April 2025

ಕೊಂಚ ಕುಸಿತ ಕಂಡ ಬಂಗಾರದ ದರ| ಇಂದಿನ ಬೆಲೆ ಎಷ್ಟು?

ಸಮಗ್ರ ನ್ಯೂಸ್: ಸತತ ಏರಿಕೆ ಆಗುತ್ತಾ ಹೋಗಿದ್ದ ಚಿನ್ನದ ಬೆಲೆ ಕೊಂಚ ಇಳಿಕೆ‌ ಕಂಡಿದೆ. ಇಂದು ಗ್ರಾಮ್​​ಗೆ ಬರೋಬ್ಬರಿ 160 ರೂಗಳಷ್ಟು ಇಳಿಕೆ ಕಂಡಿದೆ. ಅಂದರೆ ನೂರು ಗ್ರಾಮ್ ಚಿನ್ನದ ಬೆಲೆ 16,000 ರೂಗಳಷ್ಟು ತಗ್ಗಿದೆ. 8,560 ರೂ ಇದ್ದ ಆಭರಣ ಚಿನ್ನದ ಬೆಲೆ 8,400 ರೂಗೆ ಇಳಿಕೆ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆಯೂ ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆಯಂತೂ ಇನ್ನೂ ವೇಗವಾಗಿ ಕುಸಿತ ಕಂಡಿದೆ. ಒಮ್ಮೆಗೇ ಗ್ರಾಮ್​​ಗೆ 4 ರೂನಷ್ಟು ಇಳಿಕೆ ಆಗಿದೆ. ನಿನ್ನೆ […]

ಕೊಂಚ ಕುಸಿತ ಕಂಡ ಬಂಗಾರದ ದರ| ಇಂದಿನ ಬೆಲೆ ಎಷ್ಟು? Read More »

ಬಾಲಿವುಡ್ ಹಿರಿಯ ನಟ ಮನೋಜ್ ಕುಮಾರ್ ನಿಧನ

ಸಮಗ್ರ ನ್ಯೂಸ್: ದೇಶಭಕ್ತಿ ಚಿತ್ರಗಳು ಮತ್ತು ‘ಭರತ್ ಕುಮಾರ್’ ಎಂಬ ಅಡ್ಡಹೆಸರಿನಿಂದ ಹೆಸರುವಾಸಿಯಾದ ಭಾರತೀಯ ನಟ ಮತ್ತು ಚಲನಚಿತ್ರ ನಿರ್ದೇಶಕ ಮನೋಜ್ ಕುಮಾರ್, ತಮ್ಮ 87 ನೇ ವಯಸ್ಸಿನಲ್ಲಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು. ಕುಮಾರ್ 1999 ರಲ್ಲಿ ನಟನೆಯಿಂದ ನಿವೃತ್ತರಾದರು, ಆದರೆ ಅವರ ಚಲನಚಿತ್ರಗಳನ್ನು ಇನ್ನೂ ಯುವಕರು ವೀಕ್ಷಿಸುತ್ತಾರೆ. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು 1992 ರಲ್ಲಿ ಪದ್ಮಶ್ರೀ ಮತ್ತು ಭಾರತೀಯ ಚಲನಚಿತ್ರ ಮತ್ತು ಕಲೆಗಳಿಗೆ ನೀಡಿದ ಕೊಡುಗೆಗಾಗಿ 2015 ರಲ್ಲಿ

ಬಾಲಿವುಡ್ ಹಿರಿಯ ನಟ ಮನೋಜ್ ಕುಮಾರ್ ನಿಧನ Read More »

ರಾಜ್ಯಸಭೆಯಲ್ಲಿ ‌ತಡರಾತ್ರಿ 2.35ಕ್ಕೆ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ

ಸಮಗ್ರ ನ್ಯೂಸ್: ಲೋಕಸಭೆಯು ಅಂಗೀಕರಿಸಿದ ಒಂದು ದಿನದ ನಂತರ ರಾಜ್ಯಸಭೆಯು ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ರಾಜ್ಯಸಭೆಯು ಏಪ್ರಿಲ್ 3-4 ರ ಮಧ್ಯರಾತ್ರಿ ವಿವಾದಾತ್ಮಕ ವಕ್ಫ್(ತಿದ್ದುಪಡಿ) ಮಸೂದೆ- 2025 ಅನ್ನು ಅಂಗೀಕರಿಸಿತು, ಬಿಸಿ ಚರ್ಚೆಯ ನಂತರ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸುವ ಮಸೂದೆಯನ್ನು ‘ಪರವಾಗಿ'(ಹೌದು) 128 ಮತ್ತು ‘ವಿರುದ್ಧ’ (ಇಲ್ಲ) 95 ಮತಗಳಿಂದ ಅಂಗೀಕರಿಸಲಾಯಿತು. ಸರ್ಕಾರವು ಇದನ್ನು ಏಕೀಕೃತ ವಕ್ಫ್ ನಿರ್ವಹಣಾ ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ (UMEED) ಮಸೂದೆ ಎಂದು ಮರುನಾಮಕರಣ ಮಾಡಲು

ರಾಜ್ಯಸಭೆಯಲ್ಲಿ ‌ತಡರಾತ್ರಿ 2.35ಕ್ಕೆ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ Read More »

ನೆಲ್ಯಾಡಿ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ| ಓರ್ವ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು, ಹತ್ತಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್ ನೀರಕಟ್ಟೆಯ ಅಪಾಯಕಾರಿ ತಿರುವನ್ನು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಬಸ್ಸಿನಡಿ ಸಿಲುಕಿ ಮೃತಪಟ್ಟಿದ್ದು, ಹತ್ತಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಪುತ್ತೂರು ಹಾಗೂ

ನೆಲ್ಯಾಡಿ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ| ಓರ್ವ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ Read More »

ವಾಯುಭಾರ ಕುಸಿತ| ಎ.8ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ‌ ಸಾಧ್ಯತೆ| ಎಲ್ಲೊ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಸಮುದ್ರದ ಎರಡು ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸ್ಪಷ್ಟ ಚಂಡಮಾರುತ ಪರಿಚಲನೆ ದಾಖಲಾಗಿದೆ. ಈ ಕಾರಣದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ 05 ದಿನ ಏಪ್ರಿಲ್ 8ರವರೆಗೆ ಗುಡುಗು ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆ ಅಬ್ಬರಿಸಲಿದೆ. ರಾಜ್ಯದಲ್ಲಿ ಕೆಲವೆಡೆ ಬಿಸಿಲಿನ ತಾಪ ಹೆಚ್ಚಾಗಿತ್ತು, ಈ ಮಧ್ಯೆ ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಸಾಧಾರಣದಿಂದ ಭಾರೀ ಮಳೆ ಆರ್ಭಟಿಸಲಿದೆ. ಪೂರ್ವ ಮುಂಗಾರು ಮಳೆ ಮತ್ತಷ್ಟು ಚುರುಕಾಗಲಿದೆ. ಕೆಲವೆಡೆ ಗುಡುಗು, ಮಿಂಚು ಸಹಿತ ಧಾರಾಕಾರ

ವಾಯುಭಾರ ಕುಸಿತ| ಎ.8ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ‌ ಸಾಧ್ಯತೆ| ಎಲ್ಲೊ ಅಲರ್ಟ್ ಘೋಷಣೆ Read More »

ಎ.4-6 ಮಂಗಳೂರು- ಮಧೂರು ದೇವಸ್ಥಾನಕ್ಕೆ KSRTCಯಿಂದ ವಿಶೇಷ ಬಸ್

ಸಮಗ್ರ ನ್ಯೂಸ್: ಮಧೂರು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಮಂಗಳೂರು-ಮಧೂರು ನಡುವೆ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ. ಎ.4ರಿಂದ ಈ ಬಸ್ ಸೇವೆ ಲಭಿಸಲಿದ್ದು, ಬಸ್ ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಮಧೂರಿಗೆ ಬೆಳಗ್ಗೆ 10 ಗಂಟೆಗೆ ಮತ್ತು‌ 10.20ಕ್ಕೆ ಹೊರಡಲಿದೆ. ಮಧೂರಿನಿಂದ ಮಂಗಳೂರಿಗೆ 1.30 ಮತ್ತು 1.45ಕ್ಕೆ‌ ಹೊರಡಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಎ.4-6 ಮಂಗಳೂರು- ಮಧೂರು ದೇವಸ್ಥಾನಕ್ಕೆ KSRTCಯಿಂದ ವಿಶೇಷ ಬಸ್ Read More »

ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು‌ ಯತ್ನ| ವಿಪಕ್ಷನಾಯಕ ಆರ್.ಅಶೋಕ್ ಸೇರಿ ಹಲವರ ಬಂಧನ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಾಲಿನ ದರ, ವಿದ್ಯುತ್ ದರ ಸೇರಿ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಬೆಲೆ ಏರಿಕೆ ಖಂಡಿಸಿ ಮುಖ್ಯಮಂತ್ರಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದು, ಇಂದು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.ಹೀಗಾಗಿ, ನೂರಾರು ಕಾರ್ಯಕರ್ತರೊಂದಿಗೆ ರಸ್ತೆಗಿಳಿದು ಸಿಎಂ ಮನೆ ಕಡೆ ತೆರಳಲು ಮುಂದಾದರು. ಅಷ್ಟರಲ್ಲೇ ಬ್ಯಾರಿಕೇಡ್

ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು‌ ಯತ್ನ| ವಿಪಕ್ಷನಾಯಕ ಆರ್.ಅಶೋಕ್ ಸೇರಿ ಹಲವರ ಬಂಧನ Read More »

ಬೆಳ್ತಂಗಡಿ: ಬೆಳಾಲು ಕಾಡಿನಲ್ಲಿ ಪತ್ತೆಯಾದ ಶಿಶು ಪತ್ತೆಯಾದ ಪ್ರಕರಣ| ಮಗುವಿನ ತಂದೆ – ತಾಯಿ ಗುರುತು ಪತ್ತೆ| ವಾರದೊಳಗೆ ಮದುವೆಗೆ ಮಾಡಿಸಲು ತೀರ್ಮಾನ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕಾಡಿನಲ್ಲಿ ಪತ್ತೆಯಾದ ನವಜಾತ ಶಿಶುವಿನ ತಂದೆ ತಾಯಿಯನ್ನು ಪತ್ತೆಹಚ್ಚಲಾಗಿದೆ. ಬೆಳಾಲಿನ ಮಾಯದ ಯುವಕ ರಂಜಿತ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವಕ, ಮತ್ತು ಧರ್ಮಸ್ಥಳ ಗ್ರಾಮದ ಯುವತಿಯ ಎರಡೂ ಮನೆಯವರು ಠಾಣೆಗೆ ಕರೆಸಿ ವಿಚಾರಿಸಿ ಒಂದು ವಾರದೊಳಗೆ ಇಬ್ಬರಿಗೂ ಮದುವೆ ಮಾಡುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಬೆಳಾಲು ಗ್ರಾಮದ ಯುವಕ ರಂಜಿತ್ ಮತ್ತು ಧರ್ಮಸ್ಥಳ ಗ್ರಾಮದ ಯುವತಿ ನಡುವೆ ಪ್ರೀತಿ ಏರ್ಪಟ್ಟು ಅಕ್ರಮ ಸಂಬಂಧಕ್ಕೆ ಕಾರಣವಾಗಿತ್ತು. ಹೀಗೆ

ಬೆಳ್ತಂಗಡಿ: ಬೆಳಾಲು ಕಾಡಿನಲ್ಲಿ ಪತ್ತೆಯಾದ ಶಿಶು ಪತ್ತೆಯಾದ ಪ್ರಕರಣ| ಮಗುವಿನ ತಂದೆ – ತಾಯಿ ಗುರುತು ಪತ್ತೆ| ವಾರದೊಳಗೆ ಮದುವೆಗೆ ಮಾಡಿಸಲು ತೀರ್ಮಾನ Read More »

ಮಾರುಕಟ್ಟೆ ಧಾರಣೆ| ಅಡಿಕೆ ಮಾರುಕಟ್ಟೆ ಏರುಗತಿಯತ್ತ

ಸಮಗ್ರ ನ್ಯೂಸ್: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ, ಸಿಂಗಲ್‌ ಚೋಲ್‌ ಧಾರಣೆ ಏರುಮುಖದತ್ತ ಸಾಗಿದರೆ, ಕಾಳುಮೆಣಸು ಧಾರಣೆ 700 ರೂ. ಗಡಿ ದಾಟಿ ಮುನ್ನುಗಿದೆ. ರಬ್ಬರ್‌, ತೆಂಗಿನ ಕಾಯಿ ಧಾರಣೆಯು ಏರಿಕೆಯ ಸೂಚನೆ ನೀಡಿದೆ. ಕಾಳುಮೆಣಸು ಧಾರಣೆ ಏರಿಕೆಯತ್ತ ಸಾಗಿದ್ದು ಕೃಷಿಕರಿಗೆ ಖುಷಿ ತಂದಿದೆ. ಎ.2 ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 710 ರೂ. ದಾಖಲಾಗಿತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 695 ರೂ.ಇತ್ತು. ಒಂದು ವಾರದಲ್ಲಿ ಕೆ.ಜಿ.ಗೆ 20 ರೂ. ಏರಿಕೆ ಕಂಡಿದೆ. ಡಬ್ಬಲ್‌ ಚೋಲ್‌

ಮಾರುಕಟ್ಟೆ ಧಾರಣೆ| ಅಡಿಕೆ ಮಾರುಕಟ್ಟೆ ಏರುಗತಿಯತ್ತ Read More »

ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ| ರಾಜ್ಯ ಸಭೆಯಲ್ಲಿ ಇಂದು(ಎ. ೩) ಮಸೂದೆ ಮಂಡನೆ

ಸಮಗ್ರ ನ್ಯೂಸ್: 12 ಗಂಟೆಗಳ ಚರ್ಚೆಯ ನಂತರ ಲೋಕಸಭೆ ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಇಂದು ರಾಜ್ಯಸಭೆಯಲ್ಲಿ ಅದರ ಭವಿಷ್ಯ ನಿರ್ಧಾರವಾಗಲಿದೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ಗುರುವಾರ ಲೋಕಸಭೆಯು ‘ಪರವಾಗಿ'(ಹೌದು) 288 ಮತಗಳು ಮತ್ತು ‘ವಿರುದ್ಧ'(ಇಲ್ಲ) 232 ಮತಗಳೊಂದಿಗೆ ಅಂಗೀಕರಿಸಿತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಲೋಕಸಭೆಯಲ್ಲಿ ವಕ್ಫ್(ತಿದ್ದುಪಡಿ) ಮಸೂದೆ 2025 ಅನ್ನು ಮಂಡಿಸಿದರು. ಇದು ವಕ್ಫ್ ಆಸ್ತಿಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು,

ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ| ರಾಜ್ಯ ಸಭೆಯಲ್ಲಿ ಇಂದು(ಎ. ೩) ಮಸೂದೆ ಮಂಡನೆ Read More »