಡಿಕೆ ಶಾಲೆ ಆರಂಭ ಯಾವಾಗ ಎನ್ನೋದು. ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿದ್ದು, ಶಾಲೆ ಆರಂಭಿಸುವ ಬಗ್ಗೆ ಯೋಜನೆ ಸಿದ್ಧಪಡಿಸುತ್ತಿದೆ. ಆದರೆ ಈ ವಿಚಾರವಾಗಿ ಖಾಸಗಿ ಶಾಲೆಗಳ ಒಕ್ಕೂಟ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಸರ್ಕಾರ ಶಾಲೆ ಆರಂಭಿಸದೇ ಹೋದರೆ ಅಗಸ್ಟ್ 2 ರಿಂದ ಖಾಸಗಿ ಶಾಲೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿವೆ. ಶೇ.80 ರಷ್ಟು

ಶಾಲೆ ಯಾವಾಗ ಓಪನ್ ಮಾಡ್ತೀರಿ? ಇಲ್ಲದಿದ್ದರೆ ನಾವೇ ಶಾಲೆ ಓಪನ್ ಮಾಡ್ಕೋತೀವಿ. ಸರ್ಕಾರಕ್ಕೆ ರುಪ್ಸಾ ಟಕ್ಕರ್! ಆ.2ರಿಂದ ಶಾಲೆ ತೆರೆಯುವ ಎಚ್ಚರಿಕೆ. Read More »

ಪೊಲೀಸ್ ವಶದಲ್ಲಿದ್ದ ಯುವಕ ಸಾವು: ಮಹಿಳಾ ಪೇದೆಯನ್ನು ಬಲಿಪಡೆದ ಉದ್ರಿಕ್ತ ಗುಂಪು

ಬಿಹಾರ: ಯುವಕನ ಲಾಕಪ್ ಡೆತ್ ವಿರೋಧಿಸಿ ಉದ್ರಿಕ್ತ ಗುಂಪು ಪ್ರತಿಭಟನೆ ನಡೆಸಿದ್ದು ಅಲ್ಲದೆ ಪೊಲೀಸರ ಮೇಲೆ ಕಲ್ಲು ತೂರಾಟ, ಗುಂಡಿನ ದಾಳಿ ನಡೆಸಿದ್ದಾರೆ. ಇನ್ನು ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾಗ ಪೊಲೀಸ್ ಮಹಿಳಾ ಪೇದೆ ಸಾವನ್ನಪ್ಪಿದ್ದಾರೆ. ಪ್ರತಿಭಟನಾಕಾರರು ಉದ್ರಿಕ್ತರಾಗಿ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಮಡು ತೂರಿದ್ದಾರೆ. ಕಲ್ಲು ತೂರಾಟದ ವೇಳೆ ಹಲವಾರು ಪೊಲೀಸರು ಗಾಯಗೊಂಡಿರುವುದಾಗಿ ಜಿಹಾನಾಬಾದ್ ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಿಭಟನೆಯಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಆರ್ವಾಲ್- ಜಿಹಾನಾಬಾದ್ ಹೆದ್ದಾರಿ ಸಂಚಾರದಲ್ಲಿ

ಪೊಲೀಸ್ ವಶದಲ್ಲಿದ್ದ ಯುವಕ ಸಾವು: ಮಹಿಳಾ ಪೇದೆಯನ್ನು ಬಲಿಪಡೆದ ಉದ್ರಿಕ್ತ ಗುಂಪು Read More »

ರಾಜ್ಯ‌ ಉಳಿಸ್ಬೇಕಂದ್ರೆ ಕಾಂಗ್ರೆಸ್ ಕಿತ್ತೋಡಿಸ್ಬೇಕು…! ಆವೇಶದಲ್ಲಿ ಎಡವಟ್ಟು ಹೇಳಿಕೆ ಕೊಟ್ಟ ಸಿದ್ದು

ತುಮಕೂರು: ಸುದ್ದಿಗೊಷ್ಠಿ ವೇಳೆ ಎಡವಟ್ಟು ಮಾಡಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಉಳಿಸಲು ಕಾಂಗ್ರೆಸ್ ಪಕ್ಷವನ್ನೇ ತೆಗೆಯಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಆವೇಶದಲ್ಲಿ ಬಿಜೆಪಿಯನ್ನು ತೆಗೆಯಬೇಕು ಎಂದು ಹೇಳುವ ಬದಲು ಬಾಯಿತಪ್ಪಿನಿಂದ ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ತೆಗೆಯಬೇಕು ಎಂದು ಹೇಳಿದ್ದಾರೆ. ಎಸ್.ಆರ್. ಪಾಟೀಲ್ ಹೇಳಿದ ಬಳಿಕ ತಕ್ಷಣ ಸರಿಪಡಿಸಿಕೊಂಡು ಬಿಜೆಪಿಯನ್ನು ರಾಜ್ಯದಿಂದ ತೆಗೆಯಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಬಿಜೆಪಿ

ರಾಜ್ಯ‌ ಉಳಿಸ್ಬೇಕಂದ್ರೆ ಕಾಂಗ್ರೆಸ್ ಕಿತ್ತೋಡಿಸ್ಬೇಕು…! ಆವೇಶದಲ್ಲಿ ಎಡವಟ್ಟು ಹೇಳಿಕೆ ಕೊಟ್ಟ ಸಿದ್ದು Read More »

ಹೀಗೂ ವರದಕ್ಷಿಣೆ ಕೇಳೋದುಂಟಾ?? ವರ ಕೇಳಿದ ವರದಕ್ಷಿಣೆ ಗೆ ವಧು ಕಡೆಯವರು ಶಾಕ್

ಮುಂಬೈ: ಮದುವೆಗೆ ಹಣ, ಕಾರು ,ಮನೆ ವರದಕ್ಷಿಣೆ ಕೇಳುವವರ ಸಾಮನ್ಯ. ಆದರೆ ಇಲ್ಲೊಬ್ಬ ವರ ಕೇಳಿರುವ ವರದಕ್ಷಿಣೆಯನ್ನು ವಧು ಕೇಳಿ ಶಾಕ್ ಆಗಿದ್ದರೆ. ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳಬೇಕಾದರೆ ನನಗೆ ಬೆನ್ಜ್ ಕಾರ್ ಕೊಡಿ ಎನ್ನುವ ಈ ಕಾಲದಲ್ಲಿ ವರ ಮಾತ್ರ 21 ಕಾಲು ಬೆರಳು ಇರುವ ಆಮೆ ಹಾಗೂ ಲ್ಯಾಬ್ರಡಾರ್ ಜಾತಿಯ ಶ್ವಾನವನ್ನು ಕೇಳಿದ್ದಾನೆ. ಜೌರಂಗಾಬಾದ್‍ನಲ್ಲಿ ನೆಲೆಸಿರುವ ವರನ ತಂದೆ, ತಾಯಿ ಇಂಥವೊಂದು ಬೇಡಿಕೆಯನ್ನು ಹುಡುಗಿ ಮನೆಯವರ ಮುಂದೆ ಇಟ್ಟಿದ್ದಾರೆ. ಫೆಬ್ರವರಿಯಲ್ಲಿ ಎಂಗೆಜ್‍ಮೆಂಟ್ ಮಾಡಿಕೊಂಡಿದ್ದಾರೆ. ಆಗಲೇ

ಹೀಗೂ ವರದಕ್ಷಿಣೆ ಕೇಳೋದುಂಟಾ?? ವರ ಕೇಳಿದ ವರದಕ್ಷಿಣೆ ಗೆ ವಧು ಕಡೆಯವರು ಶಾಕ್ Read More »

ಕಾಸರಗೋಡು: ನೇಣಿಗೆ ಶರಣಾದ ನವ ವಿವಾಹಿತೆ

ಕಾಸರಗೋಡು: ನವವಿವಾಹಿತೆಯೊಬ್ಬರು ನೇಣುಗೆ ಶರಣಾದ ಘಟನೆ ಕಾಸರಗೋಡಿನ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಶ್ರೇಯ (22) ಎಂದು ಗುರುತಿಸಲಾಗಿದೆ. ಇವರು 6 ತಿಂಗಳ ಹಿಂದಷ್ಟೇ ಶ್ರೇಯಾ ಅವರನ್ನು ಕಿದೂರು ಮೈರಾಳದ ಉದಯಕುಮಾರ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ವಿವಾಹದ ಬಳಿಕ ಇವರ ಸಂಸಾರ ಚೆನ್ನಾಗಿಯೇ ಇತ್ತು ಎನ್ನಲಾಗಿದೆ.ಆದರೆ ನಿನ್ನೆ ಇವರು ಪತಿ ಮನೆಯಲ್ಲಿ ಸ್ನಾನದ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಸ್ನಾನಕ್ಕೆಂದು ಹೇಳಿ ತೆರಳಿದ್ದ ಶ್ರೇಯಾ ಸ್ನಾನದ ಮನೆಯಿಂದ ಹೊರಬಾರದಿರುವುದನ್ನು ಗಮನಿಸಿದ ಮನೆಯವರು

ಕಾಸರಗೋಡು: ನೇಣಿಗೆ ಶರಣಾದ ನವ ವಿವಾಹಿತೆ Read More »

ಕುದುರೆಯನ್ನೇ ರೇಪ್ ಮಾಡಿದ ಯುವಕನಿಗೆ ಜಾಮೀನು ರಹಿತ ಜೈಲು

ಬ್ರಿಟನ್: ಯುವಕನೋರ್ವ ಕಾಮದ ಮದ ಏರಿ ಕುದುರೆಯೊಂದನ್ನು ಅತ್ಯಾಚಾರ ಎಸಗಿದ್ದಾನೆ. ಈ ಪ್ರಕರಣದಲ್ಲಿ ಆತನನ್ನು ಜಾಮೀನು ರಹಿತವಾಗಿ ಬಂಧಿಸಲಾಗಿದೆ. 19 ವರ್ಷದ ವಿಕೃತ ಕಾಮಿ ಯುವಕ ಜುಲೈ 15 ರಂದು ಮುಂಜಾನೆ 4 ಗಂಟೆಗೆ ಆಲ್ಸ್ಟನ್ ನಗರದ ಟರ್ನರ್ ಹಿಲ್ ಸೆಂಟರ್ ಗೆ ತೆರಳಿದ್ದಾನೆ. ಅಲ್ಲಿದ್ದ ಹೆಣ್ಣು ಕುದುರೆಯನ್ನು ಹಿಡಿದು ಅತ್ಯಾಚಾರ ನಡೆಸಿದ್ದಾನೆ. ಯುವಕನ ಹೀನಾಯ ಕೃತ್ಯ ಅಲ್ಲಿನ ಕ್ಯಾಮರದಲ್ಲಿ ಸೆರೆಯಾಗಿದೆ. ಕುದುರೆ ಮೇಲೆ ಅತ್ಯಾಚಾರ ಆರೋಪದಲ್ಲಿ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವ್ರೆಂಥಾಮ್​ನ ಜಿಲ್ಲಾ

ಕುದುರೆಯನ್ನೇ ರೇಪ್ ಮಾಡಿದ ಯುವಕನಿಗೆ ಜಾಮೀನು ರಹಿತ ಜೈಲು Read More »