ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಅರ್ಥಶಾಸ್ತ್ರ ವಿಭಾಗವು ಅ.17 ರಂದು ನಡೆಸಿದ ECO – VISION 2K25 ರಾಜ್ಯ ಮಟ್ಟದ ಅಂತರ್ ಕಾಲೇಜು ಫೆಸ್ಟ್ ನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ವಿದ್ಯಾರ್ಥಿಗಳು ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ದೀಕ್ಷಾ ಎಂ.ಕೆ.ಮತ್ತು ಇಂಚರ ಎಂ.ಎ. ಇಕೋ ಮಾಡೆಲಿಂಗ್ ನಲ್ಲಿ ಪ್ರಥಮ ಸ್ಥಾನ , ವಸ್ತು ಶೋಧನೆಯಲ್ಲಿ ಹರ್ಷಿತಾ ಮತ್ತು ಪಂಚಮಿ ಕೆ.ಎಸ್ ದ್ವಿತೀಯ ಸ್ಥಾನ ಮತ್ತು ವೀಡಿಯೋಗ್ರಫಿ ಯಲ್ಲಿ ಪೃಥ್ವಿ ರಾಜ್ ಬಂಡಾರಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಜೀವನ್ ಎಂ., ಕಾರ್ತಿಕ್ ಯು., ಜೀವಿತ್, ಮಾನಸ್, ರಕ್ಷಣ್, ರಕ್ಷಾ, ನಿಶಾ ಗೌರಿ , ಚಿನ್ಮಯಿ ಡಿ.ಎಸ್, ಪರೀಕ್ಷೀತ್. ಎ , ಹನೀಕ್ಷಾ, ಲೋಚನ್ , ವರ್ಷಿಣಿ ಕೆ ಮತ್ತು ರಿತೀಶ್ ಕೆ ಭಾಗವಹಿಸಿ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.







