ದೆಹಲಿ, ರಾಜಾಸ್ತಾನ ತಲುಪಿದ ಇಥಿಯೋಪಿಯದ ಜ್ವಾಲಾಮುಖಿ ಬೂದಿ
ಸಮಗ್ರ ನ್ಯೂಸ್: ಇಥಿಯೋಪಿಯಾದ ಹೈಲಿ ಗುಬ್ಬಿ ಜ್ವಾಲಾಮುಖಿಯ ಬೂದಿ ಸೋಮವಾರ ರಾತ್ರಿ ದೆಹಲಿ-ಎನ್ಸಿಆರ್ ತಲುಪಿದೆ. ಹವಾಮಾನ ಇಲಾಖೆ ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೋಡದಂತಿರುವ ಬೂದಿ ವಾಯುವ್ಯ ಭಾರತದ ಕಡೆಗೆ ಗಂಟೆಗೆ ಸುಮಾರು 130 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಭಾನುವಾರ ಜ್ವಾಲಾಮುಖಿ ಸ್ಫೋಟಗೊಂಡ ನಂತರ ಈ ಸಂಪೂರ್ಣ ಘಟನೆ ಸಂಭವಿಸಿದೆ. 10,000 ವರ್ಷಗಳಲ್ಲಿ ಇದು ಮೊದಲ ಸ್ಫೋಟವಾಗಿದೆ. ಹೊಗೆ ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯ ಕೆಲವು ಭಾಗಗಳಿಗೆ ಹರಡಿದೆ. ಅದರ ಒಂದು ಭಾಗ ಗುಜರಾತ್ ತಲುಪುವ ನಿರೀಕ್ಷೆಯಿದೆ. […]
ದೆಹಲಿ, ರಾಜಾಸ್ತಾನ ತಲುಪಿದ ಇಥಿಯೋಪಿಯದ ಜ್ವಾಲಾಮುಖಿ ಬೂದಿ Read More »










