ಸೌಜನ್ಯಳ ನ್ಯಾಯಕ್ಕಾಗಿ ಕೇದಾರನಾಥದಲ್ಲೂ ಪ್ರಾರ್ಥನೆ

ಸಮಗ್ರ ನ್ಯೂಸ್ : ಸೌಜನ್ಯಳ ನ್ಯಾಯಕ್ಕಾಗಿ ಬೆಂಗಳೂರಿನ ಕೆಲ ಯುವಕರ ತಂಡ ಕೇದಾರನಾಥದಲ್ಲೂ ಪ್ರಾರ್ಥನೆ ಸಲ್ಲಿಸಿದ್ದಾರೆ.

Ad Widget ... ..

ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ದಿಂದ ರವಿ ಕಕ್ಕೆ ಪದವು ಮತ್ತು ಅವರ ತಂಡ ಶಬರಿಮಲೆಯಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಅದಲ್ಲದೆ ಸಾವಿರಾರು ಜನರು ಸೌಜನ್ಯಳ ಅತ್ಯಾಚಾರಿಗಳಿಗೆ ಶಿಕ್ಷೆ ಆಗುವಂತೆ ಬೇರೆ ಬೇರೆ ಧೈವಸ್ಥಾನ, ದೇವಸ್ಥಾನ ಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Ad Widget

ಅದೇ ರೀತಿ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಭವೀಕಟ್ಟೆಯ ಯುವಕರ ತಂಡವೊಂದು “ಕು| ಸೌಜನ್ಯ ನ್ಯಾಯಕ್ಕಾಗಿ ಕೇದಾರನಾಥಕ್ಕೆ… ” ಎಂಬ ಬ್ಯಾನರ್ ಹಿಡಿದು ಕೇದಾರನಾಥಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಆ ವೀಡಿಯೊವನ್ನು ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

Leave a Comment

Your email address will not be published. Required fields are marked *