November 2022

ಕಡಬ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ‌ ಫಾರ್ಚ್ಯೂನರ್| ಬೆಂಗಳೂರು ಮೂಲದ ಐವರು ಗಂಭೀರ

ಸಮಗ್ರ ನ್ಯೂಸ್: ಫಾರ್ಚ್ಯೂನರ್ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ನ.8ರಂದು ನಡೆದಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಟೊಯೋಟಾ ಫಾರ್ಚ್ಯೂನರ್ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಬೆಂಗಳೂರು ಮೂಲದ ಐವರಿಗೆ ಗಾಯಗಳಾಗಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ.

ಕಡಬ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ‌ ಫಾರ್ಚ್ಯೂನರ್| ಬೆಂಗಳೂರು ಮೂಲದ ಐವರು ಗಂಭೀರ Read More »

ಸಾನಿಯಾ- ಶೋಹೆಬ್ ಸಂಸಾರದಲ್ಲಿ ಒಡಕು? ಮುರಿದು ಬೀಳುತ್ತಾ ಮೂಗುತಿ ಸುಂದರಿಯ ಪ್ರೇಮಸೌಧ

ಸಮಗ್ರ ನ್ಯೂಸ್: ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಹೆಬ್​ ಮಲಿಕ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ನಿನ್ನೆಯಿಂದ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಸಾನಿಯಾ ಪೋಸ್ಟ್​ ಮಾಡಿರುವ ಇನ್​ಸ್ಟಾಗ್ರಾಂ ಸ್ಟೋರಿ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದ್ದು, ಸ್ಟಾರ್​ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಗಟ್ಟಿಯಾಗಿದೆ.​ ಅವಿನಾಶ್​ ಆರ್ಯನ್​ ಎಂಬುವರ ಸಾನಿಯಾರ ಇನ್​ಸ್ಟಾಗ್ರಾಂ ಸ್ಟೋರಿಯನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಬರೆದಿರುವ ಸಾಲುಗಳ ಸಾರಾಂಶ ಈ ಮುಂದಿನಂತಿದೆ.

ಸಾನಿಯಾ- ಶೋಹೆಬ್ ಸಂಸಾರದಲ್ಲಿ ಒಡಕು? ಮುರಿದು ಬೀಳುತ್ತಾ ಮೂಗುತಿ ಸುಂದರಿಯ ಪ್ರೇಮಸೌಧ Read More »

ಮಂಗಳೂರು: ತಲಪಾಡಿ ಆರ್ಟಿಒ‌‌ ಕಚೇರಿ ಮೇಲೆ‌ ಲೋಕಾಯುಕ್ತ ದಾಳಿ; ಹಲವು ವೈಫಲ್ಯಗಳು ಪತ್ತೆ

ಸಮಗ್ರ ನ್ಯೂಸ್: ಮಂಗಳೂರು‌ ನಗರದ ಹೊರವಲಯ ತಲಪಾಡಿಯ ಆರ್‌ಟಿಓ ಚೆಕ್‌ಪೋಸ್ಟ್‌ಗೆ ಲೋಕಾಯುಕ್ತ ಮಂಗಳೂರು ಪೊಲೀಸ್ ವಿಭಾಗದಿಂದ ನಿನ್ನೆ ನಡೆದ ದಾಳಿಯ ಸಂದರ್ಭದಲ್ಲಿ ಹಲವಾರು ನ್ಯೂನತೆಗಳು ಕಂಡುಬಂದಿವೆ. ದಲ್ಲಾಳಿಗಳ ಮೂಲಕ ಹಣ ವಸೂಲು, ದಾಖಲಾತಿಗಳಲ್ಲಿ ನ್ಯೂನತೆ ಹಾಗೂ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಹಣದ ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಸಮಗ್ರ ವರದಿಯನ್ನು ಕರ್ನಾಟಕ ಲೋಕಾಯುಕ್ತಕ್ಕೆ ನೀಡಲಾಗುವುದು ಎಂದು ಮಂಗಳೂರು ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಕೆ. ತಿಳಿಸಿದ್ದಾರೆ. ಆರ್‌ಟಿಓ ಚೆಕ್‌ಪೋಸ್ಟ್‌ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ,

ಮಂಗಳೂರು: ತಲಪಾಡಿ ಆರ್ಟಿಒ‌‌ ಕಚೇರಿ ಮೇಲೆ‌ ಲೋಕಾಯುಕ್ತ ದಾಳಿ; ಹಲವು ವೈಫಲ್ಯಗಳು ಪತ್ತೆ Read More »

ಮುರುಘಾ ಶ್ರೀಯಿಂದ 10 ಕ್ಕೂ ಹೆಚ್ಚು ಬಾಲಕಿಯರ ಅತ್ಯಾಚಾರ; ಒಂದು ಕೊಲೆ!! ಅಬ್ಬಬ್ಬಾ… ಚಾರ್ಜ್ ಶೀಟ್ ನಲ್ಲಿನ ಆರೋಪಗಳೇನು?

ಸಮಗ್ರ ನ್ಯೂಸ್: ಮುರುಘಾ ಶ್ರೀ ವಿರುದ್ಧ ಪೊಲೀಸರು 694 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದು ಅದರಲ್ಲಿ ಸಾಕಷ್ಟು ಶಾಕಿಂಗ್‌ ಆರೋಪಗಳನ್ನು ಮಾಡಲಾಗಿದೆ. ಉನ್ನತ ಮೂಲಗಳ ಪ್ರಕಾರ ಮುರುಘಾ ಶ್ರೀ ಪ್ರತಿ ಭಾನುವಾರ ಮಕ್ಕಳನ್ನು ಕೋಣೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಲಾಗಿದೆ. ಜತೆಗೆ ಪ್ರಕರಣದ ಎರಡನೇ ಆರೋಪಿ ವಾರ್ಡನ್‌ ರಶ್ಮಿ ಮಕ್ಕಳನ್ನು ಕೋಣೆಗೆ ಕರೆದುಕೊಂಡು ಬರುತ್ತಿದ್ದಳು, ಒಪ್ಪದವರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದೂ ಆರೋಪಿಸಲಾಗಿದೆ. ರಶ್ಮಿ ಕೈಗೆ ಮಕ್ಕಳ ಹೆಸರನ್ನು ಬರೆದು ಮುರುಘಾ ಶ್ರೀ ಕೊಡುತ್ತಿದ್ದರು, ನಂತರ

ಮುರುಘಾ ಶ್ರೀಯಿಂದ 10 ಕ್ಕೂ ಹೆಚ್ಚು ಬಾಲಕಿಯರ ಅತ್ಯಾಚಾರ; ಒಂದು ಕೊಲೆ!! ಅಬ್ಬಬ್ಬಾ… ಚಾರ್ಜ್ ಶೀಟ್ ನಲ್ಲಿನ ಆರೋಪಗಳೇನು? Read More »

ಜಾರಕಿಹೊಳಿಯ ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡ್ತಾರೆ – ಶಶಿಕಲಾ ಜೊಲ್ಲೆ

ಸಮಗ್ರ ನ್ಯೂಸ್: ಹಿಂದೂ ಪದ ಅಶ್ಲೀಲ ಎನ್ನುವರ ಮನಸ್ಥಿತಿಯನ್ನು ಜನರು ಅರಿತುಕೊಳ್ಳಬೇಕಿದೆ. ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ನಿಪ್ಪಾಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಂಬಿಕೆಯನ್ನು ಕೀಳು ಪದಗಳಿಗೆ ಹೋಲಿಸಿರುವ ಸತೀಶ್‌ ಜಾರಕಿಹೊಳಿ ಮನಸ್ಥಿತಿಯನ್ನು ಜನರು ಅರಿತುಕೊಳ್ಳಬೇಕಾಗಿದೆ. ಹಿಂದುತ್ವ ಎನ್ನುವುದು ಬಹುಜನರ ಧಾರ್ಮಿಕ ನಂಬಿಕೆ. ಬಹುಸಂಖ್ಯಾತರ ಭಾವನೆಗೆ ಜಾರಕಿಹೊಳಿ ಧಕ್ಕೆ ತಂದಿದ್ದಾರೆ. ಅವರ

ಜಾರಕಿಹೊಳಿಯ ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡ್ತಾರೆ – ಶಶಿಕಲಾ ಜೊಲ್ಲೆ Read More »

ಬಂಧುತ್ವ ಇಲ್ಲದ ಹಿಂದುತ್ವ, ವ್ಯಕ್ತಿಪೂಜೆ ಅಪಾಯಕಾರಿ| ಕೊರೊ‌ನಾ ಸಮಯದಲ್ಲಿ ದೇವರು ಎಲ್ಲೋಗಿದ್ದ? – ಜ್ಞಾನಪ್ರಕಾಶ ಸ್ವಾಮೀಜಿ ಆಕ್ರೋಶ

ಸಮಗ್ರ ನ್ಯೂಸ್: “ಬಂಧುತ್ವ ಇಲ್ಲದ ಹಿಂದುತ್ವ ದೇಶಕ್ಕೆ ಅಪಾಯಕಾರಿ. ದೇಶ ಅತ್ಯಂತ ಅಪಾಯದಲ್ಲಿದೆ. ಇಬ್ಬರು ದೇಶವನ್ನು ಮಾರುತ್ತಿದ್ದಾರೆ, ಇಬ್ಬರು ದೇಶವನ್ನು ಕೊಳ್ಳುತ್ತಿದ್ದಾರೆ,” ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮೀತ್ ಷಾ ವಿರುದ್ಧ ಜ್ಞಾನಪ್ರಕಾಶ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಪ್ಪಾಣಿಯಲ್ಲಿ ಮೈಸೂರು ಉರಿಲಿಂಗ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನೆ ಮನೆಗೆ ಬುದ್ದ, ಬಸವ, ಅಂಬೇಡ್ಕರ್ ತಲುಪಬೇಕಿದೆ ಎಂದು ಅಭಿಪ್ರಾಯಪಟ್ಟರು. “ಈ

ಬಂಧುತ್ವ ಇಲ್ಲದ ಹಿಂದುತ್ವ, ವ್ಯಕ್ತಿಪೂಜೆ ಅಪಾಯಕಾರಿ| ಕೊರೊ‌ನಾ ಸಮಯದಲ್ಲಿ ದೇವರು ಎಲ್ಲೋಗಿದ್ದ? – ಜ್ಞಾನಪ್ರಕಾಶ ಸ್ವಾಮೀಜಿ ಆಕ್ರೋಶ Read More »

ಇಂದು(ನ.8) ರಾಹುಗ್ರಸ್ತ ರಕ್ತಚಂದ್ರಗ್ರಹಣ| ಎಲ್ಲೆಲ್ಲಿ ಕಾಣಲಿದೆ ನೆರಳು ಬೆಳಕಿನಾಟ? ಸಂಪೂರ್ಣ ವಿವರ…

ಸಮಗ್ರ ನ್ಯೂಸ್: ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುತ್ತಿದೆ. ಕಳೆದ ವಾರವಷ್ಟೇ ಸೂರ್ಯಗ್ರಹಣದ ಜೊತೆಗೆ ಇದೀಗ ಚಂದ್ರಗ್ರಹಣದ ಆಗಮನವಾಗಿದೆ. ಕರ್ನಾಟಕ ಸೇರಿ ದೇಶದಲ್ಲೆಡೆ ಎಲ್ಲೆಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ ಎಂಬ ಮಾಹಿತಿ ‌ಇದೆ. ಸೂರ್ಯಗ್ರಹಣದ 15ನೇ ದಿನಕ್ಕೆ ಚಂದ್ರಗ್ರಹಣ ಬರ್ತಿದೆ. ಗ್ರಹಣದ ವೇಳೆ ಚಂದ್ರ ಕೆಂಪುವರ್ಣದಿಂದ ಗೋಚರಿಸಲಿದ್ದಾನೆ. ಹೀಗಾಗಿ ಇದನ್ನ ರೆಡ್‌ಮೂನ್‌ ಗ್ರಹಣ ಅಂತಾ ಕರೆಯಲಾಗುತ್ತದೆ. ಹೀಗಾಗಿಯೇ ಈ ಗ್ರಹಣವೂ ಮಹತ್ವ ಪಡೆದುಕೊಂಡಿದೆ. ಜಾಗತಿಕವಾಗಿ ಚಂದ್ರಗ್ರಹಣ ಆರಂಭದ ಕಾಲ ಮಧ್ಯಾಹ್ನ 2 ಗಂಟೆ 39 ನಿಮಿಷ

ಇಂದು(ನ.8) ರಾಹುಗ್ರಸ್ತ ರಕ್ತಚಂದ್ರಗ್ರಹಣ| ಎಲ್ಲೆಲ್ಲಿ ಕಾಣಲಿದೆ ನೆರಳು ಬೆಳಕಿನಾಟ? ಸಂಪೂರ್ಣ ವಿವರ… Read More »

ಇನ್ಮುಂದೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಲ್ಲ!! ಹಾಗಾದ್ರೆ ಮತ್ತಿನ್ನೇನು?

ಸಮಗ್ರ ನ್ಯೂಸ್: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ’ ಎಂದು ಬದಲಾವಣೆ ಮಾಡಲಾಗಿದೆ. ಈ ಕುರಿತಂತೆ ರಾಜ್ಯ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ಸಹ ಅಧಿಸೂಚನೆ ಪ್ರಕಟಿಸಿದೆ. ಅಧಿಸೂಚನೆಯಲ್ಲಿ ಕಡತ, ಮೊಹರು, ಪತ್ರ ವ್ಯವಹಾರದಲ್ಲಿಯೂ ಹೊಸ ಹೆಸರು ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಈ ಕಚೇರಿಯಿಂದ ನಡೆಸುವ ಯಾವುದೇ ಪತ್ರ ವ್ಯವಹಾರ ಹಾಗೂ ಇನ್ನಿತರ ಕಡತಗಳಿಗೆ ಮೊಹರು ಹಾಕುವ ಸಂದರ್ಭದಲ್ಲಿ

ಇನ್ಮುಂದೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಲ್ಲ!! ಹಾಗಾದ್ರೆ ಮತ್ತಿನ್ನೇನು? Read More »

ವರ್ಗಾವಣೆಗೊಂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಮತ್ತೆ ಕರೆಸಿಕೊಳ್ಳದಿರಲು ಪಂಚಾಯತ್ ಸದಸ್ಯರ ಬೇಡಿಕೆ

ಸಮಗ್ರ ನ್ಯೂಸ್: ಪುತ್ತೂರು ತಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ನಾಗೇಶ್ ರವನ್ನುಮತ್ತೆ ಆರ್ಯಾಪು ಗ್ರಾಮ ಪಂಚಾಯತ್ ಗೆ ಯಾವುದೇ ಕಾರಣಕ್ಕೂ ವರ್ಗಾವಣೆಗೊಳಿಸಬಾರದೆಂದು ಶಾಸಕರಿಗೆ ಬಿಜೆಪಿಯ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಸದಸ್ಯರಾದ ಸಚಿನ್ ವಳತ್ತಡ್ಕ ಮನವಿ ಸಲ್ಲಿಸಿದರು. ನಾಗೇಶ್ ರವರು ಈಗಾಗಲೆ ಪುತ್ತೂರು ತಾಲೂಕಿನ ಒಳಮೊಗ್ರು ಗಾಮ ಪಂಚಾಯತ್ ಗೆ ವರ್ಗಾವಣೆಗೊಂಡಿದ್ದು ಅದಕ್ಕಾಗಿ ನಾವು ಅವರಿಗೆ ಮತ್ತು ವರ್ಗಾವಣೆಗೊಳಿಸಿದ ಮಾನ್ಯ ಶಾಸಕರಾದ ಸಂಜೀವ ಮಠಂದೂರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ವರ್ಗಾವಣೆಗೊಂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಮತ್ತೆ ಕರೆಸಿಕೊಳ್ಳದಿರಲು ಪಂಚಾಯತ್ ಸದಸ್ಯರ ಬೇಡಿಕೆ Read More »

ಕರಾವಳಿಯ ಮೂರು ಜಿಲ್ಲೆಗಳಿಗೆ ಕುಚಲಕ್ಕಿ ವಿತರಣೆ ಆರಂಭ| ಜನಸಂಕಲ್ಪ ಸಭೆಯಲ್ಲಿ ಸಿಎಂ ಘೋಷಣೆ

ಸಮಗ್ರ ನ್ಯೂಸ್: ಬಹುನಿರೀಕ್ಷಿತ ಉಡುಪಿ ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪಡಿತರ ಮೂಲಕ ಕುಚಲಕ್ಕಿ ವಿತರಣೆ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಕಾಪುವಿನಲ್ಲಿ ಜನ ಸಂಕಲ್ಪ ಸಭೆಯಲ್ಲಿ ಘೋಷಿಸಿದ್ದಾರೆ. ಈಗ ನೀಡುತ್ತಿರುವ ಪಡಿತರ ಅಕ್ಕಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬರುತ್ತಿಲ್ಲವೆಂಬ ಹಿನ್ನೆಲೆಯಲ್ಲಿ ಪಡಿತರ ವ್ಯವಸ್ಥೆಗೆ ಕುಚಲಕ್ಕಿ ನೀಡುವ ವ್ಯವಸ್ಥೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಲೇ ವೇದಿಕೆಯಲ್ಲಿ ಎದ್ದು ನಿಂತು ಮುಖ್ಯಮಂತ್ರಿಗಳಿಗೆ ಕೈಮುಗಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದರು.

ಕರಾವಳಿಯ ಮೂರು ಜಿಲ್ಲೆಗಳಿಗೆ ಕುಚಲಕ್ಕಿ ವಿತರಣೆ ಆರಂಭ| ಜನಸಂಕಲ್ಪ ಸಭೆಯಲ್ಲಿ ಸಿಎಂ ಘೋಷಣೆ Read More »